ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಕಮಲಾ ದಾಸ್ ಮತ್ತು ಸಿಂಹ

Kamala Dasಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಈ ಕತೇನ ನೆನಪಿಂದ ಹೇಳ್ತಾ ಇದ್ದೀನಿ. ಯಾಕೆಂದರೆ ಕಮಲಾ ದಾಸ್ ಬರೆದ ‘ದ ಸೈನ್ ಆಫ್ ಎ ಲಯನ್’ ಎಂಬ ಕತೆಯನ್ನು ಯಥಾವತ್ತಾಗಿ “ಸಿಂಹ” ಅಂತ ಕನ್ನಡಿಸಿ ೧೯೮೮ರಲ್ಲಿ ನಾಟಕ ಮಾಡಿದ್ದೆವು. “ಬೆನಕ”ದ “ಮಂಡೇ ಥೇಟರ್‍” ಅನ್ನೋ ಇಂಟಿಮೇಟ್ ಸಭಾಂಗಣದಲ್ಲಿ. ಬೆನಕದ ನಟಿ ವೀಣಾ ಒಬ್ಬಾಕೆಯೇ ಪ್ರಭಾವಶಾಲಿಯಾಗಿ ನಟಿಸಿದ್ದ ಪ್ರಯೋಗ ಅದು. ಇಪ್ಪತ್ತೈದು ಜನರಷ್ಟೇ ಸುತ್ತ ಕೂತು ನೋಡಬಹುದಾದ ಆ ಪ್ರಯೋಗ ಹಲವರನ್ನು ದಿಗ್ಭ್ರಮೆಗೊಳಿಸಿತು. ಆ ಹೆಣ್ಣಿನ ಒಳಪಾತಳಿಯನ್ನು ಪಕ್ಕದಲ್ಲೇ ಕೂತು ಅನುಭವಿಸಿದ ಹಾಗೆ ನಾಟಕ ನೋಡಿದವರಿಗೆ ಅನಿಸಿತ್ತು. ಹಾಗೆ ಅನಿಸುವುದರಲ್ಲಿ ಕಮಲಾ ದಾಸ್ ಕತೆಯದು ಹಾಗು ಮಾತುಗಳದು ದೊಡ್ಡ ಪಾತ್ರ. ಆ ಹೆಣ್ಣಿನ ಅಂತರಾಳದ ಮಾತುಗಳು ಹರಿದಾಡುವುದೇ ಸಭ್ಯತೆ ಅಂಚಿನಲ್ಲಿ, ಸಮಾಜ ಒಪ್ಪದ ಅಂತರಂಗದ ತುಡಿತದಲ್ಲಿ.  ಮುಂದೆ ಓದಿ »

~.~

ಮಿಡತೆ ಸಂತೆ ಕತೆ

locust_USFWSಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.  ಮುಂದೆ ಓದಿ »

~.~

ಗುದ್ದಾಡುವ ಮನಗಳು

ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜಿನಿ ಕೆಲಸಗಾರರಿಗೂ ಬಿಳಿಯರಂತೇ ಸಮಾನ ಸಂಬಳ ಕೊಡಬೇಕೆಂಬ ಕಾನೂನು ಬಂದ ಹಿನ್ನೆಲೆಯಲ್ಲಿ ನಡೆಯುವ ಚಿತ್ರ.sept_01

ಹದಿನೈದು ವರ್ಷ ವಯಸ್ಸಿನ ಎಡ್ ಎಂಬ ಬಿಳಿ ಹುಡುಗನ ಹಾಗು ಪ್ಯಾಡಿ ಎಂಬ ಕಪ್ಪು ಹುಡುಗನ ಗೆಳೆತನದ ಚಿತ್ರ. ಎಡ್ ಶಾಲೆಗೆ ಹೋಗಿ ವಾಪಾಸು ಬಸ್ಸಲ್ಲಿ ಬಂದಿಳಿದಾಗ, ಮನೆಯಲ್ಲೇ ಕೆಲಸ ಮಾಡಿಕೊಂಡಿರುವ ಪ್ಯಾಡಿ ಹೋಗಿ ಅವನ ಜತೆ ಮಾತಾಡುತ್ತಾ ಆಟವಾಡುತ್ತಾ ಮನೆಗೆ ಓಡುವುದು ದಿನಚರಿ. ಕಣ್ಣಗಲಕ್ಕೂ ಇರುವ ಗೋಧಿಹೊಲದ ನಡುವೆ ನಾಕು ಕಂಬ ಹುಗಿದುಕೊಂಡು, ಹಗ್ಗ ಕಟ್ಟಿ ಕುಸ್ತಿ ಕಣ ಮಾಡಿಕೊಂಡು, ಒಬ್ಬೊಬ್ಬರು ಒಂದೊಂದು ಗ್ಲವ್ ಹಾಕಿಕೊಂಡು ಕುಸ್ತಿ ಆಡುವುದು ಇಬ್ಬರಿಗೂ ಪ್ರೀತಿ.sept_02

ಅವರ ಅಪ್ಪಂದಿರು ಚಿಕ್ಕಂದಿನ ಗೆಳೆಯರು. ಎಡ್‌ನ ಅಪ್ಪನ ಹೊಲದಲ್ಲಿ ಪ್ಯಾಡಿಯ ಅಪ್ಪ ಕೆಲಸಗಾರ. ಕಾನೂನಿನ ಒತ್ತಡ ಎಡ್‌ನ ಅಪ್ಪನ ಮೇಲೆ ಮಾಡಿದಷ್ಟೇ ಪರಿಣಾಮ ಪ್ಯಾಡಿಯ ಅಪ್ಪನ ಮೇಲೂ ಮಾಡುತ್ತದೆ. ಆದರೆ ಪ್ಯಾಡಿಯ ಅಪ್ಪ ತನ್ನ ಧೀರ್ಘ ಕಾಲದ ಗೆಳೆತನದ ಆಧಾರದ ಮೇಲೆ ಒಂದು ಒಪ್ಪಂದಕ್ಕೆ ಬಂದುಕೊಂಡಿರುತ್ತಾನೆ. sept_05ಅದು ಸುಲಭವಲ್ಲದಿದ್ದರೂ, ಅದರಲ್ಲಿ ಅಪಾರ ನೋವಿದ್ದರೂ ಅವನಿಗೆ ಅನಿವಾರ್ಯವಾಗಿರುತ್ತದೆ. ಈ ಕಾನೂನಿನಿಂದಾಗಿ ಹಲವು ಕುಟುಂಬಗಳು ಹೊಲಗಳಿಂದ ಎತ್ತಂಗಡಿಯಾಗುತ್ತಿರುವುದು ಅವನ ಕಣ್ಣೆದುರಿನ ವಾಸ್ತವ.  ಮುಂದೆ ಓದಿ »

~.~

ಮನದಾಟ

subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

 ಮುಂದೆ ಓದಿ »

~.~
Syndicate content