ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮಧ್ಯ ರಾತ್ರಿಯಲ್ಲಿ ರಸ್ತೆಯ ಮೌನ ಮಾತಾದಾಗ..

May 13, 2008 - 11:57pm — manjunath s reddy

ಉಪ್ ..... ಸಾಕಾಗಿಹೋಯಿತು ಈಗ ಎಷ್ಟು ಹಾಯಾಗಿ ಇದೆ. ಬೆಳಗಿನಿಂದ ಇಲ್ಲಿಯತನಕ ಒಂದೇ ಸಮನೆ ಕೆಲಸ ಮಾಡಿ ಈಗ ರೆಸ್ಟು ತೆಗೆದುಕೊಳ್ತಾ ಇದೀನಿ. ಈ ಜನರಿಗೆ ಬೆಳೆಗ್ಗೆ ಕಾಪಿ ಇಲ್ದೆ ಇದ್ರು ನಡೆಯುತ್ತೆ, ತಿಂಡಿ ತಿನ್ನದೆ ಹೋದ್ರು ನಡೆಯುತ್ತೆ. ಆದ್ರೆ ದಿನಕ್ಕೆ ಒಂದು ಸಲ ಆದ್ರೂ ನನ್ ಮೆಲೆ ಹಾದು ಹೋಗ್ದೆ ಇದ್ರೆ ಇವ್ರಿಗೆ ನಿದ್ದೆನೆ ಬರಲ್ಲ. ರಜಾ ದಿನಾ ಆದ್ರು ಸರಿ, ಕೆಲಸದ ದಿನ ಆದ್ರೂ ಸರಿ. ಸುಮ್ಮನೆ ಒಂದು ಸುತ್ತಾದ್ರು ಸುತ್ತೋಗ್ದೆ ಇದ್ರೆ ಇವ್ರ ಮನಸ್ಸಿಗೆ ನೆಮ್ದೀನೆ ಇರಲ್ಲ . ನನ್ ಮೇಲೆ ಬರೀ ಬಸ್ಸು ಲಾರಿ ಗಾಡಿಗಳಿಗಷ್ಟೇ ಪ್ರೀತಿ ಇಲ್ಲಾ ನಡ್ಕೊಂಡು ಹೋಗೋ ಜನರಿಗೂ ನನ್ ಮೇಲೆ ಅದೇನೊ ಒಂಥರಾ ಪ್ರೀತಿ. ಎಷ್ಟೇ ಚೆನ್ನಾಗಿ ದೊಡ್ಡದಾಗಿ ಪುಟ್ಪಾತ್ ಇದ್ರೂ ಸಹ ಇವ್ರು ನನ್ ಮೇಲೆನೆ ಹೋಗೊದು. ನನ್ ಮೇಲೆ ಮನುಷ್ಯ್ ರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಪ್ರೀತೀನೆ ... ಆದ್ರೆ ಈ ಪೋಲೀಸಪ್ಪ ಬಿಡಬೇಕಲ್ಲಾ ಯಾವಾಗ ನೋಡಿದ್ರೂ ಒಡಿಸ್ತಾನೆ ಇರ್ತಾನೆ.ಈ ಜನರಿಗೆ ನನ್ ಮೇಲೆ ಎಷ್ಟು ಪ್ರೀತಿ ಅಂದ್ರೆ ... ನಾನು ಹೇಗೇ ಇರ್ಲಿ ಅಂದ್ರೆ ನನ್ ಮೇಲೆ ಹಳ್ಳ ಇರಲಿ, ಕೊಳ್ಳ ಇರಲಿ, ಕೆಸರೇ ಇರಲೀ, ಮೊಸರು...[ ? ] ಇರಲಿ.. ಇವ್ರು ಮಾತ್ರ ನನ್ ಕೈ ಬಿಡಲ್ಲಾ. ನಾನು ಹೇಗೆ ಇದ್ರೂ ನನ್ನನ್ನ ಸ್ವೀಕರಿಸಿದ್ದಾರೆ, ಸ್ವೀಕರಿಸ್ತಾ ಇದ್ದಾರೆ, ಸ್ವೀಕರಿಸ್ತಾನೆ ಇರ್ತಾರೆ. ಆ ನಂಬಿಕೆ ನನಗಿದೆ.ಈ ಮೊದಲು ನನ್ನ ಅಕ್ಕ ಪಕ್ಕ ಮರಗಳಿದ್ದು ಎಷ್ಟೇ ಬಿಸಿಲಿದ್ದ್ರೂ ಸರಿ ಎಷ್ಟೇ ಜೋರಾಗಿ ಮಳೆ ಬಂದ್ರೂ ಸಹ ಕೊಡೆಯಂತೆ ನನ್ನನ್ನ ಕಾಪಾಡ್ತ ಚೆನ್ನಾಗಿ ನೋಡ್ಕೋಂತಾ ಇದ್ರು.ಆದ್ರೆ ನಾನೆ ಸ್ವಾರ್ಥಿಯಾಗಿ ನನ್ನನ್ನ ಬೆಳೆಸ್ಕೊಳ್ಳೊದಿಕ್ಕೆ ಅವುಗಳನ್ನೆಲ್ಲಾ ನುಂಗ್ಬಿಟ್ಟೆ. ಆದ್ರೆ ಅವುಗಳನ್ನ ಮರೆಯೊದಿಕ್ಕೆ ಆಗ್ದೆ ಅವುಗಳ ಪಳೆಯುಳಿಕೆಗಳನ್ನ ನನ್ನ ಒಡಲಲ್ಲಿ ಅಡಗಿಸಿಕೊಂಡಿದ್ದೀನಿ . ಇನ್ನು ಕೆಲವೇ ವರ್ಷದಲ್ಲಿ ಮೆಟ್ರೊ ಬರುತ್ತೇ ಅಂತ ನನ್ನ ಓರಗೆಯವರು ಮಾತಾಡ್ಕೊಂತಿದ್ರು. ಅದು ಬಂದ್ರೆ ನಮ್ಮನ್ನ ಯಾರು ಅಷ್ಟಾಗಿ ವಿಚಾರಿಸ್ಕೊಳ್ಳೋದಿಲ್ಲ ಅಂತೆ. ನಾನು ಆ ಬಗ್ಗೆ ತಲೆ ಕೆಡಿಸ್ಕೊಂಡಿಲ್ಲಾ.. ಯಾಕೆಂದ್ರೆ ನನಗೆ ಗೊತ್ತು ಎಷ್ಟೇ ಮೆಟ್ರೊ ಬಂದ್ರೂ ಸಹ ಜನ ನನ್ನನ್ನ ಮರೆಯೋದಿಲ್ಲಾ. ಅಷ್ಟು ಆತ್ಮ ವಿಶ್ವಾಸ ನನ್ಮೇಲೆ ನನಗಿದೆ.ಇಷ್ಟು ಸಾಕು ಎಷ್ಟೂ ಅಂತ ನನ್ ಬಗ್ಗೆ ನಾನ್ ಹೇಳ್ಕೊಳ್ಳಿ ಇನ್ನು ನೀವ್ ಹೊರಡಿ ಬೆಳಗಾಗೊದ್ರೊಳ್ಗೆ ನಾನು ಸ್ವಲ್ಪ ರೆಸ್ಟ್ ತಗೊಂತೀನಿ ನೀವು ಮನೇಗ್ ಹೋಗಿ ಎ ಸಿ ಹಾಕ್ಕೊಂಡು ಆರಾಮಾಗಿ ಮಲಗಿ...ಬೆಳೆಗ್ಗೆ ಸಿಗೋಣ..

  • ಚುಟುಕು ಬರಹ
~.~
  • Login or register to post comments
  • 283 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಗೆಳತಿ
  • ಮುಂದೇನು ...?
  • ರಾಹು ಕೇತು ಕಾಟ - ಭಾಗ ೧
  • 'ವರ್ಧಕ'ದೊಳಗಿನ 'ಧ್ವನಿ'
  • ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???
Syndicate content

ಲೇಖಕರು

manjunath s reddy's picture

ಪೂರ್ಣ ಹೆಸರು
manjunath s reddy

ಪರಿಚಯ

am a visual art student,art director in movies, adds, tele movies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ

ಇತ್ತೀಚಿನ ಪ್ರತಿಕ್ರಿಯೆಗಳು

  • ASHMYA
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:55pm
  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator