ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › brahmana ರವರ ಬ್ಲಾಗ್

ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

September 8, 2008 - 8:04pm — brahmana

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ -

೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ.
೨. ಗಣಪತಿ ಹಬ್ಬಕ್ಕ ಮಣ್ಣಿನ ಗಣಪತಿ ಮೂರ್ತಿ ಇಡತೀವಿ.
೩. ದಿನಾ ಸಂಧ್ಯಾವಂದನೆ ಮಾಡುಮುಂದ ನಾವು ಗೋಪಿಚಂದನ ಎನ ಹಚಗೋತೀವಿ, ಅದು ಮಣ್ಣಿಂದು.
೪. ನಮ್ಮ ಮನ್ಯಾಗ ಗೌರಿ ಕೂಡಸ್ತಾರಲಾ, ಅದು ಸುದೇಕ್ ಮಣ್ಣಿಂದು ಮಾಡಬೇಕು ಅಂತ ಅದ.
೫. ಯಾವುದೇ ಹೋಮ, ಯಜ್ಞ ನಡದ್ರ ಅಲ್ಯೂ ಮಣ್ಣು ಬೇಕಾಗ್ತದ.
೬. ಉತ್ತರ ಕರ್ನಾಟಕದ ಕಡೆ ಗುಳ್ಳವ್ವ ಅಂತ ಮಾಡತೀವಿ, ಅದು ಸುದೇಕ್ ಮಣ್ಣಿಂದೇ ಮಾಡತಾರ.

ಹಿಂಗೆ ಹೇಳ್ಕೋತ ಹೋದ್ರ ಇನಾ ಭಾಳ ಸಿಗತಿರಬಹುದು. ಸಿಗತಿರಬಹುದೇನು, ಸಿಕ್ಕೇ ಸಿಗತಾವ. ವಟ್ಟ ಮಣ್ಣಿಗೆ ಮಹತ್ವ ಅದ ಅಂತ ಆತು. ಇಲ್ಲಿ ಮಣ್ಣ ಅಂದ್ರ ಬರೀ ಮಣ್ಣು ಅಂತ ಅಲ್ಲಾ, ಭೂತಾಯಿ ಅಂತ ಲೆಕ್ಕಾ. ನಾವು ಸದಾಕಾಲ ಭೂತಾಯಿಯನ್ನ ಪೂಜಸ್ತೀವಿ ಅಂತ. ಇದು ಯಾಕ ಇರಬಹುದಪಾ ಅಂತ ನಾನು ವಿಚಾರ ಮಾಡಿದೆ. ನನಗ ತಿಳಿದ ಮಟ್ಟಿಗೆ, ನಾವು ಮೂಲತಃ ಬೇಸಾಯ ಮಾಡುವ ಜನಾಂಗ. ಅಂದ್ರ ವಕ್ಕಲತನಾನೇ ನಮ್ಮ ಮುಖ್ಯ ಉದ್ಯೋಗ. ಹಿಂಗಿದ್ದಾಗ ಭೂತಾಯಿಗೆ ಅತಿ ಹೆಚ್ಚು ಪ್ರಮಾಣದಾಗ ಆದರ, ಮರ್ಯಾದೆ ಮತ್ತ ಪೂಜಾ ಇರೂದು ಸಹಜ ಅನಸ್ತದ. ಅದಕ್ಕೆ ಈಗೆಲ್ಲಾ ಮಂದೀ ಕಟಗಿ ಗೌರಿ, ಬೆಳ್ಲಿ ಗಣಪ್ಪ ಹಿಂಗೇನರೆ ಕೂಡ್ಸೀದ್ರ, ಹಂಗ ಮಾಡಬ್ಯಾಡ್ರಿ, ಮಣ್ಣಿಂದೇ ಕೂಡಸ್ರಿ ಅಂತ ಹೇಳುದು.

ನಮ್ಮಂತವರೆಲ್ಲಾ ಯಾಕ, ಮಣ್ಣಿಂದೇ ಯಾಕ? ಅಂತ ಪ್ರಶ್ನೆ ಹಾಕತೀವಿ. ಹೇಳಿದವರಿಗೆ ಉತ್ತರಾ ಗೊತ್ತಿಲ್ಲಂದ್ರ ಆತ್ ನಡೀ. ನೀಮಗ ಎನೂ ಗೊತ್ತಿಲ್ಲ. ಬರೇ ಮೂಢ ನಂಬಿಕೆ ನಿಮ್ದೆಲ್ಲಾ ಅಂತ ದಬಾಯ್ಸಿ, ಜೋರ್ ಮಾಡಿಬಿಡ್ತೀವಿ. ಅವರು ಮುಂದ ಎನ್ ಹೇಳುದಂತ ಸುಮ್ಮ ಆಗ್ತಾರ. ನಾನು ಹಿಂಗೇ ಮಾಡತಿದ್ದೆ. ಆದ್ರ ಇದರಿಂದ ನಮಗೆ ಲುಗಸಾನ ಅದ. ಅವರು ಹೇಳುದರವಳಗ ಏನರೇ ಛೊಲೋ ಇತ್ತಂದ್ರ ಅದೆಲ್ಲಾ ನಾವು ಕಳಕೋತೀವಿ. ಅದಕ್ಕೆ ನಾನು ವಿಚಾರ ಮಾಡಿ ಇನ್ನ ಮ್ಯಾಲಿಂದ ನನಗ ಎನು ಪ್ರಶ್ನೆ ಬರ್ತದ ಅದಕ್ಕ ಉತ್ತರ ನಾನೇ ದುಡಕಬೇಕು. ನಾ ಎಷ್ಚು ಹುಡಕೀದ್ರು ಸಿಗಲಿಲ್ಲ ಅಂದ್ರ ಅದನ್ನ ಮೂಢನಂಬಿಕೆ ಅಂತ ತಿಳ್ಕೋತೀನಿ. ನೋಡುಣು ಎಲ್ಲಿತನ ಜಗ್ಗತದ ಈ ಗಾಡಿ.

ಜೈ ಶ್ರೀ ಯಲಗೂರೇಶ ಪ್ರಸನ್ನ.
ಹರಿ ಓಂ.

  • ಪದ್ದತಿ
  • ಮಣ್ಣು
  • ಸಂಸ್ಕೃತಿ
~.~
  • brahmana ರವರ ಬ್ಲಾಗ್
  • Login or register to post comments
  • 218 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 9, 2008 - 9:44am — Sunil Jayaprakash

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

Sunil Jayaprakash's picture

ನಮ್ದು ಒಂದ ಜೈಕಾರ ತೊಗೋರಿ - ಜೈ ಶ್ರೀ ಯಲಗೂರೇಶ.
ಯಲಗೂರು ಎಲ್ಲಿದೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 11:40am — brahmana

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

brahmana's picture

ಈ ಯಲಗೂರು ನಮ್ಮ ಊರು ಮುದ್ದೇಬಿಹಾಳ ಹತ್ರ ಅದ, ಅಂದ್ರ ವಿಜಾಪೂರ ಜಿಲ್ಲೆದಾಗ. ನಮ್ಮೂರಿಂದ ಅರ್ಧಾ ತಾಸಿನ ಹಾದಿ ಅಶ್ಟೇ. ಅಲ್ಲಿ ನಮ್ಮ ಅಜ್ಜಾಅವರು ನಡಸ್ಕೊಂಡು ಬಂದಂತಃ ಹಣುಮಂತ ದೇವರ ಗುಡಿ ಅದ.

-- ಹರಿ ಓಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 10:01am — madhava_hs

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

madhava_hs's picture

ಮಣ್ಣಿಗಿರುವ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು. ಆದರೆ ಇಂದೇನಾಗಿದೆ ನೋಡಿ. ನಗರಗಳಲ್ಲಿ, ಮಣ್ಣು ಒಂಚೂರೂ ಕಣ್ಣಿಗೆ ಬೀಳದಂತೆ ಭೂಮಿಯನ್ನು ಟಾರು, ಸಿಮೆಂಟು ಇತ್ಯಾದಿಗಳಿಂದ ’ಸೀಲ್’ ಮಾಡಿಕುಳಿತಿದ್ದೇವೆ. ಕೆಲದಿನದ ಹಿಂದೆ ಮನೆಯ ಹೂಗಿಡಗಳಿಗಾಗಿ ಮಣ್ಣನ್ನು ಹುಡುಕಿಕೊಂಡು ಲಾಲ್ ಭಾಗ್ ಗೆ ಹೋಗಿ ಒಂದು ಮೂಟೆ ಮಣ್ಣನ್ನು ಖರೀದಿಸಿ ತಂದಿದ್ದಾಯಿತು. ಬಹಳ ದುಃಖವಾಯಿತು ಆಗ. ಮಣ್ಣು, ನೀರು ಇವುಗಳನ್ನು ಖರೀದಿಸುವ ಪರಿಸ್ಥಿತಿ ಬಂದಾಗಿದೆ. ಇನ್ನು ಗಾಳಿಯನ್ನು ಎಂದು ಖರೀದಿಸುವ ಕಾಲ ಬರಬಹುದು ಎನಿಸುತ್ತಿದೆ. ಒಂದು ಕಾಲದಲ್ಲಿ ಆಹಾರ ಪದಾರ್ಥಗಳನ್ನೂ ಮಾರುತ್ತಿರಲಿಲ್ಲವಂತೆ ಈ ದೇಶದಲ್ಲಿ. ಈಗ ಹೇಗಿದೆ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 12:44pm — brahmana

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

brahmana's picture

ನೀವು ಹೇಳಿದ್ದು ನೂರಕ್ಕ ನೂರು ಖರೇ. ನನಗೂ ಮೊದಲ ಬೆಂಗಳೂರಿಗೆ ಬಂದಾಗ ಏನು ಜಾಗಾಅಪಾ ಇದು ಅಂತ ಅನಸ್ತು. ಆದ್ರ ಈಗ ೨ ವರ್ಷ ಆದಮ್ಯಾಲೆ ಸಾಕಪಾ ಇದು ಅನಿಸಿ ಬಿಟ್ಟದ. ಅದ್ರ ಇಷ್ಟು ಮಂದಿ ಹೊಟ್ಟಿಗೆ ಊಟ ಹಾಕು ಊರು ಇದೇ. ಒಂದು ಬಂದ್ರ ಇನ್ನೊಂದು ಹೋಗತದ ಅಂತಾರಲಾ, ಹಂಗಾತಿದು. ಈ ಮಾಡರ್ನ ಜಗತ್ತು ಮತ್ತು ನಮ್ಮ ರೈತ ಜಗತ್ತಿನ ನಡು ಒಂದು ಬರೊಬ್ಬರ ಬ್ಯಾಲೆನ್ಸ್ ಆದಷ್ಟು ಜಲ್ದಿ ಸಿಗಲಿ ಅಂತ ಅನ್ಕೋಳೂಣು.

ಇದರ ಜೂಡಿ ನೀವು ಇಷ್ಟು ಶ್ರಮ ತೊಗೊಂಡು ಹಚ್ಚಿದ ಗಿಡ ಛೊಲೋ ಬೆಳಿಲಿ ಅಂತ ಆಶಸ್ತೀನಿ. Smiling

-- ಹರಿ ಓಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 11:10am — ಸಂಗನಗೌಡ

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

ಸಂಗನಗೌಡ's picture

ಸರಿ ಐತಿ, ಮತ್ತ, ಚಲು ಐತಿ, ನೀವ್ ಹೇಳುದ್.. ರೈತರಿಗೇ ಗೊತ್ತ್ ಮಣ್ಣಿನ ಬೆಲಿ ಏನ್ ಅಂತ್... ಮೊನ್ನೆ ಗಣಪತಿ ಏನ್ symbolize ಮಾಡ್ತಾನ್ ಅಂತ್ ತಿಳಿದು ಮನಗಂಡ ನಲಿವ್ ಆತ್....
:-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 12:32pm — kannadakanda

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

kannadakanda's picture

ಇನ್ನೊಂದು ವಿಷಯ ಗೊತ್ತೆ. ಭೂಸ್ಪರ್ಷವಾಗದ ನೀರು (ಮಣ್ಣು ತಾಗದ ನೀರು) ಕುಡಿಯಲು ಪೂಜೆಗೆ ತಕ್ಕುದ್ದಲ್ಲ. ಭಟ್ಟಿಯಿೞಿಸಿದ ನೀರು ನಿಮಗೆ ಗೊತ್ತಿರುವಂತೆ ಯಾವುದೇ ಖನಿಜವನ್ನು ಒಳಗೊಂಡಿರದುದಱಿಂದ ಕುಡಿದರೂ ದೇಹಕ್ಕೆ ಪ್ರಯೋಜನವಿಲ್ಲ. ಇದನ್ನು ಮನಗಂಡ ನಮ್ಮ ಹಿರಿಯರು ನೆಲಕ್ಕೆ ತಾಗಿದ ನೀರಷ್ಟೆ ಬೞಸಲು ತಕ್ಕುದೆಂದು ನಿರ್ಧರಿಸಿದುದು. ಈಗ ಪರಿಷ್ಕರಿಸಿದ ನೀರಿಗೆ ಖನಿಜಾಂಶಗಳನ್ನು ಬೞಸಲು ಆ ಖನಿಜಾಂಶಗಳನ್ನು ನೆಲದಿಂದಲೇ ಪಡೆಯಬೇಕಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 2:00pm — brahmana

ಉ: ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ

brahmana's picture

ಇಂಟರೆಸ್ಟಿಂಗ್... ನನಗ ಇದರ ಹಿಂದಿದ್ದ ವೈಜ್ಞಾನಿಕ ವಿಚಾರ ಗೊತ್ತಿತ್ತು, ಆದ್ರ ಪೂಜಾ ವಿಚಾರ ಏನ್ ಹೇಳೀರಿ, ಅದು ಗೊತ್ತಿರಲಿಲ್ಲ. ಒಳ್ಳೇದು.

-- ಹರಿ ಓಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹುಡುಗರಿಗೆ ಮಣ್ಣೆತ್ತಿನ ಅಮವಾಸಿ ಆದ್ರ ಹುಡಿಗ್ಯಾರಿಗೆ ಗುಳ್ಳವ್ವ ಹಬ್ಬ
  • ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ
  • ಬಣ್ಣ ಸಹಿತ ಗಣಪತಿಯ ಸಾಧಕ-ಬಾಧಕಗಳು- ವಿಚಾರ ಸಂಕಿರಣ
  • ಪ್ರಶ್ನೆ - ಉತ್ತರ
  • ಈ ನೇಗಿಲಯೋಗಿ ಕಲಿತದ್ದು ಪಿ.ಯೂ.ಸಿ. ಆದರೆ ಪಡೆದದ್ದು ಕೃಷಿ ವಿ.ವಿ.ಯ ಗೌರವ ಡಾಕ್ಟರೇಟ್!
Syndicate content

ಲೇಖಕರು

brahmana's picture

ಪೂರ್ಣ ಹೆಸರು
Srirang G Doddihal

ಪರಿಚಯ

ನಾನು ಈಗ ಬೆಂಗಳೂರಿನ ಮಹಾಜನತೆಯಂತೆ ಸಾಫ್ಟವೇರ್ ಇಂಜಿನಿಯರ್. ಉಳದಿದ್ದೆಲ್ಲ ಆಮೇಲೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 115 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator