ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಗಾಳಿಪಟ ಚಿತ್ರದ "ಒಂದೇ ಸಮನೇ... ನಿಟ್ಟುಸಿರು "ಹಾಡಿನ ಸಾಹಿತ್ಯ
ಒಂದೇ ಸಮನೇ... ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ.. ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ
ಕಾಲಿಡದೇ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆ ಬಿಲ್ಲಿನಂತೆ ನೋವು..
ಕೊನೆ ಇರದ ಏಕಾಂತವೇ ಒಲವೇ..?
ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ
ಕರಗುತಿದೆ ಕನಸಿನ ಬಣ್ಣ......
ಜೀವ ಕಳೆವ ಅಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೇ?
ಹೊಂಗನಸ ಚಾದರದಲ್ಲಿ
ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು
ಕಣ್ಣ ಹನಿ ಸುಮ್ಮನೆ ಒಣಗಿ
ಅವಳನ್ನೇ ಜಪಿಸುವುದೇ ಒಲವೇ..?
ಜೀವ ಕಳೆವ ಅಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೇ?
ನಾಲ್ಕು ಪದದ ಗೀತೆಯಲಿ
ಮಿಡಿತಗಳ ಬಣ್ಣಿಸಬಹುದೇ..?
ಮೂರು ಸ್ವರದ ಹಾಡಿನಲಿ
ಹೃದಯವನು ಹರಿ ಬಿಡಬಹುದೇ?
ಉಕ್ಕಿ ಬರುವ ಕಂಠದಲಿ
ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ
ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ..?

- ಹರೀಶ್ ರವರ ಬ್ಲಾಗ್
- Login or register to post comments
- 298 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: