ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕಜ್ಜಿಯ ಕಥೆ

October 18, 2005 - 4:42pm — metikurke

ಅಜ್ಜ ಮುತ್ತಜ್ಜ ಅವರಜ್ಜರಿಗು
ಹೆಜ್ಜೆ ಹೆಜ್ಜೆಗು ಕಾಡಿ ಕನಲಿಸಿದ
ಕಜ್ಜಿಯ ಕಥೆಯಿದನಾಲಿಸಿ ಕೇಳಿರಿ ಜನರೆಲ್ಲ
ಅಜರುದ್ರಾದಿ ದೇವಗಳು
ಕಜ್ಜಿಯುಪಟಳದಿ ನೊಂದು
ಹೆಜ್ಜೇನು ಕಡಿದಂತಾಗಿರಬಹುದು ಹಿಂದಣಲಿ. ೧

ಇದು ಒಂದು ಕ್ರಿಮಿಸೂಕ್ಷ್ಮಾಣು
ಬದುಕುವದ ಕಲಿತಿಹುದು
ಮೇದು ಚರ್ಮದೊಂದು ಪದರ ಹಗಲಿರುಳು
ಪದರ ಪದರವಾಗಿಹ ಚರ್ಮದ
ಹದವಾಗಿಹ ಹೊರಪದರವದು
ಹಾದಿಯಾಗಿಹುದು ಅದರೋಟದಾಟಕೆ. ೨

ಉಣ್ಣೆಯ ಜಾತಿಗೆ ಸೇರಿಹುದು
ಕಣ್ಣಿಗೆ ಕಾಣಿಸದು ಸುಲಭದಲಿ
ಹೆಣ್ಣು ಗಂಡೆಂಬ ಭೇಧವಿರದದರೋಡಾಟಕೆ
ಬಣ್ಣ ಬಣ್ಣದ ಚರ್ಮವಿದು
ಹಣ್ಣಾಗಿರುವ ಚರ್ಮವಿದೆಂದು
ಉಣ್ಣೆ ಭೇಧವೆಣಿಸದು ತಾನತೀತ ಸಣ್ಣ ತನಕೆ ೩

ಮೇಲಿನಿಂ ತಟ್ಟಿದಂತಿಹ ದೇಹ
ಕಾಲೆರಡು ಒಂದೊಂದು ಕಡೆ
ಕಾಲ ತುದಿಯಲಿ ಇಕ್ಕಳದ ಹಿಡಿತ
ಬಿಲವ ಕೊರೆಯಲಪ್ಪಂತ
ಮೇಲೆ ಕೋರೆದಾಡೆಗಳು
ಮೆಲ್ಲಲನುಕೂಲ ಚರ್ಮದ ಪದರಗಳ. ೪

ಚರ್ಮವನು ಮೆಲ್ಲುವುದು ತಾ
ಕರ್ಮವದು ಬಿಲವ ಕೊರೆ ಕೊರೆದು
ಮರ್ಮದಲಿ ಬೀಜಗಳ ಸುರಿಸುತ್ತ ಹಗಲಿರುಳು
ಚರ್ಮವೊಂದೆ ಅದರ ಊಟ
ಚರ್ಮದಲೆ ಅದರ ಓಡಾಟ
ಚರ್ಮವನು ಬಿಟ್ಟಿಹದು ಇದು ಅದರ ವಾಟ. ೫

ಬಡವ ಬಲ್ಲಿದ ಕಡುಜಾಣ
ದಡ್ಡ ಹೆಡ್ಡ ಅವರಿವರ
ಒಡಲೆಂದು ಮುನಿಸಿಲ್ಲ, ಸರಿಸಮರು ಎಲ್ಲ
ಬಡ್ಡಿ ಸಾಲಕೆ ಕೊಡುವ
ದೊಡ್ಡ ಧನಿಕನ ತೆರದಿ
ಸಡ್ಡು ಹೊಡೆದಿತ್ತಿಹುದು ಉಪಟಳವ ೬

ಬೆರಳುಗಳ ಸಂದುಗಳು
ಕೊರಳಿನಿಂದಡಿಯಿರುವ ದೇಹ
ಮಾರನ ತಾಣವದು ಬಲು ಪ್ರೀತಿಯದಕೆ
ತರುಣಿಯರ ಮೊಲೆಯೂಟ
ಕಿರು ಕೂಸಿನ ಕೆನ್ನೆಯಂಗಳದಾಟ
ಬರಗೆಟ್ಟ ದೇವರಿಗೆ ಪರ್ವಮಾಡಿಸಿದಂತೆ. ೭

ಮೊದಲು ಕಾಣಿಸಿತು ಕೆರೆತದಲಿ
ಬಾಧೆಯದು ವಿಪರೀತ ಮುಸ್ಸಂಜೆಯಲಿ
ಹದವರಿತು ಕೆರೆದರೂ ನೀಗದದು ಹಗಲಿರುಳು
ವಿಧವಿಧದ ಗುಳ್ಳೆಗಳು
ಒಂದೊಂದಾಗಿ ಅವತರಿಸಿದವು
ಅದಕಿಲ್ಲ ಮುಕ್ತಿ, ಕೆರೆತವೊಂದೆ ಯುಕ್ತಿ. ೮

ಹತ್ತು ಹನ್ನೆರಡು ಉಣ್ಣೆಗಳು
ಹತ್ತಿದೊಡೆ ಸಾಕು ದೇಹದೊಳು
ಕುತ್ತು ಬಂದಿತ್ತು, ಹೊತ್ತು ಕಳೆಯಿತು ಕೆರೆಯುತಲಿ
ಬಿತ್ತಿದವು ಸಂತಾನಬೀಜವನು
ಹತ್ತು ದಿನಗಳು ಕಳೆದಿರಲು
ಹುತ್ತದಂತಾಗಿತ್ತು ದೇಹ ಉಣ್ಣೆ ಮರಿಗಳಿಗೆ. ೯

ಮರಿ ಬೆಳೆದು ಬಲಿತಾಗ
ಬರಿ ತನ್ನ ಸಂಕುಲದ
ನೂರಾರು ಜೀವಿಗಳ ಸೃಷ್ಟಿ ಮಾಡಿದವು
ಕೆರೆತವೊಂದೆ ಯುಕ್ತಿ
ಕೆರೆತದಿಂದಲೆ ಮುಕ್ತಿ
ಕೆರೆತವೊಂದೆ ದಿನ ರಾತ್ರಿಯಾಗಿತ್ತು ಚಿಂತೆ. ೧೦

ಸಂಕಷ್ಟಗಳು ಬಂದಡರಿದವು
ಬಿಂಕ ಬಿನ್ನಾಣವಡಗಿದವು
ಮಂಕಾಗಿ ಹೋದ ರೋಗಿ ಉಣ್ಣೆಯೊಡನಾಟದಲಿ
ಹೂಂಕರಿಸಿದವು ಮಿಣಿಜೀವಿಗಳು
ಅಂಕುರಿಸಿದವು ಗಾಯಗಳು
ಅಂಕದ ಪರದೆ ಜಾರಿತ್ತು ಜನರೊಡನಾಟಕೆ. ೧೧

ಅಳಿದವು ರಾಜ್ಯಗಳು ಕಜ್ಜಿಯಲಿ
ಗೋಳಿನ ಕೆರೆತಗಳೆದ್ದು ಸೈನ್ಯದಲಿ
ಗಾಳಿಗೋಪುರವಾಯ್ತು ಯುದ್ಧೋತ್ಸಾಹ ಯೋಧರಲಿ
ಕೇಳಿದರೆ ಬಲು ಅಚ್ಚರಿಯ
ತಿಳಿದವರು ಹೇಳುವರು ಕತೆ
ಅಳಿದರಾಜರ ಗೋಳ ಕಜ್ಜಿಯುಪಟಳದಿ. ೧೨

ತರುವುದು ಮಿಣಿಜೀವಿ ಕಾಟ
ಊರುವುದು ಇಸುಬಿನ ಸಂಕಟ
ತುರಿಕೆಯಲಿ ಮಾನಸಿಕ ತುಮುಲ ಹೊಯ್ದಾಟ
ಭಾರಿ ಬೇಸರವ ತರುವುದು
ಬೇರೆ ದಾರಿಯ ಕಾಣದಲೆ
ಕೊರಳ ಕುಣಿಕೆಗೊಪ್ಪಿಸುವಂತಾಗುವುದು. ೧೩

ಆದರೇನು, ಅದರಾಟ ನಡೆಯದು
ಬೆದರದಲೆ ಚರ್ಮವೈದ್ಯರಲಿ ಸಾರೆ
ಸಾದರದ ಚಿಕಿತ್ಸೆಯಲಿ ಅದರಂತ್ಯವಿಹುದು. ೧೪

ಡಾ.ವಿಜಯಶಂಕರ ಮೇಟಿಕುರ್ಕೆ

  • ಕಾವ್ಯ ಮತ್ತು ಕವನ
~.~
  • Login or register to post comments
  • 581 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಿ
  • ನನ್ನ ಆಸೆ
  • ಪ್ರೀತಿಯ ನಗು
  • ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
  • ಕರ್ನಾಟಕ ಪೋಲಿಸ್ಸ್ -- ದೇವರನ್ನು ಕಾಯುವ ಕೆಲ್ಸಾ --ನನ್ನ ಪ್ರಾರ್ಥನೆ
Syndicate content

ಲೇಖಕರು

metikurke's picture

ಪರಿಚಯ

i am a doctor specifically a dermatologist.my hobbies are photography,writing, infact i am a jack of all.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 103 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator