ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › brahmana ರವರ ಬ್ಲಾಗ್

ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ

September 13, 2008 - 12:06am — brahmana

ಈ ಋಷಿ ಪಂಚಮಿ ಅನ್ನು ಹಬ್ಬ ಅತವಾ ಪದ್ದತಿ ಎಷ್ಟು ಮಂದಿಗೆ ಗೊತ್ತದ ಅಂತ ಗೊತ್ತಿಲ್ಲ. ಅದಕ್ಕೆ ಸುಮ್ಮ ರಿಸ್ಕ ಬ್ಯಾಡಂತ ಹೇಳಿ ಲೈಟಾಗಿ ಇದರ ಬಗ್ಗೆ ಬರಿಲಿಕತ್ತೀನಿ.

ಇದು ನನಗ ತಿಳಿದ ಮಟ್ಟಿಗೆ ನಮ್ಮ ಸಮುದಾಯ ಬಿಟ್ಟು ಬ್ಯಾರೆ ಹೊರಗೆಲ್ಲಿ ಆಚರಿಸು ಹಂಗೇನು ಕಾಣುದಿಲ್ಲ. ಇದು ಬಹುತೇಕ ಹೆಂಗಸರ ಹಬ್ಬ. ಗಂಡಸರಿಗೆ ಇದಕ್ಕ ಬೇಕಾದ ಸಾಮಾನುಗಳನ್ನ ಅಂಗಡಿಯಿಂದ ತಂಡು ಕೊಡುದು ಬಿಟ್ರ ಜಾಸ್ತಿ ಎನ್ ಕೆಲಸ ಇರುದಿಲ್ಲ. ಇದನ್ನ ಭಾದ್ರಪದ ಶುಕ್ಲ ಪಂತಮಿ, ಅಂದ್ರ ಗಣೇಶ ಚತುರ್ತಿ ಮರುದಿನ ಮಾಡತಾರ. ಇದ್ದು ಹಬ್ಬ ಅನುದರಕಿಂತ ಒಂದು ರೀತಿ ವೃತ ಅಂತ ಹೇಳಬಹುದು. ಇವತ್ತಿನ ದಿನ ಏನಪಾ ಅಂದ್ರ ಹೆಂಗಸರು ನಮ್ಮ ಸಂಸ್ಕೃಕಿಯ ಮಹಾ ಋಷಿಗಳಾದ ಸಪ್ತ ಋಷಿಗಳ ಧ್ಯಾನ ಮಾಡಬೇಕು, ಆ ಋಷಿಗಳಂತೆ ಎಷ್ಟು ಆಗತದ ಅಷ್ಟು ವೈರಾಗ್ಯದ ಜೀವನ ನಡಸಬೇಕು ಅಂತ ಅದ. ಮಜಾ ಏನಂದ್ರ ಇದು ಒಂದು ದಿನದ ಹಬ್ಬ ಅಲ್ಲ. ಒಂತರಾ ವರ್ಷ ಪೂರ್ತಿ ಬರುವ ರಿಕರಿಂಗ ಡೆಪಾಸಿಟ್ ಇದ್ದಂಗ. ಅಷ್ಟೇ ಅಲ್ಲ ಇದನ್ನ ೮ ವರ್ಷ ಮಾಡಬೇಕು. ಇದಕ್ಕಿಂತ ಭಾರಿ ಏನಂದ್ರ ಈ ವೃತಾ ಸುಮ್ಮ ಹಂಗೇ ಮಾಡಲಿಕ್ಕೆ ಬರುದಿಲ್ಲ. ಮದಲ ಈ ವೃತ ಹಿಡಿತೀನಿ ಅಂತ ಸಂಕಲ್ಪದ ಜೂಡಿ ಒಂದು ಕಾರ್ಯಕ್ರಮ ಇರ್ತದ. ಈ ವೃತ ೮ ವರ್ಷ ಮಾಡಿದ ಮ್ಯಾಲೆ ಅಂತ್ರು ಇನ್ನು ದೊಡ್ಡ ಕಾರ್ಯಕ್ರಮ ಇರ್ತದ. ಆ ಪೂರ್ತಿ ಪದ್ದತಿ ಮತ್ತ ಆಮ್ಯಾಲೆ ಬರೀತಿನಿ.

ಇದರ ಬಗ್ಗೆ ಇನ್ನು ಹೇಳಬೇಕಂದ್ರ ಯರು ಆ ವೃತ ಮಾಡಲಿಕ್ಕೆ ಚಾಲು ಮಾಡತಾರ ಅವರು ಸ್ವಲ್ಪ ವೈರಾಗ್ಯದ ಜಿವನ ನಡಸ್ಬೇಕಂತದ. ಬಹುತೇಕ ಅದಕ್ಕೇ ಇದನ್ನ ಬರಿ ಹಿರಿಯರು ಅಷ್ಟಿ ಮಾಡತಾರ. ೮ ವರ್ಷ ಅಗದು ಸಾದಾ ಜೀವನಾ ನಡಸುದೇನು ಸರಳ ಇಲ್ಲಾ. ಇದನ್ನ ಯಾರು ಮಾಡತಾರ ಅವರು ಆ ೮ ವರ್ಷ ಭಾದ್ರಪದ ಶುಕ್ಲ ಪಂತಮಿ ದಿನ ಅಂತ್ರು ಬಿಳಿ ಸೀರಿ ಉಟಗೋಬೇಕು. ಅವತ್ತ ಮತ್ತ ಉಳದ ದಿನ ಸುದೇಕ್ ಮಡಿ ಅಡಗಿ ಅಷ್ಟೇ ಉಚ ಮಾಡಬೇಕು, ಅದು ಇದು ಆಗಾಗ ತಿನ್ಲಿಕ್ಕೆ ಬರುದಿಲ್ಲ. ಇವೆಲ್ಲಾ ಏನಪಾ ಅಂದ್ರ ವಟ್ಟ ಮದಲೇ ಹೇಳಿದಂಗ ವೈರಾಗ್ಯದಿಂದ ಇದ್ದಿವಿ ಅನ್ನುದರ ಸೈನ್ಸ್ (signs). ಆದ್ರ ಈಗಿನ ಕಾಲ ಏನ ಆಗೇದ ನೋಡ್ರಿ. ಬಿಳಿ ಸೀರಿ ಹಾಕೋಬೇಕಂತ ಋಷಿ ಪಂಚಮಿ ಹಿಂದಿನ ದಿನಾ ಮಂದಿ ಅರವಿ ಅಂಗಡಿಗೆ ಹೋಗಿ ಡಿಸೈನರ್ ಬಿಳಿ ಸೀರಿ ಹುಡುಕಿ ತೋಗೊಂಡು ಬರುದಂತ. ಮನಿಗೆ ಬಂದು ಉಳದವರ ಜೂಡಿ ಆ ಸೀರಿ ಅಂಚ ಹೆಂಗದ, ಜರಿ ಹೆಂಗದ, ಶರಗ ಹೆಂಗದ ಹಿಂತಾದ ಮಾತಾಡಕೋತ್ ಕೂಡುದಂತ. ಋಷಿಗಳನ್ನ ನೆನಸ್ಕೋರಿ ಅಂದ್ರ ಇಲ್ಲ, ಸೀರಿ ಬಗ್ಗೆ ಚರ್ಚೆ. ವಷರ್ದ ಆ ವಂಚಮಿ ಒಂದು ದಿನ ಉಪವಾಸ ಮಾಡಿದ್ರ ಆತು, ಮರದಿವಸದಿಂದ ಮತ್ತ ಎಲ್ಲಾ ಕಟಿಲಿಕ್ಕೆ ಶುರುನೇ. ಅದು ತಿನ್ನು, ಇದು ತಿನ್ನು ಎಲ್ಲಾ ತಿನ್ನುದೇ. ವೈರಾಗ್ಯ ಅನ್ನುದು ಹೋಗೇಬಿಡ್ತದ. ಆ ಋಷಿಗಳು ನೆನಪು ಬರುದು ಮುಂದಿನ ವರ್ಷ ಪಂಚಮಿಗೇ. ಇಲ್ಲಾ ಚಥುರ್ತಿಗೇ ನೆನಪ ಬರ್ತಾರ, ಮತ್ತ ಹೊಸ ಬಿಳಿ ಸೀರಿ ತರಬೇಕಲಾ.

ಹಿಂಗಾಗಿ ವಟ್ಟ ನಮ್ಮ ಪದ್ದತಿಗಳ ಹಿಂದಿದ್ದ ಕಾರಣಗಳನ್ನ ಕಳಕೋಳಿಕತ್ತೀವಿ. ಇದರಿಂದಾಗಿ ನನ್ನಂತವರು ಕಾರಣ ಕೇಳಿದಾಗ ಏನು ಸಿಗಲಾರದಕ್ಕ ಈ ಪದ್ದತಿ ಮೂಢ ನಂಬಿಕೆ ಮಾಡಿಬಿಡ್ತೀವಿ.
ಎಲ್ಲಾರು ಹಿಂಗ ಮಾಡತಾರಂತ ಹೇಳುದಿಲ್ಲ. ರಗಡ ಮಂದಿ ಅಗಕಿ ಪಕ್ಕಾ ನಿಷ್ಠೆಯಿಂದ ಮಾಡತಾರ. ಆದ್ರ ಭಾಳಷ್ಟು ನಾ ಹೇಳಿದಂಗೂ ಮಾಡತಾರ.

ನಾ ಮುಂಚೆ ಹೇಳಿದಂಗ ಈ ಋಷಿ ಪಂಚಮಿ ಬಗ್ಗೆ ವಿಸ್ತಾರವಾಗಿ ಬರೀತಿನಿ, ಎಷ್ಟು ಆಗತದ ಪದ್ದತಿಯ ಮಹತ್ವ ಸುದೇಕ್ ಹುಡುಕಿ ಬರೀತಿನಿ. ಅಲ್ಲಿತನಕ,

ಜೈ ಶ್ರೀ ಯಲಗೂರೇಶ ಪ್ರಸನ್ನ.
ಹರಿ ಓಂ.

  • ಪದ್ದತಿ
  • ಸಂಸ್ಕೃತಿ
  • ಹಿಂದೂ ಧರ್ಮ
~.~
  • brahmana ರವರ ಬ್ಲಾಗ್
  • Login or register to post comments
  • 154 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹುಡುಗರಿಗೆ ಮಣ್ಣೆತ್ತಿನ ಅಮವಾಸಿ ಆದ್ರ ಹುಡಿಗ್ಯಾರಿಗೆ ಗುಳ್ಳವ್ವ ಹಬ್ಬ
  • ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಡಿಸ್ಚ್ರಿಶನ್ - ವಿವೇಚನೆ ಕುರಿತ ಒಂದು ಚಂದಮಾಮಾ ಕತೆ
  • "ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ
  • ನನ್ನ ಹಬ್ಬ
Syndicate content

ಲೇಖಕರು

brahmana's picture

ಪೂರ್ಣ ಹೆಸರು
Srirang G Doddihal

ಪರಿಚಯ

ನಾನು ಈಗ ಬೆಂಗಳೂರಿನ ಮಹಾಜನತೆಯಂತೆ ಸಾಫ್ಟವೇರ್ ಇಂಜಿನಿಯರ್. ಉಳದಿದ್ದೆಲ್ಲ ಆಮೇಲೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 109 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator