ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ನಮಸ್ಕಾರ,
actually ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನಮಾನದ ಕುರಿತು ನಿಮ್ಮೊಂದಿಗೆ ಕೆಲವು ಮಾತುಗಳನ್ನ ಹಂಚಿಕೊಳ್ಳಬೇಕು ಅಂತ ಇದೀನಿ.
ಇವತ್ತಿನ ದಿನ ನಮ್ಮ ಭಾರತವನ್ನ ಒಂದು ಒಕ್ಕೂಟದ ವ್ಯವಸ್ಥೆ ಇರುವ ಒಂದು ದೇಶ ಹೌದಾ ಅನ್ನೋ ಅನುಮಾನ ಬರಲು ಶುರುವಾಗಿದೆ. ಪ್ರತಿಸಾರಿ ಇನ್ನೇನು ನಮ್ಮ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಸ್ಥಾನ ಸಿಕ್ತು ಅನೂ ಹೊತ್ತಿಗೆ ನಮ್ಮ ಪಕ್ಕದ ತಮಿಳುನಾಡು ಏನಾದ್ರೂ ಕ್ಯಾತೆ ತಗೆಯುತ್ತೆ, ಅರೆ ಕನ್ನಡಕ್ಕೆ ಸುಮಾರು ೨೫೦೦ ವರುಷಗಳ ಲಿಪಿಯ ಇತಿಹಾಸವಿದೆ, ಅದಕ್ಕೆ ಬೇಕಾದ ಎಲ್ಲ ಪುರಾವೆಗಳನ್ನು ಕೊಟ್ಟು ಇನ್ನೇನು ನಮಗೆ ಸ್ಥಾನ ಸಿಕ್ತು ಅನ್ನೋ ಹೊತ್ತಿಗೆ ನಮ್ಮ ನೆರೆ ರಾಜ್ಯದವರ ಹೊಸ ತಗಾದೆ ಏನು ಅಂದ್ರೆ ಶಾಸ್ತ್ರಿಯ ಭಾಷೆಯನ್ನ ನಿರ್ಧರಿಸುವ ಸಮಿತಿ ಸರಿಯಾಗಿಲ್ಲ ಅದನ್ನ ರದ್ದುಪಡಿಸಿ ಹೊಸ ಸಮಿತಿಯನ್ನ ರಚಿಸಿ ಅನ್ನೋ ಕಾರಣ. ಅರೆ ನಿಮಗೆ ಒಂದು ಮಾತು ಹೇಳ್ತೀನಿ ಇದೆ ತಮಿಳಿಗೆ ಶಾಸ್ತ್ರಿಯ ಭಾಷೆ ಸ್ಥಾನ ನೀಡುವಾಗ ಯಾವುದೇ ನಿಯಮಗಳಿರಲಿಲ್ಲ.ಡಿ.ಎಂ.ಕೆ ಪಕ್ಷ ಕೇಂದ್ರದ ಯು.ಪಿ.ಏ ಪಕ್ಷಕ್ಕೆ ಬೆಂಬಲ ನೀಡುವಾಗ ಅದು ಹಾಕಿದ ಕೆಲವು ಷರತ್ತುಗಳಲ್ಲಿ ತಮಿಳಿಗೆ ಶಾಸ್ತ್ರಿಯ ಭಾಷೆ ಪಟ್ಟ ಕೊಡಬೇಕು ಅನ್ನುವುದು ಆಗಿತ್ತು, ಅದು ಅವರ ರಾಜಕೀಯ ಹಿತಾಸಕ್ತಿ ಇಂದ ಆಗಿದ್ದು ಅಂದುಕೊಂಡು ಸುಮ್ಮನಾಗೆಬು ಅಸ್ಟೆ. ಆದ್ರೆ ಯಾವಾಗ ಕರ್ನಾಟಕ ಮತ್ತು ಆಂಧ್ರ ಪ್ರದೇಶದವರು ನಮಗೂ ಶಾಸ್ತ್ರಿಯ ಭಾಷೆ ಸ್ಥಾನ ನೀಡಿ ಅನ್ನೋದಕ್ಕೆ ಶುರು ಮಾಡಿದರೋ ಅವಾಗ್ಲೇ ತಮಿಳುನಾಡು ಕೇಂದ್ರದ ಮೇಲೆ ತನ್ನ ಒತ್ತಡ ಹಾಕಿ ಶಾಸ್ತ್ರಿಯ ಭಾಷೆಗೆ ಒಂದು ಸಮಿತಿಯನ್ನ ಮಾಡೋಕೆ ಹೇಳಿತು, ಕೋಲೆ ಬಸವನ ಹಾಗೆ ತಲೆ ಆಡಿಸಿದ ಕೇಂದ್ರ, ಸಮಿತಿಯನ್ನು ಮಾಡಿತು, ಮೊದಲಿಗೆ ೧೦೦೦ ವರ್ಷ ಅನ್ನೋ ಮಿತಿ ಇದ್ದದನ್ನು ೧೫೦೦ ವರ್ಷಕ್ಕೆ ಏರಿಸಿದರು, ಯಾವಾಗ ಎಲ್ಲ ಷರತ್ತುಗಳನ್ನು ನಮ್ಮ ಕನ್ನಡ ಭಾಷೆ ಪೂರಸಿತೋ ಆವಾಗಿನಿಂದ ಏನಾದ್ರೂ ಒಂದು ಕುಂಟು ನೆಪ ಹೇಳಿ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಪಟ್ಟ ಸಿಗಬಾರದು ಅಂತ ಹೊದೆದಾಡ್ತಾ ಇದೆ.
ಅದೆಲ್ಲ ಸರಿ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಅನ್ನೋ ಪಟ್ಟ ಏನಕ್ಕೆ ಬೇಕು ಅನ್ನೋ ಪ್ರಶ್ನೆ ನಿಮ್ಮದಾಗಿದ್ರೆ ಕೆಳಗೆ ಓದಿ,
೧)ಪ್ರತಿ ವರುಷ ಕೇಂದ್ರದಿಂದ ೧೦೦ ಕೋಟಿ ರೂ ಅನುದಾನ ಸಿಗುತ್ತದೆ. ಇದನ್ನ ಕನ್ನಡದ ಕೆಲಸಗಳಿಗೆ ಬಳಸಬಹುದು
೨)ಎಲ್ಲ ರಾಜ್ಯಗಳಲ್ಲೂ ಕನ್ನಡ ಅಧ್ಯಾಯನ ಪೀಠ ಸ್ಥಾಪನೆ ಆಗುತ್ತದೆ,ಇದರಿಂದ ಕನ್ನಡದ ಬಗ್ಗೆ ಸಂಶೋಧನೆ ಹಾಗು ಅಭಿವೃದ್ದಿಯ ಕಾರ್ಯಗಳು ಚುರುಕು ಗೊಳ್ಳುತ್ತವೆ
೩)ಶಾಸ್ತ್ರಿಯ ಭಾಷೆ ಅನ್ನೋ ಪಟ್ಟ ಭಾರತ ಸರಕಾರದ ಒಂದು ಮೊಹರು ಇದರಿಂದ ವಿದೇಶದಲ್ಲೂ ಕೂಡ ಕನ್ನಡ ಅಧ್ಯಾಯನ ಪೀಠ ಸ್ಥಾಪನೆ ಮಾಡಬಹುದು.
ಹೀಗೆ ಇನ್ನು ಹಲವು ಒಳ್ಳೆಯ ಕಾರ್ಯಕ್ರಮಗಳು ನಮಗೆ ಸಿಗುತ್ತವೆ,
ಈಗ ಯೋಚನೆ ಮಾಡಿ ಇವೆಲ್ಲ ಕೇವಲ ಒಂದು ಭಾಷೆಯ ಸ್ವತ್ತು ಆಗೋದು ಯಾವ ನ್ಯಾಯ, ನಮ್ಮ ಕನ್ನಡಕ್ಕೆ ತಿಮಿಳಿಗಿಂತ ಹಳೆಯದಾದ ಪ್ರಾಚೀನತೆ ಇದೆ, ಹಳೆಯ ಭಾಷ ಸಾಹಿತ್ಯವಿದೆ, ತಮಿಳಿನ ಮೊದಲ ಭಾಷ ಗ್ರಂಥದಲ್ಲಿ ಕನ್ನಡ ಪದಗಳನ್ನ ಬಳಕೆ ಮಾಡಲಾಗಿದೆ. ಇದೆಲ್ಲ ಗೊತ್ತಿದ್ರು ತಮಿಳು ನಾಡು ತನ್ನ ಧೂರ್ತತೆಯನ್ನ ಬಿಡುತ್ತಿಲ್ಲ.
ಇನ್ನು ನಮ್ಮ ಶಾಸಕ, ಸಂಸದರ ಬಗ್ಗೆ ಇಲ್ಲಿ ಮಾತನಾಡದೇ ಇರುವುದು ಒಳಿತು, ಅವರಿಂದ ಏನು ಆಗೋದಿಲ್ಲ ಅನ್ನೋದು ಈಗಾಗಲೇ ಸ್ಪಷ್ಟ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ, ಕೆಲವು ಕನ್ನಡ ಪರಸಂಘಟನೆಗಳು ದನಿ ಎತ್ತುತ್ತಿವೆ, ಆದ್ರೆ ಅದನ್ನ ಕೇಂದ್ರಕ್ಕೆ ತಲುಪಿಸುವ ಕೆಲಸ ಆಗುತ್ತಿಲ್ಲ. ಅದ್ರು ಇನ್ನು ನಮ್ಮ ಜನತೆ ನಮಗೂ ಆ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತಿದ್ದಾರೆ.
ಎಲ್ಲದರಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅನ್ನುವುದು ಗೊತ್ತಿರುವ ವಿಚಾರವೇ ಆದ್ರೆ ಎಷ್ಟು ಅಂತ ಸಹಿಸಿಕೊಳ್ಳುತ್ತ ಕೂತ್ಕೊಬೇಕು. "Every thing has its own thresh hold" ಅನ್ನೋ ತರ ಕನ್ನಡಿಗರಿಗೂ ಅದು ಇರತ್ತೆ ಅನ್ನೋದನ್ನ ಕೇಂದ್ರ ಅರ್ಥಮಾಡ್ಕೋ ಬೇಕು.

- Chetan.Jeeral ರವರ ಬ್ಲಾಗ್
- Login or register to post comments
- 278 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
- ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ?
- ಶಾಸ್ತ್ರೀಯ ಭಾಷೆಯಿಂದ ಏನ್ ಮಣ್ಣು ಪ್ರಯೋಜನಾನೂ ಆಗಲ್ವಾ?
- ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?
- ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?


RSS:
ಪ್ರತಿಕ್ರಿಯೆಗಳು
ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ನೋಡ್ರಪ್ಪ..
ಕ್ಲಾಸಿಕಲ್ ಲ್ಯಾಂಗ್ವೇಜ್ ಸ್ಟೇಟಸ್ ಅನ್ನೋದು ತಮಿಳರ ಅಯ್ಡಿಯ. ಅದನ್ನು ಅವರು ಪೇಟೆಂಟ್ ಮಾಡಿಲ್ಲ ಅಶ್ಟೆ....
ನಮ್ಮ ದೇಸದಾಗೆ ಕ್ಲಾಸಿಕಲ್ ಲ್ಯಾಂಗ್ವೇಜ್ ಅಂದ್ರೇನು ಅನ್ನೋ ಡೆಪೆನಿಶನ್ನಿಂದ ಹಿಡಿದು, ಅದಕ್ಕೆ ಏನೇ ಸವಲತ್ತು ಕೊಡಬೇಕು ಅನ್ನೋದನ್ನೂ ಡಿ.ಎಂ.ಕೆ ಪಕ್ಷ ಫ್ರೇಮ್ ಮಾಡಿದೆ.
ಸಮತಿಯೇ ಲಾಯಕ್ಕಿಲ್ಲ ಅಂತ ತೋರಿಸಿಬಿಟ್ರೇ, ಇನ್ನೊಂದು ವಸ ಸಮಿತಿ ಮಾಡಬೇಕಾಗ್ತದೆ. ಅಶ್ಟೊತ್ತಿಗೆ ದೊಡ್ಡ ಎಲೆಕ್ಶನ್ನು. ...
ಆಮೇಲೆ ಅದು ಯಾವಾಗ ಮತ್ತೆ ಸಮಿತಿ ಮಾಡೋದು, ಮುಂತಾದವು..
ತಮಿಳರ ಗುರ ಇದ್ದುದ್ದೇ "ತಮ್ಮೊದೊಂದೇ ನುಡಿ ಎಲ್ಲದರಕ್ಕಿಂತ ಮೇಲು" ಅಂತ ತೋರಿಸಿಕೊಳ್ಳಕ್ಕೆ, ಏನೋ ಕಡಮೆ ಮಂದಿಗೆ ಬೇಕಾದ ಸಂಸ್ಕ್ರತಕ್ಕೆ ಆಮ್ಯಾಕೆ ಬಿಟ್-ಕೊಟ್ಟವ್ರೆ.. ಆದ್ರೆ ಕನ್ನಡ-ತೆಲುಗು ಅಂತ ಹೆಚ್ಚೆಚ್ ಮಂದಿ ಮಾತಾಡೋ ದೊಡ್ಡದೊಡ್ಡ ನುಡಿಗಳನ್ನು ತಮ್ಮ ನುಡಿಗೆ ಸಮ ಅನ್ನೋಕೆ ಬಿಟ್ರೆ, ಅವರು ಗುರಿಯಲ್ಲಿ ಸೋತಂತಲ್ವ?
ವಸಿ ಅವರ ಗುರಿಗಳನ್ನ ಅರಿತುಕೋಬೇಕು ನಾವು.
ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ತಮಿಳರ ಗುರ ಅಲ್ಲ ಗುರಿ
ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ನಿಜ ಭಾಷೆ, ನೆಲ, ಜಲ ಸಂರಕ್ಷಣೆಯಲ್ಲಿ ಅವರಿಂದ ಕಲಿಯುವುದು ಬಹಳಷ್ಟಿದೆ. ಅತಿ ಆದ್ರೆ ಅಮೃತಾನು ವಿಷ ಅನ್ನೋ ಹಾಗೆ ಆಗಬಾರದು ಅಸ್ಟೆ
ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ಇದೂ ಒಂದು ಪುಕ್ಕಲುತನ.. ಬಿಡಿ..
"ನಾನು ಕನ್ನಡಿಗ ನಾನು ಪುಕ್ಕಲ" ಅದಕ್ಕೇ ನನ್ ಕಯ್ಯಲ್ಲಿ ಏನೂ ಆಗಲ್ಲ.!
ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ಕನ್ನಡಿಗರು ಪುಕ್ಕಲು ಅನ್ನೋದು ಒಂದು ತರಹದ ಸನ್ನಿ. ಎಲ್ಲರು ಅದನ್ನ ತಾಮಗೆ ತಾವೇ ಆರೋಪಿಸಿಕೊಳ್ಳುತ್ತಾರೆ, ಅದನ್ನ ನಾವುಗಳೇ ಮನಸಿನಿಂದ ಕಿತ್ತು ಹಾಕಬೇಕು ಮಹೇಶ್. ಅತಿ ಅನ್ನೋದು ಪರಿಮಿತಿ ಅಂತ ಪರಿಗಣಿಸಿದರೆ ಅದು ಪುಕ್ಕಲುತನ ಆಗೋಲ್ಲ, ಇತರರ ಬಗ್ಗೆ ಕಾಳಜಿ.
ಉ: ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
ರೀ ನಮಗ್ಯಾಕೆ ಬೇರೆಯೋರ್ ಕಾಳಜಿ.. ಬೇರೆಯೋರು ನಮ್ ಕಾಳಜಿ ಮಾಡ್ತಾರ..
ನಮ್ ಕಾಳಜಿಯೇ ಪಜೀತಿ..
ಸರಿ.. ನಿಮ್ಮ ಬರಹ ಚನ್ನಾಗಿದೆ .. ನನ್ನಿ!
ಮುಗಿತು.