ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ASHMYA ರವರ ಬ್ಲಾಗ್

ಫಲಿಸಿದ ಪ್ರೇಮ

July 30, 2008 - 10:05am — ASHMYA

ಪುಷ್ಪಳ ಅಳು ನಿಲ್ಲೋ ಹಾಗೆ ಕಾಣ್ತಿರ್ಲಿಲ್ಲ.ನಾವು ಬಂದಾಗಿನಿಂದ ಒಂದೆ ಸಮನೆ ಅಳ್ತಾನೆ ಇದ್ದಾಳೆ.ಅವರ ಮಾವ,ಮಾವನ ಮಗ,ಅಪ್ಪ,ಚಂದ್ರು ಎಲ್ಲರ ಎಲ್ಲಾ ಪ್ರಶ್ನೆಗಳಿಗೂ ಅಳುವೊಂದೆ ಉತ್ತರವಾಗಿತ್ತು.ಪಾ..ಪ..ಅವಳೇನು ಮಾಡಿಯಾಳು..ಪ್ರಶ್ನೆಗಳು ಹಾಗೆ ಇದ್ದವು.ಅವರ ಅಪ್ಪ,'ಪುಷ್ಪ,ನಿನಗೆ ನಾನ್ ಬೇಕಾ ಅವನು ಬೇಕಾ?' ಅಂದ್ರೆ,ಚಂದ್ರು,'ಪುಷ್ಪ,ನೀನು ಬೇಡ ಅಂದ್ರೆ ನಾನು ಹೊರಟೋಗ್ತೀನಿ' ಅಂತ.
ಅಲ್ಲಿ ನಡೀತಾ ಇದ್ದದ್ದು ಪುಷ್ಪ,ಚಂದ್ರಶೆಖರ್ ಮದುವೆ ಮಾತುಕತೆ.ಅದನ್ನೇನು ಮದುವೆ ಮಾತುಕತೆ ಅನ್ನಬೇಕೋ ಅಥವ ಇನ್ನೇನೊ ಗೊತ್ತಿಲ್ಲ.ನಾನು ಏನೋ ಭಂಡ ಧೈರ್ಯ ಮಾಡಿ,ಪುಷ್ಪ,ಚಂದ್ರುವಿಗೆ ಧೈರ್ಯಕ್ಕಾಗಿ ಜೊತೆಯಾಗಿ ಹೋಗಿದ್ದೆ.ಆದರೆ ನಿಜವಾಗಲು,ಅವರಿಬ್ಬರಿಂತ ನಾನೇ ಹೆಚ್ಚು ಹೆದರಿದ್ದೆ.ಪುಷ್ಪ, ನಾನು ಇಲ್ಲಿಗೆ ಬಂದಾಗಲಿಂದ ನನ್ನ ಜೊತೆಗಿದ್ದಾಳೆ.ಚಂದ್ರು,ಪುಷ್ಪಳ ಪ್ರೇಮಿ ಅಂತ ಈವಾಗಾಗ್ಲೆ ನಿಮ್ಮೆಲ್ಲಾರಿಗು ಗೊತ್ತಾಗಿದೆ.ಎಲ್ಲರ ಹಾಗೆ ಅವ್ರಿಬ್ಬರ ಮಧ್ಯೆ ಒಂದು ಪ್ರೇಮ ಕತೆಯಿದೆ.ಪುಷ್ಪಳಿಗೆ ಚಂದ್ರು ಪರಿಚಯವಾದದ್ದು ಶಾಲೆಯ ದಿನಗಳಲ್ಲಿ.ಇಬ್ಬರು ಒಂದೆ ಊರು ಒಂದೇ ಕೇರಿಯಾದ್ದರಿಂದ,ಇಬ್ಬರು ಒಬ್ಬರನ್ನೊಬ್ಬರು ಹೆಚ್ಚೆಚ್ಚು ನೋಡಸಿಗುತ್ತಿದ್ದರಿಂದ,ಆಗಷ್ಟೇ ಪ್ರಾಯಕ್ಕೆ ಬರುತ್ತಲಿದ್ದರಿಂದಲೋ ಏನೋ ಚಂದ್ರುವಿಗೆ ಪುಷ್ಪಳ ಮೇಲೆ ಪ್ರೀತಿ ಬಂದಿದೆ.ಒಂದು ದಿನ ಅವನು ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ.ಆದ್ರೆ ಪುಷ್ಪ,ಅವನಿನ್ನೂ ಜೀವನದಲ್ಲಿ ಒಂದು ನೆಲೆ ಕಂಡಿಲ್ಲ ಎಂಬ ಕಾರಣ ಕೊಟ್ಟು,ಅವನನ್ನು,ಅವನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ.ಅವತ್ತಿಗೆ ಚಂದ್ರು ಅವಳನ್ನ ಮರೆತಿದ್ದರೆ,ಈ ಕತೆ ಇರುತ್ತಿರಲಿಲ್ಲ.ಆದರೆ ಅವನು ಮದುವೆ ಆದ್ರೆ ಅವಳನ್ನೆ ಆಗೋದು ಅಂತ ನಿರ್ಧರಿಸಿದ್ದ.ಚಂದ್ರು ಆಗಿನ್ನೂ ದಿಪ್ಲೊಮಾ ಮುಗಿಸಿದ್ದ.ಅವರ ಮನೆ ಕಡೆ ಅಷ್ಟೊಂದು ಅನುಕೂಲ ಇಲ್ಲದಿದ್ದರಿಂದ,ಕೆಲಸಕ್ಕೆ ಸೇರಬೇಕಾಗಿ ಬಂತು.ಆದ್ರೆ ಅವನಿಗೆ ಗೊತ್ತಿತ್ತು,ಈ ಸಣ್ಣ ಕೆಲಸ ಇಟ್ಟುಕೊಂಡು ಪುಷ್ಪಳಚ್ ಮುಂದೆ ಹೋಗೋದ್ರಿಂದ ಪ್ರಯೋಜನ ಇಲ್ಲ ಅಂತ.ಪಾರ್ಟ್ ಟೈಮ್ ಎಂಜಿನಿಯರಿಂಗ್ ಓದಿದ ನಂತರವಷ್ಟೆ ಅವಳ ಬಳಿ ಬಂದ.ಈ ಸಲ ಅವಳಿಗೆ ಅವನನ್ನ ಬೇಡ ಅನ್ನಲು ಕಾರಣಗಳಿರಲಿಲ್ಲ.ಅವಳು ಅಸ್ತು ಅಂದಳು.ಎಲ್ಲ ಹುಡುಗರ ಹಾಗೆ ಚಂದ್ರು ಕೂಡ ಅವರಮ್ಮನಿಗೆ ತುಂಬ ಹತ್ತಿರ.ತನ್ನೆಲ್ಲಾ ವಿಷಯಗಳನ್ನು ಅಮ್ಮನ ಬಳಿ ಹೇಳಿಕೊಳುತ್ತಿದ್ದ ಚಂದ್ರು ಪುಷ್ಪಳ ಬಗ್ಗೆಯೂ ಹೇಳಿದ್ದ.ಎಲ್ಲಾ ಹುಡುಗರ ಅಮ್ಮಂದಿರ ಹಾಗೆ, ಅವನಮ್ಮನು ಸಹ ಮಗನ ಸಂತೋಷವೇ ತನ್ನ ಸಂತೋಷ ಎಂದು ತುಟಿಯಂಚಿನಲ್ಲಿ ನಕ್ಕು, ಸೆರಗಂಚಿನಲ್ಲಿ ಕಣ್ಣೊರೆಸಿಕೊಂಡಿದ್ದರು.
ಚಂದ್ರುವಿನ ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು.ಇಬ್ಬರಿಗೂ ಇಲ್ಲೇ ಕೆಲಸ ಸಿಕ್ಕಿದ್ದರಿಂದ ಇಬ್ಬರೂ ಇಲ್ಲಿಗೆ ಬಂದರು.ಪುಷ್ಪ ನನ್ನ ರೂಂ ಮೇಟ್ ಆದಳು.ಚಂದ್ರು ತನ್ನ ಗೆಳೆಯರ ಜೊತೆ ರೂಂ ಹಿಡಿದ.ಹೀಗೆ ನನಗೆ ಸಿಕ್ಕ ಪುಷ್ಪ,ಬಿಡುವಿನ ವೇಳೆಯಲ್ಲಿ ನನಗೆ ಬಿಡಿ ಬಿಡಿಯಾಗಿ ಹೇಳಿದ್ದನ್ನೆಲ್ಲಾ ನಿಮಗೆ ಹೇಳಿಯಾಯಿತು.ಇನ್ನು ಮುಂದೇನಾಯ್ತು ಅನ್ನೋದು..
ಇಲ್ಲಿಗೆ ಬಂದ ಇಬ್ಬರು ಕೆಲಸಕ್ಕೆ,ಔಟಿಂಗೆ ಅಂತ ಆರಾಮಾಗಿ ಎರಡು ವರ್ಷ ಕಳೆದರು.ಪುಷ್ಪ ಒಳ್ಳೆಯ ಹುಡುಗಿ.ಹರಳು ಹುರಿದಂತೆ ಮಾತನಾಡುತ್ತಾಳೆ,ಎಲ್ಲರನ್ನು ಮಾತಿಗೆ ಎಳೆಯುತ್ತಾಳೆ.ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳೋದಿಲ್ಲ.ಈಗ ಪುಷ್ಪಳ ಮದುವೆಯ ವಯಸ್ಸು.ಅವಳ ಮನೆಯಲ್ಲಿ 'ವರಾನ್ವೇಷಣೆ' ಶುರುವಾಯಿತು.ಇನ್ನು ತಡ ಮಾಡಲಾಗದೆ,ಪುಷ್ಪ ಮನೆಯಲ್ಲಿ ವಿಷಯ ಹೇಳಿದಳು.ಅದರ ಪರಿಣಾಮವೇ ನಾನೀಗ ಇಲ್ಲಿ ನಿಂತಿರೋದು.ಸುಮಾರು ನಾಲ್ಕು ಗಂಟೆಗಳ ಸತತ ಮಾತುಕತೆಯಿಂದ,ಪುಷ್ಪ ತನ್ನ ತಂದೆ ತಾಯಿ ಜೊತೆ ಊರಿಗೆ ವಾಪಸ್ಸು ಹೋಗೋದು ಅಂತ ತೀರ್ಮಾನವಾಯಿತು.ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದು,ಅವರ ಮಾವನ ಮಗನ ಚಾಲಾಕಿತನ .ಅವನೆ ಪುಷ್ಪಳಿಗೆ ಸುಮಾರು ಎರಡು ಗಂಟೆ ರೂಮಿನಲ್ಲಿ ಬೋಧಿಸಿ(ಬಂದಿಸಿ,ಬೆದರಿಸಿ) ನಂತರ ಅವಳು ನಮ್ಮ ಬಳಿ ಬಂದು,'ನೀವಿಬ್ಬರು ಹೊರಡಿ,ನಾನು ಅಪ್ಪನ ಜೊತೆ ಊರಿಗೆ ಹೋಗ್ತೀನಿ.ಆರು ತಿಂಗಳ ನಂತರ ಅಪ್ಪ ಅಮ್ಮನನ್ನು ಒಪ್ಪಿಸಿ ಕಾಲ್ ಮಾಡ್ತೀನಿ' ಎನ್ನುವಂತೆ ಮಾಡಿದ್ದು! ನನಗೆ ಗಾಬರಿ ಆಯ್ತು.ಅಲ್ಲ,ಈಗ ಒಪ್ಪಿಸಲಿಕ್ಕೆ ಆಗದ್ದು ಇನ್ನು ಆರು ತಿಂಗಳು ಕಳೆದ ನಂತರ ಯಾವ ಪವಾಡದಿಂದ ಸಾಧ್ಯ ಅಂತ?ಅಲ್ಲದೆ ಮುಂಚಿಂದ ಇವರಿಬ್ಬರ ಪ್ರೀತಿಗೆ ಬೆಂಬಲ ಸೂಚಿಸುತ್ತಿದ್ದ ಪುಷ್ಪಳ ಅಣ್ಣ ಇಷ್ಟೆಲ್ಲ ಮಾತುಕತೆ ನಡೆಯುವಾಗ ಏನು ಮಾತನಾಡದೆ ಉಳಿದಿದ್ದ.ಅಂದರೆ ಅವನ ಬೆಂಬಲವೂ ಇಲ್ಲ ಎನ್ನುವುದು ಖಾತ್ರಿಯಾದಂತೆಯೇ.ನಾನು ಇದೆನೆಲ್ಲಾ ಯೋಚಿಸುತ್ತಿರಬೇಕಾದರೆ, ಚಂದ್ರು ಆ ಆರು ತಿಂಗಳ ಕರಾರಿಗೆ ಒಪ್ಪಿಯಾಗಿತ್ತು!ಕರಾರಿನ ಪ್ರಕಾರ ಅವರಿಬ್ಬರು ಇನ್ನು ಮುಂದೆ ಭೇಟಿಯಾಗುವುದಾಗಲಿ,ಫೋನ್ ಮಾಡುವುದಾಗಲಿ ಮಾಡುವಂತಿರಲಿಲ್ಲ.ದಿನ ಒಬ್ಬರನ್ನೊಬ್ಬರು ನೋಡದೆ ಇರಲಿಕ್ಕಾಗದವ್ರು,ದಿನಕ್ಕೆ ಹತ್ತು ಸರ್ತಿ ಕಾಲ್ ಮಾಡಿ ಮಾತನಾಡುತ್ತಿದ್ದವರು,ಇಂತಹ ಒಂದು ಕರಾರಿಗೆ ಹೇಗೆ ಒಪ್ಪಿದರೆನ್ನುವುದು ನನಗೆ ಅರ್ಥವಾಗಲೇ ಇಲ್ಲ!ಇನ್ನೇನು ಎಲ್ಲರನ್ನು ಒಪ್ಪಿಸಿ ಮದುವೆ ದಿನ ನಿಶ್ಚಯಿಸಿಯೆ ಬರುವುದೆಂದುಕೊಂಡು ಹೋಗಿದ್ದ ನಾವಿಬ್ಬರು ಪೆಚ್ಚು ಮೋರೆ ಹಾಕಿಕೊಂಡು ಹೊರಗೆ ಬಂದೆವು.ಹಸಿವಿನಿಂದ ಕಂಗೆಟ್ಟಿದ್ದ ಇಬ್ಬರೂ ಏನು ಮಾತನಾಡದೆ,ಹೊಟ್ಟೆಗೆ ಏನಾದರು ಹಾಕಲು ಹತ್ತಿರದಲ್ಲಿದ್ದ ಹೋಟೆಲಿಗೆ ಹೋಗಿ ಕುಳಿತೆವು. ನಾನು ಚಂದ್ರುವಿಗೆ 'ಅಲ್ಲೊ ಮಾರಾಯ...ಯಾವ ನಂಬಿಕೆ ಮೇಲೆ ಆರು ತಿಂಗಳಿಗೆ ಒಪ್ಪಿಕೊಂಡು ಬಂದೆಯೊ?ಅಷ್ಟರೊಳೊಗೆ ಅವರು ಅವಳಿಗೆ ಬೇರೆ ಮದುವೆ ಮಾಡಿಬಿಟ್ಟರೆ ಏನೋ ಮಾಡ್ತೀಯ' ಅಂತೆಲ್ಲ ಕೇಳ್ತಾ(ಕೋರೀತಾ,ಕೆರಳಿಸ್ತಾ) ಇದ್ದೆ.ಅವನು ಏನೂ ಮಾತನಾಡದೆ ಸುಮ್ಮನೆ ತಟ್ಟೆ ನೋಡ್ತಾ ಕೂತಿದ್ದ.ಪಾಪ ಅವನು ತಾನೆ ಏನ್ ಮಾಡ್ತಾನೆ?ಬೆಳಗ್ಗೆ ಇಂದ ಒಂದೇ ಸಮನೆ ಬೈಗುಳಗಳ,ಬುದ್ದಿಮಾತುಗಳ ಮಳೆ ಸುರಿಸ್ಕೊಂಡಿದ್ದಾನೆ.ನಾನು ಸಹ ತಲೆ ತಿನ್ನುವುದು ಬೇಡ ಅಂತ ಸುಮ್ಮನಾದೆ.ಊಟವಾದ ಬಳಿಕ ಇಬ್ಬರು ಅವರವರ ರೂಂ ಸೇರಿಕೊಂಡೆವು.
ಸಂಜೆಯಾಗುತ್ತಲೆ ಪುಷ್ಪ ನನಗೆ ಕಾಲ್ ಮಾಡಿ ಚಂದ್ರುವಿನ ರೂಂ ಬಳಿ ಬರಹೇಳಿದಳು.ನಾನು ಯಾಕೆ ಏನು ಕೇಳಿದರೆ,'ಬೇಗ ಬಾ ತುಂಬ ಅರ್ಜೆಂಟ್' ಎಂದಷ್ಟೆ ಉಸುರಿದಳು.ನನ್ನ ರೂಂ ಇಂದ ಅಲ್ಲಿಗೆ ಹತ್ತು ನಿಮಿಷಗಳ ದೂರ.ನಾನಲ್ಲಿಗೆ ಹೋಗಿ ಏನಾಯಿತೆಂದು ನೋಡಿದರೆ,ಪುಷ್ಪ ಮತ್ತೆ ಅಳಲು ಶುರುವಿಟ್ಟಿದ್ದಳು.ಪುಷ್ಪ ಇಲ್ಲಿಗೆ ಹೇಗೆ,ಯಾಕೆ ಬಂದಳೆನ್ನುವುದು ತಿಳಿಯದೆ ತಬ್ಬಿಬ್ಬಾದೆ.ಚಂದ್ರು ಹೇಳಿದ,ನಾವಿಬ್ಬರು ಬಂದ ಮೇಲೆ,ಪುಷ್ಪಳ ಅಪ್ಪ ಮತ್ತು ಅವರ ಮಾವ ಅವಳಿಗೆ ತುಂಬ ಹೊಡೆದು ಒಂದು ರೂಮಿನಲ್ಲಿ ಬಂಧಿಸಿದ್ದರಂತೆ. ಅವಳ ಅಣ್ಣ ಅವಳ ರೂಮಿನ ಬಾಗಿಲು ತೆಗೆದು,ಅವಳಿಗೆ ಓಡಿ ಹೋಗಲು ಹೇಳಿದರಂತೆ!ನನಗೆ ನನ್ನ ಕಿವಿಗಳನ್ನೆ ನಂಬಲಾಗದೆ,ಮತ್ತೆ ಪುಷ್ಪಳ ಬಾಯಿಂದ ಎಲ್ಲ ಕೇಳಿ,ಸಿನಿಮೀಯ ರೀತಿಯಲ್ಲಿ ಅವಳಿಗೆ ಸಹಾಯ ಮಾಡಿದ ಅವಳ ಅಣ್ಣನಿಗೆ ಮನದಲ್ಲೆ ನಮಿಸಿದೆ.
ಇಂದು ಬೆಳಗ್ಗೆ ಪುಷ್ಪ ಚಂದ್ರುರ ಮದುವೆ.ಅಪ್ಪ,ಅಮ್ಮ,ಬಂಧು,ಬಳಗ ಯಾರು ಇಲ್ಲದೆ,ಕೆಲವೆ ಸ್ನೆಹಿತರ ಮಧ್ಯದಲ್ಲಿ ಮದುವೆಯಾಗುವುದಕ್ಕೆ ಅವರಿಗೆ ಅನಾಥ ಭಾವ ಕಾಡುತ್ತೊ ಇಲ್ಲವೊ,ಪುಷ್ಪ ಇಲ್ಲದ ರೂಮಿನಲ್ಲಿ ನನಗಂತು ಅನಾಥ ಭಾವ. ಅವರಿಬ್ಬರ ಬಾಳು ಹಸನಾಗಿರಲಿ.

~.~
  • ASHMYA ರವರ ಬ್ಲಾಗ್
  • Login or register to post comments
  • 225 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ
  • ಕತೆಯಾಗದ ಹುಡುಗಿ
  • ಪರಾಗ ಸ್ಪರ್ಶ
  • "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
  • ಏನಿಡಲಿ ಹೆಸರಾ?
Syndicate content

ಲೇಖಕರು

ASHMYA's picture

ಪೂರ್ಣ ಹೆಸರು
Ashmya

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 117 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator