ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಹೂಗಾರನ ಪುಸ್ತಕ ಪ್ರೇಮ

July 3, 2008 - 10:38am — parvathi.G.r

ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು.

ನಾವು ಹಳ್ಳಿಗೆ ರಜೆಯಲ್ಲಿ ಹೋದಾಗ ಈ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದೆವು ರಜೆ ಇದ್ದಷ್ಟು ದಿನ, ದಿನಾ ಹೋಗಿ ಬರುವುದು ಪ್ರತೀತಿ. ಆಗ ನಾವು ಚಿಕ್ಕವರು ಆತ ಅಲ್ಲಿ ಹೂಮಾರುತ್ತಾ ಓದುತ್ತಾ ಕುಳಿತಿರುತ್ತಿದ್ದ. ತನ್ನ ಶಾಲಾ ಜೀವನ ಮುಗಿಸಿ ಹೂಗಾರನಾಗಿ ತನ್ನ ಕಾರ್ಯವನ್ನು ಆರಂಭಿಸಿ ಬಿಟ್ಟಿದ್ದ, ಅಮ್ಮನೊಂದಿಗೆ ದೇವಸ್ಥಾನಕ್ಕೆ ಹೋದಾಗ ಅಮ್ಮನ ಸೆರಗಿನಿಂದೆ ಅಡಗಿನಿಂತು, ಆತ ಮುಗುಚಿಟ್ಟಿ ಪುಸ್ತಕಗಳ ಹೆಸರು ಓದುವುದು. ಆದರೆ ಅದನ್ನು ಕೂಡಿಸಿ ಓದುವಷ್ಟರಲ್ಲಿ ಅಮ್ಮ ಹೂ ಕೊಂಡು ಹೊರಟು ಬಿಡುತ್ತಿದ್ದಳು. ಆತ ಮುಗುಳು ನಗುತ್ತಾ "ಏನ್ ಪುಟ್ಟಿ ಅನ್ನುತ್ತಿದ್ದ ?"
ನಾನೋ ಪೆದ್ದು ಪೆದ್ದು ನಗೆ ಬೀರಿ, ಪುಸ್ತಕ ಯಾವುದೆಂದು ಕೇಳಲು ಭಯ, ಪುಸ್ತಕದತ್ತ ಕೈ ತೋರಿದರೆ ಅದಾ ಎಂದು ಅದರ ಹೆಸರೇನೋ ಹೇಳುತಿದ್ದ, ಆಗ ಅದು ಅರ್ಥವಾಗದ ವಯಸ್ಸು ಬಿಡಿ. ನನ್ನ ಅರಿವಿಗೆ ಬಂದಂತೆ ಅದು ಹಳಗನ್ನಡ ಅದಕ್ಕೇ ನನಗೆ ಅದನ್ನು ಸೇರಿಸಿ ಓದಲು ಕಷ್ಟವಾಗುತ್ತಿತ್ತು.

ಸುಮಾರು ವರ್ಷದ ಅಂತರದ ನಂತರ ಹಳ್ಳಿಗೆ ಹೋದಾಗ ನನಗೆ ಆಶ್ಚರ್ಯವಾಗಿದ್ದು, ಅದೇ ವ್ಯಕ್ತಿಯನ್ನು ಪುಸ್ತಕದೊಂದಿಗೆ ಹೂಮಾರುತ್ತಾ ಇರುವುದನ್ನು ನೋಡಿದಾಗ ಓದುವ ಹುಚ್ಚು ( ಅಭ್ಯಾಸ ಎಂದಾದರೆ ಕೆಲವು ತಾಸುಗಳವರೆಗೆ ಆದರೆ ಯಾವುದೇ ಇತಿ ಮಿತಿ ಇಲ್ಲದಿದ್ದರೆ ಅದು ಹುಚ್ಚು ಎಂದು ನನ್ನ ಭಾವನೆ) ಈಗಲೂ ಆತನನ್ನು ಬಿಟ್ಟಿರಲಿಲ್ಲ, ಕುತೂಹಲ ತಡೆಯದೇ ಕೇಳೇ ಬಿಡುವ ಎಂಬ ಮನಸ್ಸು, ಆದರೆ ಭಯ ಎನೆನ್ನೂತ್ತಾರೋ ಎಂದು. ಅಲ್ಲಿಗೆ ಹೋಗಿ ನಿಂತೆ ಆತ ಪರಿಚಯ ಮರೆಯದವನ ಹಾಗೆ ಅಮ್ಮ ಬಂದಿಲ್ಲವಾ ಪುಟ್ಟಿ ಹೂ ಬೇಕಾ ಎಂದ ? ಆತ, ಇಲ್ಲ ಅದೂ ಪುಸ್ತಕ ,,,,,,,,,,,,, ಅಂತೂ ಇಂತೂ ಧೈರ್ಯ ಮಾಡಿ, ನೀವು ಯಾವಾಗಲೂ ಪುಸ್ತಕ ಓದುತ್ತೀರಲ್ಲ ಯಾಕೆ ? ಎಂದೆ, ಅದಕ್ಕೆ ಆ ಹೂಗಾರ ಹೇಳಿದ ಅದಾ ದೊಡ್ಡ ಕಥೆ ಅಂದು, ಹೀಗೆ ಹೇಳಿದರೂ,

ಒಂದ್ಸಾರಿ ನಮ್ಮ ಸ್ಕೂಲಲ್ಲಿ ಚೆನ್ನಾಗಿ ಯಾರು ಓದುತ್ತಾರೆ, ಅಂತ ಪರೀಷೆ ಮಾಡಿದರೂ, ಗೆದ್ದವರಿಗೆ " ಶ್ರೀ ರಾಮಯಣ ದರ್ಶನಂ " ಪುಸ್ತಕ ಉಡುಗರೆಯಾಗಿ ಕೊಡೊದಾಗಿ ನಮ್ಮ ಮೇಷ್ಟ್ರು ಹೇಳುದ್ರು, ಸರಿ, ಒಬ್ಬೊಬ್ಬರೆ ಓದೋಕ್ಕೆ ಶುರುಮಾಡುದ್ರು, ಕಡೆಗೆ ಇಬ್ಬರನ್ನೂ ಈ " ಶ್ರೀ ರಾಮಯಣ ದರ್ಶನಂ " ಪುಸ್ತಕ ಕೊಟ್ಟು ಓದೋಕ್ಕೆ ಹೇಳಿದರೂ ಅದರಲ್ಲಿ ನಾನು ಒಬ್ಬ , ನಾನು ಒಂದು ಪುಟ ಓದ್ದೆ, ಆದರೆ ಇನ್ನೊಬ್ಬ ಒಂದು ಕಾವ್ಯನೂ ಓದಕ್ಕಾಗಲಿಲ್ಲ , ಕಡೆಗೆ ಬಹುಮಾನ ನನಗೆ ಬಂತು ನನಗೆ ತುಂಬಾ ಖುಷಿ ಆಯ್ತು , ನಮ್ಮ್ ಮೇಷ್ಟ್ರು ನನ್ನ ಹತ್ತರ ಕರೆದೂ ಹೇಳುದ್ರು, ನೀನು ಓದೊದು ನಿಲ್ಲಿಸ ಬೇಡ, ಒಂದು ವೇಳೆ ಶಾಲೆ ಬಿಟ್ಟರೂ ಪುಸ್ತಕ ಓದೋದು ಬಿಡಬೇಡ ಅಂದರೂ, ಅವರಿಗೆ ಗೊತ್ತಿತ್ತಲ್ಲ, ಈ ಹಳ್ಳಿ ಮಕ್ಕಳಿಗೆ ೭ ಕ್ಲಾಸ್ ಓದಿಸೋದೇ ಕಷ್ಟ ಅಂತ ,ನಾನೊಬ್ಬನೆ ಆ ಕಾಲದಲ್ಲಿ ೭ ಕ್ಲಾಸ್ ಪಾಸ್ ಮಾಡಿದ್ದು , ಅವರು ಹೇಳ್ದಂಗೆ ನಾನು ಒಂದಾದ ಮೇಲೊಂದು ಪುಸ್ತಕ ಕೊಳ್ಳೋದು ಓದೋದು ಇದೇ ಆಗೋಯ್ತು ಅಂದರು, ನೀವು ಎಷ್ಟು ಪುಸ್ತಕ ಓದಿದ್ದೀರ ಅಂದೆ ?, ಅದಕ್ಕೆ ಅವರು ಗೊತ್ತಿಲ್ಲಮ್ಮ ನಾನು ಓದಿದ ಪುಸ್ತಕನೆಲ್ಲಾ ಆ ಮನೆಯಲ್ಲಿ ಹಾಳಾಗದ ಹಾಗೆ ಇಟ್ಟಿದ್ದೀನಿ ಅಂತ ಅತ್ತ ಕೈ ತೋರಿಸಿದರು. ಬಹುಶ: ತನ್ನ ಜೀವಮಾನದ ದುಡಿಮೆಯೆಲ್ಲಾ ಬರೀ ಪುಸ್ತಕಕ್ಕೆ ಖರ್ಚು ಮಾಡಿದ್ದಾರೆ ಅನ್ನಿಸಿತು,

ಸ್ವಲ್ಪ ದೂರದಲ್ಲಿ ಇದ್ದ ಹಾಲ್ ನಲ್ಲಿ ಪುಸ್ತಕಗಳ ರಾಶಿ, ಅದನ್ನ ಯಾರೋ ಅಚ್ಚು ಕಟ್ಟಾಗಿ ಜೋಡಿಸಿಡುತ್ತಿರೋದು ಕಾಣೆಸಿತು. ಎಲ್ಲಾ ನೀವೆ ಕೊಂಡಿದ್ದಾ ಎಂದೆ,
ಒಂದಾದ ಮೇಲೊಂದು ಕೊಂಡೆ,
ನಿಮ್ಮ ಮಕ್ಕಳೂ ಅದನ್ನ ನೋಡ್ಕೊತ್ತಾರ ಅಂದೆ, ಅದಕ್ಕೆ ಅವರು ನಕ್ಕು, ನಾನು ಮದುವೆನೇ ಆಗಲಿಲ್ಲ ಅಂದರೂ,
ಯಾಕೆ ? ( ಕೇಳಬಾರದಿತ್ತೆನೋ ಕೇಳಿಬಿಟ್ಟೆ) ನನಗೆ, ಓದುತ್ತಾ ಓದುತ್ತಾ ಮದುವೆ ಆಗ ಬೇಕು ಅನ್ನೋದೇ ಮರೆತೋಯ್ತು,
ಅಮ್ಮ ಸತ್ತ ಮೇಲೆ, ಅಲ್ಲಿ ಪುಸ್ತಕ ಜೋಡಿಸುತ್ತಿದೆಯಲ್ಲಾ ಆ ಹುಡುಗ ಸಾಹಿತ್ಯ ವಿದ್ಯಾರ್ಥಿ ಓದುತ್ತಿದ್ದಾನೆ, ಆ ಗಿನ್ನೂ ಚಿಕ್ಕವನಿದ್ದ ಅವನೂ ಬಂದು ಸೇರಿಕೊಂಡ ನನ್ನ ಪುಸ್ತಕನೆಲ್ಲಾ ಅವನೇ ನೋಡಿಕೊಳ್ಳೋದು, ನನ್ನ ಊಟನೂ , ನಾನು ಬರೀ , ಇಲ್ಲಿ ಕೂತು ಹೂ ಮಾರೋದು, ಓದೊದು, ಅಷ್ಟೆ ಅಂದರೂ ,

ನನ್ನಲ್ಲಿ ಒಂದು ಪ್ರಶ್ನೆ ಹಾಗೆ ಉಳಿತು, ಹೋಗೋಕ್ಕೆ ಹೋದವಳು ಮತ್ತೆ ಅವರಲ್ಲಿ ಬಂದು ಅಂಕಲ್ ಆ ಹಾಲ್ ಪಕ್ಕ ಗುಡಿಸಲಿದೆಯಲ್ಲಾ ಯಾಕೆ ಅಂದೆ ಅದಾ ನಾನು, ಆ ಹುಡುಗ ಮಲಗೋಕ್ಕೆ ಅಂದರು, ನಾನೆಂದೆ ಆ ಹಾಲಲ್ಲೆ ಮಲಗ ಬಹುದಲ್ಲವಾ ಅಂತ,
ಛೇ ಹಾಗೆಲ್ಲಾಗುತ್ತೆ ಅದೂ ಸರಸ್ವತಿ ಮಂದಿರ ಅಂದರೂ, ಯಾಕೋ ಮುಂದೆ ಕೇಳೋಕೆ ಮಾತೆ ಉಳಿಲಿಲ್ಲ,
ಆತ ತನ್ನ ಜೀವನ ಪೂರ್ತಿ ಬರೀ ಓದಿಗಾಗಿ ಮುಡಿಪಿಟ್ಟಿದ್ದ, ಮಾತು ಹಳ್ಳಿಯವರ ಹಾಗೆ ಇದ್ದರೂ, ಆತನ ಓದೂ ಯಾವ ಪ್ರೋಪೆಸರ್ ಕೂಡ ಏನು ಮಾಡೊಕಾಗೊಲ್ಲಾ ಬಿಡಿ, ಅವರ ಮುಂದೆ,

ಆದರೆ ನಾನು ಅವರು ಓದಿರುವಷ್ಟು ಪುಸ್ತಕನಾ, ನೋಡೆ ಇಲ್ಲವಲ್ಲ ಅಂತ ನನಗೆ ನನ್ನ ಬಗ್ಗೆನೇ ಜಿಗುಪ್ಸೆ ಹುಟ್ಟಿತು,
ಅಂತ ವ್ಯಕ್ತಿನ ನೋಡಿದ್ದೇ ಭಾಗ್ಯ ಅಂತ, ದೇವಸ್ಥಾನಕ್ಕೆ ಹೋಗದೆ, ಅಲ್ಲೇ ಕೈ ಮುಗಿದು ಬಂದು ಬಿಟ್ಟೆ.
ಬರುತ್ತಾ ಒಂದು ಕನ್ನಡ ಪುಸ್ತಕ ಕೊಂಡು ತರುವ ಮನಸ್ಸಾಯಿತು.
.
.
.
.
.
.
.
.
.
.
.
.
( ಈ ಲೇಖನ ಓದಿದಮೇಲೆ ನಿಮಗೂ ಆ ವ್ಯಕ್ತಿಯನ್ನು ನೋಡುವ ಅಥವಾ ತಿಳಿಯುವ ಕುತೂಹಲ ಮೂಡ ಬಹುದು,
ಆ ಕುತೂಹಲ ನನಗೂ ಇದೆ, ಆದರೆ, ಅಷ್ಟರಲ್ಲಿ ಸೂರ್ಯ ಹುಟ್ಟಿದ್ದ ಏಳು ಮೇಲೆ ಸೋಮಾರಿ ಇನ್ನೂ ಮಲಗಿದ್ದೀಯ ಅಂದ,
ಈ ಲೇಖನ ಇಷ್ಟವಾದರೆ ತುಂಬಾ ಖುಷಿ, ಇಲ್ಲವಾದರೆ ಸಾರಿ, ಯಾಕೆಂದರೆ ಇದು ಕಲ್ಪನೆ, ಇಲ್ಲಿನ ಯಾವ ಅಷ್ಶರದಲ್ಲೂ ವಾಸ್ತವದ ನೆರಳೂ ಸಹ ಇಲ್ಲ )

*********************************

  • ಸಣ್ಣ ಕಥೆ
~.~
  • Login or register to post comments
  • 275 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 3:26pm — sreekrishna

ಉ: ಹೂಗಾರನ ಪುಸ್ತಕ ಪ್ರೇಮ

sreekrishna's picture

ಆತನ ಪುಸ್ತಕ ವ್ಯಾಮೋಹ ನಿಜಕ್ಕೂ ಅಭಿನಂದನೀಯಾ, ಎಷ್ಟೋ ಜನ ಹಣವಂತರು, ವಿಧ್ಯಾವಂತರು ಕೂಡ ಈಗಿನ ಕಾಲದಲ್ಲಿ ಹಣ ಕೊಟ್ಟು ಪುಸ್ತಕ ಕೊಂಡು ಓದುವ ಪ್ರವೃತ್ತಿ ಇರುವುದಿಲ್ಲ. ನೀವು ಹೇಳಿದ ವಿಷಯ ಕನಸಲ್ಲಿ ಕಂಡಿದ್ದರೂ ಈ ತರಹದ ವ್ಯಕ್ತಿಗಳು ನಮ್ಮಲ್ಲಿ ಇದ್ದಾರೆ ಎನ್ನುವುದೇ ನಮ್ಮ ಭಾಗ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೂಗಾರನ ಪುಸ್ತಕ ಪ್ರೇಮ
  • ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...
  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
  • ಪುಸ್ತಕ ಸಂತೆ
  • ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು
Syndicate content

ಲೇಖಕರು

parvathi.G.r's picture

ಪೂರ್ಣ ಹೆಸರು
parvathi.G.R

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?
  • ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
  • ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
  • palachandra
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:06pm
  • palachandra
    ಉ: Aperture ಮತ್ತು Depth of Field
    December 1, 2008 - 9:01pm
  • gopinatha
    ಉ: ಚಂದ್ರ-ಗುರು-ಶುಕ್ರ...
    December 1, 2008 - 8:59pm
  • venkatb83
    ಉ: ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.
    December 1, 2008 - 8:58pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 95 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator