ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

September 30, 2008 - 10:45pm — hamsanandi

ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ. ಆದಕ್ಕೆ ಹೊರಬಂದ ತಕ್ಷಣ ಗಾಳಿ ಕುಡಿದು ಕಳೆಕಳೆಯಾಗಿಬಿಡುತ್ತವೆ!

ನವರಾತ್ರಿ ಎಂದರೆ ಅಲ್ಲಲ್ಲಿ ಸಂಗೀತೋತ್ಸವಗಳು ನಡೆಯುವುದು ರೂಢಿ. ಅದೇ ಕಾರಣಕ್ಕೆ ಹೋದಬಾರಿಯಂತೆ ನಾನೂ ಸಂಗೀತದ ಬಗ್ಗೆಯೇ ಬರೆಯತೊಡಗಿದ್ದೇನೆ. ಇವತ್ತು ನನ್ನ ಮನಸ್ಸಿಗೆ ಬಂದ ಕೃತಿ ತ್ಯಾಗರಾಜರ ’ಗತಿ ನೀವನಿ’ ಎನ್ನುವ ತೋಡಿ ರಾಗದ ರಚನೆ.

ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು ಬಹಳ ಪ್ರಖ್ಯಾತ ರಚನೆಗಳು - ಅದರಲ್ಲೂ ಕೊನೆಯ ಪಂಚರತ್ನ ಕೃತಿಯಾದ ಎಂದರೋ ಮಹಾನುಭಾವುಲು ಎನ್ನುವುದಂತೂ ಸಂಗೀತವನ್ನು ಅಷ್ಟಾಗಿ ಕೇಳಿ ತಿಳಿಯದವರಿಗೂ ಗೊತ್ತಿರುವುದುಂಟು. ಆದರೆ, ಈ ಪಂಚರತ್ನ ಕೃತಿಗಳಲ್ಲದೇ, ಇನ್ನೂ ಕೆಲವು ಗುಂಪು-ರಚನೆಗಳನ್ನೂ ತ್ಯಾಗರಾಜರು ರಚಿಸಿದ್ದಾರೆ. ಆವುಗಳಲ್ಲಿ ಲಾಲ್ಗುಡಿ ಪಂಚರತ್ನ ಎಂಬ ಗುಂಪೂ ಒಂದು.

ಲಾಲ್ಗುಡಿ ತಮಿಳುನಾಡಿನಲ್ಲಿ ಕಾವೇರಿ ತೀರದಲ್ಲಿರುವ ಒಂದು ಊರು. ತ್ಯಾಗರಾಜರ ತಿರುವೈಯ್ಯಾರಿನಿಂದ ಪಶ್ಚಿಮಕ್ಕೆ ಒಂದು ಮೂವತ್ತು ಮೈಲಿ ದೂರವಿರಬಹುದು ಅಷ್ಟೇ. ಲಾಲ್ಗುಡಿಯ ರಾಮ ಅಯ್ಯರ್ ತ್ಯಾಗರಾಜರ ಶಿಷ್ಯರು. ಒಮ್ಮೆ ತಮ್ಮ ಗುರುಗಳನ್ನು ತಮ್ಮೂರಿಗೆ ಕರೆದು, ಸತ್ಕರಿಸಿ ಕೆಲವು ದಿನ ಉಪಚರಿಸಿ ಕಳಿಸಿದರು. ಲಾಲ್ಗುಡಿಯಲ್ಲಿ ಶಿವನ ದೇವಾಲಯವೊಂದಿದೆ. ಅಲ್ಲಿ ಶಿವನನ್ನು ಸಪ್ತಋಷೀಶ್ವರ ಎಂಬ ಹೆಸರಿನಲ್ಲಿ, ಮತ್ತೆ ಪಾರ್ವತಿಯನ್ನು ಶ್ರೀಮತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಶಿಷ್ಯನ ಮನೆಯಲ್ಲಿ ಕೆಲದಿನಗಳು ನಿಂತ ತ್ಯಾಗರಾಜರು ಅಲ್ಲಿಯ ದೇವ-ದೇವಿಯರ ಬಗ್ಗೆ ಹಾಡಿದ್ದಲ್ಲಿ ಆಶ್ಚರ್ಯವೇನಿದೆ? ಹೀಗೆ ಇಲ್ಲಿ ಹಾಡಿದ ಐದು ರಚನೆಗಳನ್ನೇ ಲಾಲ್ಗುಡಿ ಪಂಚರತ್ನ ಎಂಬ ಹೆಸರಿನಿಂದ ಕರೆಯಲಾಗುತ್ತೆ.

’ಗತಿ ನೀವನಿ’ ಕೃತಿಯಲ್ಲಿ ತ್ಯಾಗರಾಜರು ದೇವಿಯಾದ ಶ್ರೀಮತಿಯನ್ನು, "ಓ ಶ್ರೀಮತಿ,ಮತಿಯ ವ್ಯಥೆಗಳನ್ನೆಲ್ಲ ತೀರಿಸಲು ನೀನೇ ನನಗೆ ಗತಿಯೆಂದು ನಿನ್ನಲ್ಲಿ ಕೋರಿಕೆ ಸಲ್ಲಿಸಬಂದಿರುವೆ. ಕಡೆಗಣ್ಣಿಂದ ಕಾಣದೇ, ನನ್ನನ್ನು ಸಲಹು ಎಂದು ಕೇಳಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯ ತೆಲುಗುಭಾಷೆಯಲ್ಲಿದೆ.

ಈ ಹಾಡನ್ನು ಈ ಕೆಳಗೆ ಕೇಳಿ. ಇದನ್ನು ಹಾಡುತ್ತಿರುವುದು ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಲಾಲ್ಗುಡಿ ಜಿ. ಜಯರಾಮನ್ ಮತ್ತು ಅವರ ಮಗಳು ಲಾಲ್ಗುಡಿ ವಿಜಯಲಕ್ಷ್ಮಿ. ಮತ್ತೆ ಇದನ್ನು ಹಾಡುತ್ತಿರುವ ಸ್ಥಳ ಲಾಲ್ಗುಡಿಯ ಸಪ್ತರ್ಷೀಶ್ವರ-ಶ್ರೀಮತಿಯ ಗುಡಿಯಲ್ಲೇ! ಅಂದಹಾಗೆ, ಯಾವ ರಾಮ ಅಯ್ಯರ್ ಅವರ ಮನೆಗೆ ಹೋದಾಗ ತ್ಯಾಗರಾಜರು ಈ ಕೃತಿಯನ್ನು ರಚಿಸಿದರೋ, ಅವರು ಲಾಲ್ಗುಡಿ ಜಯರಾಮನ್ ಅವರ ಮುತ್ತಜ್ಜ  ಅನ್ನುವುದು ಇನ್ನೊಂದು ವಿಶೇಷ!

 

ಈ ಹಾಡು ಇರುವ ತೋಡಿ ರಾಗ ಕರ್ನಾಟಕ ಸಂಗೀತದ ಒಂದು ವಿಶಿಷ್ಟ ರಾಗ - ಹಿಂದೂಸ್ತಾನಿ ಸಂಗೀತದಲ್ಲಿ ಇದಕ್ಕೆ ಸಮಾಂತರವಾದ ಯಾವ ರಾಗವೂ ಕಂಡು ಬರುವುದಿಲ್ಲ. ಅಂದ ಹಾಗೆ ಹಳೆಯದೊಂದು ಕನ್ನಡ ಚಿತ್ರದಲ್ಲಿ ದೇವಿಯ ಮೇಲೇ ಇರುವ ಒಂದು ಸೊಗಸಾದ ಹಾಡು ತೋಡಿ ರಾಗದಲ್ಲಿದೆ. "ಶ್ರೀದೇವಿ ವಾಗ್ದೇವಿ ಜಯಗೌರಿ" ಎನ್ನುವ ಆ ಹಾಡಿನ ಕೊಂಡಿ ಯಾರ ಬಳಿಯಾದರೂ ಇದ್ದರೆ ಹಂಚಿಕೊಳ್ಳುತ್ತೀರಾ?

-ಹಂಸಾನಂದಿ

 

  • ಕರ್ನಾಟಕ ಸಂಗೀತ
  • ತ್ಯಾಗರಾಜ
  • ನವರಾತ್ರಿ
  • ಪಂಚರತ್ನ
  • ಲಾಲ್ಗುಡಿ
  • ಶ್ರೀಮತಿ
~.~
  • hamsanandi ರವರ ಬ್ಲಾಗ್
  • Login or register to post comments
  • 288 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 1, 2008 - 12:27am — gurubaliga

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

gurubaliga's picture

ಸಂಗೀತದ ವಿಷಯದಲ್ಲಿ ನಾನು ಒಬ್ಬ ಅಜ್ಞ ಆರಾಧಕ. ಹಿಂದುಸ್ತಾನಿಯಲ್ಲೂ ತೋಡಿ ಹೆಸರಿನ ರಾಗ ಇರುವುದಲ್ಲ? ಅದರ ಮತ್ತು ಕರ್ನಾಟಕ ಸಂಗೀತದ ತೋಡಿಯಲ್ಲಿ ವ್ಯತ್ಯಾಸವಿದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 2, 2008 - 12:13am — hamsanandi

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

hamsanandi's picture

ಗುರುಬಾಳಿಗ ಅವರೆ,

ಹಿಂದೂಸ್ತಾನಿ-ಕರ್ನಾಟಕ ಪದ್ಧತಿಗಳಲ್ಲಿ ಸರಿಸುಮಾರು ಒಂದೇ ರಾಗಕ್ಕೆ ಬೇರೆ ಬೇರೆ ಹೆಸರಿರುವುದೂ, ಮತ್ತೆ ತುಂಬಾ ವ್ಯತ್ಯಾಸವಾದ ಹೆಸರುಗಳಿರುವ ರಾಗಗಳಿಗೆ ಹೋಲಿಕೆ ಇರುವುದೂ ಉಂಟು Smiling

ಹಾಗಾಗಿ, ಹಿಂದೂಸ್ತಾನಿಯ ತೋಡಿ ~ ಕರ್ನಾಟಕ ಸಂಗೀತದ ಶುಭಪಂತುವರಾಳಿ ಇವೆರಡೂ ಸಮಾಂತರ ರಾಗಗಳು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 2, 2008 - 1:07pm — gurubaliga

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

gurubaliga's picture

ಧನ್ಯವಾದಗಳು ಹಂಸ.

ನನಗೆ ಬಿಡಾರಂ ಕೃಷ್ಣಪ್ಪ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದೆ. ಅವರು ನನ್ನ ಊರಾದ ದಕ್ಷಿಣ ಕನ್ನಡದ ಬಂಟ್ವಾಳದವರಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2008 - 9:28am — shaamala

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

shaamala's picture

ಹಂಸಾನಂದಿಯವರೆ,

ನಿಮ್ಮ ಲೇಖನ ಹಾಗೂ ಲಾಲ್ಗುಡಿಯವರ ಹಾಡುಗಾರಿಕೆಯೇನೋ ಚೆನ್ನಾಗಿದೆ ಆದರೆ ಭಾರತದಲ್ಲಿ ಈಗಿನ ಪರಿಸ್ಥಿತಿ ನೋಡಿದರೆ ಮನಸ್ಸಿಗೆ ಯಾವುದರಿಂದಲೂ ನೆಮ್ಮದಿಯಾಗಲೀ, ಸಾಂತ್ವನವಾಗಲೀ, ಭರವಸೆಯಾಗಲೀ ಸಿಗುತ್ತಾ ಇಲ್ಲ. ಎಷ್ಟು ಅನಿರ್ದಿಷ್ಟವಾಗಿ ಬಿಟ್ಟಿದೆಯಲ್ಲ ಅಲ್ಲಿ ಜನ ಸಾಮಾನ್ಯರ ಜೀವನ. Sad

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2008 - 11:57pm — gurubaliga

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

gurubaliga's picture

ಹಾಗೇನಿಲ್ಲ ಮೇಡಂ. ಇದೆಲ್ಲ ಅಭ್ಯಾಸವಾಗಿ ಬಿಡುತ್ತೆ. ದಿನಾ ರಾತ್ರಿ ಊರಿನಿಂದ ಫೋನ್ ಬರುತ್ತೆ. ಇವತ್ತೆಷ್ಟು ಬಾಂಬ್ ಸಿಡೀತು ಅಂತ. ಇಲ್ಲಿ ದಿನವೂ ದೀಪಾವಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಅನೇಕತಾ ಮೆ ಏಕತಾ
  • ಜಪಾನಿಗ ಸಂತೋಶಕ್ಕೆ ಹಾಡಿದ ಕನ್ನಡದ ಹಾಡು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 315 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator