ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ನವರಾತ್ರಿಯ ಐದನೆಯ ದಿನ
ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ. ಈ ರಚನೆಯನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಬಾಂಬೇ ಸಹೋದರಿಯರ ಧ್ವನಿಯಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.
ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ.
-ಹಂಸಾನಂದಿ

- hamsanandi ರವರ ಬ್ಲಾಗ್
- Printer-friendly version
- Login or register to post comments
- 811 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನವರಾತ್ರಿಯ ಐದನೆಯ ದಿನ
ಹಂಸಾನಂದಿಗಳೇ, ಹಂಸಗೀತೆ ಸಿನಿಮಾದ ನಾಟಕ ರೂಪವೂ ಒಂದಿದೆ. ಇಲ್ಲಿ ನೋಡಿ. ವೇದಿಕೆ ತಂಡದವರು ಇದರ ಪ್ರಯೋಗ ಮಾಡಿದ್ದರು. ಎಲ್ಲ ನೆಂಟರೂ ಒಟ್ಟಿಗೆ ಸೇರಿ ಹಳೆಯದನ್ನು ಮೆಲುಕು ಹಾಕುತ್ತಾ ಕಾಲ ಕಳೆಯಲು,"ಹಂಸಗೀತೆ" ಮತ್ತು "ಸಂಧ್ಯಾರಾಗ" ಒಳ್ಳೆಯ ಪರಿಕರಗಳು.
ನವರಾತ್ರಿಯ "ಸರಸ್ವತಿ ಪೂಜೆಯ" ಹೊತ್ತಿನಲ್ಲಿ "ನಂಬಿದೆ ನಿನ್ನ ನಾದದೇವತೆಯೇ" ಹಾಡಿನ ಪಾಯಿಂಟರ್ ಅರ್ಥಪೂರ್ಣವಾಗಿತ್ತು. ಸರಸ್ವತಿಯನ್ನು ಕುರಿತಾಗಿ ಇರುವ ಮತ್ತೊಂದಷ್ಟು ಹಾಡುಗಳ ಎಳೆ ಸಿಕ್ಕರೆ ಕಲೆಹಾಕಿ ಕೊಡಿ. ನಿಮ್ಮ ಪಾಲಿಗೆ ಮತ್ತಷ್ಟು ಪುಣ್ಯ ಸೇರಿಕೊಳ್ಳುವುದು ಅಳವೋ ಅಳ.