ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು
![]()
ಅಂದು ಸಂಪೂರ್ಣ ಕಾರ್ಪೋರೇಟ್ ಜಗತ್ತಿನಂತಿದ್ದ ಹೋಟೆಲ್ ಸೆಮಿನಾರ್ ರೂಮಿನಲ್ಲಿ ಇಷ್ಟು ಸ್ಪಷ್ಟ ಕನ್ನಡ ಮಾತನಾಡಿದ್ಯಾರು ಎಂದು ಎಲ್ಲರೂ ತಲೆ ಎತ್ತಿ ನೋಡಿದ್ದರು. ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿಯದವರೂ ಸ್ಕ್ರೀನಿನ ಮೇಲೆ ಬಂದು ಹೋಗುತ್ತಿದ್ದ ಗೂಗಲ್ ದುಮ್ಯಾಪುಗಳು, ಅದರೊಂದಿಗೆ ಪ್ರಸಾದ್ ರವರ GPS trail ಎಲ್ಲರ ಗಮನವನ್ನು ಸೆಳೆದಿತ್ತು.
ಇವತ್ತು ಪ್ರಸಾದ್ ಇಡಿಯ ಭರತ ಖಂಡ ಸುತ್ತಿ ಬರಲು ಸಜ್ಜಾಗಿದ್ದಾರೆ. ಅದೂ ತಮ್ಮ ಬೈಕಿನ ಮೇಲೆಯೇ. ಉದ್ದೇಶ ನೀರಿನ ಬಳಕೆ ಹಾಗೂ ಮೂಲಗಳ ಬಗ್ಗೆ, ಒಟ್ಟಾರೆ ಭಾರತದಲ್ಲಿನ ಸದ್ಯದ ನೀರಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸುವುದು. ತಮ್ಮ GPS ಡಿವೈಸ್ ಹಿಡಿದು ಅವರು ಹಿಡಿಯುವ ದಾರಿ ಅಂತರ್ಜಾಲದಲ್ಲಿ ರೆಕಾರ್ಡ್ ಮಾಡುತ್ತ ಹೋಗುವರು. ಜೊತೆಗೆ ತಮ್ಮ ಅನುಭವವನ್ನು ಕನ್ನಡದಲ್ಲಿ ಹಂಚಿಕೊಳ್ಳುವರು.
ಪ್ರಸಾದ್ ಜೊತೆ ಮೊನ್ನೆ ಮಾತನಾಡಿದೆವು. ಮಾತುಕತೆಯ ಕೆಲ ಭಾಗಗಳು ಇಗೋ ನಿಮ್ಮ ಮುಂದಿದೆ. (ಪುಟದ ಕೊನೆ ನೋಡಿ - ಸಂಪೂರ್ಣ ಲೇಖನ ಹಾಗೂ ಮತ್ತಷ್ಟು ಗ್ನು/ಲಿನಕ್ಸ್ ಹಬ್ಬದ ನಂತರ ಹಾಕುವೆ!)
ಪ್ರಸಾದ್ ರವರನ್ನು ಸಂಪರ್ಕಿಸಲು csp@arghyam.org ಗೆ ಇ-ಮೇಯ್ಲ್ ಮಾಡಿ. ಇವರೊಂದಿಗೆ ಅಯಾ ಊರುಗಳಿಂದ ಸ್ನೇಹಿತರೂ ಜೊತೆಗೂಡುತ್ತಿದ್ದಾರೆ. ನಿಮಗೆ ಆಸಕ್ತಿಯಿದ್ದರೆ ನೀವೂ ಜೊತೆಗೂಡಬಹುದು. ಹೆಚ್ಚಿನ ಮಾಹಿತಿಗೆ http://www.indiawaterportal.org/k2k/ ನೋಡಿ.
ಅವರ ಈ ಯಾತ್ರೆ ಶುಭವಾಗಲಿ ಎಂದು ಹಾರೈಸೋಣ, ಕನ್ನಡದವರೊಬ್ಬರಿಂದ ನಡೆಯುತ್ತಿರುವ ಇಂತಹ ಪ್ರಯತ್ನವೊಂದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ನೀಡೋಣ ![]()
ಪ್ರಸಾದ್ ರವರ ಯಾತ್ರೆಗೆ Flag off ಇಂದು, ಬೆಳಿಗ್ಗೆ 9.00 ಕ್ಕೆ,
ಫೋಟೋ ಕೃಪೆ: ಬೆಂಗಳೂರು ಮಿರರ್, ನಿಶಾಂತ್ ರತ್ನಾಕರ್.
| Attachment | Size |
|---|---|
| csp.mp3 | 13.37 MB |
| csp.ogg | 12.38 MB |

- Login or register to post comments
- 1017 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು
CSP ......ಸಿ ಎಸ್ ಶಾರದಾ ಪ್ರಸಾದ್ ..... ಚಿತ್ರದುರ್ಗದ ಇವನು .. ದಾವಣಗೆರೆಯಲ್ಲಿ ನಮ್ಮ ಇಂಜಿನಿಯರಿಂಗ್ ( BIET.. ಬಾಪೂಜಿ
) ಕಾಲೇಜಿನಲ್ಲಿ ನನ್ನದೇ ಬ್ರ್ಯಾಮ್ಚ ನ ಸಹಪಾಠಿ ! ...
ತುಂಬಾ ಪ್ರತಿಭಾವಂತ ... ಶಾರದಾ ಅಂದ್ರೆ ಇಡೀ ಕಾಲೇಜಿಗೆ ಗೊತ್ತು!.
ಅಪರೂಪಕ್ಕೊಮ್ಮೆ ನಮ್ಮ ಹಾಸ್ಟೆಲ್ ಗೆ ಬಂದಾಗ ನಮ್ಮ ರೂಮಿಗೂ ಬರುತಾ ಇದ್ದ... ಇತ್ತೇಚೆಗೆ ವರ್ಷಗಳೇ ಕಳೆದವು... ಮಾತನಾಡದೆ!
ಸಂಪದದಲ್ಲಿ ಅರ್ಘ್ಯಂ ಬಗ್ಗೆ ಜಾಹೀರಾತು ಶುರುವಾದಾಗಲೇ ಒಂದು ನಾಲಕ್ಕು ಸಾಲು ಬರಿಯೋಣ ಅನ್ನಿಸಿದರೂ ಅದೇಕೋ ಸಾಧ್ಯವಾಗಲೇ ಇಲ್ಲ. ಸೋಮಾರಿ ನಾನು
.
ಸುಮಾರು ಒಂದೂವರೆ - ಎರಡು ವರ್ಷದ ಹಿಂದೆ synopsis ಗೆ ರಾಜೀನಾಮೆ ಕೊಟ್ಟು ಅರ್ಘ್ಯಂ ಅನ್ನೋ NGO ಸೇರಿದಾಗೆ ಕೇವಲ ಪ್ರಶ್ನೆಗೊಸ್ಕರ ಒಂದು ಪ್ರಶ್ನೆ ಕೇಳಿದ್ದೆ. ಯಾಕೆ ನಾನ್-ಟೆಕ್ನಿಕಲ್ ಫೀಲ್ಡ್ ಗೆ ಬಂದೆ ? ಅಂತ. ಅವನು ಅಂದು ಏನೋ ಉತ್ರ ಕೊಟ್ಟ. ಮರೆತು ಹೋಗಿದೆ. ಅಂದು ಅವನು ತೆಗೆದುಕೊಂಡ ನಿರ್ಧಾರ ನನಗೆ .. ನನ್ನಂತವರಿಗೆ ಯಾವಾಗಲೂ ಒಪ್ಪಿತವೆ ... ಅದರೂ ಅಂತಹದ್ದೊಂದು ಪ್ರಶ್ನೆ ಕೇಳಿದ್ದೆ... ಪ್ರಶ್ನೆ ಕೇಳಬಾರದಿತ್ತು ಅಂತ ಮತ್ತೆ ಯಾವಾಗಲೋ ಅನ್ನಿಸಿದ್ದಿದೆ!!
ಮೊನ್ನೆ ೨೬ನೆ ತಾರೀಕು ಮಡಿವಾಳ ಕೆರೆ ಇಂದ ಹೊರಡ್ತೀನಿ ಅಂತ ಎಲ್ಲರಿಗೂ ಕಲ್ಸೊವಂತೆ ನಂಗೂ ಒಂದು ಮಿನ್ನೋಲೆ ಬಂದಿತ್ತು.
http://twitter.com/sharadaprasad ಇಲ್ಲಿಂದ ಅವನ ಸವಾರಿನ ಹಿಮ್ಬಾಲಿಸಬಹುದಂತೆ.
ಶುಭವಾಗಲಿ.... ಉದ್ದೇಶ ಸಾರ್ಥಕವಾಗಲಿ ಶಾರದಾ....
ಸವಿತೃ
ಉ: ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು
ಸುಮ್ಕೇ ಸುತ್ತೋದು ಪ್ರಯೋಜನವಿಲ್ಲಾ !
ಸುಸ್ತಾಗತ್ತೆ ಬೇರೆ ! ದಿನಕ್ಕೆ ಎ೦ಟು ಘ೦ಟೆ ಗಾಡಿ ಓಡಿಸಿ , ಎ೦ಟು ಘ೦ಟೆ ನಿದ್ದೇ ಮಾಡಿದರೂ , ಮಿಕ್ಕದ್ದು ನಾಲ್ಕೇ ನಾಲ್ಕು ಘ೦ಟೆ .
ಅತೀ ಕಡಿಮೆ ಸಮಯ.
ಇಷ್ಟು ಕಡಿಮೆ ಸಮಯದಲ್ಲಿ ನೀರಿನ ಬಗ್ಗೆ ಅಧ್ಯಯನ ಮಾಡೋದು ಆಗುತ್ತೋ ?
ನೀರು ಅ೦ದರೆ ನಮ್ಮ ಸ೦ಸ್ಕೃತಿಯಲ್ಲಿ ಬರೀ ವೇಗ ಅಷ್ಟೇ ಅಲ್ಲಾ .... ಮತ್ತೊ೦ದು ನದಿಯೊಡನೆ ಸ೦ಗಮ...
ಕೆಲವೊಮ್ಮ್ಮೆ ಜೋರು , ಕೆಲವೊಮ್ಮೆ ಮೆಲ್ಲಗೆ ಹರಿಯೋದು .
ಅದು ಬಿಟ್ಟು ಸುಮ್ಕೇ ದೇಶ ಸುತ್ತಿ ಬರ್ತೀನಿ ಅ೦ತಾ ಸುತ್ತಿದರೆ ಸುಸ್ತಾಗುತ್ತೆ ಹೊರತು ಯಾವುದೇ ಪ್ರಯೋಜನ ವಿರೋದಿಲ್ಲಾ.
ಕರ್ಮ ಮಾಡ ಬೇಕಾದರೆ ಜ್ಞಾನವೂ ಮುಖ್ಯ ತಾನೇ ?