ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಕಟಪಯಾದಿ ಸೂತ್ರ

May 14, 2008 - 8:45am — hamsanandi

ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.

ಬೇರೆ
ದೇಶಗಳಿಗಿಂತ ಮೊದಲು ಭಾರತದಲ್ಲೇ ಭಾರೀ ಅಂಕೆಗಳ ಉಪಯೋಗವಾಗಿದೆ ಅನ್ನೋದು
ನಿಚ್ಚಳವಾಗಿರುವ ಸಂಗತಿ. ನಮ್ಮ ಮೂವತ್ತುಮೂರು ಕೋಟಿ ದೇವತೆಗಳಿಂದ ಹಿಡಿದು,
ಕೃತ-ತ್ರೇತಾ-ದ್ವಾಪರ-ಕಲಿಗಾಲಗಳಲ್ಲಿ ಬರುವ ವರ್ಷಗಳ ತನಕ ದೊಡ್ಡ ಅಂಕೆಗಳದ್ದೇ ಭರಾಟೆ.

ಆದರೆ, ಹಿಂದೆ ಅಂಕೆಗಳನ್ನು ಅಕ್ಷರಗಳಿಂದ, ಪದಗಳಿಂದ ಗುರುತಿಸುತ್ತಿದ್ದರು ಎನ್ನುವುದು ಗೊತ್ತಿದೆಯೇ ನಿಮಗೆ? ಇಲ್ಲವಾದರೆ ಮುಂದೆ ಓದಿ.

ಇದಕ್ಕೆ
ಕಟಪಯಾದಿ ಸೂತ್ರ ಎಂದು ಹೆಸರು. ಈ ಸೂತ್ರದ ಸಹಾಯದಿಂದ, ದೊಡ್ಡ ಸಂಖ್ಯೆಗಳನ್ನು
ನೆನಪಿನಲ್ಲಿಡಲು ಸುಲಭವಾದ ಪದಗಳನ್ನೋ, ಶ್ಲೋಕಗಳನ್ನೋ ಮಾಡಿಕೊಳ್ಳುತ್ತಿದ್ದರು.
ಉದಾಹರಣೆಗೆ,ಬೆಂಗಳೂರಿನಲ್ಲಿ ೪೮,೪೮,೨೫೮ ಜನ ಕನ್ನಡಿಗರಿದ್ದಾರೆ ಅಂದುಕೊಳ್ಳೋಣ. ಈ
ಅಂಕೆಯನ್ನು ನೆನಪಿನಲ್ಲಿಡುವುದು ಸುಲಭವೇ ಅಥವಾ ಸಮರಸವೇಜೀವನ
ಎನ್ನುವುದನ್ನು ನೆನಪಿನಲ್ಲಿಡುವುದು ಸುಲಭವೋ? ಈ ಸಂದರ್ಭದಲ್ಲಿ ಹೆಚ್ಚು ವ್ಯತ್ತ್ಯಾಸ
ಕಾಣ್ದಿದ್ದರೂ, ಪದವನ್ನು (ಅಥವಾ ವಾಕ್ಯವನ್ನು) ನೆನಪಿನಲ್ಲಿಡುವುದು ಸರಳ ಅನ್ನೋದು
ಪುಟ್ಟಮಕ್ಕಳಿಗೂ ಗೊತ್ತಾಗೋ ಮಾತು. ಆದ್ರೆ, ಸಮರಸವೇ ಜೀವನ ಅನ್ನೋದು ಈ ಅಂಕೆಗೆ ಹೇಗೆ
ಸಮವಾಗುತ್ತೆ ಅನ್ನೋದನ್ನ ಅರ್ಥ ಮಾಡ್ಕೊಂಡ್ರೆ ವಾಸಿ. ಅಲ್ವಾ?

ಈ ಸೂತ್ರವನ್ನು
ಜ್ಯೋತಿಷ್ಯದ, ಬಹುಶಃ ಗಣಿತದ ಇತರ ಹೊತ್ತಿಗೆಗಳಲ್ಲೂ ಉಪಯೋಗಿಸಿಸುತ್ತಿದ್ದರೆಂದು
ತೋರುತ್ತೆ. ಇದಲ್ಲದೇ ಬೇರೆ ರೀತಿಯ ಸಬ್ಸ್ಟಿಟ್ಯೂಷನ್ ಸೈಫರ್ ಗಳು ಕೂಡ ಇದ್ದಿರಬಹುದು.
೧೭-೧೮ನೇ ಶತಮಾನದಿಂದೀಚೆ, ಕರ್ನಾಟಕ ಸಂಗೀತದಲ್ಲೂ ಇದನ್ನು ಬಳಸಲಾಗಿದೆ.

ಇನ್ನು ಮುನ್ನುಡಿ ಮುಗಿಸಿ ಸೂತ್ರಕ್ಕೆ ಬರೋಣವೇ?

ಕಟಪಯಾದಿ ಸೂತ್ರ ಬಹಳ ಸರಳ: ಕಾದಿನವ-ಟಾದಿನವ-ಪಾದಿಪಂಚ-ಯಾದ್ಯಷ್ಟ - ಅಂದರೆ, ಕಾದಿಂದೊಂಬತ್ತು-ಟಾದಿಂದೊಂಬತ್ತು-ಪಾದಿಂದೈದು-ಯಾದಿಂದೆಂಟು ಎಂದಿಟ್ಟುಕೊಳ್ಳಿ.

ಇದು ಏನನ್ನ ಹೇಳುತ್ತಿದೆ ಎಂದಿರಾ? ನಮ್ಮ ಅಕ್ಷರಮಾಲೆಯನ್ನು ನೋಡಿ:

ಕ ಖ ಗ ಘ ಙ ‌
ಚ ಛ ಜ ಝ ಞ್
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ

ಇದರಲ್ಲಿ
ಈ ಸೂತ್ರ, ಪ್ರತಿ ಅಕ್ಷರಕ್ಕೂ ಒಂದು ಅಂಕೆಯನ್ನು ನಿಗದಿಮಾಡುತ್ತೆ. ಕಾದಿಂದೊಂಬತ್ತು -
ಎಂದರೆ, ಕ = ೧, ಖ=೨ .... ಝ= ೯; ಹಾಗೇ, ಟಾದಿಂದೊಂಬತ್ತು ಎಂದರೆ ಟ =೧, ಠ =೨, ಡ =
೩ ..... ಧ = ೯; ಪಾದಿಂದೈದು ಎಂದರೆ, ಪ = ೧ .....ಮ = ೫ ; ಯಾದಿಂದೆಂಟು ಎಂದರೆ, ಯ
= ೧ , ರ = ೨ .....ಹ=೮.

ನ , ಮತ್ತು ಣ ಈ ಎರಡೂ ಅಕ್ಷರಗಳಿಗೆ ಬೆಲೆ ನಿಗದಿಇಲ್ಲದಿರುವುದರಿಂದ ಅದಕ್ಕೆ ಸೊನ್ನೆ ಎಂದಿಟ್ಟುಕೊಳ್ಳುವುದು.

ಈಗ ಸಂಪದ ಅನ್ನೋ ಪದವನ್ನು ತೊಗೊಳ್ಳಿ; ಇದರಲ್ಲಿ ಬರುವ ಪ್ರತಿ ವ್ಯಂಜನ ಅಕ್ಷರಕ್ಕೂ ಅದರ ಬೆಲೆ ಕಟ್ಟುತ್ತಾ ಬರೋಣ.
ಸ = ಯಾದಿಂದೆಂಟರಲ್ಲಿ, ಇದು ಏಳನೆಯದು ; ಹಾಗಾಗಿ ಇದರ ಬೆಲೆ ೭
ಪ = ಪಾದಿಂದೈದರಲ್ಲಿ, ಇದು ಮೊದಲದ್ದು; ಹಾಗಾಗಿ ಇದರ ಬೆಲೆ ೧
ದ = ಟಾದಿಂದೊಂಬತ್ತರಲ್ಲಿ, ಇದು ಎಂಟನೆಯದು; ಹಾಗಾಗಿ ಇದರ ಬೆಲೆ ೮.

ಒಟ್ಟಿಗೆ
ಸೇರಿಸಿದರೆ ಸಂಪದ = ೭೧೮ ; ಆದರೆ ಕಟಪಯಾದಿ ಸೂತ್ರದ ಕೊನೆಯಭಾಗ "ಅಂಕಾನಾಂ ವಾಮತೋ
ಗತಿಃ" ಅನ್ನುತ್ತೆ; ಅಂದರೆ, ಅಂಕಿಗಳನ್ನು ಎಡಕ್ಕೆ ಬರ್ಕೊಂಡು ಹೋಗಿ ಅಂತ. ಅಂದರೆ ಸಂಪದ
ಅನ್ನೋ ಪದದ ಬೆಲೆ ೮೧೭ ಆಗತ್ತೆ! ಹೀಗೇ ನಿಮಗೆ ಯಾವ ಪದ ಬೇಕೋ ಆ ಪದವನ್ನು ತೊಗೊಂಡು ಅದರ
ಅಂಕೆ ಬೆಲೆ ನಿರ್ಧಾರ ಮಾಡ್ಕೋಬಹುದು. ಯಾವ ಸಂಖ್ಯೆಯನ್ನು ಕೂಡ ಕೋಡ್ ಮಾಡಲು, ಹೀಗೆ ಈ
ಕಟಪಯಾದಿ ಸೂತ್ರ ಬಳಸುತ್ತಾ ಇದ್ದರು.

ಕರ್ನಾಟಕ ಸಂಗೀತದಲ್ಲಿ ಇದನ್ನ ಹೇಗೆ
ಬಳಸಿದಾರೆ ಅಂತ ಹೇಳ್ಬಿಡ್ತೀನಿ. ೭೨ ಮೇಳರಾಗಗಳಿವೆ ಕರ್ನಾಟಕ ಸಂಗೀತದಲ್ಲಿ. ಅದನ್ನ
ಒಂದು ಕ್ರಮದಲ್ಲಿ ಜೋಡಿಸಿದಾರೆ. ಎಲ್ಲ ಮೇಳರಾಗಗಳಿಗೂ, ಅವುಗಳ ಅನುಕ್ರಮ ಸಂಖ್ಯೆ ಎಷ್ಟು
ಅಂತ ಗೊತ್ತಾಗೋ ತರಹ ಹೆಸರು ಕೊಟ್ಟಿದಾರೆ. ಆ ಮೊದಲೇ, ಬೇರೆ ಹೆಸರಿದ್ದ ರಾಗಗಳಿಗೆ,
ಎರಡಕ್ಷರ ಸೇರಿಸಿ, ಅದನ್ನ ಕಟಪಯಾದಿ ಸೂತ್ರ ಪಾಲಿಸೋ ಹಾಗೆ ಮಾಡಿದಾರೆ.

ಉದಾಹರಣೆಗೆ
ಕಲ್ಯಾಣಿ ರಾಗವನ್ನ ಮೇಚಕಲ್ಯಾಣಿ ಅಂತ ಕರೆದು ಅದರ ಸಂಖ್ಯೆ ೬೫ ಅಂತಲೂ, ಮಾಳವಗೌಳವನ್ನ
ಮಾಯಾಮಾಳವಗೌಳ ಅಂತ ಕರೆದು, ಅದರ ಸಂಖ್ಯೆ ೧೫ ಅಂತಲೂ ಗೊತ್ತಾಗೋ ಹಾಗೆ ಮಾಡಿದಾರೆ.
ಇನ್ನು ಈ ಮೇಳದ ಪದ್ಧತಿ ಬಂದ ಮೇಲೆ ಕಲ್ಪಿಸಿದ ಹೊಸ ರಾಗಗಳಿಗೆ ಹೆಸರುಕೊಡುವಾಗಲೆ,
ಗಾಯಕಪ್ರಿಯ, ಸರಸಾಂಗಿ ಅಥವಾ ವಾಗಧೀಶ್ವರಿ ಹೀಗೆ ಕಟಪಯಾದಿ ಸೂತ್ರವನ್ನು ಪಾಲಿಸೋ ಹೆಸರೇ
ಕೊಟ್ಟಿದ್ದಾರೆ.

ಕಟಪಯಾದಿ ಸೂತ್ರದ ಗುಟ್ಟು ಗೊತ್ತಾಯ್ತಲ್ಲ?

-ಹಂಸಾನಂದಿ

"ಸಮರಸವೇ ಜೀವನ"ವನ್ನು ಬಿಡಿಸುವುದನ್ನು ಸೂತ್ರ ಮನವರಿಕೆಯಾಗಿದೆ ಅಂತ ತಿಳಿದುಕೊಳ್ಳೋದಕ್ಕಾಗೆಂದು ಓದುಗರಿಗೆ ಬಿಡಲಾಗಿದೆ Smiling

 

  • ಸಂಗೀತ
  • ಸೈಫರ್
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 727 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 14, 2008 - 9:58am — sanket

ಉ: ಕಟಪಯಾದಿ ಸೂತ್ರ

sanket's picture

ತುಂಬಾ ಆಸಕ್ತಿಕರವಾಗಿದೆ. ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 11:18am — ಶ್ರೀನಿಧಿ

ಉ: ಕಟಪಯಾದಿ ಸೂತ್ರ

ಶ್ರೀನಿಧಿ's picture

ಕಟಪಯಾದಿ ಸೂತ್ರ technical ಆಗಿ ಹೇಳೋದಿದ್ರೆ ಕೋಡ್ ಆಗುತ್ತೆ. ಸಂಪೂರ್ಣ ಸೈಫರ್ ಆಗೋದಿಲ್ಲ.
ಅದು ಹೀಗೆ - ೬೫ ಅನ್ನೋ ಸಂಖ್ಯೆ ಕೊಟ್ಟು ಸೂತ್ರ ಕೂಡ ಕೊಟ್ಟರೆ ಅದರಿಂದ ನೀವು ಮೇಚಕಲ್ಯಾಣಿ ಅಂತ ನೇರವಾಗಿ ಹೇಳಲು ಬರೋಲ್ಲ. ಇದಕ್ಕೆ ನಿಮಗೆ ಎಲ್ಲಾ ಮೇಳಕರ್ತ ರಾಗಗಳ ಅರಿಮೆ ಇರಬೇಕು.

ಇಲ್ಲಿ ಕಟಪಯಾದಿ ಸೂತ್ರವನ್ನು ಸರಳ ಹ್ಯಾಶ್ ಎನ್ನುತ್ತಾರೆ. (IEEE paper) ಇದು ಒಂದು ರೀತಿಯಲ್ಲಿ ನಿಜವೂ ಹೌದು.

http://citeseer.ist.psu.edu/532626.html

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 9:15pm — hamsanandi

ಉ: ಕಟಪಯಾದಿ ಸೂತ್ರ

hamsanandi's picture

ಶ್ರೀನಿಧಿ ಅವರೆ,

ತಿದ್ದುಪಡಿ ತಿಳಿಸಿದ್ದಕ್ಕೆ ಧನ್ಯವಾದಗಳು. ಹೌದು, ನೀವು ಹೇಳಿದಂತೆ, ಇದು ಒನ್-ವೇ-ಪ್ರೊಸೆಸ್ಸ್. ಮತ್ತೆ, ಒಂದೇ ಅಂಕಿಗೆ ಬೇರೆಬೇರೆ ಎನ್ಕೋಡಿಂಗ್ ಇರಬಹುದು. ಉದಾಹರಣೆಗೆ ಹರ = ೨೮, ಜರಿ = ೨೮, ಹಠ= ೨೮, ಮತ್ತೆ ದಫನ್ = ೨೮ ಆಗುತ್ತೆ!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 10:12am — Prabhu Murthy

ಉ: ಕಟಪಯಾದಿ ಸೂತ್ರ

Prabhu Murthy's picture

ಮೇಳಕರ್ತರಾಗಗಳ ವ್ಯವಸ್ಥೆಯಲ್ಲಿ ಕಟಪಯಾದಿ ಸಾಂಖ್ಯವನ್ನು ಬಳಸಿರುವ ಬಗ್ಗೆ ಇಂಟರ್~ನೆಟ್ ನಲ್ಲಿ ಉತ್ತಮವಾದ ಅನೇಕ ಬರಹಗಳನ್ನು ಓದಬಹುದು.
ಈ ಸಾಂಖ್ಯ ಪಾಣಿನಿಯ ಅವಿಷ್ಕಾರ ಎಂಬ ಅಭಿಪ್ರಾಯವಿದೆ. (ಅಂದ ಹಾಗೆ ಅವನ ತಮ್ಮ ಪಿಂಗಳ binary arithmeticನ ಆದ್ಯಪ್ರವರ್ತಕ ಎಂದೂ ಹೇಳುತ್ತಾರೆ.
ನಿಜ ಆಗಿದ್ರೆ ಅಣ್ಣ ತಮ್ಮಂದ್ರು ಇಬ್ರೂ ಒಳ್ಳೆ ಪಂಟ್ರು Eye-wink ) ಸುಭಾಷ್ ಕಕ್ ಎನ್ನುವ ಪ್ರೊಫೆಸರ್ ಒಬ್ಬರು ಕಟಪಯಾದಿ ಸಾಂಖ್ಯದ ಬಗ್ಗೆ ಕಂಪ್ಯೂಟರ್ ವಿಜ್ಞಾನದ ಕೋನದಿಂದ ಪ್ರಬಂಧಗಳನ್ನು ಬರೆದಿದ್ದಾರೆ. Computing Science in Ancient India edited by T. R. N. Rao and Subhash Kak (ನಾನು ಓದಿಲ್ಲ)

ಈಗ ಎರಡು quizzಗಳು Smiling

೧.
ಕಳೆದ ವಾರ ಶ್ರೀ ಶಂಕರಾಚಾರ್ಯರ ಜಯಂತಿ (ವೈಶಾಖ ಶುಕ್ಲ ಪಂಚಮಿ) ಆಯ್ತು. ಅವರ ಜಯಂತಿಯ ದಿವಸದ ಸ್ವಾರಸ್ಯವೇನು?

೨.
ಎರಡು ವರುಷದ ಹಿಂದೆ ನಾನು ಮಾಡಿದ್ದ ಒಂದು puzzle:

ಈ ಸಾಲುಗಳಲ್ಲಿರುವ ಅಕ್ಷರಗಳನ್ನು ಸರಿಯಾದ ಅಕ್ಷರಗಳಿಂದ (ಕಾಗುಣಿತ ಮಾತ್ರ ಹಾಗೆ ಇರಲಿ) ಬದಲಾಯಿಸಿ ನೋಡಿ:

ಕು ಡ ಕು ಡಾ ಹಿ ಟ ಝೆ ಹ ಖೂ ಕು ಡಾ ಹಿ ಶ ಖ ಝಿ ಲ ಖು ಷಿ ಹೆ

( ಸುಳಿಹು: ಜನಪ್ರಿಯವಾದ ಒಂದು ಹಾಡಿನ ಮೊದಲ ಸಾಲು!)

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 10:29am — vinayudupa

ಉ: ಕಟಪಯಾದಿ ಸೂತ್ರ

vinayudupa's picture

ಸುಳಿವು ಕೊಟ್ಟಿದ್ದರಿಂದ ಬಹಳನೆ ಸರಳ ಆಗೋಯ್ತು.

೨. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 1:32pm — Shivakumar.Revadi

ಉ: ಕಟಪಯಾದಿ ಸೂತ್ರ

Shivakumar.Revadi's picture

ಹಂಸಾನಂದಿಯವರೆ....ನಿಮ್ಮ ಬರಹ ತುಂಬಾ ಚೆನ್ನಾಗಿದೆ.
ಈಗ ನನ್ನ ತಲೆಹರಟೆ :
ನೀವು ಮತ್ತು ರಮೇಶ ಬಳಗಂಚಿಯವರು ನಮ್ಮ ಗುಪ್ತಚರ ಇಲಾಖೆಗೆ ಮತ್ತಷ್ಟು ಕೆಲಸಾ ಕೋಡೊ ಹಂಗ ಕಾಣ್ಸತ್ತ. ಈಗಾಗಲೇ ಉಗ್ರರ ಕೋಡ್‍ಗಳನ್ನು ಡಿಕೋಡ್ ಮಾಡಾಕ ತಿಣುಕಾಡ್ತಿರೋ ಈ ಮಂದಿಗೆ ನಿಮ್ಮ ಈ ಮಿತಾಕ್ಷರಿಗಳು ಮತ್ತು ಕಪಟಯಾದಿ ಸೂತ್ರಗಳು (ಈ ತರಹದವು ನಿಮ್ಮಿಬ್ಬರ ಬತ್ತಳಿಕೆಯಲ್ಲಿ ಇನ್ನೂ ಎಷ್ಟಿವೆಯೋ ಎನೋ) "ನೀರಿಳಿಯ ಗಂಟಲೋಳ್ ಕಡುಬಂ ತುರುಕಿದಂತಾಯ್ತು"

ನನ್ನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀಲು
  • ವಿಕ್ರಾಂತ ಕರ್ನಾಟಕ - ಪತ್ರಿಕೆ ಬಿಡುಗಡೆ ಹಾಗೂ ವೆಬ್ಸೈಟ್ ಉದ್ಘಾಟನಾ ಸಮಾರಂಭ
  • ಸಾಹಿತ್ಯ
  • ಚಿಂತನ
  • ಹರವಬೇಡ ಕೂದಲು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ೦ದಾಯ
  • ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
  • ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
  • ಪುಳಕದ ತವಕ
  • ಹಗರಟಗಿಯ ಇಟ್ಟಿಗೆ
  • ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.
  • ಗಂಡಸರೂ ಬಸುರಿ ಆಗುವುದಾಗಿದ್ದರೆ...?!
  • ಎಂಟರ ನಂಟು
  • ಸಮಯ - ಸ್ಫೂರ್ತಿ ಸೆಲೆ ೭
  • ಮುಂಬಯಿ ಮುಖಗಳು ಭಾಗ ೧.....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Deeparavishankar
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:52pm
  • ಸಂಗನಗೌಡ
    ಉ: ಹಳ್ಳಿ = ಶಾಲೆ?!
    August 8, 2008 - 11:24pm
  • Deeparavishankar
    ಉ: ಮತ್ತದೇ ಖಾಲಿತನ, ಬೇಸರ
    August 8, 2008 - 11:19pm
  • ಸಂಗನಗೌಡ
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:13pm
  • hamsanandi
    ಉ: ಹಳ್ಳಿ = ಶಾಲೆ?!
    August 8, 2008 - 11:09pm
  • prameela
    ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
    August 8, 2008 - 11:02pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:30pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:22pm
  • hamsanandi
    ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
    August 8, 2008 - 10:21pm
  • prameela
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:20pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator