ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › akshata ರವರ ಬ್ಲಾಗ್

ಲೈಫ್ ಸ್ಟೈಲ್??

August 10, 2008 - 6:59pm — akshata

ಕಳೆದ ವರ್ಷ ನನ್ನ ನಾದಿನಿಯ (ನನ್ನ ಮನೆಯವರ ಮಾವನ ಮಗಳು) ಗಂಡ ರಸ್ತೆಯಲ್ಲಿ ನಡೆಯುತ್ತಿರುವಾಗಲೇ ತಲೆಸುತ್ತು ಬಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಹೇಳಿದ್ದು ಕೇಳಿ ತಲೆಸುತ್ತು ಬರುವ ಸರದಿ ನಮ್ಮದಾಗಿತ್ತು. ಅವರ ಮೆದುಳಿನಲ್ಲಿ ಸಣ್ಣ ಬ್ಲಡ್ ಕ್ಲಾಟ್ ಬಂದಿತ್ತು. ಅವರ ಜೀವನದ ಒಳ್ಳೆಯ ಕರ್ಮವೋ, ದೇವರ ದತೆಯೋ ಅಂತೂ ಇಂತೂ ಅವರನ್ನು ಉಳಿಸಿಕೊಳ್ಳಲು ಡಾಕ್ಟರರಿಗೆ ಯಶಸ್ಸು ಸಿಕ್ಕಿತು. ಆರು ತಿಂಗಲ ಹಿಂದೆ ನಮ್ಮ ಮನೆಯವರ ಜೊತೆ ಕೆಲಸ ಮಾಡುವ ವ್ಯಕ್ತಿಯೊಬ್ಬರಿಗೂ ಹೀಗೆ ಆಗಿ, ಬ್ಲಡ್ ಕ್ಲಾಟ್ ನಿಂದಾಗಿ ಕಿಡ್ನಿಕೂಡ ಫ಼ೇಲ್ ಆಗುವ ಪರಿಸ್ಥಿತಿ ಬಂದು ಅಂತೂ ಇಂತೂ ಅವರನ್ನೂ ಉಳಿಸಿಕೊಳ್ಳಲಾಯಿತು. ಮೂರು ತಿಂಗಳ ಹಿಂದೆ ನನ್ನ ಆಪ್ತ ಗೆಳತಿಯ ಗಂಡ ಆರೋಗ್ಯ ತಪಾಸಣೆಗೆಂದು ಎಲ್ಲ ರಿಪೋರ್ಟ್ಸನ್ನು ತೆಗೆಸಿದಾಗ ಅವರಿಗೆ ತಿಳಿದದ್ದೇನೆ? ಅವರ ಹೃದಯ ಕೇವಲ ೩೦% ಅಷ್ಟೇ ಕೆಲಸ ಮಾಡುತ್ತಿದೆ ಎಂದು ಅವರು ತಕ್ಷಣ ಅವರು ನಂಬುವ ಹಾರ್ಟ ಸ್ಪೆಶಾಲಿಸ್ಟ್ರಲ್ಲಿಗೆ ಹೋದರು ಅವರು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸರಿಯಾಗಿ ತಿಳಿಸದೆ ಅವರ ಪರಿಸ್ಥಿತಿ ಎರಡು ತಿಂಗಳಲ್ಲೇ ಇನ್ನೂ ೧೦% ಹಾಳಾಯಿತು. ದೇವರ ದಯೆಯಿಂದ ಇವರೆಲ್ಲ ಬದುಕುಳಿದರೂ ಈಗ ಬಹಳಷ್ಟು ಡಯಟ್ ಪ್ರೊಗ್ರಾಮನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಮಿದುಳಿನಲ್ಲಿ ಬ್ಲಡ್ ಕ್ಲಾಟ್ ಬರುವುದಕ್ಕೆ, ಹೃದಯದ ಕಾರ್ಯ ಕಡಿಮೆಯಾಗುವುದಕ್ಕೆ ಡಾಕ್ಟರುಗಳಲ್ಲಿರುವುದು ಒಂದೇ ಕಾರಣ ‘ಲೈಫ಼ ಸ್ಟೈಲ್’ .
ಇದನ್ನೆಲ್ಲ ಕೇಳಿ ತಲೆ ಕೆಡಿಸಿಕೊಂಡು ನಿದ್ದೆಯಿಲ್ಲದೆ ಬೇಸರಪಟ್ಟು ದಿನ ಕಳೆಯುತ್ತಿರುವಾಗ ನಮ್ಮ ಮನೆಯವರು ಸಿಗರೇಟ್ ಸೇದುವುದನ್ನು ನೋಡಿ ಅದನ್ನು ಬಿಟ್ಟಿಬಿಡಲು ಹೇಳೆ ಹೇಳಿ ಸಾಕಾಗಿ ಮೊನ್ನೆಯೊಮ್ಮೆ ಅದೇ ವಿಷಯಕ್ಕೆ ಜೋರಾಗಿ ಜಗಳವಾಡಿದಾಗ ಅವರು ಹೇಳಿದ್ದನ್ನು ಕೇಳಿ ನಾನೂ ಇನ್ನೂ ಕುಗ್ಗಿ ಹೋದೆ. ಅವರ ಜೊತೆ ಕೆಲಸ ಮಾಡುತ್ತಿರುವವರೊಬ್ಬರು ೩೮-೩೯ ವರ್ಷ ವಯಸ್ಸಿನವರಿರಬಹುದು, ಸೇದುವ, ಉಡಿಯುವ, ಮಾಂಸ ತಿನ್ನುವ ಯಾವುದೇ ಅಭ್ಯಾಸವಿರದ ಗುಜರಾತಿ ಮನುಷ್ಯನೊಬ್ಬನಿಗೆ ಆರು ತಿಂಗಳಿಂದ ಊಟ ನಾಡುದರೆ ನಾಲಿಗೆಯಲ್ಲಿ ಉರಿ ಎಂದು ಡಾಕ್ಟರಲ್ಲಿಗೆ ಹೋದರೆ ತಿಳಿದದ್ದೇನು? ನಾಲಿಗೆಯ ಕ್ಯಾನ್ಸರ್ ನ ಕೊನೆಯ ಹಂತ, ಇದಕ್ಕೂ ಡಾಕ್ಟರಲ್ಲಿರುವುದು ಒಂದೇ ಉತ್ತರ ಲೈಫ಼್ ಸ್ಟೈಲ್ ಸರಿಯಿಲ್ಲ ಅನ್ನುವುದು. ವೇಗವಾಗಿ ಓಡುತ್ತಿರುವ ಇಂದಿನ ಜಗತ್ತಿನಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಲು ದಿನದ ಹನ್ನೆರಡು, ಹದಿಮೂರು ಘಂಟೆಗಳಿಗಿಂತಲು ಹಾಗೂ ತಮ್ಮ ಕ್ಷಮತೆಗಿಂತಲೂ ಹೆಚ್ಚೆಚ್ಚು ಕೆಲಸ ಮಾಡುತ್ತಿರುವ ಇಂದಿನ ಪೀಳಿಗೆಯ ಭವಿಷ್ಯವೇನು? ಎಂದು ಯೋಚಿಸಿ ಭಯವಾಗುತ್ತದೆ. ಮೇಲೆ ಉದಾಹರಿಸಿದ ಎಲ್ಲರಿಗೂ ಡಾಕ್ಟರ್ ಇನ್ನು ಮುಂದೆ ಹೆಚ್ಚು ಕೆಲಸ ಮಾಡಬಾರದು, ಹೆಚ್ಚು ತಲೆಬಿಸಿಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ, ಆದರೆ ಬದುಕಲು, ಹೆಂಡತಿ ಮಕ್ಕಳನ್ನು ಸಾಕಲು ಕೆಲಸವಂತೂ ಮಾಡಲೇ ಬೇಕು, ಕೆಲಸ ಮಾಡಬೇಕಾದರೆ ತಲೆಬಿಸಿ ಬಂದೇ ಬರುತ್ತದೆ, ಹಾಗಾದರೆ ಬದುಕುವುದಾದರೂ ಹೇಗೆ? ನಾವು ಚಿಕ್ಕವರಿದ್ದಾಗಲೆಲ್ಲ ನಮ್ಮಮ್ಮ ಸರಿಯಾದ ಸಮಯಕ್ಕೆ ಊಟ ಮಾಡಬೇಕು, ಸರಿಯಾದ ಸಮಯಕ್ಕೆ ನಿದ್ದೆ ಮಾಡಬೇಕು, ಎಂದೆಲ್ಲ ಹೇಳುತ್ತಿದ್ದದರ ಮಹತ್ವ ಈಗ ಅರ್ಥವಾಗುತ್ತಿದೆಯಾದರೂ ವೀಗವಾಗಿ ಓಡುತ್ತಿರುವ ಈ ಕಾಲದಲ್ಲಿ ಸಮಯವನ್ನು ಅನುಸರಿಸುವುದಾದರೂ ಹೇಗೆ ಅನ್ನುವ ಪ್ರಶ್ನೆ ಕಾಡುತ್ತಿದೆ, ಅಂದುಕೊಂಡರೂ ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಲಾಗುತ್ತಿಲ್ಲ ಅನ್ನುವುದು ಅನೇಕರ ಕೊರಗು. ಹೆಚ್ಚು ಹಣ ಗಳಿಸಲು, ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಸಮಯ ಸಾಲದಿರುವಗ ಲೈಫ಼್ ಸ್ಟೈಲನ್ನು ಬದಲಿಸಲು ಸಮಯವೆಲ್ಲಿದೆ?
ಹಾಗಾದರೆ ಇವೆಲ್ಲದರ ಪರಿಣಾಮವಾಗಿ ನಮ್ಮ ಶರೀರದಲ್ಲಿ ಪ್ರವೇಶಿಸುವ ರೋಗಗಳನ್ನು ಸ್ವಾಗತಿಸಲು ನಾವು ಸಜ್ಜಾಗಬೇಕೆ?

  • ಅನುಭವ
~.~
  • akshata ರವರ ಬ್ಲಾಗ್
  • Login or register to post comments
  • 182 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾವನೆಗಳಿಲ್ಲದ ಬದುಕು.
  • ಕೆಲಸ ಬಿಟ್ಟೆ
  • ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?
  • ಭಾಗ ೩
  • ತಾಯಿಯೇ ದೇವರು..
Syndicate content

ಲೇಖಕರು

akshata's picture

ಪೂರ್ಣ ಹೆಸರು
akshata.deshpnde

ಪರಿಚಯ

iam a writer, translater, (marathi-kannada anda vice versa) anda house wife. husband is working for mahindras. kandivali plant. got a cute 4yrs old baby girl. akanksha.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 116 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator