ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ. ಯಾವುದನ್ನು ಕೊಳ್ಳುವುದು? ಇದು ನನ್ನ ಬುದ್ಧಿಗೆ ಸರಿಯಾಗಿ ಅರಿವಾಗುತ್ತಿಲ್ಲ. ನನಗೆ ತುಂಬಾ ಆಳವಾಗಿ ಅಧ್ಯಯನ ಮಾಡುವ ಮನಸ್ಸಿದೆ. ಸರಳವಾಗಿ, ಸಮಗ್ರವಾಗಿರುವ ಪುಸ್ತಕಗಳ ಬಗ್ಗೆ ನನಗೆ ಯಾರಾದರು ತಿಳಿಸುವಿರ? ಕನ್ನಡದಲ್ಲಿ ಬರೆದವರ ಹೆಸರು, ಪ್ರಕಾಶಕರು, ಸಿಗುವ ಸ್ಥಳ. ಇಷ್ಟೂ ಮಾಹಿತಿಗೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವೆನು.
ಮುಂಚಿತವಾಗಿ ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತ.
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ

- kadakolla05 ರವರ ಬ್ಲಾಗ್
- Login or register to post comments
- 291 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ನಾನು ಶಿಫಾರ್ಸು ಮಾಡೋದು ನಾಲ್ಕು ಪುಸ್ತಕ
೧) ಆದಿಕವಿ ವಾಲ್ಮೀಕಿ - ಮಾಸ್ತಿ ವೆಂಕಟೇಶ ಅಯ್ಯಂಗಾರರು
೨) ಶ್ರೀರಾಮ ಪಟ್ಟಾಭಿಷೇಕ - ಮಾಸ್ತಿ ವೆಂಕಟೇಶ ಅಯ್ಯಂಗಾರರು
೩) ಪೂರ್ವ ಸೂರಿಗಳೊಡನೆ
೪) ಸೀತೆಯ ಭವಿಷ್ಯ - ಇದು ತೆಲುಗಿನಿಂದ ಅನುವಾದವಾದದ್ದು . ನಾರ್ಲ ...ರಾವು ಅವರದ್ದಿರಬೇಕು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ನನಗೆ ಅನಿಸಿದ್ದು:
೧. ಮಹಾಭಾರತ. - ವಚನಭಾರತ ಬೈ ಎ.ಆರ್. ಕೃಷ್ಣಶಾಸ್ತ್ರಿ.
೨. ಕುಮಾರವ್ಯಾಸಭಾರತ.
ಪೂರಕವಾಗಿ ನೀವು ಯಾವುದಾದರೂ ಪುರಾಣ ಗ್ರಂಥವನ್ನೋದಲೇಬೇಕು. ಇಲ್ಲದಿದ್ದರೆ ಮೂಲವಿಷಯಗಳು ದಾರಿತಪ್ಪಿಸಿಬಿಡುತ್ತವೆ!.
೩. ರಾಮಾಯಣ - ಗೋರಖ್ ಪುರ ಗೀತಾಪ್ರೆಸ್ ನ ಯಾವುದಾದರೂ ಕನ್ನಡ ಅನುವಾದ ಪುಸ್ತಕಗಳು.
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ಮಹಾಭಾರತದ ಬಗ್ಗೆ ಮಾಧವ ಅವರು ಸೂಚಿಸಿದ ಪುಸ್ತಕ ಸರಿಯಾಗಿದೆ.
ರಾಮಾಯಣಕ್ಕೆ,
೧. ರಾಜಾಜಿಯವರ ರಾಮಾಯಣ
೨. ನಾರಾಯಣಾಚಾರ್ಯ ಅವರ ರಾಮಾಯಣ ಪಾತ್ರ ಪ್ರಪಂಚ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ಭಾರತ ದರ್ಶನ ಪ್ರಕಾಶನದವರು, ಮಹಾಭಾರತ ಹಾಗೂ ರಾಮಾಯಣ ಎರಡರದ್ದು ಪೂರ್ಣಪಾಠವನ್ನು ಹೊರತಂದಿದ್ದಾರೆ. (ಮಹಾಭಾರತವು ೩೦+ ಸಂಪುಟಗಳಲ್ಲಿದೆ ಎಂದು ನೆನಪು)
ಇದರ ಪ್ರತಿಗಳು ದೊರೆಯುತ್ತಿವೆಯೋ ಇಲ್ಲವೋ, ನನಗೆ ತಿಳಿಯದು.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ಕುವೆಂಪುರವರ "ಶ್ರೀ ರಾಮಾಯಣ ದರ್ಶನಂ" ಓದಲು ಸರಳವಾಗಿದೆ.
ಮಹಾಭಾರತದ ಬಗ್ಗೆ "ಕುಮಾರವ್ಯಾಸಭಾರತ" ಓದಿ.
-ಸವಿತ
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ಕುಮಾರಸ್ವಾಮಿಯವರು ಹೊಸಗನ್ನಡದ ಪುಸ್ತಕಾನೇ ಬೇಕು ಅಂತೇನು ಬರೆದಿಲ್ಲ...
-ಸವಿತ
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
" ಹೊಸಗನ್ನಡದ ಹೊತ್ತಿಗೆ "
@@ ಮಹೇಶ,
ನಿಮ್ಮ ತಿರುಬರಹಕ್ಕೆ ನನ್ನಿ. ನನಗೆ ಬೇಕಿರುವುದು ಅಚ್ಚಕನ್ನಡ ಹೊತ್ತಿಗೆಗಳೆ. ನಾನು ಈ ಮಾತನ್ನು ನನ್ನ ಬರಹದಲ್ಲಿ ಬರೆದಿರಲಿಲ್ಲ. ಇದು ನನ್ನ ತಿಳಿಗೇಡಿತನ.
@@ ಸವಿತ,
ಹೌದು ನಾನು ಅಚ್ಚಕನ್ನಡ ಹೊತ್ತಿಗೆ ಬೇಕೆಂದು ನನ್ನ ಬರಹದಲ್ಲಿ ಬರೆದಿರಲಿಲ್ಲ.
ನಿಮಗೆ ಗೊತ್ತಿರುವ ಬೇರೆಯಾವುದಾದರು ಅಚ್ಚಕನ್ನಡ ಹೊತ್ತಿಗೆ ಬಗ್ಗೆ ತಿಳಿಸಿ.
ನನ್ನಿ
ಸ್ವಾಮಿ
ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
ಸವಿತ,
ಈ ಹೊತ್ತಿಗೆಯ ಬಗ್ಗೆ ತಿಳಿಸಿದ್ದಕ್ಕೆ ನನ್ನಿ.
ನಾನು ಕುವೆಂಪುರವರ "ರಾಮಾಯಣ ದರ್ಶನಂ" ಓದಿರುವೆ. ಅದರಲ್ಲಿ ತುಂಬಾ ಉತ್ಪ್ರೇಕ್ಷೆ ಇದೆ. ಇನ್ನೊಂದು ಹೊತ್ತಿಗೆಯ ತುಂಬಾ ಸಂಸ್ಕೃತ ನುಡಿಗಳು ತುಂಬಿಕೊಂಡಿವೆ. ನನ್ನ ಮನಸ್ಸಿಗೆ ಓದುವಾಗ ಯಾಕೋ ಗೆಲುವೆನಿಸಲಿಲ್ಲ. ಬೇರೆಯಾವುದಾದರು ಹೊತ್ತಿಗೆ ಇದ್ದರೆ ತಿಳಿಸಿ.
ನನ್ನಿ
ಸ್ವಾಮಿ
ಪುಣೆ