ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)
ಆವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**
ಸಂಸ್ಕೃತ ಮೂಲ: ಬೇಲೂರು ಚೆನ್ನಕೇಶವ ದೇವಾಲಯದ ಗೋಡೆಯಲ್ಲಿರುವ ಶಾಸನ
ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾ:
ಅರ್ಹನ್ನಿತ್ಯಥ ಜೈನಶಾಸನರತಾ: ಕರ್ಮೇತಿ ಮೀಮಾಂಸಕಾ:
ಸೋಯಂ ವೋ ವಿದಧಾತು ವಾಂಚಿತಫಲಂ ತ್ರೈಲೋಕ್ಯನಾಥೋ ವಿಭು: **
(*: ಕಡೆಯ ಸಾಲಿಗೆ, "ಸೋಯಂ ವೋ ವಿದಧಾತು ವಾಂಚಿತಫಲಂ ಶ್ರೀಕೇಶವೇಶಸ್ಸದಾ" ಅನ್ನುವ
ಪಾಠವನ್ನೂ ಓದಿದ್ದೇನೆ; ಅದಕ್ಕೇ ಅನುವಾದದಲ್ಲಿ ಎರಡೂ ಅರ್ಥಗಳು ಬರುವಂತೆ ಸೇರಿಸಿರುವೆ)
ಕೊಸರು: ಬೇಲೂರಿನ ಶಾಸನದಲ್ಲಿರುವ ಈ ಪದ್ಯದಲ್ಲಿ "ಶ್ರೀಕೇಶವೇಶಸ್ಸದಾ" ಎಂದೇ ಇದೆ. ಈ ಶಾಸನವು ಕ್ರಿ.ಶ.೧೩೯೭ರದ್ದು ಎಂದು ತಿಳಿದುಬಂದಿದೆ ( ಆಧಾರ: ಡಿವಿಜಿ ಆವರ ಅಂತಃಪುರಗೀತೆಗಳು ಪುಸ್ತಕ)
ಕೊನೆಯ ಕೊಸರು: ಈ ಮೇಲಿನ ಸಾಲನ್ನು ಅಕ್ಟೋಬರ್ ೨೧, ೨೦೦೮ ರಂದು ಸೇರಿಸಿದ್ದೇನೆ
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನುವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ |
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ ||
ಇಂತಹ ಆದರ್ಶಗಳನ್ನು ಇಟ್ಟುಕೊಂಡ ನಾಡಿನಲ್ಲಿ ಇಂದು ಕೀಳುಮಟ್ಟದ ಚರ್ಚೆಗಳು, ಹೊಲಸು ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ
ತೀರಾ, "ಸೂಳೆಗೆ ಹುಟ್ಟಿದವರು" ಎನ್ನುವಂತಹ ಸುದ್ಧಿಗಳು, ಪತ್ರಿಕೆಗಳಲ್ಲಿ ಬರುತ್ತವೆಯೆಂದರೆ ನೀವುಗಳೇ ಊಹಿಸಿಕೊಳ್ಳಿ.
ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
ಚಿಕ್ಕವನಿದ್ದಾಗ ಈ ಸಂಸ್ಕೃತ ಶ್ಲೋಕ ಹೇಳಿಕೊಟ್ಟಿದ್ದು ಜ್ಞಾಪಕಕ್ಕೆ ಬಂತು...
ಈ ಪಾಠ : "ವಾಂಚಿತಫಲಂ ತ್ರೈಲೋಕ್ಯನಾಥೋ ವಿಭು:"
ನೋಡಿ...ಆ ಕಾಲದಲ್ಲೇ ಈ ಪದ್ಯ ಕೆತ್ತಿಸಿದ ರಾಜ, ಎಲ್ಲ ಧರ್ಮಗಳನ್ನು ಸಮನಾಗಿ ನೋಡಿದ್ದ ಅಂತ...
ಚೆನ್ನಿಗನ ದೇವಾಲಯದಲ್ಲಿ ಬೇರೆ ಧರ್ಮಗಳ ಬಗ್ಗೆ ಒಳ್ಳೆ ಮಾತುಗಳು...ವಾವ್!
--ಶ್ರೀ
ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
"ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,"
ಇದರಲ್ಲಿ "ನ್ನೈಯಾಯಿಕರು" ಅಂದರ್ಯಾರು ?
ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
ನ್ಯಾಯ ದರ್ಶನದ ಅನುಯಾಯಿಗಳು..
ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
ಇದೇ ತೆರದ ಒಂದು ಶ್ಲೋಕವಿದೆ..
ಯಂ ವೈದಿಕಾಮಂತ್ರದೃಷಃ ಪುರಾಣಾಃ
ಇಂದ್ರಂ ಯಮಂ ಮಾತರಿಶ್ವಾನಮಾಹುಃ
ವೇದಾಂತಿನೋ ನಿರ್ವಚನೀಯಮೇಕಂ
ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ
ಶೈವಾ ಯಮೀಶಂ ಶಿವ ಇತ್ಯವೋಚನ್
ಯಂ ವೈಷ್ಣವಾ ವಿಷ್ಣುರಿತಿ ಸ್ತುವಂತಿ
ಬುದ್ಧಸ್ತಥಾರ್ಹನ್ ಇತಿ ಬೌದ್ಧಜೈನಾಃ
ಸತ್ ಶ್ರೀ ಅಕಾಲೇತಿ ಸಿಖ ಸಂತ
ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ
ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ
ಯಂ ಪ್ರಾರ್ಥಯಂತೇ ಜಗದೀಶಿತಾರಂ
ಸ ಏಕ ಏವ ಪ್ರಭರದ್ವಿತೀಯಂ
ವೇದಪುರಾಣಗಳು ಇಂದ್ರ ಯಮ ಅಗ್ನಿ ವಾಯು ಎಂದು ಯಾವುದನ್ನು ಕರೆದವೋ
ವೇದಾಂತಿಗಳು ಅರುಹಲಾಗದ ಬ್ರಹ್ಮನೆಂದು ಯಾವುದನ್ನು ಕರೆದರೋ
ಶೈವರು ಶಿವನೆಂದು ವೈಷ್ಣವರು ವಿಷ್ಣುವೆಂದು ಬೌದ್ಧರು ಬುದ್ಧನೆಂದು
ಅರ್ಹನ್ ಎಂದು ಜೈನರು, ಸತ್ ಶ್ರೀ ಅಕಾಲ ಎಂದು ಸಿಖರು,
ಶಾಸ್ತಾ ಎಂದು ಶಾಕ್ತೇಯರು?, ಕುಮಾರ(ಮುರುಗ) ಎಂದು ಕೌಮಾರ್ಯರು,
ಸ್ವಾಮಿ ಎಂದು, ತಾಯಿತಂದೆ ಎಂದು ಕರೆದು ಪ್ರಾರ್ಥನೆ ಮಾಡುವರೋ ಅವನೊಂಬೇ ಜಗದೀಶ ಪ್ರಭುವು.
ಉ: ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು
http://www.geocities.com/Athens/Delphi/2745/ekata.htm