ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಗೆಳೆಯ
ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ
ಸಂಸ್ಕೃತ ಮೂಲ:
ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ನಿಗೂಹತಿ ಗುಣಾನ್ ಪ್ರಕಟೀಕರೋತಿ|
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ||
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 210 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗೆಳೆಯ
ಚನ್ನಾಗಿದೆ.
...ನನಗೂ ಒಬ್ಬ ಗೆಳೆಯ ಬೇಕೂ..
ಕೆಡುಕುಗಳ ಕಳೆದು ಒಳಿತ ಕೂಡಿಸುವ..
ಗುಟ್ಟುಗಳ ಮುಚ್ಚಿಟ್ಟು
ಗುಣ ಬಯಲಿಗೆಳೆವ..
...
...
-ಗಣೇಶ.
ಉ: ಗೆಳೆಯ
ಸುಕು - ಗಣೇಶರೇ, "ಮೊಗ್ಗನ ಮನಸ್ಸು", ಎಫೆಕ್ಟಾ
ಮೊಗ್ಗಿನ ಮನಸ್ಸಿನ, "ನನಗೂ ಒಬ್ಬ ಗೆಳೆಯ ಬೇಕು" ಹಾಡಿನಲ್ಲಿ ಏನೇನೆಲ್ಲ ಸಾಲುಗಳು ಬರತ್ತೆ ಗೊತ್ತಾ.
ಯಾರಿಗೆ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಲೇನು.
ಬೆಚ್ಚನ ಭವ ಕೂಡಿಸುತಿರುವ ಮನಸಿನ ಆಸೆ ಹೇಳುವೆಯೇನು
ನಾನು ಈಗ ಪ್ರೀತಿಯಲ್ಲಿ ಬೀಳಬೇಕು. ನನಗೂ ಒಬ್ಬ ಗೆಳೆಯ ಬೇಕು.
ಇದ್ದಲ್ಲಿ ಇದ್ದಹಾಗೆ, ಸದ್ದೇನೇ ಆಗದಂತೆ, ಹೃದಯ ಕದ್ದು ಹೋಗಬೇಕು.
ನಾನು ಈಗ ಪ್ರೀತಿಯಲ್ಲಿ ಬೀಳಬೇಕು. ನನಗೂ ಒಬ್ಬ ಗೆಳೆಯ ಬೇಕು.
ಇನ್ನೂ ಏನೇನು ಬರತ್ತೆ ಗೊತ್ತಾ!!!!!!
ಮುನಿಸು ಬಂದಾಗ, ಅವನೆ ಕ್ಷಮಿಸು ಎನ್ನಬೇಕು.
ಎಲ್ಲರು ಜಾತ್ರೆಯಲ್ಲಿ ತೇರನ್ನು ನೋಡುವಾಗ, ಅವನು ನನ್ನನ್ನೇ ನೋಡಬೇಕು.
ಕಾಡುವಂತ ಗೆಳೆಯಬೇಕು, ನನ್ನ ಹಿಂದೆ ಮುಂದೆ ಸುಳಿಯಬೇಕು.
ಯಾಕೋ ಬೇಜಾರಾದಾಗ, ಸುಮ್ಮನಿರಬೇಕು
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು
ಗುಟ್ಟಾಗಿ ಹೃದಯದಲ್ಲಿ ಪ್ರೀತೀಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು
ಅದೆಲ್ಲಕ್ಕಿಂತ, ಕೊನೆಯದಾಗಿ "ದೇವರಂತ ಗೆಳೆಯಬೇಕು"
ಉ: ಗೆಳೆಯ
ನನ್ನಿ ಸುನಿಲ್,

ಮೊಗ್ಗನ ಮನಸ್ಸು
ಮೊಗ್ಗಣೇಶನ ಮನಸ್ಸು- ಹಂಸಾನಂದಿಯವರು ಹೇಳಿದ ಗೆಳೆಯ ಬೇಕು ಎಂದಿದ್ದು.
-ಗಣೇಶ.
ಉ: ಗೆಳೆಯ
ಮಾತಾಮಿತ್ರಂಪಿತಾಚೇತ್ ಸ್ವಭಾವತಃ ತ್ರಿತಯಂಹಿತಂ
ಕಾರ್ಯಕಾರಣತಃ ಚ ಅನ್ಯೇ ಭವಂತಿ ಹಿತಬುದ್ಧಯಃ ---- ತಪ್ಪುಗಳಿದ್ದರೆ ತಿದ್ದಿ.
ಉ: ಗೆಳೆಯ
ನಿಜ ಹಂಸಾನಂದಿಯವರೇ
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು
ಜೀವನದನಂತ ದುರ್ಭರ ನೋವುಗಳ ಕಾವುಗಳ
ಮೌನದಲಿ ಮನದೊಳಗೆ ನುಂಗಿರುವೆನು
ಗೆಳೆತನವೇ ಇಹಲೋಕ ಜೀವಾಮೃತ
ಅದನುಳಿದರೇನಿಹುದು ಜೀವನ್ಮೃತ
ಚೆನ್ನವೀರ ಕಣವಿ ಅವರ ’ಗೆಳೆತನ’ದ ಕವಿತೆಯ ಒಂದು ನುಡಿ (ಒಂಚೂರು ತಪ್ಪಿರಬಹುದು, ನೆನಪಾಗಿದ್ದೇ ಇಷ್ಟು) ಹೀಗೆ ಹೇಳುತ್ತದೆ. ಕವನವೂ ಚೆನ್ನಾಗಿದೆ, ನೋಡಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...