ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Chamaraj ರವರ ಬ್ಲಾಗ್

ಚಾಮರಾಜ ಸವಡಿ

ಸತ್ಯದ ಹಸಿ ದರ್ಶನ

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

October 4, 2008 - 11:22am — Chamaraj
Rural Hotel.jpg

ಪತ್ರಿಕೆ ಓದುವುದನ್ನು ಕೇಳಿದ್ದೀರಾ?

ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್ನು ಕೇಳಿದ್ದೀರಾ?

ಒಮ್ಮೆ ಕೇಳಬೇಕು ನೀವು. ಬಲೇ ತಮಾಷೆಯಾಗಿರುತ್ತದೆ. ಹೆಡ್ಡಿಂಗ್‌ನಿಂದ ಹಿಡಿದು, ಕೊನೆಗೆ ಅಚ್ಚಾಗಿರುವ ಏಜೆನ್ಸಿ ಹೆಸರುಗಳಿಂದ ಅಥವಾ ಬೈಲೈನ್‌ಗಳಿಂದ ಹಿಡಿದು ಪ್ರತಿಯೊಂದನ್ನೂ ಗಟ್ಟಿಯಾಗಿ ಓದುತ್ತಾರೆ ಕೆಲವರು. ಅವರು ಓದುವುದನ್ನು ಸುತ್ತಮುತ್ತ ಹತ್ತಾರು ಜನ ಗಮನವಿಟ್ಟು ಕೇಳುತ್ತಿರುತ್ತಾರೆ. ಅಲ್ಲಿ ಚರ್ಚೆಗಳು ನಡೆಯುತ್ತವೆ. ವಾದಗಳಾಗುತ್ತವೆ. ವಿವಾದಗಳೂ ಹುಟ್ಟಿಕೊಳ್ಳುತ್ತವೆ. ಸುದ್ದಿಯ ಪರ ಮತ್ತು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಸಣ್ಣ ಜಗಳಗಳೂ ನಡೆಯುವುದುಂಟು. ಅದಕ್ಕೇ ಕೇಳಿದ್ದು, ಪತ್ರಿಕೆ ಓದುವುದನ್ನು ಕೇಳಿದ್ದೀರಾ ಎಂದು.

ಒಂದೆರಡು ತಮಾಷೆ ಪ್ರಸಂಗಗಳು ಇಲ್ಲಿ ನೆನಪಾಗುತ್ತವೆ.

ನಮ್ಮ ಕಡೆ ಸಂಯುಕ್ತ ಕರ್ನಾಟಕ ಏಕಮೇವಾದ್ವಿತೀಯ ಪತ್ರಿಕೆಯಾಗಿದ್ದ ಕಾಲವದು. ನಮ್ಮೂರಿಗೆ ಬರುತ್ತಿದ್ದ ಪತ್ರಿಕೆಗಳ ಪೈಕಿ ಸಂ.ಕ.ದ್ದೇ ಸಿಂಹಪಾಲು. ಅದು ಬೆಳಿಗ್ಗೆ ಹತ್ತಕ್ಕೆ ಬಂದರೆ, ಪ್ರಜಾವಾಣಿ ಮಧ್ಯಾಹ್ನ ಮೂರು ಗಂಟೆಗೆ ಬರುತ್ತಿತ್ತು. ಕನ್ನಡಪ್ರಭ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಹೀಗಾಗಿ, ಸಂ.ಕ. ಬರುವುದನ್ನೇ ಕಾಯುತ್ತ ಹೋಟೆಲ್ ಪಕ್ಕದ ಬಸ್‌ಸ್ಟ್ಯಾಂಡ್‌ನಲ್ಲಿ ಜನ ಕೂತಿರುತ್ತಿದ್ದರು. ಪತ್ರಿಕೆ ಬರುವುದೊಂದೇ ತಡ, ಹೋಟೆಲ್ ಕಾಪಿ ಹಾಕಿದ ಹುಡುಗ, ಊರೊಳಗೆ ಪತ್ರಿಕೆ ಹಂಚಲು ಹೋಗುತ್ತಿದ್ದ. ಇದ್ದ ಒಂದು ಪತ್ರಿಕೆ ಅಷ್ಟೂ ಪುಟಗಳನ್ನು ಹಂಚಿಕೊಂಡು ಜನ ಓದಲು ಗುಂಪುಗುಂಪಾಗಿ ಕೂಡುತ್ತಿದ್ದರು. ಅವರ ಪೈಕಿ ಬಹುತೇಕರು ಅನಕ್ಷರಸ್ಥರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪತ್ರಿಕೆಗಳ ಸುದ್ದಿಗಳೂ ಬಲೇ ತಮಾಷೆಯಾಗಿರುತ್ತಿದ್ದವು. ಅಪರಾಧ ಸುದ್ದಿಗಳಿಗೆ ಎಲ್ಲಿಲ್ಲದ ರೋಚಕತೆ. ಪುಟಗಳು ಹಂಚಿಹೋಗಿರುತ್ತಿದ್ದುದರಿಂದ, ಮುಖ್ಯ ಸುದ್ದಿ ಯಾವುದು ಎಂಬುದು ನಗಣ್ಯವಾಗುತ್ತಿತ್ತು. ಸಿಕ್ಕ ಪುಟದಲ್ಲಿನ ಸುದ್ದಿಗಳನ್ನೇ ಒಬ್ಬ ಜೋರಾಗಿ ಓದುತ್ತ ಹೋಗುತ್ತಿದ್ದ. ಪ್ರತಿಯೊಂದು ಪ್ಯಾರಾಕ್ಕೂ ಆತ ನಿಲ್ಲಲೇಬೇಕು. ಏಕೆಂದರೆ, ಸುದ್ದಿ ಕೇಳುತ್ತಿದ್ದವರ ಕಾಮೆಂಟ್‌ಗಳಿಗೆ ಅವಕಾಶ ಬೇಕಲ್ಲ! ಆಗ (ಈಗ ಕೂಡಾ) ಸಂಯುಕ್ತ ಕರ್ನಾಟಕದ ನ್ಯೂಸ್ ಪ್ರಿಂಟ್ ಗುಣಮಟ್ಟ ಅಷ್ಟಕ್ಕಷ್ಟೇ. ಎರಡು ಕೈಗಳು ಬದಲಾಯಿಸುವುದರಲ್ಲಿ ಪತ್ರಿಕೆಯ ಅಕ್ಷರಗಳು ಮಸುಕಾಗಿ, ಹಾಳೆ ಮುದ್ದೆಯಾಗಿ ಓದುವುದು ಕಷ್ಟವಾಗಿಬಿಡುತ್ತಿತ್ತು. ಆಗ ಬಣ್ಣದ ಮುದ್ರಣ ಬಂದಿದ್ದಿಲ್ಲ. ಅಥವಾ ಸಂ.ಕ. ಅದನ್ನು ಅಳವಡಿಸಿಕೊಂಡಿರಲಿಲ್ಲ. ಚಿತ್ರಗಳೋ ಚುಕ್ಕೆಚುಕ್ಕೆಗಳ ಗುಪ್ಪೆಗಳು. ಆದರೂ, ಅದು ತರುತ್ತಿದ್ದ ಸುದ್ದಿಗಳು ರೋಚಕವಾಗಿರುತ್ತಿದ್ದವು.

ಪತ್ರಿಕೆ ಬಿಡಿಸಿಕೊಂಡು ಮೇಲಿನಿಂದ ಓದಲು ಶುರು ಮಾಡಿದರೆ ಜನ ನಿಶ್ಯಬ್ದವಾಗಿ ಕೇಳುತ್ತಿದ್ದರು. ಅದೇನೋ ಗೊತ್ತಿಲ್ಲ, ಅವತ್ತಿಗೂ ಇವತ್ತಿಗೂ ಸಂ.ಕ.ದ ಬಹುತೇಕ ಸುದ್ದಿಗಳು ’ನಮ್ಮ ಪ್ರತಿನಿಧಿಯಿಂದ’ ಎಂಬ ಒಕ್ಕಣೆಯಿಂದ ಶುರುವಾಗುತ್ತವೆ. ಹೆಡ್ಡಿಂಗ್ ಮುಗಿದ ಕೂಡಲೇ ಕಂಸದಲ್ಲಿ ’ನಮ್ಮ ಪ್ರತಿನಿಧಿಯಿಂದ’ ಎಂಬುದು ಶುರುವಾಗಬೇಕು. ಹಾಗಂದರೇನು ಎಂಬುದು ಆಗ ಗೊತ್ತಿದ್ದಿಲ್ಲ. ಅದರ ನಿಜಾರ್ಥ ತಿಳಿದಿದ್ದೇ ನಾನು ಪತ್ರಿಕೋದ್ಯಮಕ್ಕೆ ಬಂದಾಗ. ತಮ್ಮ ವರದಿಗಾರ ನೀಡಿದ ಸುದ್ದಿಗಳನ್ನೇ ಸಂ.ಕ. ನಮ್ಮ ಪ್ರತಿನಿಧಿಯಿಂದ ಎಂದು ಬಲೇ ಹೆಮ್ಮೆಯಿಂದ ಅಚ್ಚು ಹಾಕಿಕೊಳ್ಳುತ್ತಿತ್ತು. ಅದು ಈಗಲೂ ಇದೆ.

ಅವತ್ತು ಬಂದ ಸುದ್ದಿ ಯಾವುದೋ ಹಳೆಯ ಕ್ರೈಂ. ವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ್ದ ಸುದ್ದಿಯದು. ಕಟ್ಟೆಯ ಮೇಲೆ ಕೂತವ ರಾಗವಾಗಿ ಓದಲು ಶುರು ಮಾಡಿದ: ವಿವಾಹಿತೆಯ ಮೇಲೆ ಅತ್ಯಾಚಾರ ನಮ್ಮ ಪ್ರತಿನಿಧಿಯಿಂದ...

ಅತ್ಯಾಚಾರ ಎಲ್ಲಾಯಿತು, ಹೇಗಾಯಿತು, ಪೊಲೀಸರು ಏನು ಹೇಳುತ್ತಾರೆ, ಇತ್ಯಾದಿ ವಿವರಗಳೆಲ್ಲ ಮುಗಿದ ನಂತರ, ಸಮಾಜ ಕೆಟ್ಟು ಹೋಗುತ್ತಿದೆ, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಕಳವಳದೊಂದಿಗೆ ವರದಿ ಮುಕ್ತಾಯವಾಗುತ್ತಿತ್ತು. ಮುಂದಿನ ಸುದ್ದಿಗೆ ಹೋಗುವ ಮುನ್ನ, ಕಟ್ಟೆಯ ಮೇಲೆ ಕೂತವರಿಂದ ಕಾಮೆಂಟ್‌ಗಳು, ಚರ್ಚೆ, ವಾಗ್ವಾದ.

ತಾಕತ್ತಿದ್ದರೆ ಸ್ಪರ್ಧಿಸಿ, ಸಚಿವರಿಗೆ ಪಾಟೀಲ್ ಸವಾಲ್ ನಮ್ಮ ಪ್ರತಿನಿಧಿಯಿಂದ ಗದಗ ಜೂನ್ ೨೯ ಒಂದು ವೇಳೆ ...ರಿಗೆ ನಿಜವಾದ ತಾಕತ್ತಿದ್ದರೆ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಹುಲಕೋಟಿ ಹುಲಿ ಕೆ.ಎಚ್. ಪಾಟೀಲ್ ಕಾಂಗ್ರೆಸ್ ಸಚಿವರಿಗೆ ಸವಾಲು ಹಾಕಿದ್ದಾರೆ. ಖಾಸಗಿ ಸಮಾರಂಭಕ್ಕೆ ಇಲ್ಲಿಗೆ ಆಗಮಿಸಿದ್ದ ಅವರು ಈ ಸವಾಲು ಒಡ್ಡಿದ್ದಾರೆ... - ಹೀಗೆ ಸುದ್ದಿಗಳು ಪುಂಖಾನುಪುಂಖವಾಗಿ ಓದಲ್ಪಡುತ್ತಿದ್ದವು. ಅಲ್ಲಿ ಕೂತ ಯಾರಿಗೂ ಅರ್ಜೆಂಟ್ ಕೆಲಸಗಳಿರುತ್ತಿದ್ದಿಲ್ಲ. ಮಧ್ಯಾಹ್ನದವರೆಗೆ ಸಮಯ ಕಳೆಯುತ್ತಿದ್ದುದೇ ಹೀಗೆ.

ಟಿವಿ ಎಂಬ ವಸ್ತುವಿನ ಅಸ್ತಿತ್ವವೇ ಇಲ್ಲದ, ಟೇಪ್ ರೆಕಾರ್ಡರ್‍ಗಳಿನ್ನೂ ಕಾಲಿಟ್ಟಿರದ ದಿನಗಳಲ್ಲಿ ಪತ್ರಿಕೆಗಳು ಹಾಗೂ ಅವುಗಳಲ್ಲಿ ಬರುತ್ತಿದ್ದ ಚಿತ್ರ-ವಿಚಿತ್ರ ಸುದ್ದಿಗಳು ಹಳ್ಳಿಗಳನ್ನು ಆವರಿಸಿಕೊಂಡಿದ್ದವು. ನನಗೆ ಓದುವ ಆಸಕ್ತಿ ಹುಟ್ಟಿದ್ದೇ ಇವುಗಳಿಂದ. ನಮ್ಮ ಹಳ್ಳಿಯ ಆಚೆ ಬೇರೆಯದೇ ಆದ ಜಗತ್ತಿದೆ ಎಂಬ ಸತ್ಯವನ್ನು ನಿತ್ಯವೂ ಬಿತ್ತರಿಸುತ್ತ, ಆ ಜಗತ್ತನ್ನೊಮ್ಮೆ ಕಾಣಬೇಕೆಂಬ ಹುಚ್ಚನ್ನು ಬಿತ್ತಿದ್ದು ಅವು.

ಇದೆಲ್ಲಾ ಏಕೆ ನೆನಪಾಯಿತೆಂದರೆ, ಇವತ್ತು ನಸುಕಿನಲ್ಲಿ ಹೋದ ಕರೆಂಟ್ ಬೇಗ ಬರಲೇ ಇಲ್ಲ. ಕಂಪ್ಯೂಟರ್ ಗೌರಮ್ಮನಂತೆ ಕೂತಿತ್ತು. ಟಿವಿ ಸತ್ತುಹೋಗಿತ್ತು. ರೇಡಿಯೋದಲ್ಲಿ ಸುದ್ದಿ ಬರುವ ಸಮಯ ಪತ್ತೆ ಹಚ್ಚುವುದೇ ಕಷ್ಟ. ಬಂದರೂ ಅವು ಸರ್ಕಾರಿ ಸುದ್ದಿಗಳು. ಏನು ಮಾಡುವುದು? ಪತ್ರಿಕೆ ಹಾಕುವ ಹುಡುಗನ ದಾರಿ ಕಾಯುತ್ತ ನಿಂತಾಗ ಹಳೆಯ ದಿನಗಳು ಕಣ್ಮುಂದೆ ಸುಳಿದವು. ಹಳ್ಳಿ, ಹೋಟಲ್, ಬಸ್‌ಸ್ಟ್ಯಾಂಡ್ ಹೆಸರಿನ ಸಣ್ಣ ಕಟ್ಟೆ, ಅಲ್ಲಿನ ಜನ, ಅವರ ಸುದ್ದಿ ದಾಹ ಎಲ್ಲಾ ನೆನಪಾಗುತ್ತ ಹೋದವು.

- ಚಾಮರಾಜ ಸವಡಿ

  • ಗ್ರಾಮೀಣ ಬದುಕು
  • ದಿನಪತ್ರಿಕೆ
  • ವರದಿ
  • ಸುದ್ದಿ
~.~
  • Chamaraj ರವರ ಬ್ಲಾಗ್
  • Login or register to post comments
  • 183 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 4, 2008 - 11:40am — shreekant.mishrikoti

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

shreekant.mishrikoti's picture

ಲಾಂಗೂಲಾಚಾರ್ಯರು , ಅದೇ ಪಾ.ವೆಂ ಆಚಾರ್ಯರು , ಒಂದು ಹರಟೆ ಬರೆದಿದ್ರು ,
ಪತ್ರಿಕೆಗಳನ್ನ ನೋಡಿ . ಜಗತ್ತಿನಲ್ಲಿ ನಡೆಯೋ ಎಲ್ಲ ಅನ್ಯಾಯಕ್ಕೆ ಕಾರಣ ಪತ್ರಕರ್ತರೇ .
Smiling
ಸರಕಾರ ಯಾಕೆ ಸುಮ್ಮನಿದೆ ? ಅಂತ ಆಶ್ಚರ್ಯ ಸೂಚಿಸಿದ್ರು !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:47am — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಏಕೆಂದರೆ, ಸರಕಾರವೂ ಪಾಲುದಾರವಲ್ಲವೆ?

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ
  • ಸು‌ದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...
  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
  • ಇದೇನಾ ಪತ್ರಿಕೋದ್ಯಮ?
  • ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 93 ಅತಿಥಿಗಳು ಆನ್ಲೈನ್ ಇರುವರು.


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator