ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೨

June 16, 2008 - 1:45pm — pallavi.dharwad

ಗಲಾಟೆ ಪ್ರಾರಂಭವಾಗುವ ಯಾವ ಮುನ್ಸೂಚನೆಯೂ ಅಂದು ಇರಲಿಲ್ಲ.

ಎಂದಿನಂತೆ ಶಾಂತವಾದ ಬೆಳಗು. ಆಗ ತಾನೇ ಕಾಲೇಜುಗಳು ಪ್ರಾರಂಭವಾಗಿದ್ದರಿಂದ, ಕಪ್ಪಡರಿದ ರಸ್ತೆಗಳ ತುಂಬ ಬಣ್ಣದ ಚಿಟ್ಟೆಗಳಂತೆ ಹೊರಟ ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಧಾರವಾಡದಲ್ಲಿ ಬಹುತೇಕ ಚಳುವಳಿಗಳು ಹುಟ್ಟಿವೆ. ಬೆಳೆದಿವೆ. ಪ್ರಸಿದ್ಧ ಗೋಕಾಕ್‌ ಚಳುವಳಿ ಕೂಡ ಹುಟ್ಟಿದ್ದು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಪುಟ್ಟ ಆವರಣದಿಂದ. ಹೀಗಾಗಿ, ಸಿಬಿಟಿ ಹತ್ತಿರದ ಗೊಬ್ಬರ-ಬೀಜದಂಗಡಿಗಳ ಸುತ್ತಮುತ್ತ ನೆರೆದಿದ್ದ ರೈತರು ಯಾರನ್ನೂ ಅಷ್ಟಾಗಿ ಆಕರ್ಷಿಸಲಿಲ್ಲ. ಬಿತ್ತನೆ ಸೀಸನ್‌ ಆಗಿದ್ದರಿಂದ, ರೈತರು ಗುಂಪಾಗಿ ನಿಂತಿರುವ ದೃಶ್ಯವೂ ಸಾಮಾನ್ಯವಾಗಿತ್ತು.

ಅಲ್ಲಿಯವರೆಗೆ ಗಾಳಿಯಲ್ಲಿ ಕೂಡ ಗದ್ದಲದ ವಾಸನೆ ಇರಲಿಲ್ಲ. ಎಂದಿನಂತೆ ರೈತರು ಗೊಬ್ಬರದ ಅಂಗಡಿ ಮುಂದೆ ಗುಂಪಾಗಿ ನಿಂತಿದ್ದರು. ಈ ಸಲ ಗೊಬ್ಬರ ಸಿಗುತ್ತದೋ ಇಲ್ಲವೋ, ಅಷ್ಟರಲ್ಲಿ ಮಳೆ ಬಂದರೆ ಹೇಗೆ? ಎಂಬ ಚಿಂತೆಯ ಮಾತುಗಳು ಕೇಳಿ ಬರುತ್ತಿದ್ದವು. ಅವತ್ತು ಸುಭಾಷ್‌ ರಸ್ತೆಯಲ್ಲಿ ಪುಸ್ತಕ ಕೊಳ್ಳಲು ಹೋಗಿದ್ದವಳಿಗೆ, ಇನ್ನು ಕೆಲ ಗಂಟೆಗಳಲ್ಲಿ ಧಾರವಾಡ ಹೊತ್ತಿ ಉರಿಯಲಿದೆ ಎಂಬ ಸಣ್ಣ ಸೂಚನೆಯೂ ಇರಲಿಲ್ಲ.

ಸ್ಕೂಟಿಯನ್ನು ಅಂಗಡಿ ಮುಂದೆ ನಿಲ್ಲಿಸಿ ಪುಸ್ತಕ ಹುಡುಕುತ್ತಿದ್ದೆ. ಒಂದಿಷ್ಟು ಹೊಸ ಪುಸ್ತಕಗಳು ಬಂದಿದ್ದವು. ರವಿ ಬೆಳಗೆರೆ ಅವರ ದಂಗೆಯ ದಿನಗಳು (ಅನುವಾದ), ತುಂಬ ದಿನಗಳಿಂದ ಹುಡುಕುತ್ತಿದ್ದ ಬಿ.ಎಂ.ಶ್ರೀ. ಅವರ ’ಕನ್ನಡ ಬಾವುಟ’, ತರುಣ್‌ ತೇಜ್‌ಪಾಲ್‌ ಅವರ ’Alchemy of desire' ಕಾದಂಬರಿ ಕಂಡು ಖುಷಿಯಾಗಿದ್ದೆ. ಆಗ ಇದ್ದಕ್ಕಿದ್ದಂತೆ ಜನ ಕೂಗಾಡುವ ಶಬ್ದ ಮಂಕಾಗಿ ಕೇಳಿಸಿತು.

ಮಾರುಕಟ್ಟೆ ಪ್ರದೇಶವಾಗಿದ್ದರಿಂದ ಜನ ಕೂಗಾಡುವುದು ಸಾಮಾನ್ಯ. ಆದರೆ, ಈ ಕೂಗು ಅಸಹಜವಾಗಿತ್ತು. ಇದ್ದಕ್ಕಿದ್ದಂತೆ ಕೂಗಿನ ಪ್ರಮಾಣ ಜೋರಾಯಿತು. ಅಂಗಡಿಯಲ್ಲಿದ್ದ ತುಂಬ ಜನ ಹೊರ ಬಂದು ಆಚೀಚೆ ನೋಡುತ್ತಿದ್ದುದನ್ನು ಕಂಡು ಕುತೂಹಲದಿಂದ ನಾನೂ ಹೊರಬಂದೆ. ಒಂದಿಷ್ಟು ಯುವಕರು ಉದ್ರಿಕ್ತರಾಗಿ ಆಚೀಚೆ ಓಡಾಡುತ್ತಿದ್ದರು. ಗಲಾಟೆ ನಡೆಯುತ್ತಿದೆ ಎಂದು ಗಾಬರಿಯಾದ ಅಂಗಡಿಯವರು, ಪುಸ್ತಕಗಳನ್ನು ಎತ್ತಿಟ್ಟಿರುತ್ತೇನೆ. ಇನ್ನೊಮ್ಮೆ ಬಂದಾಗ ಒಯ್ಯಿರಿ ಮೇಡಂ ಎಂದು ಅವಸರದಿಂದ ಷಟರ್‌ ಎಳೆದ.

ಹೀಗಾಗಿ ಸ್ಕೂಟಿ ಹತ್ತಿಕೊಂಡು ರೂಢಿಯಂತೆ ಕಾಲೇಜ್‌ ರಸ್ತೆಯ ಮೂಲಕ ಮನೆ ಕಡೆ ಹೊರಟಾಗ, ಲಕ್ಷ್ಮೀ ಥೇಟರ್‌ ಹತ್ತಿರ ಗಲಾಟೆಯಾಗುತ್ತಿದೆ ಎಂಬ ಸುದ್ದಿ ಬಂದಿತು. ನಾನು ಅಲ್ಲಿ ನಿಲ್ಲಲು ಹೋಗಲಿಲ್ಲ. ವಾಪಸ್‌ ಬಂದುಬಿಟ್ಟೆ.

ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಪೂರ್ತಿ ಬದಲಾಗಿ ಹೋಯಿತು. ಎಲ್ಲಾ ಕನ್ನಡ ಚಾನೆಲ್‌ಗಳಲ್ಲಿ ಧಾರವಾಡದ ಗಲಾಟೆಯದೇ ಸುದ್ದಿ. ರಸಗೊಬ್ಬರಕ್ಕಾಗಿ ಆಗ್ರಹಿಸಿ ರೈತರು ಹಿಂಸೆಗೆ ಇಳಿದಿದ್ದಾರೆ ಎಂಬ ಹೆಡ್‌ಲೈನ್‌ಗಳು. ಅಷ್ಟೊತ್ತಿಗೆ ಮೊದಲ ಬಸ್‌ ಬೆಂಕಿಗೆ ಆಹುತಿಯಾಗಿತ್ತು.

ನನಗೆ ಪರಿಸ್ಥಿತಿಯನ್ನು ನಂಬಲು ಆಗಲೇ ಇಲ್ಲ.

(ಮುಂದುವರೆಯುವುದು)

- ಪಲ್ಲವಿ ಎಸ್‌.

  • ಪ್ರಚಲಿತ
~.~
  • Login or register to post comments
  • 246 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೊಬ್ಬರಕ್ಕಾಗಿ ಧಗಧಗಿಸಿದ ಧಾರವಾಡ-೨
  • ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
  • ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
  • ಪುಸ್ತಕ ಸಂತೆ
  • ಯಾತಕ್ಕೆ ಮಳೆ ಹೋದವೋ...
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 108 ಅತಿಥಿಗಳು ಆನ್ಲೈನ್ ಇರುವರು.


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator