ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅಹಿಂಸೆ ಅಂದರೆ?
ಅಹಿಂಸೆ ಅಂದರೆ?
ಗಾಂಧಿ ಪೂಜಿತ ರಾಮ
ಸತ್ಯವ್ರತನೇನೊ ಸರಿ
ಶಸ್ತ್ರ ಬಳಸದೆ
ಯುದ್ದ ಗೆಲ್ಲಲಿಲ್ಲ.
ದುಃಖ ಕೊಡುವನು ಶತ್ರು
ಧರ್ಮವಿಲ್ಲದ ಧೂರ್ತ
ಇವರ ನಾಶವದೆಂದು
ಹಿಂಸೆಯಲ್ಲಾ.
ಪರತಂತ್ರದಿಂಸ್ವಾತಂತ್ರ್ಯ
ಅಹಿಂಸಾಫಲವಾದಲ್ಲಿ
ಪಾಕಿಪೋಕರಿಗಳನ್ಯಾಕೆ
ಸೆದೆಬಡಿಯಲಿಲ್ಲ?
ಏಳಿ ಜನಗಳೆ ಏಳಿ
ಸತ್ಯವ್ರತರಾಗಿಂದು
ರಾವಣರ ಚೆಂಡಾಡಿ
ಶ್ರೀ ರಾಮರಾಗಿ.
ಅಹೋರಾತ್ರ.
೦೭/೧೨/೦೬.
೧೪:೪೫.

- ahoratra ರವರ ಬ್ಲಾಗ್
- Login or register to post comments
- 603 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಅಹಿಂಸೆ ಅಂದರೆ?
ಬಹಳ ದಿನಗಳ ಮೇಲೆ ಅಹೋರಾತ್ರರ ಕವನ! ಹೇಗಿದ್ದೀರಿ? ಬಹಳ ಬಿಝಿನೋ ಹೇಗೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಅಹಿಂಸೆ ಅಂದರೆ?
ಇಲ್ಲಾ ಸರ್! ಬಿಝಿ ಏನಿಲ್ಲ. ಸ್ವಲ್ಪ ಡಿ ವಿ ಜಿ ಸಾಹಿತ್ಯ ಮತ್ತು ಕಾಶ್ಯಪ ಶಿಲ್ಪ ಶಾಸ್ತ್ರ ಓದುತ್ತಿದ್ದೆ.
ಅಹೋರಾತ್ರ
Re: ಅಹಿಂಸೆ ಅಂದರೆ?
ಹೋ ಹೋ ಗಾ೦ಧೀಗೆ ಸವಾಲ್.... ಗಾ೦ಧಿಯ ಯೌವನ ಹಾಗೂ ವಿಧ್ಯಾಭ್ಯಾಸ ಲ೦ಡನ್ ನಲ್ಲಿ ,
ಆಗ ಯೂರೋಪ್ ಪೂರ್ತಿ ಹಿ೦ಸೆ ಮತ್ತು ಲೋಭ,ಕ್ರೋಧ ವೃತ್ತಿಯಿ೦ದ ನರಕ ವಾಗಿತ್ತು.
ಆದಕ್ಕೆ ಅವರಿಗೆ ಹಿ೦ಸೆ ಯ ಬಗ್ಗೆ ಆಳವಾದ ವೈರಾಗ್ಯ ಮತ್ತು ಸಿಟ್ಟು ಇತ್ತು.
ಅದಕ್ಕೆ ಅವರು ಈ ರೀತಿ ಬೋಧನೆ ಮಾಡಿ ನಮ್ಮ ದೇಶವನ್ನು ಕಾಪಾಡಿದರು.
ನಮ್ಮ ಧರ್ಮವನ್ನು , ಜೀವನವನ್ನು ಪುನರುಜ್ಜೀವನ ಮಾಡಿದವರಲ್ಲಿ ಮಹನೀಯರು.
ಇರಲಿ ಮಹಾಕವಿ ಕುಮಾರವ್ಯಾಸನ ಉತ್ತರವನ್ನು ನೋಡೋಣ.....
ಕೇಳು ಅರ್ಜುನ ಅಹಿ೦ಸೆಯ ಪರಮಧರ್ಮದ ತತ್ ಸ್ವರೂಪವನೊರೆವನಾಲಿಸು....
ಸಚ್ಚಿದಾನ೦ದೈಕಘನವೆನಿಪ ನಿರುಪಮಾತ್ಮನ ನಿಲವನರಿಯದೆ.. ನರಕಿ ಜಡ ದೇಹಿ.. ಕತೃ ..ನಾನು
..ಜೀವಿ ಎ೦ಬ ತರಳತನವೇ ಹಿ೦ಸೆಯರಿವಡಹಿ೦ಸೆ ಕೇಳೆ೦ದ..
ಮಹಾಬಾರತದ ಭಗವದ್ಗೀತೆಯನ್ನು ಕವಿ ಕುಮಾರ ವ್ಯಾಸ.. ಭೀಷ್ಮ ಪರ್ವ ...ದಲಿ ಸ೦ಕ್ಷಿಪ್ತವಾಗಿ ವರ್ಣಿಸಿದ್ದಾನೆ..