ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ರಾಹು ಕೇತು ಕಾಟ - ಭಾಗ ೧

June 5, 2008 - 2:05am — hamsanandi

ನಮ್ಮಲ್ಲಿ ಅನೇಕರಿಗೆ, ಈ ಗ್ರಹಣಗಳು ಬಂತು ಅಂದ್ರೆ, ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು. ಇನ್ನು, ಮನೆಯಲ್ಲಾರಾದರು ಬಸುರಿ ಹೆಂಗಸಿದ್ದರಂತೂ ಸರಿಯೇ ಸರಿ. ಕಿಟಕಿ ಬಾಗಿಲು ಎಲ್ಲ ಹಾಕಿ, ಒಂಚೂರೂ ಬೆಳಕು ಮನೇ ಒಳಗೇ ಬರದೇ ಇರೋ ಹಾಗೆ ಕೂತ್ಕೊಳೋ ಸ್ಥಿತಿ. ಈಗ್ಲೇನಾರೂ ಬದ್ಲಾಗಿದ್ರೆ ನಾಕಾಣೆ. ನನ್ನ ನೆನಪುಗಳೇ ಔಟ್ ಡೇಟೆಡ್ ಅಂದ್ಕೊಂಡು ಸುಮ್ನಾಗಬೇಕಷ್ಟೆ.ಅದನಾದ್ರೂ ಇರಲಿ, ಸುಮ್ನೆ ವಿಷಯಕ್ಕೆ ಬರೋದಕ್ಕೆ ಮೊದಲೆ ನೆನಪಾದದ್ದನ್ನ ಹೇಳಿದೆ ಅಷ್ಟೆ.

೧೯೮೦, ಫೆಬ್ರವರಿ ಹದಿನಾರನೇ ತಾರೀಖು ಒಂದು ಸೂರ್ಯಗ್ರಹಣ ಆಗಿತ್ತು. ಸೂರ್ಯ ಗ್ರಹಣ ಅನ್ನೋದೇನೂ ಅಂತಹ ಅಪರೂಪದ ವಿಷಯ ಅಲ್ಲ ಆ ಸಲ. ಆದ್ರೆ, ಆ ಗ್ರಹಣ ಕರ್ನಾಟಕಕ್ಕೆ ವಿಶೇಷವಾಗಿತ್ತು. ಅಂದ್ರೆ, ಅದೊಂದು ಪೂರ್ಣಗ್ರಹಣ - ಮತ್ತೆ ಪೂರ್ಣತೆಯ ಹಾದಿ ಕರ್ನಾಟಕದಲ್ಲಿ ಹಾದುಹೋಗಿತ್ತು. ಕಾರವಾರದಿಂದ ರಾಯಚೂರಿನವರೆಗೆ ಮಧ್ಯಾಹ್ನ ಮೂರು ಗಂಟೇ ಹೊತ್ಗೆ ಸೂರ್ಯ ಪೂರ್ತಿ ಕಾಣೆಯಾಗಿದ್ದ ಒಂದು ಎರಡುಮೂರು ನಿಮಿಷ. ನನ್ನ ದುರದೃಷ್ಟ ಅಂದ್ರೆ, ನಾನು ಈ ದಾರಿಲಿ ಬರೋ ಯಾವ ಊರಲ್ಲೂ ಇರಲಿಲ್ಲ. ಆದ್ರೆ ನಮ್ಮೂರಲ್ಲೂ ಸುಮಾರು ೯೩% ಗ್ರಹಣ ಆಗಿತ್ತು. ಅದಕ್ಕೇ ಸಂತೋಷ ಪಡ್ಬೇಕಾಯ್ತು ನಾನು. ಆದ್ರೆ, ಅಲ್ಲಿಂದ ಇಪ್ಪತ್ತೆಂಟು ವರ್ಷ ಆದ್ರೂ, ೯೩% ಆಗಿರೋ ಇನ್ನೊಂದು ಗ್ರಹಣ ನನಗೆ ಸಿಕ್ಕಿಲ್ಲ ಅಂದ್ರೆ, ನಿಮಗ್ಗೊತ್ತಾಗತ್ತೆ ಈ ಗ್ರಹಣಗಳನ್ನ ಅಷ್ಟು ನಿಸೂರಾಗಿ ನೋಡ್ದೇ ಬಿಟ್ಬಿಡಬಾರದು ಅಂತ.

ನಮ್ಮೂರಲ್ಲಿ ನಮ್ಮ ಪಕ್ಕದ ಮನೆಯಲ್ಲೇ ಒಬ್ಬರು ಜ್ಯೋತಿಷಿ ಇದ್ರು. ಯುಗಾದಿ ದಿನವೇ ಪಂಚಾಂಗ ಶ್ರವಣ ಮಾಡೋ ಪರಿಪಾಠ ಅವರ್ದು. ಸರಿ, ಪಕ್ಕದಲ್ಲೇ ಇದ್ದರಲ್ಲ, ನಾವೂ ಎಲ್ಲ ಹೋಗೋದು ನಮ್ಮ ಪರಿಪಾಠ. ನೆರೆ-ಹೊರೆಯವರ ಜೊತೆ ಸ್ವಲ್ಪ ಒಳ್ಳೇ ಸಂಬಂಧ :೦) ಇಟ್ಕೊಳೋದು ಹಲವು ದೃಷ್ಟಿಯಲ್ಲಿ ಅಗತ್ಯ ಅಲ್ವೇ Eye-wink ? ಸರಿ ಹೋಗಿದ್ವಿ. ಮಾಮೂಲಿನ ಹಾಗೆ ನಡೀತಿತ್ತು - ರಾಶಿಫಲ, ಮಳೆ, ಬೆಳೆ ಎಲ್ಲ. ಕೊನೇಗೆ ವರ್ಷದಲ್ಲಿ ಆಗೋ ಗ್ರಹಣಗಳ ಬಗ್ಗೆ ಹೇಳಹೊರಟರು

"ಮಾಘ ಅಮಾವಾಸ್ಯೆ ಫೆಬ್ರವರಿ ೧೬ - ಆವತ್ತ್ತು ಕೇತುಗ್ರಸ್ತ ಸೂರ್ಯಗ್ರಹಣ ....." ಅಂತ ಹೇಳೋವಾಗ ನಾನು ಬಾಯಿ ಹಾಕ್ದೆ.

"ಕೇತುಗ್ರಸ್ತ ಅಂದ್ರೇನು?"

ಚಿಕ್ಕಹುಡುಗ ಒಬ್ಬ ಮಾತಿನ ನಡುವೆ ತಲೆ ಹಾಗಿದ್ದು, ಅವರಿಗೆ ಹಿಡಿಸ್ಲಿಲ್ಲ ಅನ್ನೋದು ಅವರ ಮುಖದಲ್ಲೇ ಕಾಣಿಸ್ತು - "ನಿಂಗೆ ಅವೆಲ್ಲ ಗೊತ್ತಾಗಲ್ಲ, ಬಾಯ್ಮುಚ್ಕೊಂಡು ಸುಮ್ಮನಿರು" ಅನ್ನೋದನ್ನ, ಬಹುಶಃ ಬೇರೆ ಪದಗಳಲ್ಲಿ ಹೇಳಿ ನನ್ನ ಬಾಯಿ ಮುಚ್ಚಿಸಿದರು.

ಸರಿ. ಆಗ ಸುಮ್ಮನಾದೆ. ಆದ್ರೆ, ಅದೇನು ಅಂತ ತಿಳ್ಕೋಳೋತನಕ ಸುಮ್ನಾಗ್ಲಿಲ್ಲ ನಾನು. ಆಗೇನು ಕಂಪ್ಯೂಟರ್, ಇಂಟರ್ನೆಟ್, ವಿಕಿಪಿಡಿಯಾ ಇದ್ದ ಕಾಲವೇ? ಎಲ್ಲೋ ಹೋಗಿ, ಏನೋ ಓದಿ ಒಂದಷ್ಟು ವಿಷ್ಯ ತಿಳ್ಕೊಂಡೆ.

ಆಮೇಲೆ ಅವರು ಹಾಗೆ ಹೇಳಿದ್ದು ಎಷ್ಟು ಒಳ್ಳೇದಾಯ್ತು ಅನ್ನಿಸ್ತು. ಯಾಕೆ ಗೊತ್ತಾ? ನಾವಾಗೇ ಸಮುದ್ರದ ಆಳಕ್ಕೆ ಹೋದ್ರೆ, ಎಷ್ಟು ಬೇಕೋ ಅಷ್ಟು ಮುತ್ತು ಹವಳ ಹೊತ್ತು ತರಬಹುದು. ಕೈಗೆತ್ತಿ ಕೊಡೋವ್ರು ಎಷ್ಟು ತಾನೇ ಕೊಟ್ಟಾರು?

ಇರಲಿ, ಸಧ್ಯಕ್ಕೆ ಅಸಂಬದ್ಧ ಪೀಠಿಕೆ ಮುಗಿಸ್ತೀನಿ. ರಾಹು ಕೇತು ಕಾಟದ ಮೇಲೆ ಇನ್ನಷ್ಟು ಮುಂದಿನ ಭಾಗದಲ್ಲಿ!

-ಹಂಸಾನಂದಿ

 

  • ಅಸಂಬದ್ದ್ಜ
  • ಆಕಾಶ
  • ಗ್ರಹ
  • ಪೀಠಿಕೆ
  • ಸೂರ್ಯ
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 251 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ
  • ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ
  • ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
  • ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು
  • (ವರ್ಷದ) ಕೊನೆಯ ಕೊಸರು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಕಾರ ಬೇಕಾಗಿದೆ.
  • ಡೈರಿಯ ಕೆಲವು ಹಾಳೆಗಳು - ಭಾಗ ೧೦
  • ಯಾಹೂ! ಕ್ರಿಕೆಟ್
  • ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 7:31pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:30pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:26pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:15pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:09pm
  • anil.ramesh
    ಉ: ಸಹಕಾರ ಬೇಕಾಗಿದೆ.
    October 13, 2008 - 7:09pm
  • girish.rajanal
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 13, 2008 - 6:17pm
  • srivathsajoshi
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 6:05pm
  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 557 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator