ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
೪ ಹಂತಗಳು
೪ ಹಂತಗಳು
ಮನುಜ ೪ ಹಂತಗಳಲ್ಲಿ ಬೆಳಿತಾನಂತೆ.
೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.
೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ
೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,
೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ...
ಬೆಳದಿಂಗಳ ಬಾಲೆ ಚಿತ್ರದಲ್ಲಿ ರೇವಂತ್ ಅಭಿಲಾಷ ಗೆ ಹೇಳುವ ಮಾತಿದು, ಜೇಮ್ಸ ಅನ್ನು ಉದ್ದೇಶಿಸಿ....
ಉಪೇಂದ್ರ ತಮ್ಮ ಎಲ್ಲಾ some- ದರ್ಶನದಲ್ಲಿ ಹೇಳ್ತ ಇರ್ತಾರೆ
ನಿಂ ಅಭಿಪ್ರಾಯ ಏನು ? ಈ ೪ ಹಂತಗಳ ಬಗ್ಗೆ ?!?

- betala ರವರ ಬ್ಲಾಗ್
- Login or register to post comments
- 675 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ೪ ಹಂತಗಳು
ಅದೇನು ಕಾಕತಾಳೀಯವೋ ಗೊತ್ತಿಲ್ಲ, ಇಂದಿಗೆ ಸರಿಯಾಗಿ ೧ ವರ್ಷದ ಹಿಂದೆ, ಇದೇ ೪ ಹಂತಗಳನ್ನು, I ate nothing for 6 ಘಂಟೆ ಕಾಲ ಎಂಬುದಾಗಿ ಬ್ಲಾಗಿದ್ದೆ. ಬಿಡುವಿದ್ದಾಗ ಎಲ್ಲರೂ ಓದಿ ನೋಡಿ.
ಬೆಳದಿಂಗಳ ಬಾಲೆ ನಿಜಕ್ಕೂ ಒಂದು ಅದ್ಭುತ ಪ್ರಯೋಗ. ಆ ಎಳೆಯ ಒಂದು ಕಾಮೆಂಟಿನಲ್ಲಿ ಪ್ರಸ್ತಾಪವಾದ ಹಾಗೆ, ನಾವುಗಳು ೩ನೆಯ ಹಂತ ತಲುಪುವುದು ತುಂಬಾ ತುಂಬಾ ಸುಲಭ.
ಉ: ೪ ಹಂತಗಳು
^^^
ಬೇತಾಳರು ಯಾವ ಹಂತದಲ್ಲಿದ್ದೀರಿ? D
ನನಗೆ ಚನ್ನಾಗಿದೆ ಅನ್ನದೋದೇ ಸುಳ್ಳ ಅನ್ಸಕ್ಕೆ ಸುರುವಾಗಿದೆ.!! ನನಗೆ ಚೆನ್ನು ಇನ್ನೊಬ್ಬರಿಗೆ ಚನ್ನಿಲ್ಲದೇ ಇರಬೋದು!!
ಅದಕ್ಕೆ ೫ ಹಂತ..
ನಾನು ಇದ್ದೀನಿ, ಜಗತ್ತೂ ಇದೆ, ಆದರೆ ಚನ್ನಾಗಿದೆ-ಇಲ್ಲ doesn't matter!!!
- ಮಾಯ್ಸ
ಉ: ೪ ಹಂತಗಳು
ನಿಮ್ಗೇ ಮೋಕ್ಷ ಸಿಗಬಹುದು ! ತುರೀಯಾ ವಸ್ಥೆಯಲ್ಲಿರುವಿರಿ
ಉ: ೪ ಹಂತಗಳು
ಮುರಳಿ ದೇವರೇ,
ನಾನು ತುರೀಯೆಯನ್ನು ದಾಟಿ ಪಂಚಮಕ್ಕೆ ಹೋಗಿದ್ದೀನಿ ಅಂತ ಅಂದುಕೊಂಡಿದ್ದೆ. ಹಿಂಗೆ ಹಿಂಬಡತಿಯಾಗಿ ತುಂಬ ನೋವಾಯ್ತು
.
.
.
.
.
ಒಗ್ಗರಣೆ
ಪಾಪ ತುರೀಯಾ ಅಂದ್ರೆ ಏನು ಅಂತ ಹಲವರು ಕಣ್ಗಣ್ ಬಿಡಬಹುದು. ಅದಕ್ಕೆ
ತುರೀಯಾ = ನಾಲ್ಕನೆ ( ತುರಿಯುದಕ್ಕೆ ಯಾವ ನಂಟಿಲ್ಲ
)
)

ಪಂಚಮ = ಐದನೆ ( ಪಂಚೆಗಾಗಲೀ, ಪಂಚಿಗಾಗಲಿ ಯಾವ ನಂಟಿಲ್ಲ
ಹಿಂಬಡತಿ = ಇದೊಂದು ತರಲೆ. ಬಡತಿ( ಭಡತ್ ; ಹಿಂದಿ) ಅಂದ್ರೆ ಮುಂದೆ ಹೋಗು ಎಂದು, ಹಿಂಬಡತಿ ಅಂದರೆ ಹಿಂದಕ್ಕೆ ಮುಂದುವರಿ ಎಂದೇ?
ಹಿಂಬಡತಿ ಬದಲು ಹಿನ್ನಡೆ ಅಂತ ಹೇಳಬೇಕಿತ್ತು ಅಂತ ಅನ್ಸಿತು
- ಮಾಯ್ಸ !!
ಉ: ೪ ಹಂತಗಳು
ತುರೀಯಾವಸ್ಥೆ ಅಂದ್ರೇನು ಅಂತ ಕೇಳ್ಬೇಕೂ ಅಂತಿದ್ದೆ ; ಮಹೇಶರು ಅರ್ಥ ಹೇಳಿದ್ದಾರೆ .
)
ಮೋಕ್ಷ ಅಂದ್ರೇ ಏನು ಅಂತ ಯಾರಾದ್ರೂ ಹೇಳ್ತೀರಾ ?
( ನನಗೆ ಸಿಕ್ಕಿದೆಯೋ , ಸಿಗುವದೋ ವಿಚಾರ ಮಾಡಬೇಕು!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ೪ ಹಂತಗಳು
ಮೋಕ್ಷ ಅಂದ್ರೆ ಬಿಡುಗಡೆ..!
ಮುರಳಿ ನನಗೆ ಯಾವ ಬಿಡುಗಡೆ ಸಿಗುವುದೆಂದರೋ ತಿಳಿಯದು!!! ನನಗೆ ಕೆಲವು ಸಂಗತಿಗಳಿಂದ ಬಿಡುಗಡೆ ಬೇಡ.. ಅಂದ್ರೆ ಕೆಲ-ಸಂಗತಿಗಳಿಂದ ಮೋಕ್ಷಬೇಡ!!
ಹುಟ್ಟಿ-ಸಾವುಗಳ ನಡುವಿನ ಬದುಕೇ ಸಕ್ಕತ್.
ಸತ್ತ ಬಳಿಕ ಏನಿದ್ದರೇನು? ಏನಿಲ್ಲದಿದ್ದರೇನು?
U R ಕೃಷ್ಣಮೂರ್ತಿ ಬಗ್ಗೆ ಓದಬೇಕು.!!
- ಮಾಯ್ಸ !!
ಉ: ೪ ಹಂತಗಳು
ನಾನು ೨ ಮತ್ತು ೩ ನೆ ಹಂತದಲ್ಲಿ ಟಾಗಲ್ ಆಗ್ತ ಇರ್ತಿನಿ
-ನಿಮ್ಮ ಬೆಂಬಿಡದ ಬೇತಾಳ .....
ಉ: ೪ ಹಂತಗಳು
ಒಟ್ನಲ್ಲಿ ಏನೋ ಚನ್ನಾಗಿಲ್ಲ ಅಂತವೇ?
ಲೈಪಲ್ಲಿ confusion ಜಾಸ್ತಿ ಆದರೆ ಹಿಂಗಾಗುತ್ತೆ, ಅನ್ಸತ್ತೆ!! ಬಹಳ ಯೋಚನೇ ಮಾಡ್ತಿರೋ ಪಾಡದು!!
- ಮಾಯ್ಸ !!
ಉ: ೪ ಹಂತಗಳು
ಇಲ್ಲ, ಒಟ್ಟಿನಲ್ಲಿ ಏನೊ ಒಂದು ಚೆನ್ನಾಗಿರುತ್ತ್ತೆ ಅಂತ !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ೪ ಹಂತಗಳು
ನಾನು ಪರವಾಗಿಲ್ಲ ; ಜಗತ್ತು ಚೆನ್ನಾಗಿ ಇದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ೪ ಹಂತಗಳು
MNS Rao
ಇಂಗ್ಲೀಷಿನಲ್ಲಿ i am OK you are OK ಅಂತ ಒಂದು ಪುಸ್ತಕ ಇದೆ. ಅದರಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ. ಚೆನ್ನಾಗಿದೆ. ಓದಿ ನೋಡಿ.
ಉ: ೪ ಹಂತಗಳು
ಜಿಡ್ಡೂ ಕೃಷ್ಣ ಮೂರ್ತಿ ಒ೦ದು ಪುಸ್ತಕ ಬರೆದಿದ್ದಾರೆ, ಅದರ ಹೆಸರು "You are the world".
ನಾನು ಬೇರೆ ಈ ಪ್ರಪ೦ಚ ಬೇರೆ ಎನ್ನುವ ಮಾಯೆ ಮನಸ್ಸು ಸೃಷ್ಟಿ ಮಾಡಿರುತ್ತದೆ.
ಈ ಪ್ರಪ೦ಚ ಚೆನ್ನಾಗಿದೆ, ದು:ಖಕರ, ಸ್ವರ್ಗ ಇತ್ಯಾದಿ ಅನ್ನುವ ಪಾಶ್ಚಾತ್ಯ ವಿಚಾರಗಳಿಗಿನ್ನಾ ಭಿನ್ನ ವಾದ ವಿಚಾರ ಇವರದು.
ಮೊದಲು "ನಾನ್ಯಾರು " ಎ೦ಬ ಸತ್ಯವನ್ನು ತಿಳಿಯದೆ ಪ್ರಪ೦ಚದ ಸತ್ಯವನ್ನು ತಿಳಿಯ್ ಲು ಹೋದಾಗ ದೊರೆಯುವುದು
ದ್ವ೦ದಮಯ ಉತ್ತರಗಳು. ಆ ಸತ್ಯವನ್ನು ವಿಚಾರ ಮತ್ತು ಅ೦ತರ೦ಗ ಪಯಣದಿ೦ದ ತಿಳಿಯಬೇಕು ಎ೦ಬುದು ಜಿಡ್ಡೂ ಅವರ ವಿಚಾರ.
ಈ ಕೊ೦ಡಿಯಲ್ಲಿ ಅವರ ಪರಿಚಯವಿದೆ :
http://www.kfa.org/video/you_are_the_world.wmv
ಈ ಪುಸ್ತಕವನ್ನು ಪೂರ್ತಿ ಯಾರೋ ಮಹಾತ್ಮರು ಇಲ್ಲಿ ಹಾಕಿದ್ದಾರೆ, ಓದಿ :
http://www.freeweb.hu/tchl/you_are_the_world/1968-10-18_you_are_the_worl...
ಇನ್ನು ಅವರ ಪೂರ್ಣ ಬರವಣಿಗೆಯನ್ನು ಇಲ್ಲಿ ನೀವು ಓದಬಹುದು.
There are the whole separate worlds, the ideological divisions of the Hindu, the Muslim, the Christian and the Communist, which have brought about such incalculable harm, such hatred and antagonism. All ideologies are idiotic, whether religious or political, for it is conceptual thinking, the conceptual word, which has so unfortunately divided man.
ಉ: ೪ ಹಂತಗಳು
"U R ಕೃಷ್ಣಮೂರ್ತಿ ಬಗ್ಗೆ ಓದಬೇಕು.!!
- ಮಾಯ್ಸ !! "
-UG ಅಥವಾ ಜಿಡ್ಡು ಕೃಷ್ಣಮೂರ್ತಿ ಓದಿ ಅಥವಾ ತುಂಬಾ ಸರಳವಾದ ರಮಣ ಮಹರ್ಷಿ ಓದಿ! ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗಬಹುದು / ಹೊಸ ಪ್ರಶ್ನೆಗಳು ಹುಟ್ಟಬಹುದು.
ಉ: ೪ ಹಂತಗಳು
ಯಾಕ್ರಪ್ಪ ? ಎಲ್ಲರು ಮಠ ಸೇರಿಕೊಳ್ಳೊ ಯೋಚನೆಲಿ ಇದ್ದಿರಾ !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ೪ ಹಂತಗಳು
ಬೇತಾಳಯ್ಯ
UG ಓದಪ್ಪ. ನಿಂಗೆ ಮೋಕ್ಸ ಸಿಗತ್ತೆ
http://ugkrishnamurti.com/
- ಮಾಯ್ಸ !!
ಉ: ೪ ಹಂತಗಳು
ನಟ ಬಯಂಕರ ವೆಬ್ ಸೈಟ್ , ಪುಲ್ ಓ ಎಚ್ ಟಿ (OHT - Overhead Transmission)
-ನಿಮ್ಮ ಬೆಂಬಿಡದ ಬೇತಾಳ .....
ಉ: ೪ ಹಂತಗಳು
ಬೇತಾಳಯ್ಯ ಒಸಿ ನಮ್ಗೆ ತಿಳಿಯೋ ಹಂಗೆ ಮಾತಾಡಪ್ಪ...
ನಿನ್ ಮಾತು ತಲೆಗಿಳಿತಾ ಇಲ್ಲ!
ಅದು ಸರಿ ನೀನ್ ಯಾವ ಮರಕ್ಕೆ ನೇತುಹಾಕಿಕೊಂಡಿರೋದು?
- ಮಾಯ್ಸ !!
ಉ: ೪ ಹಂತಗಳು
ಇಲ್ಲಿ ಸಮಾಜ ಮತ್ತು ಮನುಷ್ಯನ ಸ೦ಬ೦ಧವಾಗಿ ಉತ್ತಮ ಲೇಖನವಿದೆ ! ಓದಿ !
http://jiddu-krishnamurti.net/en/commentaries_on_living_series_1/1956-00...
ಉ: ೪ ಹಂತಗಳು
ನಾ ಚಲೋ ಅದನಿ, ಜಗತ್ ಇನ್ನ ಚಲೋ ಐತಿ. ಏನ್ ಮಾಡಿದ್ರ ನಮಗ್ ಕೆಟ್ ಅನ್ನಸ್ತೈತೋ ಅದನ್ ನಾವ್ ಬ್ಯಾರೇದಾವ್ರಿಗ್ ಮಾಡಾಕ್ ಹೊಗಬಾರದು. ಹಾಂಗ್ ನೋಡಿದ್ರ್ ಜಗತ್ತ ಒಂದ್ ಬ್ರಮೆ. ಶಂಕರಾಚಾರ್ಯರು ಹೆಳಿದಾಂಗ ನಾ ಅನ್ನುದೊಂದೇ ನನ್ನಿ(=ಸತ್ಯ-ತಿಳಿಗನ್ನಡ ನುಡಿವಣಿಗಳು ನೋಡಿ), ಉಳಿದೆಲ್ಲಾನು ಸುಳ್. ಮತ್ತು ನಾನ ದೇವ್ರು. ಉಪೇಂದ್ರ ಸ್ಟೈಲ್ "I am god, God is great"