ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಶ್ರದ್ಧಾ

June 27, 2007 - 3:18pm — srinivasc

ಪಂಚಮುಖಿ ತಂಡವರಿಂದ ದಿ||ವಾಸುದೇವಜೋಶಿ ಅವರಿಗೆ ವಿಶೇಷ ಶ್ರದ್ಧಾಂಜಲಿ

ಎರಡು ತಿಂಗಳ ಹಿಂದಷ್ಟೇ ನಮ್ಮನ್ನು ಬಿಟ್ಟಗಲಿದ ಚಿತ್ರ ನಿರ್ಮಾಪಕ ಶ್ರೀ ವಾಸುದೇವ ಜೋಶಿ ಅವರ ಸವಿನೆನಪಿನಲ್ಲಿ ಮತ್ತು ಅವರ ಶ್ರದ್ಧಾಂಜಲಿಯನ್ನು ಅವರ ಪುತ್ರ ಶ್ರೀ ವಿನಾಯಕ ಜೋಶಿ ವಿಶೇಷವಾಗಿ ಅರ್ಪಿಸಿದರು. ರಂಗಶಂಕರದಲ್ಲಿ ಶ್ರದ್ಧಾ ಎಂಬ ನಾಟಕದಲ್ಲಿ.

ಉಗ್ರರೂಪಿ ತಂದೆಗೆ ಇರುವ ಶೀನು (ಶ್ರೀನಿವಾಸ) ಎಂಬ ಸದಾ ಚೇಷ್ಟೆ ಮಾಡುವ ಮಗ ಬೆಳೆಬೆಳೆಯುತ್ತಾ ತನ್ನ ತಂದೆಯ ಬಗ್ಗೆ ತಾಳುವ ಗೌರವ, ಅವರು ತೀರಿಕೊಂಡ ಬಳಿಕ ಮಾಘ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ತನ್ನ ತಂದೆಯ ಶ್ರಾದ್ಧದ ದಿನ. ಅಂದಿನ ದಿನ ವಿಶೇಷವಾಗಿ ತನ್ನ ತಂದೆಯ ನೆನಪು ತೀವ್ರವಾಗುತ್ತಾ ಹೋಗುತ್ತದೆ. ಅಂದಿನ ದಿನ ಅವನು ತನ್ನ ತಂದೆಯ ಜೊತೆ ತನ್ನ ಸಂಬಂಧ ಮತ್ತು ತನ್ನ ತಂದೆಯ ಸಂಬಂಧ ತನ್ನ ಜೊತೆ ಹೇಗೆ ಇತ್ತು. ಅವರು ತೀರಿಕೊಂಡ ಬಳಿಕ ತನ್ನನ್ನು ಹೇಗೆ ಕಾಡಿತು ಎಂಬುದನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಾನೆ. ತೀರಿಹೋದ ತಂದೆಯ ನೆನಪನ್ನು ಮಾಡಿಕೊಂಡು ಪ್ರೀತಿಯಿಂದ ಎರಡು ಹನಿ ಕಣ್ಣೀರಿಡುವುದೇ ಅವರಿಗೆ ಶ್ರದ್ಧೆಯಿಂದ ಸಲ್ಲಿಸುವ ನಿಜವಾದ ಶ್ರಾದ್ಧ ಎಂಬುದು ನಾಟಕದ ತಿರುಳು. ಬಹಳ ಶ್ರದ್ಧೆಯಿಂದ ಈ ನಾಟಕವನ್ನ ಶ್ರೀ ವಿನಾಯಕ ಜೋಶಿ ನಿರ್ದೇಶಿಸಿದ್ದಾನೆ. ತಂದೆಯ ಪಾತ್ರದಲ್ಲಿ ತಾನೇ ಒಳ್ಳೆಯ ಅಭಿನಯ ಕೂಡಾ ನೀಡಿದ್ದಾನೆ.

ಅವನ ಮಗನ ಪಾತ್ರದಲ್ಲಿ ಮೂರು ಹುಡುಗರು ನಟಿಸಿದ್ದಾರೆ. ವಸಂತಶಾಸ್ತ್ರಿ, ಶ್ರೀಪತಿ ಮತೊಬ್ಬನ ಹೆಸರು ತಿಳಿದಿಲ್ಲ. ನಾಟಕದಲ್ಲಿ ಇರುವುದು ಕೇವಲ ಆರೇ ಪಾತ್ರ. ಒಂದು ವಿಶೇಷ ಪಾತ್ರ ಇದೆ. ಅದು ನಾಟಕದಲ್ಲಿ ಬರುವ ಶೀನು ಮತ್ತು ಅವನ ತಂದೆಯ ಮನಸ್ಸು. ಶಿಜು ಎನ್ನುವ ಯುವಕ ಆ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾನೆ. ಮತ್ತೊಂದು ತಾಯಿಯ ಪಾತ್ರ ಆಕೆ ಸಹ ತನ್ನ ಇತಿಮಿತಿಯಲ್ಲಿ ಆ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ.

ಸಂಗೀತ ಸಹ ಅಷ್ಟೇ ಶ್ರದ್ಧೆಯಿಂದ ಕೂಡಿದೆ (ಪ್ರವೀಣ್ ಬಿ.ವಿ ಮತ್ತು ರಾಜ್‍ಗುರು)
ಬೆಳಕು ಅರುಣ್ ಮೂರ್ತಿ: ರೈಲಿನಲ್ಲಿ ಮುಂಬೈಗೆ ಹೊರಡುವ ದೃಶ್ಯದಲ್ಲಂತೂ ಪ್ರೇಕ್ಷಕರೂ ಸಹ ರೈಲಿನಲ್ಲಿ ಪಯಣಿಸುತ್ತಿದ್ದಾರೇನೋ ಎಂಬಷ್ಟು ಅದ್ಭುತವಾಗಿ ಸಂಯೋಜಿಸಿದ್ದಾರೆ.

ಇವರೆಲ್ಲರೂ ದಿ||ವಾಸುದೇವ ಜೋಶಿ ಅವರಿಗೆ ಒಳ್ಳೆಯ ರೀತಿಯಲ್ಲಿ ಶ್ರದ್ಧಾಂಜಲಿಯನ್ನ ಅರ್ಪಿಸಿದ್ದಾರೆ. ಇದಕ್ಕಾಗಿ ಈ ನಾಟಕವನ್ನು ನಿರ್ಮಾಣ ಮಾಡಿರುವ ಪಂಚಮುಖಿ ನಾಟಕ ತಂಡದವರಿಗೆ ಕೃತಜ್ಞತೆ ಸಲ್ಲಲೇಬೇಕು. ಶ್ರದ್ಧಾ ಇಳ್ಳೆಯ ನಾಟಕ ಎಲ್ಲಾ ತಂದೆಯರಿಗೂ ಇದು ಅರ್ಪಣೆಯಾಗಿದೆ. ಸಮಯ ಸಿಕ್ಕರೆ ಎಲ್ಲರೂ ಈ ನಾಟಕವನ್ನು ನೋಡಲೇಬೇಕು. ಒಳ್ಳೆಯ ನಾಟಕಗಳಿಗೆ ಪ್ರಶಂಸೆ ನೀವುಗಳು ನೀಡಲೇಬೇಕು. ಪಂಚಮುಖಿ ನಾತಕ ತಂಡದವರಿಗೆ ಶುಭವಾಗಲಿ ಅವರು ನಿರ್ಮಿಸುವ ಪ್ರತಿಯೊಂದು ನಾಟಕವೂ ಇಂತಹ ಸಭಿರುಚಿಯಾದ್ದಂತಾಗಿರಲಿ ಎಂದು ನಾವೆಲ್ಲರೂ ಕೂಡಿ ಹಾರೈಸೋಣ. ನೀವೂ ಸಹ ಈ ನಾಟಕವನ್ನ ನೋಡಿ ಶ್ರೀ ವಾಸುದೇವ ಜೋಶಿಯವರಿಗೆ ಶ್ರದ್ಧೆಯಿಂದ ಶ್ರದ್ಧಾಂಜಲಿ ಅರ್ಪಿಸಿ.

ಶ್ರೀಚಂದ್ರ

  • ನಾಟಕ
~.~
  • Login or register to post comments
  • 359 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ
  • ಒಂದು ಒಳ್ಳೇ ಸಿನಿಮಾ ಕತೆ ಕೇಳಿ- ಸತ್ಯಕಾಮ -೧
  • ಸಾರ್ಥಕ ಸ೦ಜೆ
  • ಮುಂಗೋಪಿ ಗುಂಡ
  • ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?
Syndicate content

ಲೇಖಕರು

srinivasc's picture

ಪರಿಚಯ

ನಾನು ಶ್ರೀನಿವಾಸ ಚಂದ್ರಶೇಖರ. ನನ್ನನ್ನ ಜನ ಶ್ರೀಚಂದ್ರ ಅಂತಲೂ ಕರೀತಾರೆ. ಸಾಹಿತ್ಯ, ಚಲನಚಿತ್ರ ಮತ್ತು ರಂಗಭೂಮಿ, ಛಾಯಾಗ್ರಹಣ, ಚಾರಣ ಇವೆಲ್ಲಾ ನನ್ನ ಹುಚ್ಚು. ಇಂಡಿಯಾಇನ್ಫೋಲೈನ್‍ನಲ್ಲಿ ನಾನು ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದೇನೆ. ಕಥೆ, ಕವನ ಹಾಗೂ ಕೆಲವು ನಾಟಕಗಳನ್ನು ಬರೆದಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಲೆನಾಡಿನಲ್ಲಿ ಎರಡು ದಿನಗಳು...
  • ಚಿಕಾಗೊ ನಗರದ ದಿಗಂತ ಬೆಡಗಿಯರು !
  • ಸೈಕಲ್ ರಿಕ್ಷಾಗೆ ಸೌರಶಕ್ತಿ
  • ಅಬ್ಬಾ! ನಮ್ಮ ಜೇಡ ಇಂದು ಬೆಳಿಗ್ಗೆ ನೆಕ್ಲೇಸ್ ಹೆಣೆದ..ನಿಮಗೆ ಬೇಕೆ?
  • ಪ್ರೀತಿಯ ಸಂಕೇತ ಗುಲಾಬಿ
  • ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
  • ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:23pm
  • vijendra
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:19pm
  • mahesha
    ಉ: ’ಭೋಜ’ ತಮಿಳನಾಗಿದ್ದರೆ ಅವನ ಹೆಸರು ಏನು ಇರುತಿತ್ತು?
    October 14, 2008 - 1:15pm
  • anil.ramesh
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 1:14pm
  • mahesha
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 14, 2008 - 1:13pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:12pm
  • shreekant.mishrikoti
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:07pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:03pm
  • shreekant.mishrikoti
    ಉ: ಚಿಕಾಗೊ ನಗರದ ದಿಗಂತ ಬೆಡಗಿಯರು !
    October 14, 2008 - 1:02pm
  • vijendra
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 12:59pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 57 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator