ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಕಂಡೆ ನಾ ಕನಸಿನಲಿ

July 15, 2008 - 9:56pm — hamsanandi

೧೯೮೦ ಅಥವಾ ೧೯೮೧ರ ವಿಷಯ ಇರಬಹುದು. ನಮ್ಮೂರು ದೊಡ್ಡ ಪೇಟೆ ಅಲ್ಲ. ಬೆಂಗಳೂರು ಮೈಸೂರು ತರಹ ಯಾವಾಗೆಂದರೆ ಆಗ ನಾಟಕ ಸಂಗೀತ ಮೊದಲಾದುವು ಅಲ್ಲಿ ನಡೆಯುತ್ತಿರಲಿಲ್ಲ. ಸಂಗೀತ ಹರಿಕಥೆ ಬೇಕೂಂತಂದ್ರೆ ಗಣಪತಿ ಉತ್ಸವವೋ ರಾಮೋತ್ಸವವೋ ಆಗಬೇಕು. ಇನ್ನು ನಾಟಕ ರಸಮಂಜರಿ ಎಲ್ಲಾ ಬರಬೇಕು ಅಂತಿದ್ರೆ ಡಿಸೆಂಬರ್ ದನದ ಜಾತ್ರೆ ಕಾಲದಲ್ಲೇ. ಅಂತಹದ್ರಲ್ಲಿ ಒಮ್ಮೆ ನಮ್ಮೂರಲ್ಲಿ ಕರ್ನಾಟಕ ರಾಜ್ಯ ಲಾಟರಿಯ ಬಂಪರ್ ಡ್ರಾ ಇತ್ತು.  ಆ ನೆವದಲ್ಲಿ, ಎರಡು ಮೂರು ದಿವಸ ಒಳ್ಳೊಳ್ಳೆ ಕಾರ್ಯಕ್ರಮ ನಡೆಸಿದ್ದರು.

ಅವುಗಳಲ್ಲೊಂದು ಪ್ರಭಾತ್ ಕಲಾವಿದರು ನಡೆಸಿಕೊಟ್ಟ "ಕರ್ನಾಟಕ ವೈಭವ" ಆಗಿತ್ತು. ಪ್ರಭಾತ್ ಕಲಾವಿದರು ಕರ್ನಾಟಕದಲ್ಲೆಲ್ಲ ಮನೆಮಾತು ತಾನೇ. ಹಾಗಾಗಿ ಅವರ ವಿಷಯ ಏನೂ ಹೇಳೋದೇ ಬೇಕಿಲ್ಲ. ಆ ಕಾರ್ಯಕ್ರಮದಲ್ಲೊಂದು ಭಾಗದಲ್ಲಿ ಪುರಂದರ ದಾಸರು ಕಂಡ ಒಂದು ಕನಸಿನ ಚಿತ್ರಣ. ನಿದ್ದೆಹೋಗಿದ್ದ ದಾಸರು ಕನಸಿಂದ ಎಚ್ಚೆತ್ತು ತಾವು ಕಂಡ ಕನಸನ್ನು ಬಣ್ಣಿಸುವ ಚಿತ್ರ. ರಾಗಮಾಲಿಕೆಯಲ್ಲಿದ್ದ ಆ ಹಾಡೂ, ಆ ಪಾತ್ರ ವಹಿಸಿದ ನಟರ ಕಣ್ಣಿನ ಹೊಳಪೂ ಎಷ್ಟೋ ವರ್ಷವಾದರೂ ಇನ್ನೂ ಕಣ್ಣಲ್ಲೇ ಇದೆ ಅನ್ನಿಸುತ್ತೆ. ಆ ಹಾಡನ್ನ ಇಲ್ಲಿ ಬರೆದಿರುವೆ.

ಕಂಡೆ ನಾ ಕನಸಿನಲಿ ಗೋವಿಂದನ!

ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ!

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ -
-ನಂದದಿ ಕುಣಿವ ಮುಕುಂದನ ಚರಣವ

ಉಟ್ಟ ಪೀತಾಂಬರ ಉಡಿಯ ಕಾಂಚಿಯ ಡಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮ ಗೋಚರನ

ಕಿರು ಬೆರಳಿನ ಮುದ್ರೆ ಉಂಗುರ ಮುಂಗೈಯ
ಕರದಲಿ ಕಂಕಣ ನಲಿದೋಳುಗಳ
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರತದಿ ಒಪ್ಪುವ ಕರುಣಾಮೂರುತಿಯ

ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟವ
ಕಣ್ಣು ಮನ ತಣಿಯದು ಕಂಸಾರಿ ಕೃಷ್ಣನ

ಮಂಗಳ ವರ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರಮೂರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ

ನನಗೆ ಬಹುಶಃ ದಾಸರ ರಚನೆಗಳ ಮೇಲೆ ಪ್ರೀತಿ ಉಂಟಾಗಲಾರಂಭಿಸಿದ್ದೇ ಅಲ್ಲಿರಬಹುದು; ಅದಿರಲಿ.

ಕನ್ನಡದಲ್ಲಿ ಪುರಂದರ ದಾಸರು, ವಿಜಯದಾಸರು, ಶ್ರೀಪಾದರಾಜರು ಮೊದಲಾಗಿ ಹಲವು ಹರಿದಾಸರು ವಿಠಲನ ಮೇಲೆ ಹಾಡಿದಂತೆ, ಮರಾಠಿಯಲ್ಲಿ ಸಂತರಾದ ತುಕಾರಾಮ, ಜ್ಞಾನೇಶ್ವರ, ನಾಮದೇವ ಮೊದಲಾದವರೂ ವಿಠಲನ ಬಗ್ಗೆ ಹಾಡಿ ಹೊಗಳಿದ್ದಾರೆ. ಭೀಮಸೇನ ಜೋಶಿ ಅವರು ಹಾಡಿರುವ ಅಭಂಗಗಳಂತೂ ಬಹಳ ಮನ್ನಣೆ ಗಳಿಸಿವೆ.

ಹೀಗೆ ಕನ್ನಡಿಗರ, ಮರಾಠರ ಇಷ್ಟದೈವವಾದ ವಿಠಲನ ನೆಲೆ-ಹಿನ್ನೆಲೆಯ ಬಗ್ಗೆ ನಾನು ಬರೆದ ಬರಹವೊಂದು ಬೆಂಗಳೂರಿನ ಇಸ್ಕಾನ್ ಸಂಸ್ಥೆಯು ಹೊರತರುವ ಪತ್ರಿಕೆ - ಭಕ್ತಿ ವೇದಾಂತ ದರ್ಶನದ ಜುಲೈ ೨೦೦೮ ಸಂಚಿಕೆಯ ಮುಖಪುಟ ಲೇಖನವಾಗಿ ಮೂಡಿ ಬಂದಿದೆ. ಈ ಬರಹವನ್ನು ಓದಲು, ಕೆಳಗಿನ ಕೊಂಡಿಯ ಮೇಲೆ ಚಿಟಕಿಸಿ.

ಶ್ರೀ ಪಾಂಡುರಂಗ ವಿಟ್ಠಲ:  ನೆಲೆ - ಹಿನ್ನೆಲೆ

ಜುಲೈ ತಿಂಗಳ ಸಂಚಿಕೆಯ ಬೇರೆ ಬರಹಗಳನ್ನು ಓದಲು ಇಲ್ಲಿ ಚಿಟಕಿಸಿ.

ಈ ಬರಹವನ್ನು ಅಣಿಮಾಡುವಾಗ ನೆರವು ನೀಡಿದ ಸಂಪದಿಗರಾದ ಸುನಿಲ್ ಜಯಪ್ರಕಾಶ್ ಮತ್ತು ಶ್ರೀಕಾಂತ್ ಮಿಶ್ರಿಕೋಟಿ ಅವರಿಗೆ ನಾನು ಕೃತಜ್ಞ.

-ಹಂಸಾನಂದಿ

 

 

  • ಕರ್ನಾಟಕ ರಾಜ್ಯ ಲಾಟರಿ
  • ನೆನಪುಗಳು
  • ಪುರಂದರದಾಸ
  • ಪ್ರಭಾತ್ ಕಲಾವಿದರು
  • ಭೀಮಸೇನ ಜೋಶಿ
~.~
  • hamsanandi ರವರ ಬ್ಲಾಗ್
  • Login or register to post comments
  • 153 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
  • ರಾಜರಲ್ಲೊಬ್ಬ ರತ್ನ
  • ಕನವರಿಕೆಯೊಳು ಕಂಡೆ ಕಳವಳವ..!!
  • ಸೀತೆಯ, ಭೂಮಿಜಾತೆಯ
  • ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 150 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator