ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಒಂದು ಸುಳ್ಳು
ರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ.
ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ...

- Aravinda ರವರ ಬ್ಲಾಗ್
- Login or register to post comments
- 289 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಒಂದು ಸುಳ್ಳು
ಅಮ್ಮ ಸಂಪದ ಓದೋಲ್ಲ ಅಂತ ಖಾತ್ರಿ ಮಾಡ್ಕೊಂಡಿದೀರಾ ತಾನೇ?
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಒಂದು ಸುಳ್ಳು
ಅಮ್ಮ ಸಂಪದ ನೋಡಲ್ಲ, ಆದರೆ ನನ್ನ ಮನಸೇ ಕೇಳಲ್ಲ... ಊರಿಗೆ ಹೋದಾಗ ಹಿಂಗೆ ಹೇಳಿದ್ದೆ, ಸಂಪದದಲ್ಲಿ ಹಿಂಗೆಲ್ಲಾ ಬರೆದಿದ್ದೆ ಅಂತ ತೋರಿಸ್ತೀನಿ
ನಿಮ್ಮವನೇ,
ಅರವಿಂದ
ಉ: ಒಂದು ಸುಳ್ಳು
ಅದರಲ್ಲೇನು, ರಾತ್ರಿ ಹತ್ತು ಗಂಟೆ ಕಾಮನ್,.. ನಮ್ಮದು ಅಸ್ಟೊತ್ತಿಗೆ ಅನ್ನ ರೆಡಿ ಇದ್ದು, ಸಾಂಬಾರು ಆಗುತ್ತಾ ಇರುತ್ತದೆ.. ಯಾಕಿಸ್ಟು ತಡ ಅಂದರೆ,.. ಇಲ್ಲೆಲ್ಲಾ ಇಸ್ಟೊತ್ತಲ್ಲೇ ಮಂದಿಯ ಊಟ ಅನ್ನಿ, ಅಮ್ಮ ತಿಳ್ಕೋತಾರೆ...

ಉ: ಒಂದು ಸುಳ್ಳು
ಮಳೇಲ್ ನೆಂದು ತೊಪ್ಪೆಯಾಗಿ ಮನಗೆ ಬಂದು ಮಿಂದು ಕಂಪ್ಯೂಟರ್ ಮುಂದೆ ಕುಳಿತು ಸಂಪದ ಓದುತ್ತಿರುವಾಗ ಈ ಕಾಮೆಂಟು ಇವತ್ತು ಇನ್ನೂ ಊಟ ಮಾಡಿಲ್ಲವೆಂಬುದನ್ನ ನೆನಪಿಸಿ ಓಡಿಸಿತು ಅನ್ನೋದನ್ನ ಲಾಗ್ ಮಾಡಿ ಹೊರಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಒಂದು ಸುಳ್ಳು
ಈ ತರ ಸುಳ್ಳುಗಳು ನಮ್ಮದು ಇದ್ದಿದ್ದೇ
ಉ: ಒಂದು ಸುಳ್ಳು
ಒಂದು ತಂಗಳು ಪೆಟ್ಟಿಗೆ(fridge) ಮತ್ತು ಒಂದು ಮೈಕ್ರೋವೇವ್ ತೊಗೊಳ್ಳಿ. ವಾರಾಂತ್ಯ ಅಡುಗೆ ಮಾಡಿ, ಹಸಿವಾದಾಗ ಬಿಸಿ ಮಾಡಿಕೊಂಡು ತಿನ್ನಿ. ಪ್ರಾಬ್ಲಂ ಸಾಲ್ವ್ಡ್:-)
~ಕಲ್ಪನ
ಉ: ಒಂದು ಸುಳ್ಳು
ಛೆ, ಫ್ರೆಶ್ ಫುಡ್ ಬೇಕು ಫ್ರೆಶ್ ಮಾಡಿಕೊಂಡ ಫುಡ್ ಅಲ್ಲ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಒಂದು ಸುಳ್ಳು
ಅದೇನೋ ಹೇಳ್ತಾರಲ್ಲ, "ಕೆಟ್ಮೇಲೆ ಪಟ್ಣ ಸೇರು" ಅಂತ ಹಂಗಾಯ್ತು ನಿನ್ ಕತೆ. ಅಲ್ಲ, ಆ ನಿಮ್ಮ ಆಫೀಸ್ನೋರಿಗೆ ತಲೇಲ್ ಬುದ್ಧಿ ಇಲ್ವಾ, ಇಷ್ಟೊತ್ತಂಕಾನಾ ಎಂಪ್ಲಾಯೀಸ್ನ ಇಟ್ಕೊಳ್ಳೋದು. ನಮ್ ಕಾಲ್ದಲ್ಲಿ ಹಿಂಗಿರಲಿಲ್ಲ, ಸಂಜೆ ೫ ಗಂಟೆ ಆಯ್ತೂಂದ್ರೆ, ಆಫೀಸ್ ಬಿಟ್ಟು, ಆರಾಮಾಗಿ ನಾಟ್ಕಕ್ಕೋ, ಸಿನಿಮಾಕ್ಕೋ, ಫ್ರೆಂಡ್ಸ ಜೊತೆ ಹರಟೆ ಹೊಡ್ಯೋಕ್ಕೆ ಹೋಗ್ತಿದ್ವಿ, ಎಷ್ಟ ಚೆನ್ನಾಗಿತ್ತು ಆ ಕಾಲ. ಈಗಿನ ಕಾಲದ ಮಕ್ಳಿಗೆ ಜನ, ಸಂಪರ್ಕ ಏನೂ ಬೇಡ. ಬರೀ ಮೂರೊತ್ತು ಕೂತ್ಕೊಂಡು ಕುಟ್ತಾ, ಕಿಸೀತಾ ಇರೋದು. ಅದೇನ್ ಮೋಡಿ ಮಾಡತ್ತೋ.
ಹೋಗ್ಲಿ, ಬೆಳಗ್ಗೇನೆ ಒಂಚೂರು ಅನ್ನ ಮಾಡ್ಕೊಂಡ್, ಕುಕ್ಕರಲ್ಲೋ, ಹಾಟ್ಬಾಕ್ಸಲ್ಲೋ ಇಟ್ಹೊಗಕ್ಕೆ ಏನು ಧಾಡಿ. ಇಂಥ ಸಮಯಕ್ಕೆ ಅಂತ, ಮ್ಯಾಗಿ ಗೀಗಿ, ದೋಸೆ ಹಿಟ್ಟೋ ತಂದಿಟ್ಕೊಂಡಿರು. ಅಲ್ಲಿ ಇಲ್ಲಿ ತಿಂದು ಆರೋಗ್ಯ ಹಾಳ್ಮಾಡ್ಕೋಬೇಡ. ಆರೋಗ್ಯ ಹಾಳಾದ್ರೆ ಒಣಕಲ್-ಕಡ್ಡಿ ಆಗ್ಬಡ್ತೀಯ. ನಾಳೆ ಏನಾದ್ರು ಹೆಚ್ಚು ಕಡ್ಮೆ ಆದ್ರೆ, ಯಾರ್ ಬಂದ್ ಮಾಡ್ತಾರೆ. ಅದ್ಕೆ, ಅವತ್ತಿಂದ ಹೇಳ್ತಾನೇ ಇದ್ದೀನಿ, ನೀನೂ ಒಂದು .....ಗೊತ್ತಾಯ್ತಾ, ದೊಡ್ಡೋರು ಯಾಕೆ ಬುದ್ಧಿ ಹೇಳ್ತಾರೆ ಅಂತ.
ಉ: ಒಂದು ಸುಳ್ಳು
ಆಂ....
ನಿಮ್ಮವನೇ,
ಅರವಿಂದ
ಉ: ಒಂದು ಸುಳ್ಳು
ಜಗತ್ತಿನ ಎಲ್ಲ ತಾಯಂದ್ರೂ ಹಾಗೇನೇ ,
ರಾಮಾಯಣದಲ್ಲಿ ಶ್ರೀ ರಾಮಚಂದ್ರ ಪಟ್ಟಕ್ಕೆ ಏರಬೇಕಾದಾಗ ತಾಯಿಯ ಭೆಟ್ಟಿಗೆ ಹೋದಾಗ ಅವಳು ಮೊದಲು ಕೇಳಿದ್ದೂ ಹೀಗೇನೇ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"