ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
ಎಸ್ಟು ಬಂದರೂ ಬರಗಾಲ,
ಮತ್ತೆ ಬೀಜವ ಬಿತ್ತಿ,
ಹಣೆಗೆ ಕೈ ಹಚ್ಚಿ ರೈತ,
ಮೋಡಗಳ ಕಾಯ್ವಂತೆ.
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
ಕಡಲಾಳದಲ್ಲೆಲ್ಲೋ,
ಎಂದೋ ಬರುವ ಸ್ವಾತಿ ಮಳೆಗೆ,
ಚಿಪ್ಪೊಂದು ಬಾಯ್ಕಳೆದು,
ಹನಿಗೆ ಕಾಯ್ವಂತೆ.
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
ಎಸ್ಟು ಸಲ ಸುಟ್ಟರೂ,
ಮತ್ತೆ ದೀಪದೆಡೆ ಸುಳಿಯುತ,
ಬೆಳಕಿನ ಹುಳುವದು,
ಸೆಳೆತಕ್ಕೆ ಸಿಲುಕುವಂತೆ
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.

- ಸಂಗನಗೌಡ ರವರ ಬ್ಲಾಗ್
- Login or register to post comments
- 340 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಚನ್ನಾಗಿದೆ
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಅಲಲಾ ಸಂಗನ..
ಸೂಪರ್...
ಆದ್ರೇ ತುಂಬಾ ಕಾಯೋದು.. ತಪ್ಪೂ..
ಹೊತ್ ಹರೆಯ ಮೀರೀತು ಜೋಕೆ! ಓಕೆ?
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಚೆನ್ನಾಗಿದೆ
ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು,
ಪ್ರೀತಿಸುವ ಹುಡುಗರನು ಯಾರು ನೋಯಿಸಬಾರದು,
ಕಾಯಿಸಿದರೂ, ಪ್ರೀತಿಸಿದರೂ,
ನಾನು ನಿನ್ನ ಪ್ರೀತಿಸುವೆ|
ನಾನು ನಿನ್ನ ಪ್ರೀತಿಸುವೆ||
ಈ ಹಾಡು ನೆನಪಿಗೆ ಬಂದಿರ್ಬೇಕು... ಅಲ್ವೇನ್ರಿ ಗೌಡ್ರ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಏನೋ ಅನಿಲ್, ಗೌಡ್ರು ಗದ್ಲದಾಗ ಬಿದ್ದಾರ ಅನ್ಸುತ್ತ ನಂಗೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಹೂ ಪಲ್ಲವಿ, ನಂಗೂ ಹಾಗೇ ಅನ್ನಿಸ್ತಿದೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ:
ಕಾಯೋದ್ರಲ್ಲೂ ಅದೇನೋ ಸುಖ .........
ಏನೋಪ್ಪ..... ಮುಂದುವರೆಸಿ ....
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಬರೆದ ಎಲ್ಲರಿಗೂ ನನ್ನಿ,.. ಈ ಹಾಡು ನಿಮ್ಮ ಮನಗಳಿಗೆ ಮುದ ನೀಡಿದ್ದರೆ, ನಲಿವು...
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಎಸ್ಟು ಬಂದರೂ ಬರಗಾಲ,
ಮತ್ತೆ ಬೀಜವ ಬಿತ್ತಿ,
ಹಣೆಗೆ ಕೈ ಹಚ್ಚಿ ರೈತ,
ಮೋಡಗಳ ಕಾಯ್ವಂತೆ.
ಈ ಸಾಲುಗಳು ತುಂಬಾ ಇಷ್ಟವಾದವು.
ಚೆನ್ನಾಗಿದೆ.
ಜಯಲಕ್ಷ್ಮೀ.ಪಾಟೀಲ್.
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಯಾರವರು ಗೌಡರ ಹೃದಯ ಕದ್ದವಳು
ಬೇಗ ಹೋಗಿ ಬಿಡೇ ಚೆಲುವೆ
ಹೃದಯ ಸುಟ್ಟೀತು, ಮನಸು ಮುರಿದೀತು
ನಗುವ ಚೆಲ್ಲುತ ಹೋಗೇ ಒಲವೇ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಹೋಗಿ ಬಿಡು ಅಂದರೆ? ಅತ್ತ ಹೋಗಿ ಬಿಡು ಅಂತಾನ ಪಲ್ಲವಿ?

ನೋಡಿ, ರೈತ ಬೀಜ ಬಿತ್ತಿ ಮಳೆಗೆ ಕಾಯುತ್ತಾನೆ, ಅದು ಬಂದೇ ಬರುವದೆಂಬ ದಿಟ ನಂಬುಗೆ ಅವನದು, ಅದೆಂದೂ ಬತ್ತದು, ಅದು ಅವನ "ಅನಿವಾರ್ಯತೆ" ಕೂಡ, ಅವನ ಸಹಜ ಗುಣ, ಸ್ವಾತಿ ಮಳೆ ಹನಿ ಬಿದ್ದೇ ಬೀಳುವದೆಂಬ ನಂಬುಗೆ ಚಿಪ್ಪಿನದು, ಹಾಗೆ ಕಾಯುವದು ಅದರ ಕೆಲಸ, ಇನ್ನು ಬೆಳಕಿನ ಹುಳು, ಅದು ಸುಟ್ಟರೂ, ಬೆಳಕಿನೆಡೆಗೆ ಸೆಳೆತಕ್ಕೊಳಪಡುವದು ಅದರ ಸಹಜ ಕೆಲಸ, ಅದಕ್ಕೆ ಬೇರೆ ದಾರಿ ಇಲ್ಲ, ಅದರೆಡೆಗೆ ಅದು ಹೋಗಲೇಬೇಕು, ಹಾಗೆ, ಒಲುಮೆ ಕೂಡ, ಸಹಜ, ಸರಳ, ಕಾಯುವದು "ಅನಿವಾರ್ಯ".
ಹಾಗೆ ಸುಮ್ಮನೆ,.. ಒಂದು ಅನಿಸಿಕೆ,.. ಇನ್ನೂ ಅದರ ಗುಂಡಿಗೆ ಬಿದ್ದಿಲ್ಲ..
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಅಯ್ಯೋ, ಇದೂ ಒಂಥರಾ ’ಬ್ಯಾಡ ಹೋಗು’ ಅನ್ನುವ ಮುನಿಸೇನೋ. ನಿಮ್ಮ ಚಿಪ್ಪಿನೊಳಗೆ ಸ್ವಾತಿ ಹನಿ ಬೀಳಲಿ. ಅದು ಮುತ್ತಾಗುವವರೆಗೆ ನೀವು ಸಹನೆಗೆಡದೇ ಕಾಯುವಂತಾಗಲಿ.
ಆದಷ್ಟು ಬೇಗ ಗುಂಡಿಗೆ ಬೀಳುವಂತಾಗಲಿ. ಗೌಡರಿಗೆ ಗೌಡತಿ ಬರುವಂತಾಗಲಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಬೊಂಬಾಟಾಗಿದೆ...
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಹರ್ಷ ಅವರಿಗೆ ನನ್ನಿ, ಮತ್ತು ಜಯಲಕ್ಷ್ಮಿ ಅವರಿಗೆ ನನ್ನಿ.