ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

October 7, 2008 - 9:33pm — hamsanandi

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು.

ವರ್ಷಕ್ಕೆ ಮುನ್ನೂರರ್ವತ್ತೆರಡು ದಿನ ಮನೆಯಿಲ್ಲದವರ ಮನೆ ಆಗಿತ್ತು ಆ ಮಂಟಪ ಅಂದೆನಲ್ಲ - ಅದು ಹೇಗೋ ವಿಜಯ ದಶಮಿ ಎರಡು ದಿನ ಇದೇ ಅನ್ನೋವಾಗ ಅಲ್ಲಿದ್ದೋರನ್ನೆಲ್ಲ ಜಾಗ ಖಾಲಿ ಮಾಡಿಸಿ, ಮಂಟಪಕ್ಕೆ ಸುಣ್ಣ ಬಳಿಸಿ ಸುತ್ತ ಮುತ್ತ ಚೊಕ್ಕಟ ಮಾಡೋರು. ಯಾರು ಮಾಡ್ತಿದ್ರೋ ಈಗಂತೂ ನೆನಪಿಲ್ಲ. ಮುನ್ಸಿಪಾಲ್ಟೀಯವ್ರಾ? ಇರಬಹುದು. ಮತ್ತೆ ಮಹಾನವಮಿಯ ದಿನ ಮತ್ತೆ ವಿಜಯದಶಮಿ ದಿನ ಅಲ್ಲೊಂದು ಸಣ್ಣ ಜಾತ್ರೆ ನಡೆಯೋದು. ಒಂದ್ಕಡೆ ದೇವ್ರ ಮೂರ್ತಿ ಇಟ್ಟು ಪೂಜೆ ಇರ್ತಿತ್ತು. ರಾಟವಾಳ ಬಂದ್ರೂ ಬರ್ತಿತ್ತು. ಅದರ ಜೊತೆಗೆ ಬಲೂನು ಪೀಪಿ ಮಾರೋರು, ಅದು ಇದು ತಿಂಡಿ ತಿನಿಸು ಮಾರೋವ್ರು, ಹಾಗೇ ಒಂದು ಜಾತ್ರೆ ಅಂದ್ರೆ ಏನೇನಿರ್ಬೇಕೋ ಅಂತಹದ್ದೆಲ್ಲ ಬರ್ತಿತ್ತು. ವಿಜಯದಶಮಿದಿನ ದೇವರ ಮುಂದೆ ಅಲ್ಲೊಂದು ಬನ್ನಿ ಮರ ಕಡಿಯೋವ್ರು. ಬನ್ನಿ ಮರದ ಬದಲು ಅದು ಸಿಗ್ದೇ ಇದ್ರೆ, ಬಾಳೇ ಕಂದನ್ನೇ ಕಡೀತಿದ್ರು ಅನ್ಸತ್ತೆ. ಆಮೇಲೆ ಎಲ್ಲರಿಗೂ ಒಂದೊಂದು ಚೂರು ಬನ್ನೀ ಎಲೆ ಕೊಡ್ತಿದ್ರು. ಇದಕ್ಕೇ ಆ ಮಂಟಪಕ್ಕೆ ಮಾರನೋಮಿ ಮಂಟಪ ಅಂತಲೇ ಕರೀತಿದ್ರು ಎಲ್ಲರೂ.

ವಿಜಯ ದಶಮಿ ಮಾರನೇ ದಿನ, ಅಲ್ಲಿದ್ದ ಸಂಸಾರಗಳೆಲ್ಲ ಮತ್ತೆ ಯಥಾಸ್ಥಿತಿ ಅಲ್ಲಲ್ಲೇ ಅವರವರ ಜಾಗ ತೊಗೊಂಡಿರ್ತಿದ್ರು - ಮತ್ತೆ ಅವರ ಭಿಕ್ಷಾಟನೆ ಶುರುವಾಗ್ತಿತ್ತು ಅನ್ಸತ್ತೆ.

ಈ ಸಲ ಊರಿಗೆ ಹೋದಾಗ, ಆ ಮಂಟಪ ಅಲ್ಲಿದೆಯೋ ಇಲ್ಲವೋ ನೋಡಕ್ಕಾಗ್ಲಿಲ್ಲ. ಆದ್ರೆ ಭಿಕ್ಷುಕರು ಮುಂಚೆ ತರಹ ಅಷ್ಟಾಗಿ ಕಾಣಿಸ್ಕೊಳೋದಿಲ್ಲ ಅಂತ ಕೇಳಿದೆ. ಎಲ್ಲರಿಗೂ ಹೊಟ್ಟೆ ಹೊರೆಯೋದಕ್ಕೆ ಒಂದು ಕೆಲಸ, ಇರೋದಕ್ಕೆ ಒಂದು ಮನೆ ಇರ್ತಿದ್ರೆ ಸಾಕು ಅಲ್ವಾ - ಅದು ನಮ್ಮ ಊರು ಉದ್ಧಾರವಾಗ್ತಿದೆ ಅನ್ನೋದರ ಸೂಚನೆ. ನಿಜವಾಗ್ಲೂ ಮನಸ್ಸಿಗೆ ಸಮಾಧಾನ ತರೋ ವಿಷಯ ಇದು.

ಅಂತೂ ನನ್ನ ಮಾರ್ನೋಮಿ ಪುರಾಣ ಎಲ್ಲಿಂದ ಎಲ್ಲೆಲ್ಲಿಗೂ ಹೋಯ್ತು. ಹಾಡಿದ್ದೇ ಹಾಡೋ ಕಿಸ್ಬಾಯ್ದಾಸ ಅನ್ನಿಸ್ಕೊಳೋ ಬದಲು, ಸ್ವಲ್ಪ ಬದ್ಲಾವಣೆ ಇರ್ಲಿ ಅಂತ ನೆನಪುಗಳನ್ನ ಸ್ವಲ್ಪ ಹರ್ಯೋದಕ್ಕೆ ಬಿಟ್ಟೆ. ಅಷ್ಟೇ. ಬೈಕೋಬೇಡೀ!

ಮೈಸೂರಿನ ಕಡೆಯ ಅರಸರಾದ ಜಯಚಾಮರಾಜ ಒಡೆಯರು ೨೦ನೇ ಶತಮಾನದ ಒಬ್ಬ ಹಿರಿಯ ವಾಗ್ಗೇಯಕಾರರು. ಅವರ ಬಗ್ಗೆ ಈ ಮೊದಲೂ ನಾನು ಬರೆದಿದ್ದೆ. ಅವರು ಮಾಡಿದ ೯೪ ರಚನೆಗಳಲ್ಲಿಯೂ ಬೇರೆ ಬೇರೆ ರಾಗಗಳನ್ನುಪಯೋಗಿಸಿರುವುದೂ, ಮತ್ತೆ ಪ್ರತಿ ರಚನೆಯಲ್ಲೂ ರಾಗಮುದ್ರೆ ಇಟ್ಟಿರುವುದೂ ಎರಡೂ ಸ್ವಲ್ಪ ಹೆಚ್ಚಾಯದ ವಿಷಯಗಳೇ. ಅವರಿಗಿಂತ ಹಿಂದಿನ ವಾಗ್ಗೇಯಕಾರರು ಪ್ರಯತ್ನಿಸದ (ಅಥವಾ ಬಹಳ ಕಡಿಮೆ ರಚನೆಗಳಿದ್ದ) ಹಲವಾರು ರಾಗಗಳಲ್ಲಿ ಕೃತಿ ರಚಿಸಿರುವುದು ವಿಶೇಷ ಸಂಗತಿ. ಇವರ ಎಲ್ಲ ರಚನೆಗಳೂ ಸಂಸ್ಕೃತದಲ್ಲಿವೆ.

ಮೈಸೂರರಮನೆಯಲ್ಲಿ ಇವತ್ತು ಆಯುಧ ಪೂಜೆ. ಅದರ ಜೊತೆಗೆ ನಮ್ಮ ನಮ್ಮ ಮನೆಗಳಲ್ಲೂ ಆಯುಧ ಪೂಜೆ ನಡೆಯುವಾಗ, ಒಡೆಯರ ಈ ರಚನೆ ಕೇಳೋದು ಚೆನ್ನ ಅಲ್ವಾ? ಬ್ರಹಾಂಡ ವಲಯೇ ಮಾಯೇ ಅನ್ನೋ ಈ ಕೃತಿಯ ಮೊದಲ ಪದದಲ್ಲೇ ರಾಗದ ಹೆಸರು ಬರುತ್ತೆ. ಮಾಂಡ್ ಎಂಬ ಈ ಹಿಂದೂಸ್ತಾನಿ ರಾಗವನ್ನ ಬಳಸಿ ಕರ್ನಾಟಕ ಸಂಗೀತದಲ್ಲಿ ರಚನೆ ಮಾಡಿದವರಲ್ಲಿ ಬಹುಶಃ ಒಡೆಯರೇ ಮೊದಲಿಗರಿದ್ದರೂ ಇರಬಹುದು.

ಈಗ ನೋಡೋಣ್ವಾ ಮಹಾನವಮಿ ಪ್ರಯುಕ್ತ ಮಹಾಮಾಯೆಯ ಸ್ತುತಿ?

 

 

-ಹಂಸಾನಂದಿ

  • ಅರಸ
  • ಒಡೆಯರು
  • ದಸರಾ
  • ನವರಾತ್ರಿ
  • ನಾಗವಲ್ಲಿ
  • ಬನ್ನಿ
  • ಮಾರ್ನೋಮಿ
  • ಮೈಸೂರು
  • ಸಂಗೀತ
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 208 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 8, 2008 - 5:11am — venkatesh

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

venkatesh's picture

ಜಯಚಾಮರಾಜ ವೊಡೆಯರು, ಒಬ್ಬ ಸಂಗೀತವಿದ್ವಾಂಸರು. ಅವರ ಕೊಡುಗೆಯ ಬಗ್ಗೆ, ಡಾ. ಸುಕನ್ಯಾ ಪ್ರಭಾಕರ್ ರವರು ತಮ್ಮ ಪಿ. ಎಚ್. ಡಿ ಸಂಶೋಧನಾ ಮಹಾಪ್ರಬಂಧದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಓದಿ.

ಮಾರ್ನವ್ಮಿ ಹಾಡು ಎನ್ನುವುದು, ನಮ್ಮಕಾಲದಲ್ಲಿ ಪ್ರಚಲಿತದಲ್ಲಿತ್ತು. ನಿಮಗೆ ಗೊತ್ತಿದೆಯೋ ಇಲ್ಲವೋ ನಾಕಾಣೆ. ಮಹಾನವಮಿಯದಿನ, ಬೆಳಗಿನ ಮಂಗಳಸ್ನಾನದ ನಂತರ ಚಿಕ್ಕ ಬಾಲಕರು ಸಾಮೂಹಿಕವಾಗಿ ಪ್ರತಿಮನೆಯ ಮೂಂದೆಯೂ ನಿಂತು ಈ ಹಾಡು ಹೇಳುತ್ತಿದ್ದರು.
ಮಾರ್ನ್ವ್ಮಿ ಇಂದು, ಈಶ ನಿಮಗೀಯಲಿ ಪರಮಸುಖವೆಂದು, ಲೇಸಾಗಿ ಹರಸುವೆವು, ಬಾಲಕರು ಬಂದು ;......ಮುಂತಾಗಿ ಹೇಳುತ್ತಿದ್ದರು. ನೆನಪಿಲ್ಲ. ನಿಮಗೆ ಗೊತ್ತಿದ್ದರೆ, ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2008 - 7:38am — shylaswamy

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

shylaswamy's picture

ಪ್ರಿಯ ಹಂಸಾನಂದಿಯವರೆ,
ಜಯಚಾಮರಾಜೇಂದ್ರ ಒಡೆಯರ್ ಅವರ ರಚನೆಗಳು ಮನಮುಟ್ಟುತ್ತವೆ. ತಮ್ಮ ಈದಿನದ ಕೊಡುಗೆ ಚೆನ್ನಾಗಿದೆ. ಧನ್ಯವಾದಗಳು.
ಶೈಲಾಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ದೇಶ್ ರಾಗ್
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 352 ಅತಿಥಿಗಳು ಆನ್ಲೈನ್ ಇರುವರು.


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator