ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

September 23, 2008 - 4:14pm — hpn

ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ:

ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ” ಎಂದು ಶಪಿಸಿ, ತಾಯಿ ಕಾವೇರಿ ಮಡಿಲಿಗೆ ಧುಮುಕಿದಳಂತೆ. ಇಂದಿಗೂ ಆಕೆಯ ಶಾಪ ಬಾಧಿಸುತ್ತದೆ ಎಂದು ಪ್ರತೀತಿ. ಮೈಸೂರು ಅರಸರಿಗೆ ಇಂದಿಗೂ ನೇರ ಸಂತಾನವಿಲ್ಲ. ಪ್ರತಿ ಬಾರಿ ಉತ್ಖನನ ಮಾಡಿ ಹೊರತೆಗೆದ ಸ್ವಲ್ಪ ದಿನಗಳಿಗೆ ಎಲ್ಲ ದೇವಾಲಯಗಳನ್ನೂ ಮತ್ತೆ ಮರಳು ಆವರಿಸಿಬಿಡುತ್ತದೆ.

ಪುರಾಣ ಕಥೆಗಳಲ್ಲಿ ಇಂತಹ ಹಲವು ಶಾಪ ಕೊಟ್ಟಿರುವ ವ್ಯಾಖ್ಯಾನಗಳನ್ನು ಕೇಳಿರುತ್ತೇವೆ. ಆದರೆ ಸಬೂತಿನ ಸಮೇತ ಇದ್ದಂತಿರುವ ಈ ಶಾಪ ನಿಜವಾಗಲೂ ನಮ್ಮ ನಂಬಿಕೆಗಳನ್ನು ಆಲೋಚನೆಗೆ ಹಚ್ಚಿಸುವಂಥದ್ದು. ಈಗ ತಲಕಾಡು ಮರಳಾಗಿರುವುದು, ಮೈಸೂರು ಅರಸರಿಗೆ ಮಕ್ಕಳಿಲ್ಲದಿರುವುದು ಎಲ್ಲ ಹೊಂದುತ್ತದೆ!

ನಿಮಗೇನನ್ನಿಸುತ್ತದೆ?

(ಇಲ್ಲಿ ರೆಡಿ ಮಾಡುತ್ತಿದ್ದೇನೆ ಎಂದು ತಿಳಿಸಿರುವ ಫೀಚರ್ ನಾಳೆ ನಾಳಿದ್ದರ ಹಾಗೆ ವಾಟರ್ ಪೋರ್ಟಲ್ಲಿನಲ್ಲಿ ಲಭ್ಯವಾಗುವುದು. ಬಹಳ ಒಳ್ಳೆಯ ಫೋಟೋಗಳಿವೆ, ಪೂರಕ ಬರಹವಿದೆ. ನಿರೀಕ್ಷಿಸಿ!)

  • ಕಥೆ
  • ತಲಕಾಡು
  • ಮೈಸೂರು
  • ವಿಸ್ಮಯ
~.~
  • hpn ರವರ ಬ್ಲಾಗ್
  • Login or register to post comments
  • 654 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 23, 2008 - 9:15pm — hamsanandi

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hamsanandi's picture

ಹರಿ,

ನೀವು ಹೀಗಂದಿರಿ:

Quote:
"ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ” ಎಂದು ಶಪಿಸಿ, ತಾಯಿ ಕಾವೇರಿ ಮಡಿಲಿಗೆ ಧುಮುಕಿದಳಂತೆ. ಇಂದಿಗೂ ಆಕೆಯ ಶಾಪ ಬಾಧಿಸುತ್ತದೆ ಎಂದು ಪ್ರತೀತಿ. ಮೈಸೂರು ಅರಸರಿಗೆ ಇಂದಿಗೂ ನೇರ ಸಂತಾನವಿಲ್ಲ. ಪ್ರತಿ ಬಾರಿ ಉತ್ಖನನ ಮಾಡಿ ಹೊರತೆಗೆದ ಸ್ವಲ್ಪ ದಿನಗಳಿಗೆ ಎಲ್ಲ ದೇವಾಲಯಗಳನ್ನೂ ಮತ್ತೆ ಮರಳು ಆವರಿಸಿಬಿಡುತ್ತದೆ."

ಇದರಲ್ಲೊಂದೆರಡು ತಪ್ಪುಗಳಿವೆ.

ಅರಸರಿಗೆ (ಅದರಲ್ಲೂ, ರಾಜ ಒಡೆಯರಿಗೆ) ಹೀಗೆ ಶಾಪ ಕೊಟ್ಟವಳು ಶ್ರೀರಂಗಪಟ್ಟಣದ ಶ್ರೀರಂಗರಾಯನ ಹೆಂಡತಿ ಅಲಮೇಲಮ್ಮ. ಇದು (ನಡೆದಿದ್ದರೆ) ೧೬ ನೇ ಶತಮಾನದಲ್ಲಾದ ಘಟನೆ. ಏಳನೇ ಶತಮಾನವಲ್ಲ.

ಇದರ ಬಗ್ಗೆ ಒಂದು ಒಳ್ಳೇ ಸಾಕ್ಷ್ಯ ಚಿತ್ರ ಒಂದನ್ನು ನೋಡಿದ್ದೇನೆ. ಅದರಲ್ಲಿ ಈ ಕಥೆ ಹೇಗೆ ಸುಮಾರು ೧೭-೧೮ ನೇ ಶತಮಾನದಲ್ಲಿ ಬಂದು ಸೇರಿಕೊಂಡಿದೆ ಎಂದು ವಿವರವಾಗಿ ತೋರಿಸಿದ್ದರು. ಮತ್ತೆ ಅಲ್ಲಿ ಹೇಗೆ ಮತ್ತೆ ಏಕೆ ತಲಕಾಡು ಮರಳಾಗಿದೆ ಎಂದೂ ವಿವರಿಸಿದ್ದರು.

ಕೊಂಡಿ ಸಿಕ್ಕರೆ ಹಾಕುವೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 9:27pm — Sunil Jayaprakash

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

Sunil Jayaprakash's picture

ನನಗೆ ಈ ರೀತಿಯ ಕತೆಗಳು, ರಾಜಕೀಯ ಅಸ್ಥಿರತೆ ಸೃಷ್ಟಿಸಲು ಹುಟ್ಟಿಕೊಂಡವು ಅಂತ ಬಲವಾಗಿ ಅನ್ನಿಸುತ್ತದೆ. ೧೬-೧೭ನೇ ಶತಮಾನದ ಕರ್ನಾಟಕ/ಮೈಸೂರನ್ನು ನೆನಪಿಗೆ ತಂದುಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 9:30pm — hamsanandi

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hamsanandi's picture

ನಾನು ಹೇಳಿದ ಸಾಕ್ಷ್ಯ ಚಿತ್ರದ ಪ್ರಸ್ತಾಪ ಕೆಳಗಿನ ಪುಟದಲ್ಲಿದೆ:

http://www.hinduonnet.com/thehindu/fr/2006/09/29/stories/200609290256030...

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 9:36pm — hamsanandi

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hamsanandi's picture

http://documentaries.documentaryfilms.net/The-Curse-of-Talakad.html

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 9:49pm — hpn

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hpn's picture

ಅದು ನಾನಂದದ್ದಲ್ಲ, ನಾನು ಬರೆದದ್ದಲ್ಲ. ಯಾರೋ ಬರೆದಿದ್ದುದನ್ನು ಅನುವಾದ ಮಾಡಿದ ಸಾಲುಗಳಲ್ಲಿ ಹೀಗಿತ್ತು (ಹಾಗೆಂದು ಬರೆದಿದ್ದೇನೆ ಕೂಡ). ಹೀಗಾಗಿಯೇ quote ಮಾಡಿದ್ದು. Smiling

ಅದರಲ್ಲಿರುವ ತಪ್ಪುಗಳನ್ನ ಗಮನಕ್ಕೆ ತಂದದ್ದು ಒಳ್ಳೆಯದಾಯ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 5:58am — Chamaraj

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

Chamaraj's picture

ನೀರು ಸಂಬಂಧಿ ವಿಷಯಗಳಲ್ಲಿ ಇಂತಹ ಜಾನಪದ ಕತೆಗಳು ಹೇರಳವಾಗಿವೆ. ’ಕೆರೆಗೆ ಹಾರ’ ಕತೆಯನ್ನೇ ನೆನಪಿಸಿಕೊಳ್ಳಿ. ಲಾವಣಿಗಳು, ಜಾನಪದ ಹಾಡುಗಳು ಇಂಥ ವಿಷಯಗಳನ್ನು ತುಂಬ ಚೆನ್ನಾಗಿ ಬಿಂಬಿಸಿವೆ. ಅವು ಸತ್ಯವನ್ನು ನೇರವಾಗಿ ಹೇಳದಿದ್ದರೂ, ಜನರ ಮನಸ್ಸಿನಲ್ಲಿದ್ದ ಭಾವನೆಗಳನ್ನು ಸೊಗಸಾಗಿ ಹೇಳುತ್ತ ಹೋಗುತ್ತವೆ. ಸಾಧ್ಯವಾದರೆ, ಲಭ್ಯವಿರುವ ಅಂತಹ ಮಾಹಿತಿಯನ್ನೂ ಪೂರಕವಾಗಿ ಸೇರಿಸಬಹುದು.

- ಚಾಮರಾಜ ಸವಡಿ
http://chamarajsavadi@blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 8:27am — Sunil Jayaprakash

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

Sunil Jayaprakash's picture

ಯಾವದದು "ಕೆರೆಗೆ ಹಾರ" ಎಂಬು ಕತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 10:45am — ASHOKKUMAR

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

ASHOKKUMAR's picture

ಯಾವುದೋ ತರಗತಿಯ ಪಠ್ಯಪುಸ್ತಕದಲ್ಲಿತ್ತು.
ಕೆರೆಯಲ್ಲಿ ನೀರು ಬರದಿದ್ದಾಗ, ಒಬ್ಬಾಕೆ ತನ್ನ ಜೀವವನ್ನೇ ಅರ್ಪಿಸಿ(ಕೆರೆಗೆ ಹಾರ) ನೀರು ಬರಿಸಿ, ಜನರಿಗೆ ಉಪಕರಿಸಿದ ಕತೆ.
(ಹಾಗೆಂದು ನೆನಪು).
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 11:33am — hamsanandi

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hamsanandi's picture

ಭಾಗೀರಥಿ ಎನ್ನುವವಳು ಕೆರೆಗೆ ಹಾರವಾದ ಕಥೆ ಇದು. ಮನೆಯವರೆಲ್ಲ ತನ್ನನ್ನು ಕೆರಗೆ ಹಾರವಾಗಿ ಕೊಡುತ್ತಾರೆಂದು ತಿಳಿದಿದ್ದರೂ, ಊರಿನ ಹಿತಕ್ಕೆ ಪ್ರಾಣ ಕೊಟ್ಟಳು ಎಂದು ಈ ಕಥೆ ಹೇಳುತ್ತೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 4:44pm — gurubaliga

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

gurubaliga's picture

ಸುಮ್ನೆ ಕೆರೆಗೆ ದೂಡಿರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2008 - 1:50pm — shreekant.mishrikoti

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

shreekant.mishrikoti's picture

೧) ಮೊನ್ನೆ ಮೊನ್ನೆ ತಾನೇ ಪ್ರಜಾವಾಣಿ ಯ ಸಾಪ್ತಾಹಿಕ ಪುರವಣಿಗಳಲ್ಲಿ ಎಷ್ಟೋ ವಾರ ಕೊರೆದ್ರಲ್ರೀ ಈ ಬಗ್ಗೆ , ನೋಡಲಿಲ್ವೇ?
೨) ಈ ’ಕೆರೆಗೆ ಹಾರ’ ಪದ್ಯ ’ಗೋವಿನ ಕತೆ’ ಜತೆಗೆ ಕನ್ನಡ ಜಾನಪದ ಕಾವ್ಯದ ಮುಖ್ಯ ಭಾಗ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2008 - 9:46pm — Sunil Jayaprakash

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

Sunil Jayaprakash's picture

ಮಿಶ್ರಿಕೋಟಿ, ನನಗೆ ನಿಜಕ್ಕೂ ಇದು ತಿಳಿದಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2008 - 1:49pm — shreekant.mishrikoti

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

shreekant.mishrikoti's picture

Quote:

ಪುರಾಣ ಕಥೆಗಳಲ್ಲಿ ಇಂತಹ ಹಲವು ಶಾಪ ಕೊಟ್ಟಿರುವ ವ್ಯಾಖ್ಯಾನಗಳನ್ನು ಕೇಳಿರುತ್ತೇವೆ. ಆದರೆ ಸಬೂತಿನ ಸಮೇತ ಇದ್ದಂತಿರುವ ಈ ಶಾಪ ನಿಜವಾಗಲೂ ನಮ್ಮ ನಂಬಿಕೆಗಳನ್ನು ಆಲೋಚನೆಗೆ ಹಚ್ಚಿಸುವಂಥದ್ದು. ಈಗ ತಲಕಾಡು ಮರಳಾಗಿರುವುದು, ಮೈಸೂರು ಅರಸರಿಗೆ ಮಕ್ಕಳಿಲ್ಲದಿರುವುದು ಎಲ್ಲ ಹೊಂದುತ್ತದೆ!

ಕೆ. ಎನ್. ಗಣೇಶಯ್ಯ ಅವರು ಈ ಕತೆಗೆ ವಿವರಣೆ ಕೊಡುವ ಕತೆಯನ್ನ ಬರೆದಿದ್ರು ಇತ್ತೀಚಿನ ಒಂದೆರಡು ವರ್ಷದ ಸುಧಾ ವಾರಪತ್ರಿಕೆ , ಸುಧಾ-ಯುಗಾದಿ , ಪ್ರಜಾವಾಣಿ-ದೀಪಾವಳಿ ವಿಶೇಷಾಂಕದಲ್ಲೆಲ್ಲೋ ಬಂದಿತ್ತು. ಈ ಗಣೇಶಯ್ಯ ಯಾರು ಅಂತ ನೆನಪಿಸಲೇ , ಅದೇ ವಿಜಯನಗರ ಹಿನ್ನೆಲೆಯ ಕರಿಸಿರಿಯಾನ ಮತ್ತು ಶ್ರವಣ ಬೆಳಗೊಳ ಹಿನ್ನೆಲೆಯ ಕನಕ ಮುಸುಕು ಕಾದಂಬರಿಗಳನ್ನ ಬರೆದಿದ್ರಲ್ರೀ ಅವರು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಟಕ ಅಕಾಡೆಮಿ ಪ್ರಶಸ್ತಿಗಳು
  • ಮರುಪೂರಣ - ಹೀಗೊಂದು Case Study
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಬಿಡುಗಡೆಯ ನಂತರದ ಬೇಡಿಗಳು (೪)
  • ಕನ್ನಡ ಕಸ್ತೂರಿ ...ನಮ್ಮದು ಚೆಲುವ ಕನ್ನಡ ನಾಡು..............ಜಿ.ವಿಜಯ್ ಹೆಮ್ಮರಗಾಲ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 357 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator