ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಪುಣ್ಯದ ಫಲ

February 22, 2008 - 11:50pm — hamsanandi

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

ಇದರ ಬಗ್ಗೆ ಒಂದು ಸಂಸ್ಕೃತ ಸುಭಾಷಿತ ಏನು ಹೇಳುತ್ತೆ ನೋಡಿ - ಅನುವಾದ ನನ್ನದು:

ಕಾಡಿನಲಿ ಕಾಳಗದಿ ವೈರಿಗಳ ನಡುವಲ್ಲಿ
ನೀರಿನಲಿ ಕಿಚ್ಚಿನಲಿ ಬೆಟ್ಟದಾ ನೆತ್ತಿಯಲಿ
ಕಡಲಿನಲಿ ನಿದ್ದೆಯಲಿ ಮತ್ತಿನಲಿ ಮತ್ತಾಯ-
ತಪ್ಪಿದಲಿ ಕಾಯ್ವವು ಪುಣ್ಯಗಳು ಮುನ್ನಮಾಡಿದವು!

ಮೂಲ:

ವನೇ ರಣೇ ಶತ್ರು ಜಲಾಗ್ನಿಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

-ಹಂಸಾನಂದಿ

  • ಅನುವಾದ
  • ಪುರಂದರದಾಸರು
  • ಸುಭಾಷಿತ
~.~
  • hamsanandi ರವರ ಬ್ಲಾಗ್
  • Login or register to post comments
  • 492 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 24, 2008 - 10:38am — Sunil Jayaprakash

ಉ: ಪುಣ್ಯದ ಫಲ

Sunil Jayaprakash's picture

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |
ನಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2008 - 11:15am — mahesha

ಉ: ಪುಣ್ಯದ ಫಲ

mahesha's picture

ಲೋ ಸರಿಯಾಗಿ ಬರೆಯೋ...

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |
ನ ಪಾಪಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||

ಇನ್ನೂ ಸರಿಯಾಗಿ ಅಂದ್ರೆ

ಪುಣ್ಯಸ್ಯ ಫಲಮಿಚ್ಛನ್ತಿ ಪುಣ್ಯನ್ನೇಚ್ಛನ್ತಿ ಮಾನವಾಃ |
ನ ಪಾಪಫಲಮಿಚ್ಛನ್ತಿ ಪಾಪಙ್ಕುರ್ವನ್ತಿ ಯತ್ನತಃ ||

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 24, 2008 - 10:44am — Sunil Jayaprakash

ಉ: ಪುಣ್ಯದ ಫಲ

Sunil Jayaprakash's picture

ಇಲ್ಲಿ, "ಪರ್ವತಮಸ್ತಕೇ" ಎಂಬುದನ್ನು "ಬೆಟ್ಟದ ನೆತ್ತಿಯಲಿ" ಎಂಬುದಾಗಿ ಬಳಸಿದ್ದು ಸ್ವಲ್ಪ ಭಾರವೆನಿಸಿತು. ಏಕೆಂದರೆ "ಬೆಟ್ಟದ ನೆತ್ತಿ" ಎಂಬುದಾಗಿ ನಾವು ಬಳಸುವುದಿಲ್ಲ.

ಯೋಚಿಸಿದಾಗ, ಹಿಂದಿನ ಸಾಲಿನಲ್ಲಿ "ವೈರಿಗಳ ನಡುವಲಿ"ಎಂಬ ಪದ ಇರುವುದರಿಂದ, ಎರಡನೆಯ ಸಾಲಿಗೆ "ಗಿರಿಯ ಅಂಚಿನಲಿ" ಎಂಬ ಬಳಕೆ ಹೊಳೆಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2008 - 11:28am — mahesha

ಉ: ಪುಣ್ಯದ ಫಲ

mahesha's picture

ಚನ್ನಾಗಿದೆ...

ನನ್ನ ಒಂದು ಜತುನ

ಅಟ್ಟಡವಿ-ಹೆಬ್ಬವರ-ಕಿಡುಹಗೆಗಳೊಳು
ನೀರ್‍-ಬೆಂಕಿ-ಬೆಟ್ಟದ ಮೊನೆಯೊಳು
ಮಯ್ಮರೆತ ಮಲಗಿದ ಕುತ್ತುಗಳೊಳು
ಕಾಯ್ವುವು ಮುಂಮಾಡಿದ ಪುಣ್ಯಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 28, 2008 - 5:16am — hamsanandi

ಉ: ಪುಣ್ಯದ ಫಲ

hamsanandi's picture

ಮಹೇಶರೆ,

ನಿಮ್ಮ ಅನುವಾದವೂ ಚೆನ್ನಾಗಿ ಬಂದಿದೆ - ಹತ್ತರಲ್ಲಿ ಕೊನೆಯದನ್ನು ಬಿಟ್ಟು ಬಿಟ್ಟಿದ್ದೀರೆಂದೆನಿಸಿತು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2008 - 12:20pm — madhava_hs

ಉ: ಪುಣ್ಯದ ಫಲ

madhava_hs's picture

ಮೊನ್ನೆ ನಮ್ಮಲ್ಲಿ ಒಂದು ಸಂವಾದ ನಡೆಯುತ್ತಿತ್ತು.

ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಹೀಗಿರಲು ಧಾನ ಧರ್ಮಗಳನ್ನಾಚರಿಸುವುದು ಪುಣ್ಯವೆಂದರೆ, ಇಂದಿನ ಕಾಲಕ್ಕೆ ಧಾನವೆಂದರೆ ಎಷ್ಟು ಪ್ರಸ್ತುತ ವೆಂದೊಬ್ಬರು ಕೇಳಿದರು.
ನಾನೆಂದೆ: ನೀವು ನಿಮ್ಮ ಉದ್ಯೋಗದಿಂದ ಪಡೆಯುತ್ತಿರುವ ಸಂಬಳದಲ್ಲಿ ಒಂದಂಶ (ಒಂದಂಶ ಏನು ಬಂತು ಮಣ್ಣಾಂಗಟ್ಟಿ, ೩೦% ಟ್ಯಾಕ್ಸ್ ಇರುವಾಗ Smiling ) ಸರ್ಕಾರಕ್ಕೆ ತೆರಿಗೆ ಕಟ್ಟುತ್ತೀರಲ್ಲವೇ, ಅದೂ ಒಂದು ರೀತಿಯ ಧಾನವೇ. ಏಕೆಂದರೆ ನಮ್ಮ ಮೂಲಭೂತ ಸೌಕರ್ಯಗಳು, ಸರ್ಕಾರದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿರುವುದು, ಪ್ರಜೆಗಳ ತೆರಿಗೆ ಹಣದಿಂದಲೇ ಅಲ್ಲವೇ??.

ಇನ್ನುಳಿದಂತೆ ಧರ್ಮವನ್ನು ಅನುಷ್ಟಾನಕ್ಕೆ ತರುವುದು. ಸರ್ವ ಜೀವಿಯಲ್ಲೂ ಭಗವಂತನನ್ನು ಕಾಣು. ಇದೇ ಅಲ್ಲವೇ ನಮ್ಮ ಶರಣ ಸಂಸ್ಕೃತಿಯೂ ನಮಗೆ ತಿಳಿಸಿದ್ದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 12:01pm — savithru

ಉ: ಪುಣ್ಯದ ಫಲ

savithru's picture

>>ಸರ್ವ ಜೀವಿಯಲ್ಲೂ ಭಗವಂತನನ್ನು ಕಾಣು. ಇದೇ ಅಲ್ಲವೇ ನಮ್ಮ ಶರಣ ಸಂಸ್ಕೃತಿಯೂ ನಮಗೆ ತಿಳಿಸಿದ್ದು?

ಗೊತ್ತಿಲ್ಲ! Sad

ನನ್ನ ತಿಳುವಳಿಕೆ ಬೇರೇನೆ ಇದೆ Smiling ಮೇಲು ಕೀಳು ಅನ್ನೋ "ಭೇಧ"ವೆಂಬ ತಮೋಗುಣವನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣು ಅಂತ, ಅಂತ ಅನ್ನಿಸುತ್ತದೆ.

ಎಲ್ಲರಲ್ಲೂ ಎಲ್ಲದರಲ್ಲೂ ದೇವರನ್ನು ಕಾಣಕ್ಕೆ ಆಗುತ್ತಾ?!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ಪಾಪ-ಪುಣ್ಯ
  • ಕೇಶಿರಾಜನ ಶಬ್ದಮಣಿ ದರ್‍ಪಣಂ
  • ಕನ್ನಡದಲ್ಲಿ ಸೈನ್ಸ್ ಫಿಕ್ಷನ್
  • ರಾಜಕೀಯ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 240 ಅತಿಥಿಗಳು ಆನ್ಲೈನ್ ಇರುವರು.


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator