ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

October 5, 2008 - 5:55am — hamsanandi

ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ್ಟೂ ಮುಗಿಯುವಂತಿಲ್ಲವಲ್ಲ ಸಂಗೀತ ಸಾಗರ?

ಚಲಿಸದ ಸಾಗರ ಅಂತೊಂದು ಸಿನೆಮಾ ಬಂದಿತ್ತು - ನಾನು ನೋಡಿರಲಿಲ್ಲ. ಬಹುಶಃ ನದಿಗಳು ಹರಿಯುತ್ತವೆ, ಸಮುದ್ರ ಇದ್ದಲ್ಲೇ ಇರುತ್ತೆ ಎನ್ನುವುದು ಅದರ ಒಳಗಿನ ಭಾವ ಇರಬಹುದು. ಆದರೆ, ಈ ಸಂಗೀತ ಸಾಗರ ನಿಜವಾಗಿ ಬದಲಾಗುತ್ತ ಹೋಗುತ್ತಿರುತ್ತದೆ. ಹಾಗಾಗಿ ನಮ್ಮ ಸಂಗೀತದ ಕೆಲವು ಅಂಶಗಳು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿವೆಯಾದರೂ, ಮತ್ತೆ ಕೆಲವು ವಿಷಯಗಳು ಬದಲಾಗುತ್ತ ಹೋಗಿವೆ ಅನ್ನುವುದು ಬಲ್ಲವರ ಮಾತು.

ಸಂಗೀತದಲ್ಲಿ ಒಂದು ರಾಗ ಕೇಳಲು ಹಿತವಾಗಿರಬೇಕಾದರೆ, ಐದು ಸ್ವರಗಳಾದರೂ ಇರಬೇಕು - ಇಲ್ಲದಿದ್ದರೆ ಅದು ಸೊಗಸುವುದಿಲ್ಲ ಅನ್ನುವ ನಂಬಿಕೆ ಇತ್ತು. ಅದನ್ನು ಬುಡಮೇಲು ಮಾಡಿದವರು ೨೦ ನೇ ಶತಮಾನದ ಒಬ್ಬ ಮಹಾನ್ ಕಲಾವಿದರಾದ ಡಾ.ಬಾಲಮುರಳಿಕೃಷ್ಣ ಅವರು. ಒಮ್ಮೆ ಯಾವುದೋ ಲಹರಿಯಲ್ಲಿ ಹಾಡಿಕೊಳ್ಳುತ್ತಿದ್ದರಂತೆ - ಆಮೇಲೆ ಗಮನಿಸಿ ನೋಡಲು ಅದರಲ್ಲಿ ನಾಕೇ ಸ್ವರಗಳಿದ್ದುದ್ದನ್ನು ಕಂಡು, ಆ ರಾಗಕ್ಕೆ ಲವಂಗಿ ಎನ್ನುವ ಹೆಸರಿಟ್ಟು, ಒಂದು ಕೃತಿಯನ್ನು ರಚಿಸಿದರು. ಆನಂತರ, ಇದೇ ದಾರಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಿ, ಇನ್ನೂ ಕೆಲವು ಅದೇ ಬಗೆಯ ರಾಗಗಳನ್ನೂ, ಅವುಗಳಲ್ಲಿ ರಚನೆಯನ್ನೂ ಮಾಡಿದ್ದಾರೆ.

ಇವತ್ತು ನಾನು ನಿಮಗೆ ಕೇಳಿಸುವುದು ಆ ನಾಕು ಸ್ವರಗಳ ಮೊದಲ ರಾಗ - ಲವಂಗಿಯನ್ನೇ. ಇದರಲ್ಲಿ ಬರುವ ಸ್ವರಗಳನ್ನು ಸಂಗೀತ ಪರಿಭಾಷೆಯಲ್ಲಿ ಹೀಗೆ ಸೂಚಿಸಬಹುದು.

ಸ ರಿ೧ ಮ೧ ದ೧ ಸ - ಸ ದ೧ ಮ೧ ರಿ೨ ಸ

ಈ ರಚನೆ ಸಂಸ್ಕೃತದಲ್ಲಿದ್ದು ಸಾಹಿತ್ಯ ಹೀಗಿದೆ:

ಓಂಕಾರಾಕಾರಿಣಿ ಮದಹಂಕಾರವಾರಿಣಿ ಅವತು ಮಾಂ ||ಓಂಕಾರಾಕಾರಿಣೀ||

ಹೂಂಕಾರಮಾತ್ರ ಶತ್ರು ದಮನೀ ಹ್ರೀಂಕಾರರೂಪಿಣೀ ರುದ್ರಾಣಿ ||ಓಂಕಾರಾಕಾರಿಣೀ||

ಮುರಳೀ ಸುಧಾಲಹರೀ ವಿಹಾರಿ ಪುರರಿಪು ಪ್ರೇಮಿತ ತ್ರಿಪುರಸುಂದರಿ
ಕರುಣಾರಸಭರಿತ ಲಲಿತಲವಂಗಿ ವರದಾ ಅಭಯದಾ ಸಕಲಶುಭಾಂಗಿ ||ಓಂಕಾರಾಕಾರಿಣೀ||

ಈಗ ಈ ರಚನೆಯನ್ನು ಬಾಲಮುರಳಿಕೃಷ್ಣ ಅವರ ಶಿಷ್ಯರಾದ ರಾಮವರ್ಮ ( ಇವರು ತಿರುವನಂತಪುರದ ಅರಸುಮನೆತನಕ್ಕೆ ಸೇರಿದವರು) ಅವರ ಕಂಠದಲ್ಲಿ ಕೇಳಿ.ರಾಮವರ್ಮ ಅವರು ವೀಣೆ ನುಡಿಸುವುದರಲ್ಲೂ ಪ್ರವೀಣರು.

ಈ ರಾಗದಲ್ಲಿ ಒಂದು ಕಡೆ ರೌದ್ರಭಾವವೂ ಇನ್ನೊಂದು ಕಡೆ ಕರುಣಾ, ಶಾಂತರಸವೂ ಸಮ್ಮಿಲಿತವಾದಂತಿವೆ. ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಮೊದಲ ಭಾವದಲ್ಲಿ ದೇವಿ ತನ್ನ ಹೂಂಕಾರದಿಂದ ಹೇಗೆ ಶತ್ರುಗನ್ನು ನಾಶಮಾಡುತ್ತಾಳೆ ಎಂದು ಹೇಳ್ದರೆ, ಇನ್ನೊಂದುಕಡೆ ಲಲಿತ ಲವಂಗೀರೂಪಿಯಾದ, ಕೇಳಿದ್ದನ್ನು ಕೊಡಬಲ್ಲ, ಭಯದೂರಮಾಡುವ ಆ ಶಿವೆಯು ಹೇಗೆ ಮುರಳೀಗಾನವನ್ನು ಕೇಳುತ್ತ ನಲಿಯುತ್ತಾಳೆ ಎನ್ನುವುದನ್ನು ಚರಣದಲ್ಲಿ ಹೇಳಲಾಗಿದೆ.

ಅಂದಹಾಗೆ ಮುರಳೀ ಎನ್ನುವುದು ಬಾಲಮುರಳಿಕೃಷ್ಣ ಅವರ ಅಂಕಿತ. ಮತ್ತೆನ್ನೊಂದು ವಿಶೇಷ ಏನು ಗೊತ್ತೇ? ಇಲ್ಲಿರುವ ಕಚೇರಿ ನಡೆದಿದ್ದು ರಾಷ್ಟ್ರಪತಿ ಭವನದಲ್ಲಿ!

-ಹಂಸಾನಂದಿ

  • ತಿರುವನಂತಪುರ
  • ದಸರಾ
  • ನವರಾತ್ರಿ
  • ಬಾಲಮುರಳೀಕೃಷ್ಣ
  • ರಾಮವರ್ಮ
  • ಲಲಿತ
  • ಲವಂಗೀ
~.~
  • hamsanandi ರವರ ಬ್ಲಾಗ್
  • Login or register to post comments
  • 245 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 5, 2008 - 8:49am — shylaswamy

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

shylaswamy's picture

ಪ್ರಿಯ ಹಂಸಾನಂದಿಯವರೆ,
ಬಾಲಮುರಳಿಕೃಷ್ಣ ಅವರು ಸೃಷ್ಟಿಸಿದ ಈ ಲವಂಗಿ ರಾಗದ ಬಗ್ಗೆ ಸುಮಾರು 35 ವರ್ಷಗಳ ಕೆಳಗೆ ಅಥವಾ ಇನ್ನು ಮುಂಚೆನೋ ಗೊತ್ತಿಲ್ಲ. ಬಾಲಮುರಳಿ ಕೃಷ್ಣ ಮತ್ತು ವೀಣೆ ವಿದ್ವಾನ್ ಎಸ್. ಬಾಲಚಂದರ್ ಅವರ ನಡುವೆ ದೊಡ್ಡ ಚರ್ಚೆಯೇ ನಡೆದಿತ್ತು. ನೀವು ಬರೆದಿರುವಂತೆ ಕಡೇಪಕ್ಷ ಒಂದು ಜನ್ಯ ರಾಗಕ್ಕೆ 5 ಸ್ವರಗಳಾದರೂ ಇದ್ದರೆ ಮಾತ್ರ ಕೇಳಲು ಹಿತ ಎಂಬ ವಾದ ಎಸ್. ಬಾಲಚಂದರ್ ಅವರದ್ದು. ಹೇಗೆ ವಾದ ಮುಂದುವರೆಸಿದರೋ ಕೊನೆಯಲ್ಲಿ ಅದು ಹೇಗೆ ನಿಂತಿತೋ ನನಗೆ ಗೊತ್ತಿಲ್ಲ. ಈ ವಾದ ವಿವಾದಗಳನ್ನು ಓದಿದ ನೆನಪು ಮಾತ್ರ ನನ್ನಲ್ಲಿ ಉಳಿದಿದೆ. ಇನ್ನು ಸ್ಲೂಲ್ ವಿದ್ಯಾರ್ಥಿನಿಯಾಗಿದ್ದ ನನಗೆ ಅದರ ಬಗ್ಗೆ ಹೆಚ್ಚು ತಿಳಿವು ಇಲ್ಲದ ಕಾರಣವೋ ಏನೋ ಮರೆತು ಹೋಗಿದೆ. ಆದರೆ ಇವತ್ತು ಈ ಲವಂಗಿ ರಾಗ ಕೇಳಿದಾಗ ಅಂತೂ ಬಾಲಮುರಳಿಯವರು ಇಂತಹಾ ರಾಗಗಳನ್ನು ಬೆಳಕಿಗೆ ತರುವಲ್ಲಿ ಸಾಧನೆಗೈದಿದ್ದಾರೆ ಎಂಬ ವಿಷಯ ತಿಳಿಯಿತು. ಉತ್ತಮವಾದ ಗಾನಾಮೃತ ನೀಡಿದ್ದಕ್ಕೆ ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 8:51pm — ASHOKKUMAR

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

ASHOKKUMAR's picture

ರಾಮವರ್ಮರು ಹಾಡುಗಾರಿಕೆಯನ್ನು ವೀಕ್ಷಿಸುವುದೂ ಒಂದು ಸೊಬಗು.
ನೀವು ಹಬ್ಬದಡುಗೆಯನ್ನು ಬಡಿಸುತ್ತಿರುವಾಗ ಇಲ್ಲವೆನ್ನಲಾಗದೆ ಉಂಡು, ಇನ್ನು ದಿನನಿತ್ಯವೂ ಇಂತಹ ಊಟವೇ ಬೇಕು ಎನ್ನುವಂತಾಗುವುದೋ ಎಂದು ನನ್ನ ಚಿಂತೆ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 10:04am — shaamala

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

shaamala's picture

ಹಂಸಾನಂದಿಯವರೆ,

ಲವಂಗಿ ರಾಗದಲ್ಲಿನ ರುದ್ರ ಹಾಗೂ ಕರುಣಾ ಭಾವಗಳೆರಡನ್ನೂ ಶ್ರೀ ರಾಮವರ್ಮ ಅವರು ಬಹಳ ಚೆನ್ನಾಗಿ ರೂಪಿಸಿದ್ದಾರೆ. ಈ ಕಛೇರಿ ರಾಷ್ಟ್ರಪತಿ ಭವನದಲ್ಲಿ ನಡೆಯಿತು ಅಂದರಲ್ಲಾ, ಅದು ಯಾರ ಸಮಯದಲ್ಲಿ ಅಂತ ಕೇಳಬಹುದಾ?

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2008 - 3:48am — hamsanandi

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

hamsanandi's picture

ಅದು ಅಬ್ದುಲ್ ಕಲಾಮ್ ಅವರು ರಾಷ್ಟ್ರಪತಿಯಾಗಿದ್ದ ಸಮಯದ ಕಚೇರಿ. ನೀವು ಯುಟ್ಯೂಬ್ ನಲ್ಲಿ ಹೋಗಿ ಹುಡುಕಿದರೆ ಆ ಕಚೇರಿಯ ಉಳಿದ ಭಾಗಗಳೂ ಸಿಗುತ್ತವೆ. ಕೆಲವು ದೃಶ್ಯಗಳಲ್ಲಿ ಕೇಳುಗರ ನಡುವೆ ಅಬ್ದುಲ್ ಕಲಾಮ್ ಕೂಡ ಕಾಣುತ್ತಾರೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 8:26am — shaamala

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

shaamala's picture

ಆಹಾ, ನನ್ನ ಊಹೆ ನಿಜವಾಯಿತು. ಮಾನ್ಯ ಕಲಾಮ್ ಅವರಿಗೆ ಸಂಗೀತದಲ್ಲಿರುವ ಅಭಿರುಚಿ, ಪಾಂಡಿತ್ಯ ಎಲ್ಲರಿಗೂ ತಿಳಿದಿದ್ದೆ.

ಅಪೂರ್ವ ರಾಗದಲ್ಲಿರುವ ಈ ಕೃತಿಯನ್ನ ಪೂರ್ತಿ ಕೇಳಲೇ ಬೇಕು.

ನನ್ನ ಜಡ (idle) ಕುತೂಹಲವನ್ನು ತಣಿಸಿದಕ್ಕಾಗಿ ನಿಮಗೆ ಮತ್ತೊಮ್ಮೆ ಧನ್ಯವಾದಗಳು ಹಂಸಾನಂದಿಯವರೆ.

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಭಾಮೆಯ ನೋಡಲು ತಾ ಬಂದ
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
  • ಅವಮಾನ್ ಅಂದರೆ ಯಾರು ? He man :-)
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 400 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator