ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

October 2, 2007 - 4:34pm — ismail

ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವಾತ್ಮಕ ದೇಶ ಭಾಷೆಯೂ ಆಗಿಬಿಟ್ಟಿದೆ. ಈ ಪ್ರಕ್ರಿಯೆಗಳು ತೆರೆದಿಟ್ಟಿರುವ ಸಾಧ್ಯತೆಗಳ ಜತೆ ಜತೆಯಲ್ಲೇ ಕನ್ನಡ ಭಾಷೆ, ಅದರ ಅಕ್ಷರಗಳಿಗಿರುವ ಅನನ್ಯತೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ಚಾಲನೆಯಲ್ಲಿವೆ. ಇದಕ್ಕೆ ಉತ್ತಮ ಉದಾಹರಣೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಆಪರೇಟಿಂಗ್ ಸಿಸ್ಟಂಗಳಲ್ಲಿ ನೀಡುತ್ತಿರುವ ಕನ್ನಡ ಸವಲತ್ತಿನ ಕೊರತೆಗಳು. ಈ ಕುರಿತಂತೆ ಈಗಾಗಲೇ ಸಂಪದದಲ್ಲಿಯೇ ಸಾಕಷ್ಟು ಚರ್ಚೆಗಳು ನಡೆದಿರುವುದರಿಂದ ಅದನ್ನು ಮತ್ತೊಮ್ಮೆ ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

ಸದ್ಯ ಕರ್ನಾಟಕ ಸರಕಾರ ಮೈಕ್ರೋಸಾಫ್ಟ್ ನ ಜತೆ ಒಂದು ತಿಳಿವಳಿಕೆ ಪತ್ರ ಮಾಡಿಕೊಂಡಿದೆ. ಇದನ್ನು ವಿವರಿಸುವುದಕ್ಕೆ ಮೈಕ್ರೋಸಾಫ್ಟ್ ಮಾಮೂಲಿನ ಮೆಮರಾಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ (MOU)ಎಂಬ ಪದ ಬಳಸದೆ ಲೆಟರ್ ಆಫ್ ಇಂಟೆಂಟ್ ಎಂಬ ಪದ ಬಳಸಿತು. ಇದು ಉದ್ದೇಶಪೂರ್ವಕವಾದುದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಲೆಟರ್ ಆಫ್ ಇಂಟೆಂಟ್ ಎಂಬುದು ಸಾಮಾನ್ಯನಿಗೆ ಸ್ವಲ್ಪ ಹೊಸತಾತ ಪದ. ಯಾವುದೋ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಾರೆ ಎಂಬ ಭ್ರಮೆ ಹುಟ್ಟಿಸಬಲ್ಲ ಪದ. ಕಾನೂನಿನ ಪರಿಭಾಷೆಯಲ್ಲಿ ಇದಕ್ಕೂ MOUಗೂ ವ್ಯತ್ಯಾಸವಿಲ್ಲ. ಒಪ್ಪಂದವೊಂದರ ಪೂರ್ವ ಭಾವಿಯಾಗಿ ಮಾಡಿಕೊಳ್ಳುವ ಕರಾರು ಇದು.

ಈ ಕರಾರು ಹೇಳುವ ವಿಷಯಗಳೇನು ಎಂಬುದನ್ನು ಈ ವರದಿ ವಿವರಿಸುತ್ತಿದೆ. ಮೈಕ್ರೋಸಾಫ್ಟ್ ನ ಸಲಹೆಗಾರರನ್ನೂ ಉತ್ಪನ್ನಗಳನ್ನೂ ಖರೀದಿಸಿ ಮಾಡುವ ವಿದ್ಯುನ್ಮಾನ ಆಡಳಿತ ಮತ್ತು ಸೃಷ್ಟಿಸುವ ಕಾಗದ ರಹಿತ ಕಚೇರಿಗಳ ಪರಿಣಾಮ ಹೇಗಿರಬಹುದು?

ಮೈಕ್ರೋಸಾಫ್ಟ್ ನ ತುಂಗಾ ಫಾಂಟಿನ ದುರವಸ್ಥೆ, 'ರ್ಯಾಂಕ್' ಸಮಸ್ಯೆ ಮತ್ತು ಅದರ ಮೈಕ್ರೋಸಾಫ್ಟ್ ನೀಡುತ್ತಿರುವ ಕನ್ನಡ ಎಲ್ ಐಪಿಯಲ್ಲಿ ಇರುವ ಭೀಕರ ಕನ್ನಡಗಳ ಹಿನ್ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜತೆಗೆ ಇದನ್ನು ಸರಿಪಡಿಸಿಕೊಳ್ಳಲು ಮನಸ್ಸು ಮಾಡದೆಯೇ ಮುಂದುವರಿಯುತ್ತಿರುವ ಅದರ ಮನೋಭಾವವನ್ನೂ ಪರಿಗಣಿಸಿ ಸರಕಾರ ಮಾಡಿಕೊಂಡಿರುವ MOUನ ಪರಿಣಾಮಗಳನ್ನು ನೋಡಬೇಕಾಗಿದೆ.

ಮೈಕ್ರೋಸಾಫ್ಟ್ ಬಳಸುವ ಲಾಕ್ ಇನ್ ವ್ಯಾಪಾರ ತಂತ್ರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಸರಕಾರೀ ಆಡಳಿತ ಯಂತ್ರದ ಮೇಲೂ ಮೈಕ್ರೋಸಾಫ್ಟ್ ಏಕಸ್ವಾಮ್ಯವನ್ನು ಸಾಧಿಸಲು ಅವಕಾಶ ಒದಗಿಸುವುದು ದೂರಗಾಮಿಯಾದ ದುಷ್ಪರಿಣಾಮಗಳನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಕನ್ನಡವನ್ನು ತನ್ನ ಮೂಗಿನ ನೇರಕ್ಕೆ ಬೇಕಿರುವಂತೆ ಬಗ್ಗಿಸುವುದು ಒಂದು ಸಮಸ್ಯೆಯಾದರೆ ಅಪಾರದರ್ಶಕ ತಂತ್ರಜ್ಞಾನದ ಬಳಕೆ ಮತ್ತೊಂದು ಸಮಸ್ಯೆ. ಇದನ್ನು ಕನ್ನಡದ ಮೇಲೆ ಅಭಿಮಾನ ಹಾಗೂ ತಂತ್ರಜ್ಞಾನದ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ಎಲ್ಲರೂ ವಿರೋಧಿಸಬೇಕು. ಇದಕ್ಕೆ ಈಗಾಗಲೇ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಯು.ಆರ್. ಅನಂತಮೂರ್ತಿ ಮುಂತಾದವರು ಈಗಾಗಲೇ ಬೆಂಬಲ ನೀಡಿದ್ದಾರೆ. ಚಂದ್ರಶೇಖರ ಕಂಬಾರ ಅವರು ಸಮಾರಂಭವೊಂದರಲ್ಲಿ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಂತಮೂರ್ತಿಯವರಿಗೆ ಈ ವಿಷಯವನ್ನು ವಿವರಿಸಿದಾಗ ಅವರೂ ಮೈಕ್ರೋಸಾಫ್ಟ್ ನ ಅಪಾಯವನ್ನು ಅರ್ಥಮಾಡಿಕೊಂಡು ಅದನ್ನು ವಿರೋಧಿಸಬೇಕೆಂಬ ನಿಲುವನ್ನು ಬೆಂಬಲಿಸಿದ್ದಾರೆ. ಸಂಪದ ಬಳಗದ ಸದಸ್ಯರೂ ಈ ವಿರೋಧದಲ್ಲಿ ಸಕ್ರಿಯರಾಗಲು ಅನುಕೂಲವಾಗುವಂತೆ ಮಾದರಿ ಮನವಿಯೊಂದನ್ನು ಸಿದ್ಧಪಡಿಸಿದ್ದೇನೆ. ಹರಿಪ್ರಸಾದ್ ನಾಡಿಗ್, ಓಂ ಶಿವಪ್ರಕಾಶ್, ಅನುಪಮ ಈ ಮನವಿಯ ಅಂತಿಮ ಪ್ರತಿಯನ್ನು ತಯಾರಿಸುವಲ್ಲಿ ಸಹಕರಿಸಿದ್ದಾರೆ. ಇದನ್ನು ಈ ಕೆಳಗೆ ನೀಡಲಾಗಿರುವ ಅಂಚೆ ವಿಳಾಸ, ಫ್ಯಾಕ್ಸ್ ಸಂಖ್ಯೆ ಮತ್ತು ಇ-ಮೇಲ್ ಗಳಿಗೆ ಕಳುಹಿಸಿ ತಮ್ಮ ತಮ್ಮ ಪ್ರತಿಭಟನೆಗಳನ್ನು ದಾಖಲಿಸಬಹುದು. ಮಾದರಿ ಮನವಿಯ ಪಿಡಿಎಫ್ ಪ್ರತಿಯನ್ನು ಈ ಬರೆಹದ ಕೊನೆಯಲ್ಲಿ ಲಗತ್ತಿಸಲಾಗಿದೆ. ಅಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಸರಕಾರೀ ಕಚೇರಿಗಳು ಇ-ಮೇಲ್ ಗಳಿಗೆ ಸ್ಪಂದಿಸುವುದಿಲ್ಲವಾದುದರಿಂದ ಸಾಮಾನ್ಯ ಅಂಚೆ ಅಥವಾ ಫ್ಯಾಕ್ಸ್ ಜತೆಗೆ ದಾಖಲೆಗಾಗಿ ಒಂದು ಇ-ಮೇಲ್ ಕೂಡಾ ಕಳುಹಿಸುವುದು ಉತ್ತಮ. ಮುಖ್ಯಮಂತ್ರಿಗಳನ್ನು ಸಂಬೋಧಿಸಿ ಬರೆಯಲಾಗಿರುವ ಈ ಮನವಿಯ ಒಕ್ಕಣೆಯನ್ನು ಕಳುಹಿಸುವವರು ತಮಗೆ ಸರಿ ಎನ್ನಿಸುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸ್ವತಂತ್ರರು. ಹೀಗೆ ಮನವಿಯನ್ನು ಕಳುಹಿಸಿದವರು savekannada@gmail.com ವಿಳಾಸಕ್ಕೆ ಒಂದು ಮಾಹಿತಿ ಮೇಲ್ ಕಳುಹಿಸಿದರೆ ಅನುಕೂಲ. ಒಟ್ಟು ಪ್ರತಿಭಟನಾ ಪತ್ರಗಳ ಸಂಖ್ಯೆಯನ್ನು ಅರಿಯಲು ಸುಲಭವಾಗುತ್ತದೆ.

ಪತ್ರ ಕಳುಹಿಸಬೇಕಾದ ವಿಳಾಸಗಳು

ರಾಜ್ಯಪಾಲರು
Hon. Governor
Raj Bhavan
Raj Bhavan Road
Bangalore 560 001 INDIA
Voice: +91-80-2225 4102(General-epbax),
Special officer Rajbhavan :+91-80-2225 4106,
Fax: +91-80-2225 8150
Email: rbblr@vsnl.com

ಮುಖ್ಯಮಂತ್ರಿ
H D Kumaraswamy
Kumarakrupa Road,
Bangalore - 560 001,
Fax: 080-22259126, 22252574 (ಗೃಹ ಕಚೇರಿ), Email: cm@kar.nic.in

ಸರಕಾರದ ಕಾರ್ಯದರ್ಶಿ
Shri M.N. Vidyashankar
Secretary to Government
Dept.of Information Technology, Biotechnology and Science & Technology
Government of Karnataka
VI Floor, 5thStage
M.S.Building, Ambedkar Veedhi
Bangalore - 560 001
Fax: 91-80-22288340, 22262450
e-mail: itsec@bangaloreit.in
biosec@bangaloreit.in

ಹೆಚ್ಚಿನ ಮಾಹಿತಿಗೆ ಈ ಗೂಗಲ್ ಪುಟ ನೋಡಿ.

AttachmentSize
MANAVI.pdf51.15 ಕೆಬಿ
  • ಮಾಹಿತಿ ಫಲಕ
~.~
  • Login or register to post comments
  • 2676 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2007 - 3:03am — satisharas

ಉ: ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

satisharas's picture

naanu nanna minchole yannu kaluhisiddene.

(kshamisi nanna PC yalli kannada fonts illa)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2007 - 9:21am — hpn

ಉ: ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

hpn's picture

ಬರೇ ಇ-ಮೇಯ್ಲ್ ಕಳುಹಿಸಿದರೆ ಆಗದು. ಸಹಿ ಹಾಕಿದ ಪೆಟಿಶನ್ ಫ್ಯಾಕ್ಸ್ ಅಥವ ಅಂಚೆಯ ಮೂಲಕ ಕಳುಹಿಸಲು ಸಾಧ್ಯವಾಗುತ್ತದೆಯೋ ನೋಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2007 - 11:20pm — govinda

ಉ: ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

govinda's picture

ತಾವು ಹೇಳಿದಂತೆ, ಮೈಕ್ರೋಸಾಫ್ಟ್ ನಿಂದ ಬಹಳ ದುಶ್ಪರಿಣಾಮ ಆಗುತ್ತದೆ. ನನಗನ್ನಿಸುವ ಪ್ರಕಾರ, ಇದರಲ್ಲಿ ಟೇಬಲ್ ಕೆಳಗಡೆ ಯಾವುದಾದ್ರು ವ್ಯವಹಾರ ಕುದಿರಿರೊ ಸಾಧ್ಯತೆ ಇರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2007 - 12:30pm — omshivaprakash

ಉ: ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

omshivaprakash's picture

ಸ್ನೇಹಿತರೆ,

ಪತ್ರದ PDF ಪ್ರತಿ http://savekannada.googlepages.com ನಲ್ಲಿ ಲಬ್ಯವಿದೆ.

ನಿಮ್ಮ,
ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 12, 2007 - 9:26pm — hpn

ಉ: ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

hpn's picture

ಈ ಅಭಿಯಾನದ ಬಗ್ಗೆ ಇವತ್ತಿನ ದಿ ಹಿಂದೂ ಪತ್ರಿಕೆಯ ಮುಖಪುಟದಲ್ಲಿ ಒಂದು ಲೇಖನ ಮೂಡಿಬಂದಿದೆ. ಓದಿ.

ವೆಬ್ ಆವೃತ್ತಿ (ಅಪೂರ್ಣ ಲೇಖನ) ಇಲ್ಲಿ ಲಭ್ಯ.

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೈಕ್ರೋಸಾಫ್ಟೀಕರಣ
  • ಎಲ್ಲೆಲ್ಲೂ ಇ-ಮೇಲು, ಆ ಮೇಲು…!
  • ಪ್ರೇಮದ ಓಲೆ
  • ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯನ್ನು ತಿರಸ್ಕರಿಸಬೇಕೇ?
  • ಲಿನಕ್ಸ್ ಗೆ ೧೭ ವರ್ಷದ ಹರೆಯ
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 116 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator