ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಪಕ್ಷಿ ಹಾಗು ಪರಿಸರ ಕೆಲ ಪರಿಹಾರೋಪಾಯಗಳು

July 1, 2008 - 12:49pm — harshavardhan v...

ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಪಕ್ಷಿ ಸಂಕುಲಕ್ಕಾಗಿ ಮೀಸಲಿರಿಸಿ ನಿರ್ಮಿಸಲಾದ ‘ಚಿನ್ನದ ಬೆಳಸು’ ಹಣ್ಣಿನ ತೋಟವನ್ನು ಮಂಜೇಶ್ವರದ ಸಾವಯವ ಕೃಷಿ ತಜ್ನ ಡಾ.ಡಿ.ಸಿ.ಚೌಟ ಉದ್ಘಾತಿಸಿದ್ದಾರೆ. ೪ ಎಕರೆ ಜಮೀನಿನಲ್ಲಿ ೧೨ ವಿಧದ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ಈ ತೋಟದಲ್ಲಿ ಬೆಳೆದ ಹಣ್ಣುಗಳೆಲ್ಲ ಪಕ್ಷಿಗಳ ಆಹಾರಕ್ಕಾಗಿಯೇ ಬಳಕೆಯಾಗಲಿವೆ! ಈ ತೋಟದಲ್ಲಿ ಬೆಳೆದ ಹಣ್ಣುಗಳೆಲ್ಲ ದಾಳಿಂಬೆ, ಅಂಜೂರು, ಸೀತಫಲ, ಮಾವು, ಚೆರ್ರಿ, ನಿಂಬೆಹಣ್ಣು, ಬಾಳೆಗಿಡ ಮತ್ತು ಬಾರಿ ಹಣ್ಣಿನ ಗಿಡಗಳು ಸೇರಿದಂತೆ ಇತರೆ ಗಿಡಗಳನ್ನು ಬೆಳೆರ್ಸಲಾಗುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರವಾಗಲಿ ಮತ್ತು ಔಷಧಗಳನ್ನಾಗಲಿ ಬಳಸದೇ ಕೇವಲ ಜೈವಿಕ ಮತ್ತು ಸಾವಯವ ಗೊಬ್ಬರ ಮಾತ್ರ ಬಳಸಿ, ಬೆಳೆಸಿದ ಈ ಹಣ್ಣಿನ ತೋಟದ ಹಣ್ಣುಗಳನ್ನು ಮಾರಾಟ ಮಾಡಲಾಗುವುದಿಲ್ಲ. ಜೀವ ಸಂಕುಲದ ರಕ್ಷಣೆಗಾಗಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಪಕ್ಷಿಗಳನ್ನು ಆಕರ್ಷಿಸಲು ಈ ತೋಟ ಬೆಳೆಸಲಾಗುತ್ತಿದೆ. ಈ ತೋಟದ ಪಕ್ಕದಲ್ಲಿಯೇ ಒಂದು ಸಣ್ಣ ಕಾಲುವೆ ಹರಿಯುತ್ತಿದ್ದು ಇಲ್ಲಿಗೆ ಆಹಾರಕ್ಕಾಗಿ ಬರುವ ಪಕ್ಷಿಗಳಿಗೆ ನೀರು ಕುಡಿಯಲು ಸ್ವಹ ಅನುಕೂಲವಿದೆ. ಹಣ್ಣಿನ ಗಿಡಗಳನ್ನು ಬೆಳೆಸಲು ಕೊಳವೆ ಬಾವಿ ಹಾಕಿಸದೇ ಕೇವಲ ಒಂದು ಬಾವಿಯನ್ನು ತೋಡಲಾಗಿದೆ. ಈ ಬಾವಿಯಿಂದಲೇ ಗಿಡಗಳಿಗೆ ನೀರು ಹರಿಸಲಾಗುತ್ತಿದೆ. ವಿಶ್ವವಿದ್ಯಾಲಯದ ೭ ಜನ ಸಿಬ್ಬಂದಿ ತೋಟದ ಉಸ್ತುವಾರಿಗಿದ್ದಾರೆ. ಈ ರೀತಿ ಧಾರವಾಡದಲ್ಲಿ ಬೇಂದ್ರೆಯವರ ಸಾಧನಾಸ್ಫೂರ್ತಿಯ ಕೆರೆ ಸಾಧನಕೇರಿ ಹಾಗು ಕೆಲಗೇರಿಗಳ ಪಕ್ಕದಲ್ಲಿ ‘ಚಿನ್ನದ ಬೆಳೆಸು’ ತೋಟಗಳನ್ನು ನಿರ್ಮಿಸಲು ಅವಕಾಶವಿದೆ. ಪಕ್ಷಿ ಸಂಕುಲದ ಉಳಿವಿಗಾಗಿ ವಿದ್ಯಾನಗರಿಯಲ್ಲಿ ಇಂತಹ ಪ್ರಯತ್ನಕ್ಕೆ ಚಾಲನೆ ಸಿಕ್ಕರೆ? ಖ್ಯಾತ ಗ್ರಾಹಕ ತಜ್ನ, ಪರಿಸರವಾದಿ ಅಡ್ಡೂರು ಕೃಷ್ಣರಾವ್ ದಾಖಲಿಸುವಂತೆ- ಅನೇಕ ನಿರಾಶಾದಾಯಕ ಪ್ರಕರಣಗಳ ನಡುವೆಯೂ ಕೆಲ ಆಶಾದಾಯಕ ಸುದ್ದಿಗಳು ಹಕ್ಕಿಗಳ ಉಳಿವಿನ ಬಗ್ಗೆ ಭರವಸೆ ಮೂಡಿಸುತ್ತವೆ. ಉದಾಹರಣೆಗೆ ಮುಂಬೈದಂತಹ ನಗರಗಳಲ್ಲಿ ಪಾರಿವಾಳಗಳಿಗೆ ಕಾಳು ಎಸೆಯುವುದು ಹಲವರ ನಿತ್ಯದ ಪರಿಪಾಠವಾಗಿದೆ. ದೂರದ ರಾಜಸ್ಥಾನದಲ್ಲಿ ಹಕ್ಕಿಗಳ ಬದುಕುವ ಹಕ್ಕಿನ ರಕ್ಷಣೆಗಾಗಿ ಹಳ್ಳಿಗರು ಸದ್ದಿಲ್ಲದೇ ಕಾರ್ಯವೆಸಗುತ್ತಿದ್ದಾರೆ. ಅಲ್ಲಿಯ ಲಾಪೋಡಿಯಾ ಹಾಗು ಸುತ್ತ ಮುತ್ತಲಿನ ೭೦೦ ಹಳ್ಳಿಗಳಲ್ಲಿ ಲಕ್ಶ್ಮಣಸಿಂಗರ ಮುಂದಾಳುತ್ವದಲ್ಲಿ ಕಳೆದೊಂದು ದಶಕದಿಂದ ಜಲ ಸಂರಕ್ಷಣೆಯ ಕೆಲಸ ಸಹ ಪ್ರಚಾರವಿಲ್ಲದೇ ಸಾಗಿ ಬಂದಿದೆ. ನೆಲ-ಜಲ ಸಂರಕ್ಷಣೆಯ ತಜ್ನ ಶ್ರೀ ಪಡ್ರೆ ಪ್ರಕಾರ- ಲಾಪೋಡಿಯಾ ಹಾಗು ಇತರೆ ಹಳ್ಳಿಗಳಲ್ಲಿ ಹಲವಾರು ಕೆರೆಗಳಿಗೆ ಮರುಜೀವ ನೀಡಲಾಗಿದೆ. ತುಂಬಿನಿಂತ ಕೆರೆಗಳ ನೀರಿನಲ್ಲಿ ಹಕ್ಕಿಗಳಿಗೂ ಪಾಲಿದೆ ತಾನೆ? ಅಲ್ಲಿನ ಜನ ಇನ್ನೂ ಓಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೇಸಿಗೆಯಲ್ಲಿ ಹಕ್ಕಿಗಳಿಗೆ ಹಣ್ಣು, ಕಾಳು ಎಲ್ಲಿಂದ ಸಿಗಬೇಕು? ಅದಕ್ಕಾಗಿಯೇ ಅವರು ಹಕ್ಕಿಗಳಿಗಾಗಿಯೇ ಒಂದು ಗೋದಾಮು ಸ್ಥಾಪಿಸಿದ್ದಾರೆ. ಪ್ರತಿಯೊಂದು ಕುಟುಂಬವೂ ತನ್ನ ಬೆಳೆ ಕೊಯ್ದ ನಂತರ ಐದೈದು ಕಿಲೋ ಕಾಳು ದೇಣಿಗೆ ನೀಡಬೇಕು. ಇದು ಹಕ್ಕಿಗಳಿಗೆ ಮೀಸಲು! ಪರಿಸರ ಎಲ್ಲವನ್ನೂ ಸಹಿಸಿ ಕೊನೆಗೊಮ್ಮೆ ತಕ್ಕ ಉತ್ತರವನ್ನೇ ನೀಡುತ್ತದೆ. ಕೆಟ್ಟ ಮೇಲೆ ಬುಧ್ಧಿ ಬಂತು ಎನ್ನುವುದಕ್ಕಿಂತ ಪರಿಸರಕ್ಕೆ ಪೂರಕ ಹಾಗು ಪ್ರೇರಕ ಅಭಿವೃಧ್ಧಿ ತಂತ್ರಗಳತ್ತ ನಾವು ತುರ್ತಾಗಿ ಗಮನ ಹರಿಸಬೇಕು.

  • ಚಿಂತನೆ
~.~
  • Login or register to post comments
  • 227 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
  • ಪಕ್ಷಿ ಸಂಕುಲ ಪರಿಸರ ಆರೋಗ್ಯಕ್ಕೆ ಕೈಗನ್ನಡಿ
  • ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!
  • ನಮ್ಮ ರೈತರು ‘ಪರಿಸರ ಸ್ನೇಹಿ ನೆಲಮೂಲಜ್ನಾನ’ದ ಅದ್ಭುತ ವಿಜ್ನಾನಿಗಳು..!
  • ‘ನೀರ ನಿಶ್ಚಿಂತೆ’- ಅನ್ನದ ನೆಲ; ಅರಿವಿನ ಮುಗಿಲು, ಹುಬ್ಬಳ್ಳಿ ಕಾರ್ಯಾಗಾರ ಯಶಸ್ವಿ.
Syndicate content

ಲೇಖಕರು

harshavardhan v.sheelavant's picture

ಪೂರ್ಣ ಹೆಸರು
harshavardhan v. sheelavant

ಪರಿಚಯ

Assistant Professor, Institute of Mass Communication and Research, Hubli. Freelance Journalist. a netizen having own blog- 'arivinamarevu.blogspot.com.' Karnataka Media Academy awardee. AIR grade artist. Centre for Agricultural Media (CAM) Fellow. Love to contribute feature articles, farm crisis, rural and agri life. Happy to teach journalism, to promote citizen journalism.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 218 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator