ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಗೌರಿ ಬ್ಲಾಗ್
ನನ್ನ ಮಗಳು ಗೌರಿ ನನಗೆ ತೋರಿದ ಹೊಸ ಜಗತ್ತಿನ ಬಗ್ಗೆ ಈ ಬ್ಲಾಗ್. ಕಳೆದ ಆರು ವರ್ಷಗಳಿಂದ ವಿಶಿಷ್ಠಚೇತನಳಾಗಿರುವ ಮಗಳೊಂದಿಗೆ ನಾವೂ ಬೆಳೆಯುತ್ತಿದ್ದೇವೆ. ಈ ಅನುಭವ, ಇಂತಹ ಮಕ್ಕಳನ್ನು ಹೊಂದಿದ ತಂದೆತಾಯಿಗಳಿಗೆ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಸಹಾಯವಾದೀತು ಎಂಬ ನಂಬಿಕೆ ನನ್ನದು. ಅದೇ ರೀತಿ, ಅಂಥ ಮಹನೀಯರ ಅನುಭವ ನಮಗೂ ಸಹಕಾರಿಯಾದೀತು ಎಂಬ ಆಸೆಯಿಂದ ಈ ಬ್ಲಾಗ್ ಪ್ರಾರಂಭಿಸಿದ್ದೇನೆ.
ರೇಖಾ ರವರ ಬ್ಲಾಗ್
ನಾನು ಯಾವ ಕಾಲದಲ್ಲಿ ಇದ್ದೇನೆ...!?
October 15, 2008 - 10:57am — ರೇಖಾಕೆಲವೊಂದು ಅಭ್ಯಾಸಗಳು ಬಾಲ್ಯದಿಂದಲೇ ಬರಬೇಕು. ಓದುವುದು, ಬರೆಯುವುದು, ಸಂಗೀತ, ನೃತ್ಯ, ಆಟೋಟಗಳ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇದ್ದರೆ ಚೆನ್ನ. ನಡುವೆ ಅವನ್ನು ರೂಢಿಸಿಕೊಳ್ಳುವುದು ಕಷ್ಟ. ಮುಂದೆ ಓದಿ »

ಮಕ್ಕಳ ಬಗ್ಗೆ ಖಲೀಲ್ ಗಿಬ್ರಾನ್
July 2, 2008 - 6:31am — ರೇಖಾಕಲ್ಪನಾ ಅವರು ಪ್ರೀತಿಯಿಂದ ಕಳಿಸಿದ ಖಲೀಲ್ ಗಿಬ್ರಾನ್ನ ಈ ಕವಿತೆಯ ಇಂಗ್ಲಿಷ್ ರೂಪಾಂತರ ಹೀಗಿದೆ:
Your children are not your children.
They come through you but not from you,
And though they are with you, yet they belong not to you.
You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow, which you cannot visit, not even in your dreams.
You may strive to be like them, but seek not to make them like you.
For life goes not backwards nor tarries with yesterday. ಮುಂದೆ ಓದಿ »

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
June 30, 2008 - 11:37pm — ರೇಖಾಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ ಕೆಡುತ್ತದೆ. ಮುಂದೆ ಓದಿ »

ಕಣ್ಣು ನೋಡೇ ಗೌರಿ
June 29, 2008 - 11:50am — ರೇಖಾನಮ್ಮ ಮಕ್ಕಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ? ಈ ಪ್ರಶ್ನೆ ಎದುರಾಗಿದ್ದು, ನನಗೆ ಮೊದಲ ಮಗು ಗೌರಿ ಹುಟ್ಟಿದಾಗ. ಆಗ ನಾನಿನ್ನೂ ಇಪ್ಪತ್ತೆರಡು ವರ್ಷದ ಹುಡುಗಿ. ಮಗುವನ್ನು ಎತ್ತಿಕೊಳ್ಳಲು ಸಹ ಬರುತ್ತಿದ್ದಿಲ್ಲ. ಆದರೆ ಮಗು ಮುದ್ದಾಗಿತ್ತು. ಕೆಂಪಗಿತ್ತು. ದಪ್ಪವಾಗಿತ್ತು. ಇಂಥ ಮಗುವನ್ನು ಸಂಭಾಳಿಸಲು ಸಾಧ್ಯವೆ ಎಂದು ಎಷ್ಟೋ ಸಾರಿ ಅಳುಕಾಗುತ್ತಿತ್ತು. ಮುಂದೆ ಓದಿ »

ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
June 28, 2008 - 5:36pm — ರೇಖಾನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಶಿಷ್ಠಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರಿರಲಿ- ಪ್ರತಿಕ್ರಿಯೆ ಒಂದೇ. ದೇವರು ನಮಗೆ ಹೀಗೇಕೆ ಮಾಡಿದ? ಎಂದು ದುಃಖಿಸುತ್ತಾರೆ.
ಇಲ್ಲಿಂದ ಶುರುವಾಗುವ ನೋವು ಒಮ್ಮೊಮ್ಮೆ ಜೀವನ ಪರ್ಯಂತ ಮುಂದುವರೆಯುತ್ತದೆ. ಮಗುವನ್ನು ಸಹಜ ಮಗುವಂತಾಗಿಸಲು ಒಬ್ಬೊಬ್ಬರ ಪ್ರಯತ್ನವೂ ಒಂದೊಂದು ಥರ. ಡಿಗ್ರಿ ಮುಗಿದ ಕೂಡಲೇ ಮದುವೆಯಾದ, ಅದಾಗಿ ಒಂದು ವರ್ಷದಲ್ಲಿ ಹೆಣ್ಣು ಮಗುವಿನ ತಾಯಿಯಾದ ನನಗೆ, ಹುಟ್ಟಿದ ಮಗು ಸಹಜವಾಗಿಲ್ಲ ಎಂದು ಅನ್ನಿಸಿದಾಗ ಉಂಟಾದ ನೋವು ಅಷ್ಟಿಷ್ಟಲ್ಲ. ಕಳೆದ ಆರು ವರ್ಷಗಳಲ್ಲಿ ನನ್ನ ಮಗಳು ಗೌರಿ, ಹೊಸ ಜಗತ್ತನ್ನು ನಮಗೆ ತೋರಿಸಿಕೊಟ್ಟಿದ್ದಾಳೆ. ಈಗಲೂ ನಾವು ಹೊಸದನ್ನು ಕಲಿಯುತ್ತಲೇ ಇದ್ದೇವೆ. ಇದೊಂದು ನಿರಂತರ ಕಲಿಕೆ.
ಆದರೆ, ಪ್ರಾರಂಭದ ನೋವನ್ನು ನಾವು ಮರೆತಿಲ್ಲ. ನನ್ನಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರೆಲ್ಲರ ಪ್ರಶ್ನೆಗಳು ಒಂದೇ. ಏಕೆಂದರೆ ಸಮಸ್ಯೆಯೂ ಒಂದೇ. ಇಂತಹ ಮಕ್ಕಳನ್ನು ಸಾಕುವುದು ಹೇಗೆ? ಅವರಿಗೆ ಜಗತ್ತಿನ ರೀತಿಯನ್ನು, ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದನ್ನು ಕಲಿಸುವುದು ಹೇಗೆ? ಇಂತಹ ಪ್ರಶ್ನೆಗಳ ಜೊತೆಗೆ, ಸಮಾಜ ಇಂತಹ ಮಕ್ಕಳನ್ನು ನೋಡುವ ರೀತಿಯನ್ನೂ ಜೀರ್ಣಿಸಿಕೊಂಡು ನಾವು ವಿಶಿಷ್ಠಚೇತನ ಮಗುವನ್ನು ಬೆಳೆಸಬೇಕು. ಮುಂದೆ ಓದಿ »








RSS: