ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಾಗರ...ಸಕತ್ ಹಾಟ್
೨೦೦೭ ಕಳೆದು ೨೦೦೮ ಬಂತು.ದಿನಾ ಪೇಪರ್,ಟೀವಿ ನೋಡಿದರೆ ೩೦೦೮ ಬಂದರೂ ನಾವು ಬದಲಾಗುವುದಿಲ್ಲ ಎನಿಸುತ್ತದೆ.
ಒಬ್ಬ ಯತಿ ಸಾಗರೋಲ್ಲಂಘನೆ! ಮಾಡಿದಕ್ಕೆ ಉಳಿದವರ ವಿರೋಧ.ಬಹುಮತವಿದ್ದರೆ ಪ್ರಧಾನಿ ಮನೆ ಕಸಗುಡಿಸುವವನೂ ರಾಷ್ಟ್ರಪತಿ ಆಗಬಹುದಾದ ನಮ್ಮ ದೇಶದಲ್ಲಿ ಬಹುಮತದ ಯತಿಗಳು ವಿರೋಧಿಸಿದರು ಎಂಬ ಕಾರಣಕ್ಕೆ ಇವರು ಸುಮ್ಮನಿರಬಹುದಿತ್ತು.
--ಹಿಂದೆ ಕೃಷ್ಣ ಬೆನ್ನು ತಿರುಗಿಸಿ ಗೋಡೆ ಒಡೆದ.೨೦೦೮ರಲ್ಲಿ ಸಾಗರಕ್ಕೆ ಧುಮುಕದಂತೆ ನೋಡಿಕೊಳ್ಳಿ
ಸ್ವಾಮಿ.
ಮಾಜೀ ಮಂತ್ರಿ ಒಬ್ಬರು,ವಿರೋಧ ಪಕ್ಷವನ್ನು ದೂರುವುದು “ಗಾಂಧೀಜಿಯನ್ನು ಕೊಂದ ಗೋಡ್ಸೆ ಪಕ್ಷದವರು..”
--ಗಾಂಧೀಜಿಯನ್ನು ದಿನಾ ಕೊಲ್ಲುವುದನ್ನು ೨೦೦೮ರಲ್ಲಾದರೂ ನಿಲ್ಲಿಸಲಾರಿರಾ?
ಮಾಜೀ ಮಾಜೀ ಮುಖ್ಯಮಂತ್ರಿ ಒಬ್ಬರ ಗಿಣಿಪಾಠ “ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು”
--೨೦೦೮ರಲ್ಲಿ ಕರ್ನಾಟಕಕ್ಕೆ ಉತ್ತಮ,ಭದ್ರ ಸರಕಾರ ಕೊಡುತ್ತೇವೆ ಅನ್ನಬಾರದೇ?
ಸಕತ್ ಹಾಟ್ ಮಗಾ.ಡವ್ ಇತ್ಯಾದಿ ಇತ್ಯಾದಿ ಪದ ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿದೆ ಟಿ.ವಿ.,ರೇಡಿಯೋ ಎತ್ತಿ ಬಿಸಾಕುವಷ್ಟು ಬೇಸರವಾಗುತ್ತದೆ.
--೨೦೦೮ರಲ್ಲಾದರೂ ಈ ಪದಗಳಿಗೆ ರೆಸ್ಟ್ ಕೊಡುವಿರಾ?
...

- ಗಣೇಶ ರವರ ಬ್ಲಾಗ್
- Login or register to post comments
- 382 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಾಗರ...ಸಕತ್ ಹಾಟ್
ನೀವು ಹೇಳಿದ್ದು ೧೦೦% ಸರಿ.....
ಆದ್ರೆ ಏನು ಮಾಡೋದು, ರಾಜಕಾರಣಿಗಳಿಗೆ ಮತ್ತು ಟಿವಿಯವರಿಗೆ ಚಿಲ್ಲರೆ ವಿಷಯಗಳೇ ಸಿಗೋದು.... ಜನರಿಗೆ ಎಷ್ಟು ಬೋರ್ ಹೊಡೆಸ್ತಾ ಇದ್ದೀವಿ ಅಂತ ಗೊತ್ತಾಗೋಲ್ಲ ಅವರಿಗೆ.
ವರುಣ ಭಟ್
ಉ: ಸಾಗರ...ಸಕತ್ ಹಾಟ್
ಶುಧ್ಧಾತಿ ಶುದ್ಧ ಕನ್ನಡ ಸಿಗುವುದು ಸರ್ಕಾರಿ ಚಾನಲ್ಲುಗಳಲ್ಲಿ ಮಾತ್ರ. ಎಫ಼್.ಎಮ್. ರೈನ್ಬೊ, ವಿವಿಧ ಭಾರತಿಯಲ್ಲಿ ಮಾತ್ರ ಉತ್ತಮ ಕನ್ನಡ ನಿರೂಪಕ/ನಿರೂಪಕಿಯರಿರುತ್ತಾರೆ. ಬೇರೆ ಚಾನಲ್ಗೊಳೆಲ್ಲಾ ಬರೀ ಬಾಲಿಶ ಭಾಷೆ ಉಪಯೋಗಿಸ್ತವೆ.
"ಮಾಜೀ ಮಂತ್ರಿ ಒಬ್ಬರು,ವಿರೋಧ ಪಕ್ಷವನ್ನು ದೂರುವುದು “ಗಾಂಧೀಜಿಯನ್ನು ಕೊಂದ ಗೋಡ್ಸೆ ಪಕ್ಷದವರು..”
--ಗಾಂಧೀಜಿಯನ್ನು ದಿನಾ ಕೊಲ್ಲುವುದನ್ನು ೨೦೦೮ರಲ್ಲಾದರೂ ನಿಲ್ಲಿಸಲಾರಿರಾ? ""
=> ಗಾಂಧೀಜಿಯನ್ನು ಹೀಗೆ ದಿನಾ ಕೊಲ್ಲದಿದ್ದರೆ ಓಟು ಬರುತ್ತಾ?
ಮಾಜೀ ಮಾಜೀ ಮುಖ್ಯಮಂತ್ರಿ ಒಬ್ಬರ ಗಿಣಿಪಾಠ “ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು”
--೨೦೦೮ರಲ್ಲಿ ಕರ್ನಾಟಕಕ್ಕೆ ಉತ್ತಮ,ಭದ್ರ ಸರಕಾರ ಕೊಡುತ್ತೇವೆ ಅನ್ನಬಾರದೇ?
=>“ಕರ್ನಾಟಕವನ್ನು ಗುಜರಾತ್ ಆಗಲು ಬಿಡೆವು” ಎಂದರೆ "ಕರ್ನಾಟಕವು ಅಭಿವೃಧಿ ಹೊಂದಲು ಖಂಡಿತ ಬಿಡೆವು" ಎಂದರ್ಥ.
ಉ: ಸಾಗರ...ಸಕತ್ ಹಾಟ್
ಮೊಸರು ಕಡೆಯುವುದು ನೋಡಿದ್ದೀರಲ್ಲಾ?
ಈ TV9 ಒಂಥರಾ ಅದೇ ರೀತಿ ನಿರೂಪಣೆ.
ಒಂದು ಚಿಕ್ಕ ವಿಷಯ/ಘಟನೆಯನ್ನು ತೆಗೆದು ಕೊಂಡು, ಸುಮಾರು ಅರ್ದ ಮುಕ್ಕಾಲು ಘಂಟೆ ಪದೇ ಪದೇ ಹೇಳಿದ್ದೇ ಹೇಳಿಸಿ ಕಾಲ ಹರಣ ಮಾಡಿ/ಮಾಡಿಸ್ತಾರೆ. ಪ್ರಬುದ್ಧತೆಗಿಂತ ಭಾವೋದ್ವೇಗಕ್ಕೆ ಹೆಚ್ಚು ಬೆಲೆ ಕೊಡ್ತಾರೆ. ಎಮೋಷನ್ ಸೆಲ್ಸ್ ಯು ನೋ?
ಉ: ಸಾಗರ...ಸಕತ್ ಹಾಟ್
೨೦೦೭ರ ಅತ್ಯಂತ ಕೆಟ್ಟ ಸಿನಿಮಾ ಒಂದರಲ್ಲಿ ಈ ರೀತಿಯ ಹಾಡು ಇದೆ.
ಹಾಟಪ್ಪ ಹಾಟು, ಸಖತ್ತು ಹಾಟು, ಈ ನನ್ನ ಹಾರ್ಟು ಮಗ,
ಸ್ವೀಟಪ್ಪ ಸ್ವೀಟು, ಸಖತ್ತು ಸ್ವೀತು ಈ ನಿನ್ನ ಹಾರ್ಟು ಮಗ,
ಮಸ್ತು ಮಜಾ ಮಾಡು, ಹಾ! ಸುಸ್ತು ಮಜಾ ಮಾಡು.
ಉ: ಸಾಗರ...ಸಕತ್ ಹಾಟ್
ಈ ಸಿನೆಮಾ/ಟಿವಿ ಇಂದ ಕನ್ನಡ ಪದಗಳು ಇನ್ನೂ ಮರೆಯಾಗುತ್ತಿವೆ.
ಈಗ ಯಾರ ಮನೆಯಲ್ಲೂ ಹುಟ್ಟಿದಹಬ್ಬ ಮಾಡ್ತಾ ಇಲ್ಲ - ಬರೀ ’ಬರ್ತ ಡೇ’ - ಅಂದ ಹಾಗೆ, ಬರ್ತ್ ನಲ್ಲಿನ ಅರ್ಧಾಕ್ಷರವನ್ನು ಓಡಿಸಿ ಬರ್ತ ಮಾಡಿರುವುದು ಬೆಂಗಳೂರಿಗರ ವಿಶೇಷ ಅನ್ಸತ್ತೆ. ಹಾಗೆ, ಯಾರಿಗೂ ಈಗ ಸುಸ್ತು, ಆಯಾಸ, ಆಗೋದೇ ಇಲ್ಲ. ಏನಿದ್ರೂ, ಬರೀ ’ಟಯರ್ಡ್’ ಆಗ್ತಾರೆ. ಟಯರ್ಡ್ ಆದ್ರೆ, ಗೊತ್ತೇ ಇದೆಯಲ್ಲ ಮದ್ದು - ಹೋಗಿ ’ಫ್ರೆಶ್ ಆಗಿ ಬರೋದು’
-ಹಂಸಾನಂದಿ
ಉ: ಸಾಗರ...ಸಕತ್ ಹಾಟ್
ವರುಣ,ಮಾಧವ,ಸುನೀಲ,ಹಂಸಾನಂದಿ,
ಎಲ್ಲರಿಗೂ ನನ್ನಿ.
ವರುಣ್ ಭಟ್ರೆ,
'ಈ ರಾಜಕಾರಣಿಗಳನ್ನು ಮನುಷ್ಯರು ಎನ್ನಲು ಆಗುವುದಿಲ್ಲ.ಪ್ರಾಣಿಗಳು.ಪ್ರಾಣಿಗಳಿಗಿಂತಲೂ ಕಡೆ.ಇವರನ್ನು ತಿದ್ದಲು ಸಾಧ್ಯವೇ ಇಲ್ಲ..'
-ರಾಜಕಾರಣಿಗಳ ಬಗ್ಗೆ ನಿನ್ನೆ, ಟಿ.ವಿ.ನ್ಯೂಸ್ ಚಾನಲ್ ಒಂದಕ್ಕೆ ರೆಮೋ(ಖ್ಯಾತ ಹಾಡುಗಾರ)ಹೇಳಿದ ಕಟು ನುಡಿಗಳಲ್ಲಿ ಒಂದೆರಡು ವಾಕ್ಯ.
ಮಾಧವರೆ,
ನಿಮ್ಮ ಉತ್ತರ ಸರಿಯಾದುದು. ಕರ್ನಾಟಕ ಅಭಿವೃದ್ಧಿ ಹೊಂದಲು ಖಂಡಿತ ಬಿಡೆವು
ಸುನೀಲರೆ,
ಎಫ್.ಎಮ್ ರೇಡಿಯೋದ ಹಾಡಿಗೆ ಟಿ.ವಿಯ ಸಿನೆಮಾ ಡ್ಯಾನ್ಸ್ ನ್ನು (ಟಿ.ವಿ ಹಾಡನ್ನು ಮ್ಯೂಟ್ ಮಾಡಿ)ಹಾಕಿ ನೋಡಿ.ಈಗಿನ ಡ್ಯಾನ್ಸ್ ಗಳು ಯಾವ ಹಾಡಿಗೂ,ಹಾಗೇ ಹಾಡುಗಳು ಯಾವುದೇ ಸಿನೆಮಾ ಡ್ಯಾನ್ಸ್ ಗೂ ಮ್ಯಾಚ್ ಆಗುತ್ತದೆ.
ಹಂಸಾನಂದಿಯವರೆ,
ಪರಿಶುದ್ಧ ಹಾಲಿಗೆ ನಂದಿನಿ ಕುಡಿಯಿರಿ,ಅಂದಂತೆ-
ಕನ್ನಡ ಬೇಕಾ? ಸಂಪದ ನೋಡಿ
ಅನ್ನುವ ಕಾಲ ಬರುವುದೋ ಏನೋ?
ಗಣೇಶ.