ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

August 5, 2008 - 12:40am — hamsanandi
ಸಂಜೆಯ ಆಗಸ - ೨೦೦೮ರ ಆಗಸ್ಟ್ ಹದಿನೈದರಂದು

"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ. Sad

ಈ ವಿಷಯ ಯಾಕೆ ಬಂತು ಅಂತೀರಾ? ಬರಿಗಣ್ಣಿಗೆ ಕಾಣೋ ಐದೂ ಗ್ರಹಗಳನ್ನ ಒಟ್ಟಿಗೆ ನೋಡೋ ಒಂದು ಒಳ್ಳೇ ಸಂದರ್ಭ ಈ ತಿಂಗಳು ಬರ್ತಾ ಇದೆ. ಅದರಲ್ಲೂ ನಾಕು ಗ್ರಹಗಳು ತೀರಾ ಅಕ್ಕ ಪಕ್ಕದಲ್ಲೇ ಇರತ್ವೆ. ಇದನ್ನ ಆಗ್ಲೇ ನಮ್ಮ ಟಿವಿ ವಾಹಿನಿಗಳವರು  ಸಿಂಹ ರಾಶಿಯಲ್ಲಿ ದುಷ್ಟ ಚತುಷ್ಟಯ ಗ್ರಹಕೂಟ Smiling :) - ಇಂತಿಂಥಾ ಹೊತ್ತು ಇಂತಿಂಥಾ ರಾಶಿಯಲ್ಲಿ ಹುಟ್ಟಿದವರು ಶಾಂತಿ ಮಾಡ್ಕೋಬೇಕು ಅದು ಇದು ಅಂತ ಆಗ್ಲೇ ಹೇಳ್ತಿದಾರೋ ಏನೋ ನಂಗಂತೂ ಗೊತ್ತಿಲ್ಲ. ಹೋದ ಗ್ರಹಣ ಆಗೋಕೆ ಮುಂಚೆ ಅಂತೂ ಇವೆಲ್ಲ ಬಂದಿತ್ತು ಟಿವಿಯಲ್ಲಿ ಅಂತ ಕೇಳಿದೆ. (ನಾನು ನೋಡ್ಲಿಲ್ಲ). ಇರ್ಲಿ.

ಬರಿಗಣ್ಣಿಗೆ ಕಾಣೋ ಗ್ರಹಗಳು ಐದು. ಮಂಗಳ-ಬುಧ-ಗುರು-ಶುಕ್ರ-ಶನಿ. ಈ ಐದರಲ್ಲಿ  ಗುರು ಒಂದು ಬಿಟ್ಟು ಇನ್ನು ನಾಕೂ ಪಶ್ಚಿಮದಲ್ಲಿ ಸೂರ್ಯ ಮುಳುಗಿದ ಕೂಡಲೆ ಕಾಣುತ್ತವೆ ಈ ತಿಂಗಳು. ಗುರು ಒಂದು ಪೂರ್ವದಲ್ಲಿ ಕಾಣತ್ತೆ. 

ಇದನ್ನ ನೋಡೋಕೆ ನಿಮಗೆ ಬೇಕಾದ್ದು ಇಷ್ಟು.

೧. ಪಶ್ಚಿಮ ದಿಗಂತ ಕಾಣೋ ಅಂತಹ ಒಂದು ಜಾಗ

೨. ಮೋಡ ಇಲ್ಲದ ಆಕಾಶ. ಈ ಮಳೆಗಾಲದಲ್ಲಿ ಅದು ಕಷ್ಟವೇ. ಆದ್ರೆ, ದಿವಸಾ ನೋಡ್ತಿದ್ರೆ, ಒಂದಲ್ಲ ಒಂದು ದಿನ ಮೋಡ ಇಲ್ದೇ ಇರಬಹುದು. ಮತ್ತೆ ಮೋಡ ಮುಳುಗೋ ಸೂರ್ಯನ ಆಚೀಚೆ ಇಲ್ದೆ ಇದ್ರೆ ಸಾಕು. ನಾಕು ಗ್ರಹಗಳನ್ನ ಸಲೀಸಾಗಿ ನೋಡ್ಬಹುದು.

೩. ಸೂರ್ಯನ ಹತ್ತಿರದ ಬುಧ, ಶುಕ್ರಗಳು ವೇಗವಾಗಿ ಚಲಿಸೋದ್ರಿಂದ ಅವುಗಳ ಜಾಗ ದಿನೇ ದಿನೇ ಬದ್ಲಾಗುತಿರುತ್ವೆ.

೪. ಸೂರ್ಯ ಮುಳುಗಿ ಒಂದು - ಒಂದೂವರೆ ಗಂಟೆಯೊಳಗೆ, ಈ ನಾಕೂ ಗ್ರಹಗಳು ಮುಳುಗಿಬಿಡತ್ವೆ - ಅಥವಾ ತೀರಾ ಕೆಳಗೆ ಹೋಗುತ್ತವೆ. ಹಾಗಾಗಿ ಸರಿಯಾದ ಸಮಯದಲ್ಲಿ ನೋಡೋದು ಮುಖ್ಯ.

೫. ಗುರು ನೋಡೋದಕ್ಕೇನೂ ಕಷ್ಟ ಇಲ್ಲ. ಕತ್ತಲಾದಮೇಲೆ, ಪೂರ್ವದಲ್ಲಿ ಸ್ವಲ್ಪ ದಕ್ಷಿಣದ ಬದಿಗೆ ಕಾಣೋ ಬಹಳ ಪ್ರಕಾಶಮಾನವಾದ ಬೆಳಕೇ ಗುರು.

ಆಗಸ್ಟ್ ಹದಿನೈದರಂದು ಕಾಣೋ ಹಾಗೆ ಪಶ್ಚಿಮ ಆಕಾಶದ ಒಂದು ಚಿತ್ರ ಹಾಕಿದೀನಿ.  ಚಿತ್ರದಲ್ಲಿ ಸೂರ್ಯನೂ ಇದಾನೆ. ಅಂದ್ರೆ, ಸೂರ್ಯ ಮುಳುಗಿದಮೇಲೆ, ಅವನು ದಿಗಂತಕ್ಕಿಂತ ಕೆಳಗಿದ್ದಾನೆ ಅಂತ ಅಂದ್ಕೊಂಡು ಚಿತ್ರ ನೋಡಿದ್ರೆ, ನಿಮಗೆ ಉಳಿದ ನಾಕು ಗ್ರಹಗಳನ್ನ ಪತ್ತೇ ಹಚ್ಚಬಹುದು.

ಆ ದಿನ ಶುಕ್ರ-ಶನಿ-ಬುಧ ಈ ಮೂರೂ ಒಂದಕ್ಕೊಂದು ತೀರಾ ಹತ್ತಿರವಿರುತ್ತವೆ.ಶುಕ್ರ ಬಹಳ ಪ್ರಕಾಶಮಾನವಾಗಿರೋದ್ರಿಂದ ಹುಡುಕೋದು ಕಷ್ಟ ಇಲ್ಲ. ಅದರ ಆಧಾರದಿಂದ ಇನ್ನೆರಡನ್ನ ಪತ್ತೆ ಮಾಡಿ. 

ಮಂಗಳ ಒಬ್ಬ ಸ್ವಲ್ಪ ಮೇಲಿರ್ತಾನೆ. ಆದ್ರೆ, ಅದರ ಕೆಂಪು ಬಣ್ಣದಿಂದ ಅದನ್ನೂ ಕಾಣುವುದು ಕಷ್ಟವಾಗಲಾರದು.

ಹದಿನೈದರ ತನಕ ಕಾಯೋ ಅಗತ್ಯ ಇಲ್ಲ. ಈಗಿಂದಲೇ, ಯಾವತ್ತು ಸಂಜೆ ಆಕಾಶದಲ್ಲಿ ಮೋಡ ಇರೋದಿಲ್ವೋ, ಅವತ್ತೆಲ್ಲ ನೋಡ್ಬಹುದು!

-ಹಂಸಾನಂದಿ

  • ಆಕಾಶ
  • ಗ್ರಹ
  • ಜ್ಞಾನವಾಹಿನಿ
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2008 - 2:54am — srivathsajoshi

ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!

srivathsajoshi's picture

ಹಂಸಾನಂದಿಯವರಿಗೆ ನಮಸ್ಕಾರ.

ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

ಎರಡು ಲಘು-ವಿಷಯಗಳೂ ಇರಲಿ ಎಂದು ಸೇರಿಸುತ್ತಿದ್ದೇನೆ.

೧) ಈಗ ಪ್ಲುಟೋ demote ಆದಮೇಲೆ ಜಾಮಾತಾ promote ಆಗಿ ಅವನಿಗೆ ಒಂಬತ್ತನೆಯ ಸ್ಥಾನ ಸಿಕ್ಕಿದೆ!

೨) "ಅವನಿಗೆ ಒಂಬತ್ತನೆಯ ಸ್ಥಾನ ಸಿಕ್ಕಿದೆ" ಎನ್ನುವಲ್ಲಿ ಒಂದು ಸ್ವಾರಸ್ಯ ನೋಡಿ. ಅವನಿ ಎಂದರೆ ಭೂಮಿ. ಭೂಮಿಗೆ ಮೂರನೇ ಸ್ಥಾನ (ಬುಧ-ಶುಕ್ರ-ಭೂಮಿ-ಮಂಗಳ...) ಅಲ್ಲವೇ?

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2008 - 4:10am — hamsanandi

ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!

hamsanandi's picture

ನಮಸ್ಕಾರ ಜೋಶಿಯವರೆ.

Smiling :)

ಹಿಂದೆ ಜಾಮಾತೋ ದಶಮಗ್ರಹಃ ಅಂದವರು ಪಾಪ, ಪ್ಲೂಟೋನ ಗಮನಕ್ಕಿಟ್ಟುಕೊಂಡಿರಲಿಲ್ವಲ್ಲ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2008 - 2:28pm — Shivakumar.Revadi

ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!

Shivakumar.Revadi's picture

ಹಂಸಾನಂದಿಯವರೆ, ನೀವು ಬರೆದ ಲೇಖನಗಳನ್ನು ತಪ್ಪದೇ ಓದುವವರಲ್ಲಿ ನಾನು ಒಬ್ಬ.
ನಿಮ್ಮ ಈ ಲೇಖನಕ್ಕೆ ಪೂರಕವಾಗಿ ಬೆಂಗಳೂರು ತಾರಾಲಯದವರು ತೆರೆದಿಟ್ಟ ಅಗಷ್ಟ ತಿಂಗಳ Sky Chart ನೋಡಿರಿ, ಕೊಂಡಿ ಇಲ್ಲಿದೆ
http://www.taralaya.org/skychart.htm

ನಮಸ್ಕಾರಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 9:12pm — kannadakanda

ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!

kannadakanda's picture

ಜಾಮಾತೋ ಅಲ್ಲ. ಅದು ಜಾಮಾತೃ ಶಬ್ದ. ಹಾಗಾಗಿ ಜಾಮಾತಾ ದಶಮೋ ಗ್ರಹಃ ಸರಿಯಾದ ರೂಪ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 10:52pm — hamsanandi

ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!

hamsanandi's picture

ಕನ್ನಡಕಂದರೆ,

ತಪ್ಪು ತಿದ್ದಿದ್ದಕ್ಕೆ ಧನ್ಯವಾದಗಳು! ಸರಿಪಡಿಸುವೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ವಕ್ರನಾದ ಶುಕ್ರ?
  • ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 437 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator