ಝೆನ್ ೯ : ಸೂತ್ರ ಪಠಣ
ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.
“ಅಯ್ಯೋ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ವೀಕಾಗಿದ್ದಳು. ಅವಳಿಗೆ ಸಿಗಬೇಕಾದ ಪುಣ್ಯವನ್ನು ಬೇರೆಯವರು ಕಿತ್ತುಕೊಂಡುಬಿಡುತ್ತಾರೆ. ಕೇವಲ ಅವಳಿಗಷ್ಟೇ ಲಾಭವಾಗುವಂಥ ಮಂತ್ರ ಹೇಳಿ” ಎಂದ ರೈತ.
“ಹಾಗಲ್ಲ, ಎಲ್ಲ ಜೀವಿಗಳಿಗೂ ಲೇಸು ಬಯಸುವುದು ಬೌದ್ಧ ಧರ್ಮದ ಉದ್ದೇಶ, ಅದಕ್ಕೇ ನಾವು ಮಂತ್ರಗಳನ್ನು ಹೇಳುತ್ತೇವೆ” ಎಂದು ಸಂನ್ಯಾಸಿ ವಿವರಿಸಿದ.
“ಉದ್ದೇಶವೇನೋ ಚೆನ್ನಾಗಿದೆ. ಆದರೆ ದಯವಿಟ್ಟು ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ. ನಮ್ಮ ಪಕ್ಕದ ಮನೆಯವನಿದ್ದಾನಲ್ಲ ಅವನು ಬಹಳ ದುಷ್ಟ, ನನಗೆ ತುಂಬ ತೊಂದರೆ ಕೊಟ್ಟಿದ್ದಾನೆ. ಅವನೊಬ್ಬನನ್ನು ಬಿಟ್ಟು ಉಳಿದ ಜೀವರಾಶಿಗಳಿಗೆಲ್ಲ ಒಳ್ಳೆಯದಾಗಲಿ ಎಂದು ಮಂತ್ರ ಹೇಳಿ” ಎಂದು ರೈತ ಕೋರಿಕೊಂಡ.

- Printer-friendly version
- Login or register to post comments
- 1313 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಕಥೆ ಅರ್ಧದಲ್ಲಿ ನಿಂತಂತಿದೆ
ಈ ಕಥೆ ಯಾಕೋ ಅರ್ಧದಲ್ಲೇ ನಿಂತ ಹಾಗಿದೆಯಲ್ಲಾ?
ಸಿಗೋಣ,
ಪವನಜ
-----------
Think globally, Act locally
ಪೂರ್ತಿ ಅಗಿದೆಯಲ್ಲ!
ರೈತನ ಸಂಕುಚಿತ ಭಾವನೆ ಸ್ಪಷ್ಟವಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ, ಆದರೆ ನನ್ನ ಪಕ್ಕದ ಮನೆಯವನಿಗೆ ಮಾತ್ರ ಬೇಡ. ಎಷ್ಟೇ ಧರ್ಮಿಷ್ಟರೆಂದುಕೊಂಡರೂ ಸ್ವಾರ್ಥದ ಸಂಕುಚಿತತೆ ಇದ್ದೇ ಇರುತ್ತದೆ ಎಂಬುದನ್ನು ಸೂಚಿಸಿದ ಕೂಡಲೆ ಕತೆ ಮುಗಿದದ್ದು ನ್ಯಾಚುರಲ್ ಅಲ್ಲವೆ?