ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Abhimani ರವರ ಬ್ಲಾಗ್

ನಾವು ನಮ್ಮವರು

ಆಗಾಗ್ಗೆ ನಾನು ಬರೆದ ಕತೆ,ಕವನಗಳನ್ನ ಇಲ್ಲಿ ಜೋಡಿಸ್ತಿನಿ..ಓದಿ, ಚೆನ್ನಾಗಿದ್ದರೆ ಹೇಳಿ..ಚೆನ್ನಾಗಿಲ್ಲದಿದ್ದರೂ ಹೇಳಿ... Smiling

ಒಂದು ಕಥನ

May 4, 2007 - 7:35am — Abhimani

ಹೀಗೆ ಒಂದು ಕಥೆ
ಕಥೆಯೆಂದೆನೆ?ಕಥನ
ಕಾವ್ಯ ಕಥನ.
ಒಂದಾನೊಂದು ಕಾಲದಲ್ಲಿ
ಒಂದು ರಾಜ್ಯ,ಒಬ್ಬ ರಾಜ.
ರಾಜ ಆಳಿದ,
ಆಳು,ಕಾಳು,ಮಡದಿಯರೊಂದಿಗೆ.
ಕೈ-ಕಾಲು ಆಡದಂತಾಗೆ
"ಅನ್ಯಥಾ ಶರಣಂ ನಾಸ್ತಿ"
ಕಾಡಿಗೆ ಹೊರಟ.
ರಾಜ,ರಾಜ್ಯಕ್ಕೊಂದ ದಿಕ್ಕ
ತೋರಬೇಕಲ್ಲವೇ?
ದಿಕ್ಕು - ಮೊದಲ ಮಡದಿಯ
ಮೊದಲ ಮಗ ,ರಾಜಕುಮಾರ.
ಪಟ್ಟ-ಅಭಿಷೇಕ..
ರಾಜಕುಮಾರ,ರಾಜನಾದ.
ಆಳತೊಡಗಿದ...!!

ರಾಜ್ಯದಲಿ ದಂಗೆ,
ಬರ,ಹಾ-ಹಾ ಕಾರ!!
ಬೊಕ್ಕಸದಲ್ಲೊ ಬೊಗಸೆ ಮಣ್ಣು.
ರಾಜ ಅದುರಿದ,
ಮಂತ್ರಿಗಳ ಕರೆಸಿ
ದಾರಿಯೊಂದ ಹುಡುಕಿರೆಂದ.
ಚತುರನು, ಒಬ್ಬ ಮಂತ್ರಿಯು
ನಮ್ಮ ಸೈನ್ಯ ಬಲವು,
ನಿಮ್ಮ ಪರಾ-ಕ್ರಮವು!
ನೆರೆ ರಾಜ್ಯವ ಗೆಲ್ವುದು,
ಬೊಕ್ಕಸವ ತುಂಬುವುದು,
ಎನೆ..,
ರಾಜ ಹರುಷ-ರೋಷದಿ
"ಯಾರಲ್ಲಿ ಸೇನಾಧಿಪತಿಯ
ಕರೆಸಿರಿಲ್ಲಿ" ಚಪ್ಪಾಳೆ ತಟ್ಟಿದ.
ಸೇನಾ-ಅಧಿಪತಿ ತರಗುಟ್ಟಿದ
"ಕೂಡದು ಮಹಾಪ್ರಭು,
ಸೇನೆಯಲ್ಲಿ ಹುರುಪಿಲ್ಲ,
ಅಶ್ವ,ಕರಿಗಳಿಗೆ ಮೇವಿಲ್ಲ,
ಈ ಸಮಯದಿ ಯುದ್ಧವು ತರವಲ್ಲ".
ರಾಜ್ಯವನಾಳ್ವುದು,ಜನಹಿತವು
ನಮ್ಮದಲ್ಲವೇ ಹೆಗಲ ಹೊರೆ
ಹೇಳುವುದು ಅನುಸರಿಸುವುದಲ್ಲವೇ
ನಿಮ್ಮ ಹೊಣೆ
ಸಜ್ಜಾಗಲಿ...
ಮುಂದಿನ ಹುಣ್ಣಿಮೆಗೆ,
ಆಕ್ರಮಣವಾಗಲಿ!!
ರಾಜನಾಜ್ನೆ..ಶಿರಸಾ-ವಹಿಸಿ
ಸೇನೆ ಸಜ್ಜುಗೊಳಿಸಿ
ಮನದೆ ದುಖಃ ಉಮ್ಮಳಿಸಿ,
ಮಡದಿಯೊಡನೆ ನುಡಿದ
"ಕೇಡುಗಾಲವಿದು..
ನಮಗಿನ್ನು ಉಳಿವಿಲ್ಲ..!!,
ರಾಜನಿಗೆನೋ ಮಂಕು,
ತಿರುಗಿ ಬಾರೆನೆಂಬ ಶಂಕೆ!!
ಅಳುಕದಿರು,ಮಕ್ಕಳ ಬಾಳ್ವೆಗೆ
ದಾರಿ ತೋರುವಂತಾಗು"
ಬಿಕ್ಕಳಿಸಿದ...ಸೇನಾ-ಅಧಿಪತಿ.
ಪರಾಕ್ರಮಿ,ಎಂಟೆದೆ ಭಂಟನು
ನನ್ನ ಪ್ರಾಣೇಶ್ವರನು..
ಬಿಕ್ಕಳಿಸಿ ಅಳುವುದೇ..?
"ಹೆದರದಿರಿ,ದೇವನಿರುವುನು,
ಎಂದಿನಂತೆ ಪೊರೆವನು.."
ಮರುಗಿದಳು....
ತುಪ್ಪ ದೀಪವ ಹಚ್ಚಿ ಮಲಗಿದಳು.

ಬಂದಿತು ಹುಣ್ಣಿಮೆ ಎಂದಿನಂತೆ
ನೂರು,ಸಾವಿರ ಆನೆ ಕುದುರೆ
ಮುಂದೆ,ಮುಂದೆ...
ನಡೆದರ್ ಹಿಂದೆ ಕಾಲಾಳು.
ಡೇರೆ ಹಾಕಿದ್ದ,ರಾಜ..
ಹತ್ತು ಮೈಲಿ ದೂರಕ್ಕೆ.

ಸೇನೆಯ ಹುರಿದುಂಬುತ..
ವೀರಾವೇಶದಿ ಕೂಗಿದ..
ಎಂಟೆದೆಯ ಭಂಟ..
"ಸಹೋದರರೇ...
ನಲುಗುತಿರುವಳು ತಾಯಿ,
ಮಾತೄಭೂಮಿಯ ಋಣವಿದು,
ಗೆಲುವು,ಇಲ್ಲ ಸಾವು
ಜೀವ ತೇಯುತಿರುವ ದೊರೆಯು
ನಮಗಾಗಿ,ನಮ್ಮವರಿಗಾಗಿ
ಇದುವೇ ಸದವಕಾಶವು..
ನುಗ್ಗಿರಿ..ಮುನ್ನುಗ್ಗಿರಿ...!!
ಉಸಿರ ಕೊನೆಯವರೆಗೆ ಹೋರಾಡಿರಿ"
ಉಗುಳ ನುಂಗಿದ.

ಘಂಟೆಗೊಮ್ಮೆ ಸುದ್ದಿ ಕೇಳುತ
ರಾಜ ಕುಳಿತ ಮಂತ್ರಿಯೊಡನೆ,
ಸಮ-ಅಲೋಚಿಸುತ..!!
ಉರುಳಿದವು ತಲೆ
ಹರಿಯಿತು ರಕ್ತ ನಾಲೆ,
ಸೂರ್ಯ ಮುಳುಗುವಲ್ಲಿ
ಮುಳುಗಿತು ಸೇನೆ.
ಅಳಿದು-ಉಳಿದವು
ತಪ್ಪಿಸಿಕೊಳ್ಳುತ್ತಿದ್ದವು
ಹದ್ದು,ನಾಯಿ,ಮೃಗಗಳ.
ಹೊತ್ತು ಮುಳುಗಿದಂತೆ
ಸುದ್ದಿ ಬಂತು..
ಸೇನಾಧಿಪತಿ ಇನ್ನಿಲ್ಲ,
ಸೈನ್ಯದಲಿ ಇನ್ನೇನೂ ಉಳಿದಿಲ್ಲ.
ವಿಷಮ ಪರಿಸ್ಥಿತಿ..
ತೀವ್ರ ಸಮಾಲೋಚಿಸಿ,
ರಾಜ ಸಂಧಿಗೊಪ್ಪಿದ.
ನೆರೆರಾಜ್ಯದೊಂದಿಗೆ
ಸಂಧಾನವ ಮಾಡಿದ.
ಯುದ್ಧದ ಹಾನಿಯಿಂದ ಕುಪಿತನು,
ಬರದ ದಾಳಿಯಿಂದ ಪೀಡಿತನೂ,
ನೆರೆರಾಜ್ಯದ ರಾಜ..
ಅಪಾರ ಹೊನ್ನು,ವರಹ
ಕಪ್ಪವಾಗಿ ಸಲ್ಲಿಸೆಂದ.

ರಾಜ ಆಜ್ನೆ ಹೊರಡಿಸಿದ
"ರಾಜ್ಯದ ಹಿತಕೆ,
ಮಾತೃಭೂಮಿಯ ಸೇವೆಗೆ
ಇರುವುದೆಲ್ಲವ ನೀಡಿರೆಂದು...."!!

ಜಯಂತಬಾಬು.

  • ಕಥನ
  • ಕನ್ನಡ ಕವಿತೆ
  • ಕವನ
~.~
  • Abhimani ರವರ ಬ್ಲಾಗ್
  • Login or register to post comments
  • 394 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 4, 2007 - 2:04pm — mahesha

ಉ: ಒಂದು ಕಥನ

mahesha's picture

ಇದು ಯಾವ ನಾಡು, ರಾಯನ ಕತೆ?

ಪೊಸಗನ್ನಡದೊಳ್ ಪೞಗನ್ನಡದ ಬಳಕೆಗಳ್ ಚೆನ್ನುಂ..!!! Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2007 - 8:12am — Abhimani

ಉ: ಒಂದು ಕಥನ

Abhimani's picture

ಇದು ನಾನೇ ಕಲ್ಪಿಸಿಕೊಂಡಿರುವ ನಾಡು,ರಾಯ..

ಧನ್ಯವಾದಗಳು..

ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೂರ್ಯ ಕಾಲು
  • ನನ್ನ ರಾಜಕುಮಾರ
  • ಸ್ನೇಹಕ್ಕಾಗಿ(ಪ್ರೇರಕ ಪ್ರಸಂಗಗಳು)
  • ನಾವು ಭಾರತೀಯರು ಏಕೆ ಹೀಗೆ?
  • ಅಶ್ವ-ಮೇಧ
Syndicate content

ಲೇಖಕರು

Abhimani's picture

ಪರಿಚಯ

ಸಾಹಿತ್ಯದಲ್ಲಿ ಆಸಕ್ತಿ.. ಒಂದಷ್ಟು ಬರೆಯುವ ಹವ್ಯಾಸ..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 546 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator