ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
೧೯೩೪ ನೇ ಇಸವಿಯ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾಗಿರುವ ನೋಬಲ್ ಬಹುಮಾನವನ್ನು ಮೂವರು ವಿಜ್ಞಾನಿಗಳಿಗೆ ಕೊಡಲಾಯಿತು - ಜಾರ್ಜ್ ವ್ಹಿಪಲ್, ಜಾರ್ಜ್ ಮಿನಾಟ್ ಮತ್ತು ವಿಲ್ಲಿಯಮ್ ಮರ್ಫಿ. ಈ ಮೂವರು ’ಪರ್ನೀಶಿಯಸ್ ಅನೀಮಿಯಾ’ ಎಂಬ ಒಂದು ತರಹದ ರಕ್ತಹೀನತೆಗೆ ಔಷಧ ಕಂಡುಹಿಡಿದಿದ್ದರು; ಅದಕ್ಕಾಗಿ ಈ ಗೌರವ.
ಇವರಲ್ಲಿ ಮೊತ್ತಮೊದಲು ಈ ರೋಗದ ಮೇಲೆ ಕೆಲಸ ಮಾಡಿದ್ದು ಜಾರ್ಜ್ ವ್ಹಿಪಲ್. ಆತ ತನ್ನ ಪ್ರಯೋಗಶಾಲೆಯಲ್ಲಿ ನಾಯಿಗಳ ದೇಹದಿಂದ ಕೃತಕವಾಗಿ ರಕ್ತಸ್ರಾವ ಆಗುವಹಾಗೆ ಮಾಡಿ, ಅನಂತರ ಅವುಗಳಿಗೆ ಬೇರೆ ಬೇರೆ ತರಹದ ಆಹಾರವನ್ನು ಕೊಡುತ್ತ ಹೋದ. ಆಹಾರದಲ್ಲಿನ ಯಾವುದಾದರೂ ಅಂಶ ದೇಹದಲ್ಲಿ ರಕ್ತ ಉತ್ಪತ್ತಿಯಾಗುವುದನ್ನು ಹೆಚ್ಚಿಸುತ್ತದೋ ಎಂದು ನೋಡುವುದು ಅವನಿಗೆ ಬೇಕಾಗಿತ್ತು. ವ್ಹಿಪಲ್ ಕೊನೆಗೂ ತನ್ನ ಪ್ರಯೋಗಗಳಿಂದ ಕಂಡುಕೊಂಡದ್ದು Liver (ಯಕೃತ್ತು) ಇಂತಹ ಸನ್ನಿವೇಶದಲ್ಲಿ ಬಹಳ ಉಪಯೋಗಿ ಎಂದು. ಕಚ್ಚಾ ಯಕೃತ್ತನ್ನು ಸೇವಿಸಿದ ನಾಯಿಗಳ ರಕ್ತದಲ್ಲಿ ಕೂಡಲೇ ಹೀಮೋಗ್ಲೋಬಿನ್ ಹೆಚ್ಚುವುದನ್ನು ಆತ ಗಮನಿಸಿದ. ಮುಂದೆ ಇದೇ ಪ್ರಯೋಗವನ್ನು ಆಧರಿಸಿ, ಉಳಿದ ಇಬ್ಬರು – ಮರ್ಫಿ ಮತ್ತು ಮಿನಾಟ್ – Liver ನ ಉಪಯೋಗ ಪರ್ನೀಶಿಯಸ್ ಅನೀಮಿಯಾ ಎಂಬ ರೋಗದಲ್ಲೂ ಆಗುತ್ತದೆ ಎಂದು ತೋರಿಸಿಕೊಟ್ಟರು.
Pernicious Anemia ದಲ್ಲಿ ಕೆಂಪು ರಕ್ತ ಕೋಶಗಳ (Red Blood Corpuscles) ಉತ್ಪತ್ತಿ ಕಡಿಮೆಯಾಗುತ್ತದೆ ಎಂಬುದನ್ನು ಹೊರತುಪಡಿಸಿ, ಅಲ್ಲಿಯ ತನಕ ಈ ರೋಗದ ಪ್ರಕ್ರಿಯೆಯಾಗಲಿ, ಕಾರಣಗಳಾಗಲಿ, ಔಷಧವಾಗಲಿ - ಗೊತ್ತಿರಲಿಲ್ಲ. ಆದರೆ ಈಗ ಆ ಬಗ್ಗೆ ಹಲವು ವಿಷಯಗಳು ಗೊತ್ತಾಗಿವೆ. ಈ ರೋಗದಲ್ಲಿ ಜಠರದಲ್ಲಿರುವ Parietal Cell ಎಂಬ ಜೀವಕೋಶ, ತಾನು ಸ್ರವಿಸಬೇಕಾದ Intrinsic Factor ಎಂಬ ರಾಸಾಯನಿಕವನ್ನು ಸರಿಯಾಗಿ ಸ್ರವಿಸದಂತಾಗುತ್ತದೆ. ಇದಕ್ಕೆ Auto-immunity ಎಂಬ ವಿಕೃತ ಪ್ರಕ್ರಿಯೆ ಕಾರಣ. ಈ ಇಂಟ್ರಿನ್ಸಿಕ್ ಫ್ಯಾಕ್ಟರ್ ನ ಅಗತ್ಯ ಇರುವುದು ‘ವೈಟಮಿನ್ – ಬಿ -12’ ( Vitamin – B12) ಎಂಬ ತತ್ವದ ಸರಿಯಾದ Absorption ಗೆ. (Absorption ಅಂದರೆ, ಜೀರ್ಣಾಂಗ ವ್ಯೂಹ - Gastro Intestinal Tract - ದಿಂದ ಯಾವುದೇ ತತ್ವವು ರಕ್ತವನ್ನು ಸೇರುವ process – ಪ್ರಕ್ರಿಯೆ). ಈ ವೈಟಮಿನ್ ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿದ್ದರೆ ಮಾತ್ರ ಕೆಂಪು ರಕ್ತ ಕೋಶಗಳ ಉತ್ಪತ್ತಿ ಎಲುಬುಗಳ ಒಳಭಾಗದ ಮಜ್ಜೆಯಲ್ಲಿ (Bone marrow) ಸರಿಯಾಗಿ ಆಗುತ್ತದೆ. ಇಲ್ಲದಿದ್ದರೆ ಪ್ರಾಕೃತ ಸ್ವರೂಪಕ್ಕಿಂತ ಭಿನ್ನವಾದ, ಇನ್ನೂ immature ಆಗಿರುವ ಅಸಹಜವಾಗಿ ದೊಡ್ಡ ಗಾತ್ರ ಹೊಂದಿರುವ ಕೆಂಪು ರಕ್ತಕೋಶಗಳು ತಯಾರಾಗಿ ಮೆಗಾಲೋಬ್ಲಾಸ್ಟಿಕ್ ಅನೀಮಿಯಾ (Magaloblastic anaemia) ಬರುತ್ತದೆ. (Magaloblastic anaemia ಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು - ಅವುಗಳಲ್ಲಿ Pernicious anaemia ಕೂಡ ಒಂದು). Liver, ಈ ವೈಟಮಿನ್ B-12 ನ ಒಂದು ಅತ್ಯುತ್ತಮ ಆಕರ. ಈ ವೈಟಮಿನ್, liver ನಲ್ಲಿ ಸಂಗ್ರಹವಾಗುತ್ತದೆ. ಅದಕ್ಕೇ ಕಚ್ಚಾ liver ನ್ನು ತಿಂದಾಗ ಅನೀಮಿಯಾದ ಲಕ್ಷಣಗಳು ಇಲ್ಲವಾಗುವುದು.
ಎಲ್ಲ ಸರಿ. ಆದರೆ ಈ ಆಯುರ್ವೇದದ ಅಳಲೇಕಾಯಿ ಪಂಡಿತನಿಗೂ ಪರ್ನೀಶಿಯಸ್ ಅನೀಮಿಯಾಕ್ಕೂ ಏನು ಸಂಬಂಧ - ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಸುಶ್ರುತ ಸಂಹಿತೆಯಲ್ಲಿನ ಈ ಶ್ಲೋಕ ವೊಂದನ್ನು ಓದಿ:
अतिनिःस्रुत रक्तॊ वा क्षौद्रयुक्तं पिबॆदसृक् ।
यकृद्वा भक्षयॆदाजमामं पित्तसमायुतम् ॥
(ಸುಶ್ರುತ ಸಂಹಿತೆ, ಉತ್ತರ ತಂತ್ರ,೪೫ನೇ ಅಧ್ಯಾಯ)
ಇದರ ಅರ್ಥ: “ಅತಿಯಾದ ರಕ್ತಸ್ರಾವವಾದಾಗ ಆಡಿನ ಯಕೃತ್ತನ್ನು (Liver) ಬೇಯಿಸದೆ ಅದರಲ್ಲಿನ ಪಿತ್ತದ ಜೊತೆಗೆ ತಿನ್ನಲು ಕೊಡಬೇಕು; ಅಥವಾ, ಜೇನಿನ ಜೊತೆ ರಕ್ತವನ್ನು ಬೆರೆಸಿ ಕುಡಿಯಲು ಕೊಡಬೇಕು”
(When there is extreme loss of blood, one should be given either the blood mixed with honey to drink or should be advised to consume raw goat liver with all its contents.)
ರಕ್ತವನ್ನು ಜೇನಿನ ಜೊತೆಗೆ ಸೇವಿಸುವುದು ಇವತ್ತಿನ ಮಟ್ಟಿಗೆ ಸ್ವಲ್ಪ ಅಪ್ರಾಸಂಗಿಕ ಅನ್ನಿಸಬಹುದು. ಆದರೆ Liver ಬಗೆಗಿನ ವಿವರಣೆ ಅಚ್ಚರಿಯಾಗುವಂತಿದೆ – ಅಲ್ಲವೇ ? (ಸುಶ್ರುತ ಸಂಹಿತೆಯ ’ಉತ್ತರ ತಂತ್ರ’ ವನ್ನು ನಾಗಾರ್ಜುನ ಎಂಬ ವೈದ್ಯ ಬರೆದುದಾಗಿ ಹೇಳಲಾಗುತ್ತದೆ. ಅದು ನಿಜ ಎಂದು ಒಪ್ಪಿಕೊಂಡರೂ ಅದು ಸುಮಾರು ಕ್ರಿಸ್ತ ಶಕ ಹತ್ತನೇ ಶತಮಾನದ ಆಸುಪಾಸಿನ ವಿಷಯ).
ಸುಶ್ರುತ ಕಂಡುಹಿಡಿದದ್ದಕ್ಕಿಂತ ಹೆಚ್ಚಿನ ಏನನ್ನೂ ವ್ಹಿಪಲ್ ಕಂಡುಹಿಡಿದಿರಲಿಲ್ಲ. ಇನ್ನು, ಸುಶ್ರುತನ ಕೊಡುಗೆಯನ್ನು surgery ಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಅಲ್ಲಲ್ಲಿ ಬರೆಯುವರಾದರೂ ಆತ ಮಾಡಿದ ಇಂತಹ ಪ್ರಯೋಗಗಳ ಬಗ್ಗೆ ಯಾರೂ ಉಲ್ಲೇಖಿಸುವುದಿಲ್ಲ. ವೈದ್ಯವಿಜ್ಞಾನದ ಇತಿಹಾಸವನ್ನು ಹೇಳುವಾಗಲೂ ಈ ಬಗ್ಗೆ ಯಾರೂ ಮಾತಾಡುವುದಿಲ್ಲ.
ಅದಕ್ಕೇ ಈ ಬರಹ.

- Login or register to post comments
- 585 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ರಕ್ತಹೀನತೆ ಉಂಟಾದಾಗ ಕಬ್ಬಿಣದ ಅಂಶ ಉಳ್ಳ ಆಹಾರ ಸೇವಿಸಲು ಹೇಳುತ್ತಾರಲ್ಲ? ಅದು ಯಾವ ತೆರನ ರಕ್ತಹೀನತೆ?
*ಅಶೋಕ್
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ಅದು ಬೇರೆ ತರಹದ್ದು.
Iron deficiency anaemia ಅಂತ ಕರೆಯುತ್ತಾರೆ ಅದನ್ನು. ಅದಕ್ಕೂ ಇದಕ್ಕೂ ಯಾವುದೇ ನೇರವಾದ ಸಂಬಂಧ ಇಲ್ಲ.
Iron, Folic Acid, Vitamin B-12 - ಇವೆಲ್ಲ ವೂ RBC ಗಳ ತಯಾರಿಕೆಗೆ ಅಗತ್ಯ.
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ನನ್ನ ಬರಹವನ್ನು ನಾನೇ ಓದಿಕೊಂಡಾಗ ಅನ್ನಿಸಿದ್ದು:
’ಅಳಲೇಕಾಯಿ ಪಂಡಿತ’ ಎಂಬ ಕಮೆಂಟು ಸುಶ್ರುತನ ಕುರಿತಾಗಿದೆಯೋ ಅಂತ ಅನ್ನಿಸಬಹುದು.. ಆದರೆ ಹಾಗಲ್ಲ; ಅದು ನನ್ನ ಬಗ್ಗೆ ನಾನೇ ಹೇಳಿಕೊಂಡದ್ದು!!
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ಕಿಶೋರ್ ಪಟವರ್ಧನರೇ,
ನಿಮ್ಮ ಬರಹಗಳು ಬಹಳ ಉಪಯುಕ್ತ ಮಾಹಿತಿಗಳೋಂದಿಗೆ ಬರುತ್ತಿವೆ. ಹೀಗೇ ಬರೆಯುತ್ತಿರಿ.
-ಹಂಸಾನಂದಿ
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ನಿಮಗಿಷ್ಟವಾದರೆ ನನಗೂ ಸಂತಸ.
ನನ್ನಿ.
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ಬರಹ ಚೆನ್ನಾಗಿದೆ.
ದಯವಿಟ್ಟು "ಕಚ್ಚಾ ಯಕೃತ್ತನ್ನು " ಅಂದರೆ ಏನೆಂದು ತುಸು ಬಿಡಿಸಿ ಹೇಳಿ.
ನನ್ನಿ!
- ಮಾಯ್ಸ
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ಹಸಿ(ಬೇಯಿಸದ) ಯಕೃತ್ತು ಅಥವ ಪಿತ್ತಜನಕಾಂಗ ಅಂತ ನಾನರ್ಥ ಮಾಡಿಕೊಂಡೆ.
*ಅಶೋಕ್
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ಹೌದು; ಅಶೋಕರು ಹೇಳಿದ್ದು ಸರಿ.
ಆಯುರ್ವೇದ ವಾಙ್ಮಯದಲ್ಲಿ Liver ಗೆ ’ ಪಿತ್ತಜನಕಾಂಗ ’ ಎಂಬ ಶಬ್ದ ಬಳಕೆಯಾಗಿಲ್ಲ. ಅದು ಕನ್ನಡಿಸಿದ ಶಬ್ದ - ಟೆಕ್ಸ್ಟ್ ಬುಕ್ ಸಲುವಾಗಿ ಕನ್ನಡಿಸಿದ್ದು. ಚರಕ, ಸುಶ್ರುತ ಇತ್ಯಾದಿ ಸಂಹಿತೆಗಳಲ್ಲಿ ಬಳಕೆಯಾಗಿರುವ ಪದ ’ ಯಕೃತ್ ’ . ಅದನ್ನು ನಾನು ಯಕೃತ್ತು ಅಂತಂದೆ.
ಕಚ್ಚಾ ಅಂದರೆ ಬೇಯಿಸದ. ಸಂಸ್ಕೃತದಲ್ಲಿ ’ಆಮಮ್ ’ ಅಂದಿದ್ದಾರಲ್ಲ- ಅದಕ್ಕೆ. ಆಮ ಅಂದರೆ ಅಪಕ್ವ - ಬೇಯದೇ ಇರುವುದು.
ಅಚ್ಚ ಕನ್ನಡದಲ್ಲಿ ’ ಹಸಿ ’ ಅನ್ನಬಹುದೇನೋ?
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ನಮ್ಮ ಪರಿಸರದ ಪ್ರಭಾವ ನಮ್ಮ ಮೇಲೆ ಎಷ್ಟಾಗುತ್ತದೆ ಅನ್ನುವುದಕ್ಕೆ ನಾನು ಅರಿವಿಲ್ಲದೆಯೇ ಬಳಸಿದ ’ ಕಚ್ಚಾ ’ ಎಂಬ ಶಬ್ದವೇ ಸಾಕ್ಷಿ.
ಅದು ದಿನವಿಡೀ ಹಿಂದಿ ಮಾತಾಡುವುದರ ಪರಿಣಾಮ.
ನನಗೆ ’ ಹಸಿ ’ ಎಂಬುದು ಹೊಳೆಯಲೇ ಇಲ್ಲ!!
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ನನ್ನಿ!

- ಮಾಯ್ಸ
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
its a nice work from your side sir and is different and nice to see allopathy medicine growing in the paths of ayurveda or else one can say it as ayurveda being rediscovered in a modern way. keep your nice work going on sir as it is different from rest.thanks.
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ರಶ್ಮಿ ತಾವು ಕನ್ನಡದಲ್ಲಿ ಬರೆಯಬೇಕು ...ನಿಮ್ಮ೦ತಹ ಜಾಣೆಯರು ನಮ್ಮ ಸ೦ಪದವನ್ನು ಬೆಳಗಲಿ...ಗ೦ಡಸರು ಸ್ವಭಾವದಿ೦ದಲೇ ಸ್ವಲ್ಪ ಜಗಳ ವ೦ತರು. ನಿಮ್ಗೇ ಪರಿಚಯ ಇರುವ ಜಾಣೆಯರನ್ನು ಇಲ್ಲಿ ಬರೆಯಲು ಹೇಳೀ....
ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
ತು೦ಬಾ ಮೊದಲೆ ಪ್ರತಿಕ್ರಿಯೆ ಬರೆಯಬೆಕೆ೦ದು ಅ೦ದುಕ್ಕೊ೦ಡಿದ್ದೆ. ’ಕಾಲರ್ ಅಪ್ ’ ಮಾಡ್ಕೊಳ್ತಿಯಾ ಅ೦ತ ಬರ್ದಿರ್ಲಿಲ್ಲ. ಇ೦ಥಾದ್ದು ತು೦ಬಾ ಬರಿ !