ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮುಂಗೋಪಿ ಗುಂಡ

March 18, 2008 - 10:43am — agilenag
ಗುಂಡ

ಇತ್ತೀಚೆಗೆ ಉಮ್ ರಾಜ್ ಜಾನ್.ಕಾಮ್ ಪ್ರಕಟಿಸಿದ ಒಂದು ಚಿಕ್ಕ ನೀತಿ ಕಥೆ ನನಗೆ ತುಂಬಾ ಇಷ್ಟವಾಯಿತು. ಅದರ ಕನ್ನಡ ಅನುವಾದವನ್ನು ಈ ಕೆಳಗೆ ಕೊಡುತ್ತಿದ್ದೇನೆ. ಸಂಪದದ ಓದುಗರು ಇಷ್ಟಪಡುವರೆಂದು ಭಾವಿಸಿದ್ದೇನೆ.

ಗುಂಡ ತುಂಬಾ ಮುಂಗೋಪಿ. ಯಾವಾಗಲೂ ಅವನು ಮುಖ ಸಿಂಡರಿಸಿಕೊಂಡೇ ಇರುತ್ತಿದ್ದ. ಅದರಿಂದಾಗಿ ಅವನಿಗೆ ಸ್ನೇಹಿತರೂ ಇರಲಿಲ್ಲ, ಶಾಲೆಯಲ್ಲೂ, ಮನೆಯಲ್ಲೂ ಒಬ್ಬಂಟಿಯಾಗಿ ಇರುತ್ತಿದ್ದ. ಒಂದು ದಿನ ಹೀಗೆ ಏನೋ ಯೋಚಿಸುತ್ತಾ ಕುಳಿತಿದ್ದಾಗ, ಅವನಿಗೆ ತನಗೂ ತನ್ನ ಸ್ನೇಹಿತರಿಗೂ ಇರುವ ವ್ಯತ್ಯಾಸವೇನೆಂದು ಹೊಳೆಯಿತು. ಅದರ ಪರಿಹಾರಕ್ಕಾಗಿ ಅವನು ತಕ್ಷಣ ಎದ್ದು ತನ್ನ ತಂದೆಯ ಬಳಿಗೋಡಿದ. ತನ್ನ ಕಷ್ಟವನ್ನು ಹೇಳಿಕೊಂಡ. ಅವನ ತಂದೆ ಅವನಿಗೆ ಒಂದು ಕೇಜಿಯಷ್ಟು ಮೊಳೆಗಳನ್ನು ಕೊಟ್ಟು, "ನಿನಗೆ ಕೋಪ ಬಂದಾಗ, ಯಾರ ಮೇಲೂ ತೋರಿಸಿಕೊಳ್ಳಬೇಡ, ಬದಲಾಗಿ ಇಲ್ಲಿರುವ ಮೊಳೆಗಳಲ್ಲಿ ನಿನಗೆ ಬೇಕಾದಷ್ಟನ್ನು ನಮ್ಮ ಮನೆಯ ಕಾಂಪೌಂಡ್ ಗೋಡೆಗೆ ಹೊಡಿ. ಕೋಪ ಶಮನವಾದಮೇಲೆ ನಿನ್ನ ಬೇರೆ ಕೆಲಸ ನೋಡಿಕೊ" ಎಂದರು. ಅವನು ಅದನ್ನೇ ಪಾಲಿಸುತ್ತಾ ಬಂದ. ಮೊದಲು ಮೊದಲು ಹತ್ತಾರು ಮೊಳೆಗಳನ್ನು ಹೊಡೆಯುತ್ತಿದ್ದವನು, ದಿನ ಕಳೆದಂತೆ ಅದರ ಸಂಖ್ಯೆ ಕಮ್ಮಿ ಮಾಡುತ್ತಾ ಬಂದ. ಅವನ ಕೋಪವೂ ಇಳಿಯುತ್ತಾ ಹೋಯಿತು. ಒಂದು ದಿನ ಕೋಪ ಬರುತ್ತಿದೆ ಎನಿಸುತ್ತಿದ್ದಂತೆಯೇ ಮೊಳೆಯ ಬಳಿಗೋಡಿದ. ಆದರೆ ಅವನಿಗೇ ನಗು ಬಂತು. ಹಿಂದಿರುಗಿ ಬಂದು ತಂದೆಗೆ "ಅಪ್ಪಾ, ನಾನು ಎಂತಹ ಮೂರ್ಖನಾಗಿದ್ದೆ. ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುತ್ತಿದ್ದೆ, ಈಗ ನೋಡು ನಾನು ಕೋಪವನ್ನು ಜಯಿಸಿದ್ದೇನೆ" ಎಂದ. ಅವನ ತಂದೆ "ತುಂಬಾ ಸಂತೋಷ ಗುಂಡ. ಆದರೆ, ನೀನು ಕೋಪದಿಂದ ಹೊಡೆದಿರುವ ಮೊಳೆಗಳನ್ನು ಈಗ ಕಿತ್ತು ಹಾಕಿ ಬಾ" ಎಂದರು. ಹಾಗೆಯೇ ಮಾಡಿದ ಗುಂಡ ಮತ್ತೆ ತಂದೆಯ ಎದುರು ನಿಂತ. ಅವನ ತಂದೆ "ಗುಂಡಾ, ನೀನು ಮೊಳೆಯನ್ನೇನೋ ಕಿತ್ತೆ, ಆದರೆ ಆ ಮೊಳೆಗಳು ಕಾಂಪೌಂಡಿಗೆ ಮಾಡಿರುವ ಗಾಯಗಳನ್ನು ಅಳಿಸಲು ಸಾಧ್ಯವೇ ನೋಡು" ಎಂದರು. ಆಗ ಗುಂಡ "ಇಲ್ಲಾಪ್ಪ, ನನ್ನಿಂದ ಅದು ಸಾಧ್ಯವಿಲ್ಲ" ಎಂದ. ಅವನ ತಂದೆ "ಮಗೂ ಹಾಗೆಯೇ ನಾವು ಸಿಟ್ಟಿಗೆದ್ದು ಇನ್ನೊಬ್ಬರ ಮನಸ್ಸಿಗೆ ಗಾಯ ಮಾಡುವುದಕ್ಕೂ ಪರಿಹಾರವಿರುವುದಿಲ್ಲ. ಆದ್ಡರಿಂದ ಇನ್ನೊಬ್ಬರ ಮನಸ್ಸಿಗೆ ಗಾಯವಾಗದ ಹಾಗೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ" ಎಂದರು. ಗುಂಡ ಸಂತೃಪ್ತನಾದ.

ಎ.ವಿ. ನಾಗರಾಜು

  • ಸಣ್ಣ ಕಥೆ
~.~
  • Login or register to post comments
  • 332 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೀಟಲೆ
  • ಸ್ವಲ್ಪ ನಗಿ
  • ಸ್ವಲ್ಪನಗಿ
  • ಗುಂಡ
  • ಹೊಸ ಮೊಬೈಲ್
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಗಲವಾಡದ ಗಿರಿಯೊಡೆಯ ಸ್ವಯಂವ್ಯಕ್ತ ಶ್ರೀ ಲಕ್ಷ್ಮೀ ವೆಂಕಟರಮಣ...
  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:10pm
  • Deeparavishankar
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:01pm
  • savithasr
    ಉ: ಸ್ವಾತಂತ್ರ್ಯ ಮತ್ತು ಸ್ವರಾಜ್ಯ
    October 8, 2008 - 2:51pm
  • mahesha
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:37pm
  • venkatesh
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:17pm
  • girish.rajanal
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:08pm
  • Deeparavishankar
    ಉ: ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
    October 8, 2008 - 1:59pm
  • venkatesh
    ಉ: ವಿಮಾನದಿಂದ ಕೆಳಗೆ ಕಾಣುವ ಚಿತ್ರ !
    October 8, 2008 - 1:55pm
  • Deeparavishankar
    ಉ: ನನ್ನ ಮನಸ್ಸಿನ ಅಜ್ಞಾನ
    October 8, 2008 - 1:55pm
  • Deeparavishankar
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 8, 2008 - 1:50pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator