ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಅಳುವ ಕಡಲು

April 23, 2007 - 6:05pm — anivaasi

[೨೭-೪-೨೦೦೩ ರಲ್ಲಿ ಬರೆದ ಈ ಲೇಖನವನ್ನು ಮತ್ತೆ ಓದಿದಾಗ- ಇರಾಕ್, ಆಫ್ಘಾನಿಸ್ತಾನ್, ಪಾಲಸ್ಟೀನ್‌ನ ಸಂದರ್ಭದಲ್ಲಿ ಯೋಚನಾಲಹರಿ ಬಹುಮಟ್ಟಿಗೆ ಹಾಗೇ ಉಳಿದಿದೆ ಎಂಬುದು ಸ್ಪಷ್ಟವಾಯಿತು]

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ

ಗೋಪಾಲಕೃಷ್ಣ ಅಡಿಗರು ಈ ಸಾಲು ಬರೆದು ಸುಮಾರು ಅರವತ್ತು ವರ್ಷಗಳು ಕಳೆದಿದ್ದರೂ, ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಕಾಳಿ೦ಗರಾಯರು ಹಾಡಿ ದಶಕಗಳೇ ಕಳೆದಿದ್ದರೂ, ಕಾವ್ಯದ ಎಲ್ಲ ಮಹತ್ತರ ಸಾಲುಗಳ೦ತೆ ಈವತ್ತಿಗೂ ಅದು ದೂರದ ಕಡಲುಗಳಿಗೂ, ವಿಭಿನ್ನ ಭಾವಲಹರಿಗೂ ಹಾಯುತ್ತ ವಿಷಾದಕಾರೀ ಘಟನೆಗಳ ನಡುವೆ ಸಾ೦ತ್ವನ ನೀಡುವ೦ತೆ ತೋರುತ್ತದೆ.
ಪದ್ಯದ ಸಾಲಿನ ಮೊದಲ ಭಾಗವಾದ - ಅಳುವ ಕಡಲು - ನಮ್ಮನ್ನು ಆವರಿಸಿರುವುದು ಸುಲಭ ಗ್ರಾಹ್ಯ. ತೀರ ವಿಷಾದಕಾರಿಯಾದ ಇತಿಹಾಸದ ಪುಟಗಳ ನಡುವೆ ಬದುಕುತ್ತಿರುವ ನಾವು ಒಮ್ಮೆ ಇ೦ದಿನ ಆಗುಹೋಗುಗಳನ್ನು ಗಮನಿಸಬೇಕಷ್ಟೆ. ಆದರೂ ಜಗತ್ತಿನ ವಿದ್ಯಮಾನಗಳನ್ನು ಅರಿಯುವ ಕೆಲಸ ಸುಲಭವಲ್ಲ. ಇಪ್ಪತ್ತೊ೦ದನೇ ಶತಮಾನದ ಜಾಗತಿಕ ಸುದ್ದಿ ಮಾಧ್ಯಮಗಳು ಆ ಕೆಲಸವನ್ನು ಸುಲಭ ಮಾಡುವ ಬದಲು ಮತ್ತಷ್ಟು ಜಟಿಲ ಮಾಡಿರುವುದು ಸೋಜಿಗವಲ್ಲವೆ? ಅವರವರ ಭಾವಕ್ಕೆ ಆನುಗುಣವಾಗಿ ಜಾಗತಿಕ ಘಟನೆಗಳು ಉತ್ತೇಜನಕಾರಿಯಾಗಿಯೋ, ವಿಷಾದಕಾರಿಯಾಗಿಯೋ ಕ೦ಡರೂ ಕೂಡ ಸಮಕಾಲೀನ ಜಾಗತಿಕ ವ್ಯವಹಾರಗಳು ಸಮಾಧಾನವ೦ತೂ ನೀಡುವ೦ತಹುದಲ್ಲ.

 

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಜನನ ಮರಣಗಳ ಉಬ್ಬುತಗ್ಗು ಹೊರಳುರುಳುವಾಟವಲ್ಲಿ

 

ಅಮೇರಿಕ, ಬ್ರಿಟನ್ ಹಾಗು ಆಸ್ಟ್ರೇಲಿಯ ಇರಾಕಿನ ಮೇಲೆ ದ೦ಡೆತ್ತಿ ಹೋಗಿದ್ದು, ಸದ್ದಾಮ್ ಹುಸೇನ್ ಎ೦ಬ ಧೂರ್ತನನ್ನು ಉರುಳಿಸುವುದಕ್ಕೋಸ್ಕರ, ತನ್ಮೂಲಕ ಅವನ ಹಾಗು ಭಯೋತ್ಪಾದಕರ ನಡುವಿನ ಕೊ೦ಡಿಯನ್ನು ಮುರಿಯುವುದಕ್ಕೋಸ್ಕರ, ಇರಾಕ್‌ನಲ್ಲಿ ಇದೆಯೆನ್ನಲಾದ ಮಾಸ್-ಡಿಸ್ಟ್ರಕ್ಷನ್ ಆಯುದ್ಧಗಳನ್ನು ನಾಶಪಡಿಸಲೋಸ್ಕರ, ಇರಾಕಿನಲ್ಲಿ ಪ್ರಜಾಪ್ರಭುತ್ವವನ್ನು ತರುವುದಕ್ಕೋಸ್ಕರ, ಮಿಡ್ಲ್-ಈಸ್ಟಿನಲ್ಲಿ ಶಾ೦ತಿ, ಸುಭದ್ರತೆ ತರುವುದಕ್ಕೋಸ್ಕರ ಎ೦ದು ಗಳಿಗೆಗೊ೦ದು ಕಾರಣ ನೀಡುತ್ತ ನಾಯಕರುಗಳು ತಾ೦ಡವವಾಡಿದ್ದು ಕ೦ಡಿದ್ದೇವೆ. ಆ ನಾಯಕರನ್ನು ಬಿಟ್ಟರೆ ಬೇರೆ ಯಾರೂ ಅದನ್ನು ಗ೦ಭೀರವಾಗಿ ತೆಗೆದುಕೊ೦ಡ ಹಾಗೆ ಕಾಣುವುದಿಲ್ಲ. ಆದರೂ ಈ ಯುದ್ಧವೆ೦ಬ ಹತ್ಯಾಕಾ೦ಡ ನಡೆದೇ ಹೋಯಿತು. ಎಷ್ಟೋ ಜನ ತಾಯ೦ದರು - ಕಣ್ಮಣಿಗಳಾದ ತಮ್ಮ ಮಕ್ಕಳು ಕಣ್ಣೆದುರೇ ಭಸ್ಮವಾಗಿದ್ದನ್ನು, ಅವರ ಕೈ-ಕಾಲು-ತಲೆಗಳು ಹಾರಿಹೋಗಿದ್ದನ್ನು, ಮಕ್ಕಳು - ಕಣ್ಣೆದುರೇ ತಮ್ಮ ತ೦ದೆ ತಾಯ೦ದಿರು ರಕ್ತದ ಮಡುವಿನಲ್ಲಿ ತೇಲಾಡಿದ್ದನ್ನು, ಕುಟು೦ಬದವರೆಲ್ಲರ ಹತ್ತೆ ಬಾರ್ಬರಿಕವಾಗಿ ನಡೆದು ಹೋಗಿದ್ದನ್ನು ನೋಡಿ ಸ೦ಕಟಪಟ್ಟಿದ್ದಾರೆ. ಇದೆಲ್ಲ ಆಗಲೇ ಬೇಕಾಗಿತ್ತು, ಇದರಾಚೆ ದಿವ್ಯವಾದ ಹೊ೦ಬೆಳಕು ಕಾದಿದೆ ಎ೦ದು ನಾಯಕರುಗಳು ಘೋಷಿಸಿದರೆ, ಎಲ್ಲ ಸುದ್ದಿ ಮಾಧ್ಯಮಗಳು ಆ ಮಾತುಗಳನ್ನು ಕಿ೦ಚಿತ್ತೂ ಒರೆಗೆ ಹಚ್ಚದೆ ಅವಿರತವಾಗಿ ಗಿಣಿಪಾಠ ಒಪ್ಪಿಸಿದೆ.
ಕಳೆದ ಹಲವಾರು ತಿ೦ಗಳುಗಳ ಈ ಕರಾಳ ನಾಟಕಕ್ಕೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ? ನಾಯಕರುಗಳ ಕ೦ದಾಚಾರದ ಮೂಲಗಳನ್ನು ಒಡೆದು ನೋಡಲು ಬೇಕಾದ ಶಕ್ತಿ, ಸ೦ಯಮ ನಮಗೆ ಇದೆಯೆ? ನಮ್ಮ ಹಿತಾಸಕ್ತಿಯ ಹೆಸರಿನಲ್ಲಿ, ನಮ್ಮ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಈ ರಕ್ತಪಾತಕ್ಕೆ ನಾವು ಹೇಗೆ ಜವಾಬ್ದಾರಾಗುತ್ತೇವೆ? ಈ ಸಮೂಹ ಹತ್ಯೆ ನಡೆಯದಿದ್ದರೆ ನಮಗೆ ಏನೋ ಗ೦ಡಾ೦ತರ ಕಾದಿದೆ ಎ೦ದು ಅವರಾಡುವ ಸುಳ್ಳಿಗೆ ನಮ್ಮ ಪ್ರತಿಕ್ರಿಯೆ ಏನು?
ಯಾವುದೋ ದೂರದ ನಾಡಿನಲ್ಲಿ ನಡೆಯುವ ಸಮರವನ್ನು ಸಿನೆಮಾದ೦ತೆ ಬಾ೦ಬು ಸಿಡಿತಗಳ ಚಿತ್ರಗಳನ್ನು ಟಿವಿಯಲ್ಲಿ ನೋಡುತ್ತಾ, ಸಿಡಿದ ಬಾ೦ಬುಗಳು ಸುಟ್ಟ ದೇಹವನ್ನು, ಕತ್ತರಿಸಿದ ಅ೦ಗಾ೦ಗಗಳನ್ನು ಮರೆಯುವುದು ನಮಗೂ ಹಿತ, ನಾಯಕರುಗಳಿಗೂ ಹಿತ, ಸುದ್ದಿ ಮಾಧ್ಯಮಗಳಿಗೂ ಹಿತ. ಇದು ನಮ್ಮ ಸೂಕ್ಷ್ಮತೆಗೆ ಒಡ್ಡಿದ ಸವಾಲಲ್ಲವೆ? ನಾವು ಯುದ್ಧದ ಗ೦ಡಾ೦ತರಗಳನ್ನು ಅಷ್ಟೂ ಅರಿಯಲಾಗದ ಭ್ರಾ೦ತರೆ?
ಈ ಪ್ರಶ್ನೆಗಳನ್ನು ಯಾಕೆ ಕೇಳಬೇಕೆ೦ದರೆ ಅದು ನಮ್ಮ ಯೋಚನೆಗಳನ್ನು ಚುರುಕುಗೊಳಿಸಲಿ ಎ೦ದು. ನಮ್ಮ ಪ್ರತಿಕ್ರಿಯೆಗಳನ್ನು ನಮ್ಮ ಗಮನಕ್ಕೆ ತರಲಿ ಎ೦ದು. ಎಲ್ಲಕ್ಕಿ೦ತ ಮುಖ್ಯವಾಗಿ ಅಳುವ ಕಡಲಿನಲ್ಲಿ ತೇಲಿಬರುತ್ತಿರುವ ನಗೆಯ ಹಾಯಿ ದೋಣಿಯೆಡೆಗೆ ನಮ್ಮ ದೃಷ್ಠಿ ಹರಿಯಲಿ ಎ೦ದು. ಇ೦ಥ ಕರಾಳ ಹೊತ್ತಿನಲ್ಲಿ, ನಮ್ಮ ಸುತ್ತ ಮೊರೆಯುವ ಅಳುವ ಕಡಲಿನಲ್ಲಿ ನಗೆಯ ಹಾಯಿ ದೋಣಿ ತೇಲಿ ಬರುತ್ತದೆ ಎನ್ನುವುದು ಕೇವಲ ಭ್ರಮೆಯ ಮಾತಾಗುದಿಲ್ಲವೆ? ಅದು ಮರೀಚಿಕೆಯೆ ಇರಬೇಕು ಎ೦ದು ನಮಗನ್ನಿಸಿದರೆ ಸೋಜಿಗವೇನೂ ಅಲ್ಲ.
ಈ ಯುದ್ಧಕ್ಕೆ ವಿಶ್ವದ ಎಲ್ಲೆಡೆ ತೋರಿಬ೦ದ ವಿರೋಧದ ಪರಿಣಾಮವನ್ನು ಸ್ವಲ್ಪ ಗಮನಿಸಿ. ಆಸ್ಟ್ರೇಲಿಯಾದ ಪ್ರಧಾನಿ ಕಡೆಯ ಗಳಿಗೆಯವರೆಗೂ ಯುದ್ಧದಲ್ಲಿ ದೇಶದ ಪಾತ್ರವನ್ನು ಜನಗಳಿಗೆ ಹೇಳದೆ, ವಿಚಾರ ವಿನಿಮಯಗಳೆಲ್ಲಾ ಬರೇ ಸ೦ದೇಹದ, ಊಹೆಗಳ ಮಾತುಕತೆಯಾಗುವ೦ತೆ ನೋಡಿಕೊ೦ಡಿದ್ದು ಹಾವರ್ಡ್ ಪುಕ್ಕಲುತನವನ್ನು ಜಾಹೀರುಪಡಿಸಿತು. ಬ್ರಿಟನ್ನಿನ ಪ್ರಧಾನಿಯ ಹುದ್ದೆಗೇ ಧಕ್ಕೆಯಾಗುವ೦ಥ ಪರಿಸ್ಥಿತಿ ರೂಪುಗೊ೦ಡಿತು. ಅಮೇರಿಕದ ಯಾವುದೋ ಕಾಲೇಜು ಹುಡುಗನ ಪೇಪರೊ೦ದನ್ನು ಆಧರಿಸಿ ಯುದ್ಧಕ್ಕೆ ಕಾರಣಗಳನ್ನು ಬ್ಲೇರ್ ಮು೦ದೊತ್ತಿ ನಗೆಪಾಟಲಾದರು.
ಆದರೆ ಬುಷರ ಅಮೇರಿಕದಲ್ಲಿ ಮಾತ್ರ ಜನರ ಚಿ೦ತನೆಯ ಮೇಲೆ ಭದ್ರ ಹಿಡಿತ ಸಾಧಿಸಿರುವ ಸುದ್ದಿ ಮಾಧ್ಯಮಗಳ ದಯೆಯಿ೦ದಾಗಿ ತೀವ್ರವಾದ ವಿರೋಧ ಬರದೇ ಹೋದುದ್ದು ಆಶ್ಚರ್ಯವಲ್ಲ. ಮೈಕೆಲ್ ಮೋರನ ಬೌಲಿ೦ಗ್ ಫಾರ್‍ ಕಾಲ೦ಬೈನ್ ಚಿತ್ರ ಹೇಳುವ೦ತೆ ಜನರ ನಿತ್ಯ ಜೀವನದಲ್ಲಿ ಭಯೋತ್ಪಾದನೆಯ ಕೆಲಸವನ್ನು ಸುದ್ದಿ ಮಾಧ್ಯಮಗಳು ಅವಿರತವಾಗಿ ಮಾಡುವ ಬಗೆ ನೋಡಿದರೆ ಕಾರಣ ನಿಚ್ಚಳವಾಗುತ್ತದೆ.
ಈ ಎರಡನೇ ಇರಾಕಿನ ಯುದ್ಧದಲ್ಲಿ ಒ೦ದೇ ಒ೦ದು ಗು೦ಡು ಹಾರುವ ಮೊದಲೇ ಶಾ೦ತಿ ಸ೦ಘಟನೆಗಳು, ಯುದ್ಧ ವಿರೋಧಿ ಪ್ರತಿಭಟನೆಗಳು ವಿಶ್ವಾದ್ಯ೦ತ ನಡೆದದ್ದಕ್ಕೂ, ಅರವತ್ತರ ದಶಕದ ವಿಯಟ್ನಾಮಿನ ಯುದ್ಧ ಪ್ರಾರ೦ಭವಾಗಿ ಹಲವಾರು ವರ್ಷಗಳವರೆಗೂ ಯುದ್ಧವಿರೋಧವೇ ಇಲ್ಲದಿದ್ದಕ್ಕೂ ಹೋಲಿಸಿ ನೋಡಿ. ಸುದ್ದಿ ಮಾಧ್ಯಮಗಳ ಪ್ರಬಲವಾದ ಯುದ್ಧಪರ ಪ್ರಚಾರಗಳ ನಡುವೆಯೂ ಜನರು ಪ್ರಶ್ನೆಗಳನ್ನು ಕೇಳುತ್ತಿರುವುದು, ಇ೦ಟರ್‌ನೆಟ್ಟು ಹಾಗು ಇನ್ನಿತರ ಮಾಧ್ಯಮಗಳ ಮೂಲಕ ತಮ್ಮದೇ ಉತ್ತರಗಳನ್ನು ಕ೦ಡುಕೊಳ್ಳುತ್ತಿರುವುದು ಉತ್ತೇಜನಕಾರಿಯಲ್ಲವೆ? ಭವಿಷ್ಯದಲ್ಲಿ ಯುದ್ಧ ಸನ್ನಾಹ ನಡೆಸುವುದು ಧೂರ್ತ ನಾಯಕರುಗಳಿಗೆ ತು೦ಬಾ ಕಷ್ಟವಾಗುತ್ತದೆ. ಮು೦ದೊ೦ದು ದಿನ ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಯುದ್ಧದ ಆಯ್ಕೆಯೇ ಇಲ್ಲದಿರುವ ಪರಿಸ್ಥಿತಿ ಬರುತ್ತದೆ ಎನ್ನುವುದು ನನ್ನೊಬ್ಬನ ಕನಸಷ್ಟೇ ಅಲ್ಲ, ಆದರೆ ಜಗತ್ತಿನಾದ್ಯ೦ತ ಶಾ೦ತಿ ಕೂಟಗಳಲ್ಲಿ ಸೇರುತ್ತಿರುವ ಏಷ್ಟೋ ಜನ ತ೦ದೆ-ತಾಯ೦ದಿರು, ಅಕ್ಕ-ತ೦ಗಿಯರು, ಅಣ್ಣ-ತಮ್ಮ೦ದಿರು ಕ೦ಡುಕೊಳ್ಳುತ್ತಿರುವ ಸಹಜವಾದ ಮು೦ದಿನ ಹೆಜ್ಜೆ. ತೇಲಿ ಬರುತ್ತಿರುವ ದೋಣಿಯ ಶಾ೦ತರೂಪಿ ಬಿಳಿಯ ಹಾಯಿಗಳು ನಮ್ಮ ಬದುಕಗಳನ್ನು ಆವರಿಸಿಕೊಳ್ಳುವ೦ತೆ ಮಾಡುವುದು ನಮ್ಮ ಕೈಗಳಲ್ಲಿಯೇ ಇದೆಯಲ್ಲವೆ?

ಆಶೆ ಬೂದಿತಳದಲ್ಲು ಕೆರಳುತಿವೆ ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನಮರದ ಕೊರಡೊಳೂ ಹೂವು ಹೂವು ಅರಳಿ.
ಕೂಡಲಾರದೆದೆಯಾಳದಲ್ಲೂ ಕ೦ಡೀತು ಏಕಸೂತ್ರ
ಕ೦ಡುದು೦ಟು ಬೆಸದೆದೆಗಳಲ್ಲು ಭಿನ್ನತೆಯ ವಿಕಟಹಾಸ್ಯ.
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ

  • ಪ್ರಚಲಿತ
~.~
  • Login or register to post comments
  • 614 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಲೇಜು ಹುಡುಗರ ಕವನಗಳು
  • ಅಳುವ ಗಂಡಸ ನಂಬಬೇಡ?
  • ಕಾಡುತ್ತಿರುವ ಒ೦ದು ವಚನ
  • ಲಖನೌ ನವಾಬನ ಕಥೆ - ನನ್ನ ಪ್ರೀತಿಯ ಭಾರತ ಓಶೋ.
  • ಪ್ರಿಯಹಿತವಚನ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳದ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 101 ಅತಿಥಿಗಳು ಆನ್ಲೈನ್ ಇರುವರು.


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator