ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಉಉನಾಶೆ ರವರ ಬ್ಲಾಗ್

ನಮನ-೦೫: ನೀವೂ ಇದ್ದೀರಾ?

ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..

ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ... ಷಹಜಹಾನ್ ನೋಡಿ .. ಹೆಂಡತಿಗಾಗಿ ತಾಜ್ ಮಹಲ್ಲೇ ಕಟ್ಟಿಸಿದ್ದಾನೆ."
ನನ್ನ ಉತ್ತರ ..."ಅದನ್ನು ಯಾವಾಗ ಕಟ್ಟಿಸಿದ ಅಂತ ಗೊತ್ತಾ? ಹೆಂಡತಿ ತೀರಿಕೊಂಡ ಮೇಲೆ!"  ಮುಂದೆ ಓದಿ »

~.~

ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?

ಏನ್ಗುರು‍ನಲ್ಲಿರೋ ಒಂದು ಲೇಖನಕ್ಕೆ ಬಂದಿರೋ ಮೊದಲನೆ ಕಮೆಂಟ್ನಲ್ಲಿ ಅನಿವಾರ್ಯ ಅನ್ನುವವರು ತಮ್ಮ ಸ್ವಂತ ಅನುಭವ ಬರೆದಿದ್ದಾರೆ, ಓದಿ ನನಗೆ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ.

"

......................................................................  ಮುಂದೆ ಓದಿ »

~.~

ನಮನ-೦೩: ಸುದ್ದಿಗಾರರೇ ಸುದ್ದಿಯಾದಾಗ!

ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು.
ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು.
ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್ರಕಟಿಸುವ ವೃತ್ತಿಪರತೆ ನಮ್ಮ ವರದಿಗಾರರಲ್ಲಿ ಕಡಿಮೆ.  ಮುಂದೆ ಓದಿ »

~.~

ನಮನ-೦೨: ಒಂದು ಕೊಲೆ..

ಮೊನ್ನೆ ನನ್ನಿಂದ ಒಂದು ಅಪಚಾರ ನಡೆದು ಹೋಯಿತು.
ಜೀವನದಲ್ಲಿ ಮೊದಲ ಬಾರಿ ನಾನೊಂದು ಕೊಲೆ ಮಾಡಿದೆ.

ಮೊನ್ನೆ ತಲೇಲಿ ಏನೊ ತುಂಬ್ಕೊಂಡು, ಕಾರಿನಲ್ಲಿ ಮನೆಗೆ ಬರ್ತಾ ಇರಬೇಕಾದ್ರೆ, ಒಂದು ಅಳಿಲು ಓಡೊಡಿ ಬಂದು ನನ್ನ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿತು.
ಏನೋ ಓಡಿ ಬಂದುದು ನನಗೆ ಅರಿವಾಯಿತು,
ಆದರೆ ಅದು ಕಾರಿನಡಿ ಸಿಕ್ಕಿ ಸಾಯಬಹುದು ಅಂತ ಅನಿಸಿರಲಿಲ್ಲ.  ಮುಂದೆ ಓದಿ »

~.~

ನಮನ-೦೧: ಪರಿಚಯ

ಹೆಸರು ಉಮೇಶ.
ಸಾಮಾನ್ಯವಾಗಿ, 'ಯು‌ಎನ್‌ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ.
ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ.
"ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾಗ ಕೊಟ್ಟ ಹಾಗೆ ಆಗುತ್ತೆ, ಅಷ್ಟೆ.  ಮುಂದೆ ಓದಿ »

~.~
Syndicate content