ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಸೇರಿಗೆ ಸವಾಸೇರು

March 19, 2008 - 5:36pm — rameshbalaganchi

ಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರಹ, ಆಶೀರ್ವಾದಗಳ ಬೇಡಿಕೆ, ನಮಸ್ಕಾರ ಹೆಚ್ಚಿನವುಗಳಲ್ಲಿದ್ದರೆ, ಅಲ್ಲಲ್ಲಿ ಮಾತಿನ ಚಮತ್ಕಾರಕ್ಕೂ ಸ್ಥಾನವಿದೆ. ಮಂಗಳ ಶ್ಲೋಕಗಳಲ್ಲಿ ಸಂವಾದಗಳು ಹೊಸದೇನಲ್ಲ. ಆದರೆ ಕೆಲವು ತಮ್ಮ ಕಲ್ಪನಾಚಾತುರ್ಯ, ಲವಲವಿಕೆಯ ಸಂಭಾಷಣೆ ಮೊದಲಾದ ಅಂಶಗಳಿಂದ ಆಪ್ತವಾಗಿಬಿಡುತ್ತವೆ. ಸಂಸ್ಕೃತಸಾಹಿತ್ಯದ ಸ್ವಲ್ಪ ಪರಿಚಯ ಇರುವವರಿಗೂ ಪಾರ್ವತಿ-ಬಾಲಗಣೇಶರ ಸಂವಾದರೂಪದ ಶ್ಲೋಕ " ಹೇ ಹೇರಂಬ, ಕಿಮಂಬ ರೋದಿಷಿ ಕುತ:............." ಪರಿಚಯವಿದೆ. ಅದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ಶ್ಲೋಕ ಇಲ್ಲಿದೆ.
कोऽयं द्वारि? हरि: प्रयाह्युपवनं शाखामृगस्यात्र किम्!
कृष्णोऽहं दयिते बिभेमि सुतरां कृष्णादहं वानरात्॥
मुग्धेऽहं मधुसूदन: पिब लतां तामेव तन्वीं अले
इत्थं निर्वचनीकृतो दयितया हीतो हरि: पातु व:॥

ಕೋsಯಂ ದ್ವಾರಿ, ಹರಿ:, ಪ್ರಯಾಹ್ಯುಪವನಂ ಶಾಖಾಮೃಗಸ್ಯಾತ್ರ ಕಿಮ್!

ಕೃಷ್ಣೋsಹಂ ದಯಿತೇ ಬಿಭೇಮಿ ಸುತರಾಂ ಕೃಷ್ಣಾದಹಂ ವಾನರಾತ್||

ಮುಗ್ಧೇSಹಂ ಮಧುಸೂದನ: ಪಿಬ ಲತಾಂ ತಾಮೇವ ತನ್ವೀಂ ಅಲೇ

ಇತ್ಥಂ ನಿರ್ವಚನೀಕೃತೋ ದಯಿತಯಾ ಹ್ರೀತೋ ಹರಿ: ಪಾತು ವ:||

ಶ್ಲೋಕದ ಹಿನ್ನೆಲೆ ಹೀಗಿದೆ: ರಾಧೆ ಕೃಷ್ಣನಿಗಾಗಿ ಕಾತರಿಸಿ ಹಂಬಲಿಸುತ್ತಿರುವ ದಿನವಿಡೀ ಆತ ಅವಳ ಸನಿಹಕ್ಕೂ ಸುಳಿದಿರುವುದಿಲ್ಲ. ಆಶಾಭಂಗ, ಸಿಟ್ಟುಗಳಿಂದ ತತ್ತರಿಸುತ್ತಿರುವ ರಾಧೆ ಮನದಲ್ಲಿಯೇ ಸೇಡಿಗೆ ಹಾತೊರೆಯುತ್ತಿರುವ ಹೊತ್ತಲ್ಲಿ ರಾತ್ರಿ ಅವಳ ಮನೆಬಾಗಿಲು ಬಡಿವ ಸದ್ದು!!
ರಾಧೆಯ ಸಂಭಾಷಣೆಯಿಂದ ಈ ಶ್ಲೋಕ ಶುರುವಾಗುತ್ತದೆ.

"ಯಾರಲ್ಲಿ ಬಾಗಿಲಲಿ?" "ನಾನು ಹರಿ, ಪ್ರಿಯತಮೆ" ತೊಲಗು ತೋಟಕೆ ಗಡವ ಕೋತಿಯಿಲ್ಲೇಕೆ?"
"ದಯವಂತೆ, ನಾ ಕೃಷ್ಣ" "ಕಪ್ಪು ಕತ್ತಲೆಯೇ? ಕೋತಿಗಿಂತಲು ನಾನು ಹೆದರುವೆನು ಅದಕೆ.
"ಮುಗುದೆಯೇ ನನ್ನನ್ನು ಮಧುಸೂದನನೆಂಬರು" ಹೋಗಾಚೆ ಎಲೆ ದುಂಬಿ, ಹೀರು ಹೂಬಳ್ಳಿಯನು"
ಈ ಪರಿಯಲಾ ಹರಿಯೆ ನಾಚಿ ಬಾಯ್ಮುಚ್ಚಿರಲು ಅವನ ಕರುಣೆಯೆ ಸಲಹಲೆಮ್ಮನನವರತ.

ತನ್ನ ಪರಿಚಯ ಹೇಳಿಕೊಳ್ಳಲು ಕೃಷ್ಣ ಬಳಸುವ ತನ್ನ ಬೇರೆ ಬೇರೆ ಹೆಸರುಗಳಿಗೆ ಬೇರೆ ಬೇರೆ ಅರ್ಥ ಕೊಟ್ಟು ಕೃಷ್ಣನನ್ನೇ ಕಿಚಾಯಿಸುತ್ತಾಳೆ ರಾಧೆ!!
ಇಲ್ಲಿರುವ ಮತ್ತೊಂದು ಸ್ವಾರಸ್ಯ ಎಂದರೆ ಸಂಸ್ಕೃತದ " ನಿರ್ವಚನ" ಪದದ ಬಳಕೆ. ನಿರ್ವಚನ ಶಬ್ದಕ್ಕೆ ಇರುವ ನಿತ್ಯದ ಅರ್ಥದೊಡನೆ "ಬಾಯ್ಮುಚ್ಚಿಸು" ಎಂಬ ಅರ್ಥವನ್ನೂ ಧ್ವನಿಸುತ್ತದೆ.

** ಕೃಷ್ಣನ ತರಹೇವಾರಿ ಹೆಸರುಗಳಿಗೆ ರಾಧೆ ಬೇಕೆಂತಲೇ ಕಲ್ಪಿಸುವ ಕೀಟಲೆಯ ಅರ್ಥಗಳು
1) ಹರಿ= ಕೋತಿ
2) ಕೃಷ್ಣ= ಕಾರ್ಗತ್ತಲೆ
3)ಮಧುಸೂದನ= ದುಂಬಿ

  • ಕಾವ್ಯ ಮತ್ತು ಕವನ
~.~
  • Login or register to post comments
  • 427 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 20, 2008 - 4:14am — hamsanandi

ಉ: ಸೇರಿಗೆ ಸವಾಸೇರು

hamsanandi's picture

ರಮೇಶರೇ,

ಅನುವಾದ ಬಹಳ ಚೆನ್ನಾಗಿದೆ - ಕೇಳಿರಲಿಲ್ಲ ಈ ಶ್ಲೋಕವನ್ನು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 6:08pm — rameshbalaganchi

ಉ: ಸೇರಿಗೆ ಸವಾಸೇರು

rameshbalaganchi's picture

ನಿಮ್ಮ ಪ್ರೋತ್ಸಾಹಕ್ಕ್ದೆ ಧನ್ಯವಾದಗಳು, ಕೃತಜ್ಞತೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 8:11am — ವೈಭವ

ಉ: ಸೇರಿಗೆ ಸವಾಸೇರು

ವೈಭವ's picture

Smiling Smiling ಚನ್ನಾಗಿತ್ತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 7:45pm — rameshbalaganchi

ಉ: ಸೇರಿಗೆ ಸವಾಸೇರು

rameshbalaganchi's picture

ನನ್ನ ಬರಹಕ್ಕಿಂತ ನಿಮ್ಮ ಚುಟಿಕಿನ ಪ್ರತಿಕ್ರಿಯೆ ಇನ್ನೂ ಚೆನ್ನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 6:46pm — mahesha

ಉ: ಸೇರಿಗೆ ಸವಾಸೇರು

mahesha's picture

ಹೀಗೆ ಒಂದು ಪಾರ್ವತಿ ಮತ್ತು ಶಿವರ ನಡುವೆ ಇದೆ..

ಶಿವಾ=ಹೆಣ್ಣು ನರಿ
ಶೂಲಿ = ಹೊಟ್ಟೆನೋವಿರುವವನು
ನೀಲಕಂಠ = ನವಿಲು
ಸ್ಥಾಣು = ಮೋಟುಮರ

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 7:47pm — rameshbalaganchi

ಉ: ಸೇರಿಗೆ ಸವಾಸೇರು

rameshbalaganchi's picture

ನಮ್ಮೊಡನೆ ಅದನ್ನುಹಂಚಿಕೊಳ್ಳಬಾರದೇಕೆ ಮಹೇಶ್?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನಪು
  • ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
  • ಸರ್ವಶುಕ್ಲಾ ಸರಸ್ವತೀ!
  • ರಾಧೆಗೊಬ್ಬನಿದ್ದ ಕೃಷ್ಣ
  • ರಾಧೆಗೊಬ್ಬನಿದ್ದ ಕೃಷ್ಣ
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 91 ಅತಿಥಿಗಳು ಆನ್ಲೈನ್ ಇರುವರು.


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator