ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Chamaraj ರವರ ಬ್ಲಾಗ್

ಚಾಮರಾಜ ಸವಡಿ

ಸತ್ಯದ ಹಸಿ ದರ್ಶನ

ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)

July 9, 2008 - 9:55am — Chamaraj

ನನ್ನ ಮೊದಲ ಮಗಳು ಗೌರಿ ಹುಟ್ಟಿದ್ದು ೨೦೦೨ರ ಏಪ್ರಿಲ್ ೧೯ರಂದು.

ಹಿಂದಿನ ರಾತ್ರಿಯೇ ರೇಖಾಳಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದಾಗಲಿ, ಬೆಳಿಗ್ಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಗಲಿ ಯಾರೂ ನನಗೆ ಹೇಳಿರಲಿಲ್ಲ. ಆಗ ನಾನು ಆಫೀಸ್‌ನಲ್ಲಿದ್ದೆ. ಸುದ್ದಿ ತಿಳಿದಾಗ ಬೆಳಿಗ್ಗೆ ೯ ಗಂಟೆ. ತಕ್ಷಣ ಆಸ್ಪತ್ರೆಗೆ ಹೋದೆ.

ಮೊದಲಿನಿಂದಲೂ ನನಗೆ ಆಸ್ಪತ್ರೆಗಳು ಎಂದರೆ ಅಲರ್ಜಿ. ಇದುವರೆಗೆ ಬಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಔಷಧಿಗಳು ನನ್ನನ್ನು ದೈಹಿಕವಾಗಿ ಹುಷಾರು ಮಾಡಿವೆಯಾದರೂ, ಆಸ್ಪತ್ರೆಗಳಲ್ಲಿ ನಾನು ಕಳೆದ ಅವಧಿ ತುಂಬ ಕಡಿಮೆ. ಯಾವಾಗ ಅಲ್ಲಿಂದ ಹೊರಬರುತ್ತೇನೋ ಎಂಬ ಭಾವನೆಯೇ ಯಾವಾಗಲೂ. ರೇಖಾ ಗರ್ಭಿಣಿಯಾಗಿದ್ದಾಗ ಆಗೀಗ ಆಸ್ಪತ್ರೆಗೆ ಹೋಗಿದ್ದೆನಾದರೂ ಆ ಭಾವನೆಯೇನೂ ನನ್ನನ್ನು ಬಿಟ್ಟಿರಲಿಲ್ಲ. ಈಗಲೂ ಅಂಥದೇ ಭಾವನೆಯಿಂದ ಆಸ್ಪತ್ರೆಗೆ ಹೋದೆ.

ಚೊಚ್ಚಲ ಹೆರಿಗೆ ಎಂದರೆ, ಸಾಮಾನ್ಯವಾಗಿ, ಆಸ್ಪತ್ರೆಗಳಿಗೆ ಸುಗ್ಗಿ ಎಂದೇ ಅರ್ಥ. ಮೊದಲ ಮಗು ಬರುವ ಸಂಭ್ರಮ ನಮ್ಮದಾದರೆ, ಅದನ್ನು ಬಳಸಿಕೊಂಡು ಗರಿಷ್ಠ ಮಟ್ಟಕ್ಕೆ ಸುಲಿಯಬಹುದು ಎಂಬ ಸಂಭ್ರಮ ವೈದ್ಯರದು. ಬಸಿರು ನಿಂತಿದ್ದು ಗ್ಯಾರಂಟಿಯಾಗುತ್ತಲೇ ವೈದ್ಯರು ಸುಲಿಯಲು ಸಿದ್ಧರಾಗುತ್ತಾರೆ. ಅವರು ಬರೆಯುವ ಔಷಧಿಗಳ ಪಟ್ಟಿ ನೋಡಿದರೆ, ಹೆಂಡತಿ ಗರ್ಭಿಣಿಯಾಗಿದ್ದಾಳೋ ಅಥವಾ ಆಕೆಗೆ ಯಾವುದಾದರೂ ಗಂಭೀರ ಕಾಯಿಲೆ ಬಂದಿದೆಯೇನೋ ಎಂಬ ಅನುಮಾನ ಹುಟ್ಟುತ್ತದೆ.

’ಇಷ್ಟೊಂದು ಔಷಧಿಗಳು ಬೇಕಾ? ಆಕೆ ಆರೋಗ್ಯವಾಗೇ ಇದ್ದಾಳಲ್ಲ?’ ಎಂದೇನಾದರೂ ಕೇಳಿದರೆ, ನಿಮ್ಮನ್ನು ಗಮಾರ ಎಂಬಂತೆ ದಿಟ್ಟಿಸುತ್ತಾರೆ ವೈದ್ಯರು. ಮಗು ಮತ್ತು ಭಾವಿ ತಾಯಿ ಆರೋಗ್ಯವಾಗಿ ಇರಬೇಕೆಂದರೆ ಇವನ್ನೆಲ್ಲ ತೆಗೆದುಕೊಳ್ಳಲೇಬೇಕು. ನೀವು ಎಷ್ಟೇ ಪೌಷ್ಠಿಕ ಆಹಾರ ಸೇವಿಸುತ್ತಿದ್ದರೂ ಉಪಯೋಗವಿಲ್ಲ ಎಂಬ ಸಿದ್ಧಾಂತ ಅವರದು.

ಹೀಗಾಗಿ ಟಾನಿಕ್ ಸಿರಪ್‌ಗಳು, ಮಾತ್ರೆಗಳು ಧಂಡಿಯಾಗಿ ಬರೆಯಲ್ಪಡುತ್ತವೆ. ಆರೋಗ್ಯವಾಗಿರಬೇಕೆಂದರೆ ವಾಕಿಂಗ್ ಬೇಡ, ಪೌಷ್ಠಿಕ ಆಹಾರ ಬೇಡ, ಔಷಧಿ ಮಾತ್ರ ಸಾಕು ಎಂಬಂತೆ ಉದ್ದುದ್ದ ಪಟ್ಟಿ ಸಿದ್ಧವಾಗುತ್ತದೆ. ಅದನ್ನು ಹಿಡಿದುಕೊಂಡು ಆಸ್ಪತ್ರೆಯ ಭಾಗವೇ ಆಗಿರುವ ಔಷಧ ಅಂಗಡಿಗೆ ಹೋದರೆ, ಪಟ್ಟಿಯ ಉದ್ದವನ್ನು ನೋಡಿಯೇ ಸರ ಸರ ಔಷಧಿಗಳನ್ನು ತೆಗೆದು ಕೌಂಟರ್ ಮೇಲಿಡುವ ಅಂಗಡಿಯಾತ, ಆ ನಂತರವಷ್ಟೇ ಪಟ್ಟಿಯನ್ನು ಸರಿಯಾಗಿ ದಿಟ್ಟಿಸಿ ನೋಡುವುದು. ಅಷ್ಟರ ಮಟ್ಟಿಗೆ ಈ ಔಷಧಿಗಳು ಆತನಿಗೆ ಬಾಯಿಪಾಠ.

’ಇದು ಒಂದು ತಿಂಗಳ ಕೋರ್ಸ್‌ಗೆ. ಮತ್ತೆ ಮುಂದಿನ ತಿಂಗಳು ಚೆಕಪ್‌ಗೆ ಬನ್ನಿ’ ಎಂದು ಮತ್ತೊಂದು ಎನ್‌ಕೌಂಟರ್‌ಗೆ ನಿಮ್ಮನ್ನು ಮಾನಸಿಕವಾಗಿ (ಆಫ್‌ಕೋರ್ಸ್ ಆರ್ಥಿಕವಾಗಿಯೂ) ಸಿದ್ಧ ಮಾಡಿಯೇ ಕಳಿಸಿಕೊಡುತ್ತಾರೆ. ಅಲ್ಲಿಂದ ಆಸ್ಪತ್ರೆ ಸುತ್ತುವ ಕೆಲಸ ಶುರು. ಆರೋಗ್ಯವಾಗಿರುವ ವ್ಯಕ್ತಿಯ ಮನಸ್ಸನ್ನು ಕೆಡಿಸಿ, ಅವನನ್ನು ಅನಾರೋಗ್ಯವಾಗಿಸುವುದೇ ಬಹುತೇಕ ಆಸ್ಪತ್ರೆಗಳ ಅಧಿಕೃತ ಹಾಗೂ ಅನಧಿಕೃತ ಕಾರ್ಯಸೂಚಿ ಎಂದು ನನಗೆ ಯಾವಾಗಲೂ ಅನ್ನಿಸಿದೆ.

- ಚಾಮರಾಜ ಸವಡಿ

  • ಆಸ್ಪತ್ರೆ
  • ಮಗು
  • ಶೋಷಣೆ
  • ಹೆರಿಗೆ
~.~
  • Chamaraj ರವರ ಬ್ಲಾಗ್
  • Login or register to post comments
  • 228 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!
  • ಸಾವಿನ ಬಾಗಿಲು
  • ಅಲಾರಾಂಗೆ ಸಲಾಂ!
  • ಮಾಧ್ಯಮಗಳು ಏಕೆ ಹೀಗೆ??
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 545 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator