ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ಹಿಂಗಾದ್ರೆ ಹೆಂಗೆ....
ಗೆಳೆಯ/ಗೆಳತಿಯರಿಗೊಂದು ನಮಸ್ಕಾರ,
ಬೇಲಿನೆ ಎದ್ದು ಹೊಲಾ ಮೇಯುವಂತ ನಿದರ್ಶನಕ್ಕೆ ಇನ್ನೊಂದು ಉದಾಹರಣೆ ಈ ಕೆಳಗಿನ ಕೊಂಡಿಯನ್ನು ನೋಡಿದರೆ ಸಿಗುತ್ತೆ.
http://www.hindujagruti.org/news/article/christians/conversions/75000-sc...
ಜ್ಯಾತ್ಯಾತೀತ ಪಕ್ಷ ಅಂತ ಹೇಳಿಕೊಳ್ಳ್ತಾ ತೆರೆಯಮರೆಯಲ್ಲಿ ಈ ರೀತಿ ಕ್ರೈಸ್ತಧರ್ಮದ ಪ್ರಚಾರ ಕಾರ್ಯಕ್ಕೆ ಬೆಂಬಲ ನೀಡ್ತಿರೋ ಸರ್ಕಾರದ ಮಂದಿಗೆ ಧರ್ಮದ ಬಗ್ಗೆ ಏನ್ ತಿಳಿದಿದೆ ಅಂತ ಅರ್ಥ ಆಗ್ತಿಲ್ಲ. ಹಿಂದು ಧರ್ಮದ ಪ್ರವರ್ಥಕರಂತೆ ವರ್ತಿಸುವ ಬಿ.ಜೆ.ಪಿ ಯವರು ಈ ರೀತಿ ಪರಧರ್ಮದ ಪ್ರಚಾರ ಕಾರ್ಯದಲ್ಲಿ ತೊಡಗಿರೋದು ಎಷ್ಟು ಸರಿ?
ಅಲ್ಲ ನಮ್ ಜನ ಯಾಕೆ ಹಿಂಗೆ, ಪರ ಧರ್ಮ, ಪರ ಭಾಷೆ, ಪರರನ್ನು ಅನುಕರಿಸೋದ್ರಲ್ಲಿ ಯಾಕೆ ಇಷ್ಟೊಂದು ಉತ್ಸುಕತೆ.
ಕೇವಲ ದುಡ್ಡಿನ ಆಸೆಗಾಗಿ ಅಥವಾ ಇನ್ನಾವುದೋ ಕಾರಣಗಳಿಂದ ನಮ್ಮ ಅಂತರಾತ್ಮವನ್ನು ಮಾರಿಕೊಳ್ಳೋದು ಎಂಥಾ ನಾಚಿಕೆ ಗೇಡಿನ ಕೆಲಸ. ನಾವ್ ಯಾಕೆ ಹೀಗೆ? ನಮಗೇ ಸ್ವಂತಿಕೆ ಅನ್ನೋದು ಬೇಡವಾಗೋಯ್ತೆ. ನಮ್ಮದನ್ನೋದು ಎಲ್ಲವು ಉಪಯೋಗ ಬಾಹೀರವೆ?
ಇದಕ್ಕೆಲ್ಲ ಕಾಲಾನೆ ಉತ್ತರ ಹೇಳಬೇಕು...
---ಜಯಪ್ರಕಾಶ.ನೇ.ಶಿ

- jp.nevara ರವರ ಬ್ಲಾಗ್
- Login or register to post comments
- 562 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: