ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮನಸ್ಸಿನ ಮನಸ್ಸೆ...

February 8, 2008 - 12:02am — somashekar

ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೇ, ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ ಅಲ್ಲ ಹೀಗೂ ಅಲ್ಲ ಎಂದು ಎರಡು ಭಾವನೆಯನ್ನು ಒಪ್ಪಿಕೊಳ್ಳದೆ ಕೊನೆಗೆ ಏನೂ ಮಾಡದೆ ಸುಮ್ಮನ್ನೆ ಇರುವುದು. ಹರಿಯುವ ನೀರಿಗೆ ಹಲವು ದಾರಿ, ಝರಿಯಾಗಿ ಹರಿದರು ಸಾಕು ಹೊಳೆಯಾಗುವ ಸಾಮರ್ಥ್ಯ ಹೊಂದಿರುತ್ತದೆ. ಹೀಗೆ ಒಳ್ಳೆಯದ್ದನ್ನು ಯೋಚಿಸುವ ಮನಸ್ಸು ಕಲ್ಪನೆಯ ಅಲೆಗಳನ್ನು ಸೃಷ್ಟಿಸಬಹುದು. ಏನಿದು, ಬರೀ ನೀರು, ಅಲೆ, ಹೊಳೆ, ಉಯ್ಯಾಲೆ ಅಂತೀರಾ... ಪ್ರತಿಯೊಬ್ಬರ ಒಳಗೆ ತಮ್ಮನ್ನು ತಾವು ಎಚ್ಚರಿಸಿಕೊಳ್ಳಲು ಒಬ್ಬ ವ್ಯಕ್ತಿ ಇರುತ್ತಾನೆ, ಅದೇ ಮನಸ್ಸು, ಈ ಮನಸ್ಸು ನಿಮ್ಮನ್ನು ನೆಡೆಸುವವನು. ಒಳ್ಳೆದಾರಿಯೇ ಆಗಲಿ, ಅಂದರೆ ಏಳಿಗೆಯ ದಾರಿ ಕಡೆ ನಡೆಸುತ್ತಾನೆ, ಕೆಲವೊಮ್ಮೆ ತಪ್ಪು ಮಾಡುವಂತೆ ಮಾಡುವನು ಅವನೇ. ಮನಸ್ಸಿನ ವರ್ತನೆ, ಅದರಿಂದ ನಿಮ್ಮ ನಡವಳಿಕೆ, ಎಲ್ಲವೂ ಮನಸ್ಸಿನ ಮೇಲೆ ವಾತಾವರ್ಣದ, ಸ್ನೇಹದ, ಪ್ರೀತಿಯ ಭಾವನೆಗಳು ಪರಿಣಮಿಸುವ ಕಾರಣ ಬಲವಾಗುತ್ತದೆ. ಮನಸ್ಸು ನಮ್ಮೊಳಗಿನ ಗೆಳೆಯ, ನಮ್ಮ ಸಂತೋಷ, ದುಃಖ ಎಲ್ಲವನ್ನು ಸ್ವೀಕರಿಸುವವನು ಮನಸ್ಸು ಎಂಬ ಸ್ನೇಹಿತ. ಒಳ್ಳೆಯದು, ಕೆಟ್ಟದ್ದು ಎಂಬ ಎರಡು ಭಾವನೆಗಳ ಒಡೆಯ ಈ ಮನಸ್ಸು, ಅವುಗಳ ಮಧ್ಯೆ ಜಗಳ ಬಂದಾಗ ಸರಿಯಾಗಿ ನಿರ್ಧರಿಸಿ ನಮ್ಮನ್ನು ಸರಿಯಾದ ನಡೆಸುವವನು ಮನಸ್ಸು. ಮನಸ್ಸಿನ ಮಾತುಗಳು ಬಹಳ ಸೂಕ್ಷ್ಮ, ಮನಸ್ಸು ಪ್ರಯಾಣಿಸುವ ಗಾಡಿಯ ಎರಡು ಎತ್ತುಗಳು, ಒಳ್ಳೆಯ ಕಡೆ ದೃಷ್ಟಿಯನ್ನು ಹರಿಸುವುದಾದರೆ ಎರಡು ಕಣ್ಣುಗಳು. ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಎರಡು ಕಾಲುಗಳು, ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ ಎರಡು ಕೈಯಿಗಳು. ಹೀಗೆ, ಎರಡು ಭಾವನೆಗಳು ಮನಸ್ಸಿಗೆ ಆಧಾರ. ಜೀವನದಲ್ಲಿ ಯಾವುದೇ ವಿಷಯವಾಗಲಿ ಮನಸ್ಸಿಗೆ ಬಿಡಿ, ಮನಸ್ಸು ಹೇಳಿದ್ದನ್ನು ಮಾಡಿ, ಮನಸ್ಸು ಮಾಡಿ ಕೆಲಸಗಳನ್ನು ಮಾಡಿ. ಮಾತುಗಳನ್ನು ಆಡುವ ಮುನ್ನ ಮನಸ್ಸನ್ನು ಕೇಳಿ. ಮನಸ್ಸು ನಿಮ್ಮ ಗೆಳೆಯ ಅವನಿಗೆ ಯಾವುದೆ ಅಹಿತಕರವಾದದ್ದು ಮಾಡಬೇಡಿ, ಅವನಿಗೆ ಇಷ್ಟವಿಲ್ಲದ ಕೆಲಸ ನಮಗೂ ಬೇಡ, ನೋವು ಮಾಡದೆ ಸ್ನೇಹ ಉಳಿಸಿ, ಪ್ರೀತಿಯನ್ನು ಗೆಲ್ಲಿ.

ಮನಸ್ಸಿದ್ದರೆ ನರ ಮನುಷ್ಯ,
ಬಯಸಿ ಬರೀ ಹರುಷ,
ಇರಲಿ ಕಹಿಯ ಸ್ಪರ್ಶ,
ಜೀವನ ಜೇನಾಗಲಿ ಪ್ರತಿ ನಿಮಿಷ...

-ಸೋಮು...

  • ಪ್ರಚಲಿತ
~.~
  • Login or register to post comments
  • 319 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 9, 2008 - 11:06pm — uniquesupri

ಉ: ಮನಸ್ಸಿನ ಮನಸ್ಸೆ...

uniquesupri's picture

ಬಯಸಿ ನಿತ್ಯ ಹರುಷ
ಇರಲಿ ನೋವಿನ ಸ್ಪರ್ಶ
- ಎಂಥ ಒಳ್ಳೆಯ ಮಾತು
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೬: ಮನಸ್ಸು ಕೋತಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ವಚನ ಚಿಂತನ ೪ : ಮನಸ್ಸು ಹೀಗೆ..
  • ಮನಸ್ಸು
  • ಮನಸ್ಸು
Syndicate content

ಲೇಖಕರು

somashekar's picture

ಪೂರ್ಣ ಹೆಸರು
somashekar

ಪರಿಚಯ

i'm somu...doing my final year engg. hobbies: love to pen my thoughts, do write poems n articles in my mother tongue 'Kannada'...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಇತ್ತೀಚಿನ ಪ್ರತಿಕ್ರಿಯೆಗಳು

  • gurumlr
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 7, 2008 - 8:26pm
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 7, 2008 - 8:09pm
  • agilenag
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 7, 2008 - 7:51pm
  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:34pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator