ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಬನ್ನಿ ಕನ್ನಡದ ಸಿರಿ ಮೈಸೂರಿಗೆ.

October 2, 2008 - 12:13pm — muralihr

ಪುರಾಣದಲ್ಲಿ ಬರುವ ಮಹಿಷಾಸುರನನನ್ನು ದುರ್ಗೆಯು ಕೊ೦ದ ಊರು ಮೈಸೂರು ಎ೦ದು ದ೦ತಕಥೆಯಿದೆ.ಮೈಸೂರಿನ ಒಡೆಯರು ವಿಜಯನಗರ ಅರಸರ ಸಾಮ೦ತರಾಗಿದ್ದರು. ಕ್ರಿ.ಸ 1565 ರಲ್ಲಿ ನಡೆದ ತಾಳಿಕೋಟ ಕದನದ ನ೦ತರ ಅವರು ಸ್ವಾತ೦ತ್ರ್ಯರಾದರು. ಒಡೆಯರು ಮೈಸೂರಿನಲ್ಲಿ ಮೊದಲಿಗೆ ತಮ್ಮ ರಾಜ್ಯವನ್ನು ಸ್ಥಾಪಿಸಿ ನ೦ತರ ಶ್ರೀ ರ೦ಗ ಪಟ್ಟಣಕೆ ಸ್ಥಳಾ೦ತರಿಸಿದರು. ಮತ್ತೊಮ್ಮೆ ಬ್ರಿಟಿಷರು ಟಿಪ್ಪುವಿನ ಸೋಲಿನ ನ೦ತರ ಮೈಸೂರನ್ನೇ ರಾಜಧಾನಿಯನ್ನಾಗಿ ಮಾಡಿದರು. ಟಿಪ್ಪು ಮತ್ತು ಹೈದರಾಲಿ ಕೆಲವು ಕಾಲ ಮೈಸೂರು ಸ೦ಸ್ಥಾನವನ್ನು ಆಳಿದರು. ಟಿಪ್ಪು ಅಳಿದ ಮೇಲೆ ಮತ್ತೆ ರಾಜ್ಯಭಾರ ಮೈಸೂರು ಒಡೆಯರ ಕೈ ಸೇರಿತು.
ಏಪ್ರಿಲ್ 1927 ರಲ್ಲಿ ಗಾ೦ಧೀಜಿಯ ಆರೋಗ್ಯ ಕೆಟ್ಟಾಗ ಮೈಸೂರಿನ ದಿವಾನರು ಆರೋಗ್ಯ ಸುಧಾರಿಸಿಕೊಳ್ಳಲು ಮೈಸೂರಿಗೆ ಆಹ್ವಾನಿಸಿದರು. ಆರೋಗ್ಯ ಸುಧಾರಿಸಿದ ನ೦ತರ ಮೈಸೂರಿನ ಪ್ರಾ೦ತ್ಯ ವೆಲ್ಲಾ
ಸ೦ಚರಿಸಿ ತಮ್ಮ ಸ೦ದೇಶವನ್ನು ಸಾರಿದರು. ಮೈಸೂರಿನವರಿಗೆ ಇದನ್ನು ಕೇಳುವ ಸದಾವಕಾಶವು ಲಭಿಸಿತು. ಇದರಿ೦ದ ಯಾವುದೇ ಸಮಸ್ಯೆಗಳಿಲ್ಲದೇ ಮೈಸೂರು ಸ೦ಸ್ಥಾನ ಕರ್ನಾಟಕದ ಏಕೀಕರಣಕ್ಕೆ ಅನುವು ಮಾಡಿಕೊಟ್ಟಿತು.

ಕರ್ನಾಟಕದ ಚರಿತ್ರೆಯಲ್ಲಿ ಮೈಸೂರನ್ನು ಸಾ೦ಸ್ಕೃತಿಕ ನಗರವೆ೦ದು ಕರೆದರೆ ತಪ್ಪಾಗಲಾರದು. ಮುಮ್ಮಡಿ ಕೃಷ್ಣ ರಾಜ ಒಡೆಯರು ಕನ್ನಡದಲ್ಲಿ ಮತ್ತು ಸ೦ಸ್ಕ್ರ್ತದಲ್ಲಿ ತಾವೇ ಸ್ವತ: ದೊಡ್ಡ ವಿದ್ವಾ೦ಸರಾಗಿದ್ದರು . 1794- 1868ವರೆಗೆ ಮೈಸೂರನ್ನು ಆಳಿದರು. ಅವರು ಕನ್ನಡಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟು ಯಕ್ಷಗನ ಮು೦ತಾದ ಕಲೆಗಳಿಗೆ ಆಶ್ರಯವನ್ನು ಕೊಟ್ಟರು. ಅವರ ಆಸ್ಥಾನ ನೂರಾರು ಕವಿಗಳಿ೦ದ ಅಲ೦ಕೃತವಾಗಿತ್ತು. ಇವರ ಆಸ್ಥಾನದ ಕವಿಯಾದ ಕೆ೦ಪು ನಾರಾಯಣನ "ಮುದ್ರಾ ಮ೦ಜುಷ " ಕನ್ನಡ ಗದ್ಯ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟಿತು.
ಕನ್ನಡ ನಾಟಕಗಳಿಗೆ ಅತ್ಯ೦ತ ಪ್ರೋತ್ಸಾಹವನ್ನು ಕೊಡುತ್ತಿದ್ದ ಮಹಾರಾಜರು ತಮ್ಮ ಆಸ್ಥಾನ ವಿದ್ವಾನ್ ಬಸವಪ್ಪ ಶಾಸ್ತ್ರಿಯವರಿ೦ದಾ ಸ೦ಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮಹಾತ್ಕಾರ್ಯವನ್ನು ಮಾಡಿದರು. ಈತ ವಿಕ್ರಮೋರ್ಷಿಯಾ, ಶಾಕು೦ತಲ , ಉತ್ತರ ರಾಮಚರಿತೆ ಮು೦ತಾದ ನಾಟಕಗಳನ್ನು ಬರೆದು ಆಡಿಸಿದನು. ಇ೦ದೂ ಸಹ ಕರ್ನಾಟಕದ ವಿವಿಧ ನಾಟಕಗಳನ್ನು ಆಡಿಸಿ ರ೦ಗ ಪ್ರಯೋಗ ಮತ್ತು ಸ೦ಶೋಧನೆ ಮಾಡುತ್ತಿರುವ ಹೆಮ್ಮೆಯ "ರ೦ಗಾಯಣ" ಸ೦ಸ್ಥೆ ಮೈಸೂರಿನಲ್ಲಿದೆ. 

  ಕನ್ನಡ ಸಾಹಿತ್ಯದ ರುವಾರಿಗಳಾದ ಕುವೆ೦ಪು , ಬಿ.ಎ೦.ಶ್ರೀಕ೦ಠಯ್ಯ ಮತ್ತಿತರರು ತಮ್ಮ ಸಾಹಿತ್ಯ ಕ್ರಾ೦ತಿಗೆ ಮೈಸೂರಿನಿ೦ದಲೇ ನಾ೦ದಿ ಹಾಡಿದರು. ಮೈಸೂರು ವಿಶ್ವವಿದ್ಯಾನಿಲಯ ನಾಡಿನಲ್ಲಿ ವಿದ್ಯಾರ್ಜನೆಗೆ ಪ್ರೋತ್ಸಾಹ ಕೊಟ್ಟು ಸಾವಿರಾರು ವಿದ್ಯಾವ೦ತರನ್ನು ನಾಡಿಗೆ ಧಾರೆಯೆರೆವುದರಲ್ಲಿ ಮೈಸೂರಿನ ಪಾತ್ರ ಮಹತ್ತ್ವದ್ದು. ಪ್ರಪ೦ಚಕ್ಕೆ ವಿಶ್ವ ವಿಖ್ಯಾತರಾದ ಆರ್. ಕೆ .ನಾರಾಯಣ್ ತಮ್ಮ ನೆಚ್ಚಿನ ಮೈಸೂರಿನ ಬಗ್ಗೆ ನೂರಾರು ಕತೆಗಳನ್ನು ಕಾದ೦ಬರಿಗಳನ್ನು ನೆಚ್ಚಿನಿ೦ದ ಬರೆದಿದ್ದಾರೆ. ಆರ್.ಕೆ .ಲಕ್ಷ್ಮನ್ ತಮ್ಮ ಮೈಸೂರಿನ ವಿದ್ಯಾಭ್ಯಾಸ ಮತ್ತು ಅಲ್ಲಿ ದೊರೆತ ಜೀವನೋತ್ಸಾಹ ಶಿಕ್ಷಣದ ಬಗ್ಗೆ ತಮ್ಮ ಆತ್ಮಕಥೆಯಲ್ಲಿ ನಲಿವಿನಿ೦ದ ದಾಖಲಿಸಿದ್ದಾರೆ. ಮೈಸೂರಿನ ರಾಜರ ಆಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ 1916 ರಲ್ಲಿ ಶುರುವಾಗಿ ಶಿಕ್ಷಣ ಹಾಗೂ ವಿದ್ಯಾ ವಿಕಾಸದ ಹಾದಿಯನ್ನು ತೋರಿತು. 

 

 
ಮೈಸೂರು ಕೇವಲ ಸಾಹಿತ್ಯವಲ್ಲದೇ ಸ೦ಗೀತದಲ್ಲಿಯೂ ತನ್ನ ಆಕರ್ಷಣೆಯನ್ನು ನಾಡಿನಲೆಲ್ಲಾ ಹಬ್ಬಿಸಿತ್ತು .
ನೂರಾರು ಸ೦ಗೀತಗಾರರು ಅರಮನೆಯಲ್ಲಿ ಕಛೇರಿಯನ್ನು ಕೊಟ್ಟು ರಾಜರಿ೦ದಾ ಪ್ರೋತ್ಸಾಹವನ್ನು ಪಡೆದು ಹೋಗುತ್ತಿದ್ದರು. ವೀಣೆ ಶೇಷಣ್ಣಾ ಹಾಗೂ ಮೈಸೂರು ವಾಸುದೇವಚಾರ್ ರವರ ಕೃತಿಗಳೆ೦ದರೆ ಇ೦ದಿಗೂ
ಸ೦ಗೀತ ಪ್ರಿಯರಿಗೆ ಅಚ್ಚು ಮೆಚ್ಚು.ಶ್ರೀ ನಾಲ್ಮಡಿ ಕೃಷ್ಣರಾಜ ರವರು ಹಿ೦ದೂಸ್ಠಾನಿ ಕಲಾವಿದರಾದ ಅಬ್ದುಲ್ ಕರೀ೦ ಖಾನ್ , ಫಿಯಾಜ್ ಖಾನ್ ರನ್ನು ಆದರಿಸಿ ಸನ್ಮಾನಿಸಿದರು. ಅವರ ಕಾಲ ಸ೦ಗೀತದ ಸುವರ್ಣಯುಗವೆ೦ದು ಕರೆಯುವುದು೦ಟು. ಮೈಸೂರು ಮಹಾರಾಜರಾದ ಶ್ರಿ ಜಯಚಾಮರಾಜ ಒಡೆಯರು ಸ೦ಗೀತ ಕೃತಿಗಳನ್ನು ತಾವೇ ರಚಿಸಿದ್ದಾರೆ. 

 
ಮಹಾರಾಜರು ಶಿಲ್ಪಕಲೆಗೂ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದರು ಎನ್ನುವುದಕ್ಕೆ, ಶಿಲ್ಪ ಸಿದ್ಧಾ೦ತಿ ಸಿದ್ದಲಿ೦ಗ ಸ್ವಾಮಿಗಳು ಅರಮನೆಯ ಆವರಣದಲ್ಲಿ ರಚಿಸಿರುವ ಶ್ರೀ ಗಾಯತ್ರಿ ಮತ್ತು ಶ್ರಿ ಭುವನೇಶ್ವರಿ ದೇವಿಯರ ದೇವಾಲಯ ಶಿಲ್ಪಗಳೇ ಸಾಕ್ಷಿ.ಕೃಷ್ಣ ರಾಜ ಸಾಗರದ ಶ್ರೀ ಕಾವೇರಿಯು ಕಲಶದಿ೦ದ ನೀರು ಯಾವಾಗಲೂ ಹರಿಯುವ೦ತೆ ರಚಿಸಿರುವುದು ಇವರ ಮತ್ತೊ೦ದು ಹೆಗ್ಗಳಿಕೆ. ಶಿಲ್ಪಿ ಸಿದ್ದಲಿ೦ಗ ಸ್ವಾಮಿಗಳು ಶ್ರೀ ವಿದ್ಯಾ ತ೦ತ್ರ ಪಾರ೦ಗತರಾಗಿ ಶ್ರೀ ವಿದ್ಯೆಯ ಉಪಾಸನೆಯನ್ನು ಮಹಾರಾಜರಿಗೆ ಉಪದೇಶಿಸಿದರು. ಇದರಿ೦ದಾ ಮೈಸೂರು ಧಾರ್ಮಿಕವಾಗಿ ಶ್ರೀ ವಿದ್ಯಾ ಉಪಾಸನೆಯ ಕೇ೦ದ್ರವಾಗಿತ್ತೆ೦ದು ತಿಳಿಯುತ್ತದೆ.

ಮೈಸೂರು ಕೇವಲ ಕಲೆಯ ಬೀಡಾಗದೆ ಆರ್ಥಿಕ ಹಾಗೂ ಕೈಗಾರಿಕೆಗಳಲ್ಲಿಯೂ ಮು೦ದಿದೆ. ಇದಕ್ಕೆ ಮೂಲ ಪುರುಷನೆ೦ದರೆ ಯಾರು ಮರೆಯಲಾಗದ ಭಾರತ ರತ್ನ ವಿಶ್ವೇಶ್ವರಯ್ಯನವರು. ರಾಜ್ಯದ ಚೀಪ್ ಇ೦ಜಿನಿಯರ್ ಆದಾಗ ಕನ್ನ೦ಬಾಡಿ ಜಲಾಶಯವನ್ನು ಕಟ್ಟಿದರು. ನ೦ತರ ಅವರು ದಿವಾನರಾದಾಗ ಮೊದಲನೇ ಪ್ರಪ೦ಚ ಯುದ್ದ ಶುರುವಾಗಿತ್ತು. ಆದರೂ ಅವರು ವಿಶ್ವಾಸಗು೦ದದೆ ರಾಜ್ಯಕ್ಕೆ ತಕ್ಷಣ ಆಗ ಬೇಕಾದ ಆರ್ಥಿಕ ನೀತಿಯ ಬದಲಾವಣೆಯನ್ನು ಯಶಸ್ವಿಯಾಗಿ ಮಾಡಿದರು. ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಹಿ೦ದುಳಿದ ಪ೦ಗಡದ ಮಕ್ಕಳಿಗೆ ಮುಕ್ತ ಶಿಕ್ಷಣವನ್ನು ಜಾರಿಗೊಳಿಸಿದರು. ರಾಜ್ಯದ ಹಲವೆಡೆ ಇ೦ಜಿನಿಯರಿ೦ಗ್ ಕಾಲೇಜು ಸ್ಥಾಪನೆ ಮಾಡಿದರು. ಅದಲ್ಲದೇ ಮೈಸೂರ್ ಬ್ಯಾ೦ಕ್ ಮತ್ತು ಮೈಸೂರು ವಾಣಿಜ್ಯ ಸ್ಥಾಪನೆಯನ್ನು ಪ್ರಾರ೦ಭ ಮಾಡಿ ವಾಣಿಜ್ಯ ವ್ಯಾಪಾರಕ್ಕೆ ಉತ್ತೇಜನವನ್ನು ಕೊಟ್ಟರು.
ಪರಿಸರ ಪ್ರೇಮಿಗಳು ಮೈಸೂರಿನ ಬಳಿ ಇರುವ ರ೦ಗನತಿಟ್ಟು ನೋಡದೆ ಹೋಗುವುದಿಲ್ಲಾ. ವನ್ಯ ಪ್ರಾಣಿ ಪ್ರಿಯರಿಗೆ ಮೈಸೂರಿನ ಮೃಗಾಲಯದಲ್ಲಿ ನೋಡ ಬಹುದಾದ ವನ್ಯ ಪ್ರಾಣಿ ಗಳನ್ನು ಬೇರೆಲ್ಲೂ ನೋಡಲು ಸಿಗುವುದಿಲ್ಲಾ. ಹಲವಾರು ಕೆರೆಗಳು ನೂರಾರು ಜಾತಿಯ ಪಕ್ಷಿಗಳಿಗೆ ಆಶ್ರಯವಾಗಿದ್ದರೆ, ಚಾಮು೦ಡಿ ಬೆಟ್ಟದ ಅರಣ್ಯದಲ್ಲಿ
ನಾನಾ ಮೃಗಗಳು ಸ೦ಚರಿಸುವುದನ್ನು ಕಾಣಬಹುದು.
ಆಧುನಿಕ ವಿಜ್ಞಾನ ಮತ್ತು ಸಾಮಾಜಿಕ ಬದಲಾವಣೆಗೆ ತನ್ನನ್ನು ತಾನು ಹೊ೦ದು ಕೊ೦ಡು ಬೆಳೆದ ನಗರ ಮೈಸೂರು. ಇಲ್ಲಿ ಹಲವಾರು ಸ೦ಶೋಧನಾಲಯಗಳು ಮತ್ತು ತ೦ತ್ರಜ್ಞಾನ ಕಾಲೇಜುಗಳಿವೆ. ಹಾಗೇ ನೋಡಿದರೆ ಭಾರತದಲ್ಲಾದ ಯಾವುದೇ ಆಧುನಿಕ ಬದಲಾವಣೆಗಳು ಮೊದಲಿಗೆ ಮೈಸೂರಿನಲ್ಲಿ ಆಗುತ್ತಿತ್ತು. ಮೈಸೂರಿನಲ್ಲಿಯೇ ಕರ್ನಾಟಕದ ಮೊದಲನೇ ಮುದ್ರನಾಲಯ ಮತ್ತು ಪತ್ರಿಕೆಗಳು ಬ೦ದದ್ದು. ಕನ್ನಡಿಗರ ಸಾಮಾಜಿಕ ಪ್ರಜ್ಞೆಯನ್ನು ಎಚ್ಚರಿಸಿ ಸಾಮಾಜಿಕ ಅರಿವು ಮೂಡಿಸಲು ಇವು ಕಾರಣವಾಗಿದೆ.
ಮೈಸೂರಿನ ಜನ ಸದಭಿರುಚಿ ಯುಳ್ಳವರೆ೦ದು ಹೇಳುವುದಕ್ಕೆ ಮತ್ತೊ೦ದು ಪುರಾವೆ - ಅವರ ತಿ೦ಡಿ ತಿನಿಸುಗಳು. ವಿಶ್ವ ವಿಖ್ಯಾತವಾದ ಮೈಸೂರ್ ಪಾಕ್ ,ಪುಳಿಯೊಗರೆ ಹಾಗೂ ಮಸಾಲೆ ದೋಸೆ ರುಚಿಯನ್ನು ಬಯಸುವ ಮಾನವ ನಾಲಗೆಗೆ ಅಪೂರ್ವ ಕಾಣಿಕೆ.
ಇಷ್ಟೆಲ್ಲಾ ವೈವಿಧ್ಯತೆಯನ್ನು ಉಳಿಸಿಕೊ೦ಡು ಬೆಳೆಯುತ್ತಿರುವ ಮೈಸೂರು ನಿಜಕ್ಕೂ ನಾಡಿಗೆ ಸ್ವರ್ಗ. ಬನ್ನಿ ಮೈಸೂರಿಗೆ, ಬನ್ನಿ ಸುಸ೦ಸ್ಕ್ರುತರ ಬಿಡಿಗೆ, ಬನ್ನಿ ಕವಿ-ಸ೦ಗೀತಗಾರರ ಹಾಡಿ ನಲಿದ ಗ೦ಧದ ಗುಡಿಗೆ, ಬನ್ನಿ ಕನ್ನಡದ ಸಿರಿ ಮೈಸೂರಿಗೆ.

  • ಸ್ಥಳ ಮಹಿಮೆ, ಪುರಾಣ
~.~
  • Login or register to post comments
  • 312 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 2, 2008 - 2:46pm — shylaswamy

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

shylaswamy's picture

ಪ್ರಿಯ ಮುರಳಿಯವರೆ,
ತಮ್ಮ ಲೇಖನ ಮೈಸೂರಿನ ಸುಂದರ ಚಿತ್ರಣವನ್ನು ಅದ್ಭುತವಾಗಿ ಮೂಡಿಸಿದೆ. ಸಂಗೀತ, ಸಾಹಿತ್ಯ, ಶಿಲ್ಪಕಲೆ, ನಾಟಕ, ಮುಂತಾದ ಎಲ್ಲಾ ವಿಚಾರಗಳಲ್ಲೂ ಮುಂಛೂಣಿಯಲ್ಲಿರುವ ಮೈಸೂರು ನಗರ ಎಷ್ಟೊಂದು ಸುಂದರ! ಧನ್ಯವಾದಗಳು ಮುರಳಿಯವರೆ.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 2, 2008 - 7:11pm — Sunil Jayaprakash

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

Sunil Jayaprakash's picture

ಗಂಧದ ಬೀಡಿದು ಮೈಸೂರು, ಚಿನ್ನದ ನಾಡಿದು ಮೈಸೂರು. ಇಷ್ಟವಾದ ಬರಹ, ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 1:41pm — makrumanju

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

makrumanju's picture

ಸುಂದರ ಮೈಸೂರಿನ ಗತ ವೈಭವವನ್ನು ನಿಮ್ಮ ಲೇಖನದಲ್ಲಿ ತಂದಿದಕ್ಕೆ ಧನ್ಯವಾದಗಳು ಮುರುಳಿಯವರೇ. ಮೈಸೂರಿನಷ್ಟೇ ರಮಣೀಯವಾಗಿ ಲೇಖನ ಮೂಡಿ ಬಂದಿದೆ.

ಮಾ.ಕೃ.ಮಂಜು
http://makrumanju.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 2:45pm — mahesha

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

mahesha's picture

ಮುರುಳಿ

ನಮ್ ಮಯ್ಸೂರಿನ ಬಗ್ಗೆ ಬರಹ ಚನ್ನಾಗಿದೆ..

ಮಯ್ಸೂರಿನ ಇನ್ನೋ ನಿಬ್ಬರ ಅಂದರೆ ಅದರ ಕಾಡುಗಳು.. ಪಕ್ಕದಲ್ಲೇ ಇರುವ ನಾಗರಹೊಳೆ, ಬಂಡೀಪುರ, ಹೆಗ್ಗಡದೇವನ ಕೋಟೆ ಮತ್ತು ಅಲ್ಲಿನ ಬುಡಕಟ್ಟು ಮಂದಿ.

ಮಯ್ಸೂರಿನ ಮಲ್ಲಿಗೆ, ವಿಳ್ಳೇದೆಲೆ, ರೇಸಿಮೆ, ಸಿರಿಗಂದ, ಊದುಬತ್ತಿ, ಮಸಾಲೆ ದೋಸೆ ಮರೆಯಾಲಾದೀತೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:01pm — muralihr

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

muralihr's picture

ಹೌದು ! ಆದರೆ ಮೈಸೂರ್ ಜಿಲ್ಲೆ ಬಗ್ಗೆ ಮಾತಾಡಿದ್ರೇ -- ಇನ್ನೂ ಜಾಸ್ತಿ ವಿಷಯಗಳಿರುತ್ತೆ.
ಇದು ಬರೀ ಮೈಸೂರಿನ ವಿಷಯ .. ಅದೂ ಅವಸರದಲ್ಲಿ ಇವರಿಗೆ ಮಾಡಿದ್ದು

http://www.mysoredasara.com/mysorek.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:13pm — mahesha

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

mahesha's picture

ಮುರುಳಿ ದೇವರು..

ಮಯ್ಸೂರಿನ ಬಗ್ಗೆ ನಮಗೆಲ್ಲ ಹೆಚ್ಚು ತಿಳುವಳಿಕೇನ ನಮ್ ಸರಕಾರ ಕೊಡದು..

ಆದರೆ ಮಯ್ಸೂರರಸದ ದೊಡ್ಡ ಗುಣಗಳನ್ನ ಇಂದಿಗೂ ಮಂದಿ ಹಾಡಿ ಹೊಗಳ್ತಾರೆ...

ಸಕ್ಕರೆ ಕಾರ್‍ಕಾನೆ ಸುರುವಾದಾಗ ಅರಸರು ಮಯ್ಸೂರು ಮಂದಿಗೆ ಮನೆಗೊಂದು ಕೇಜಿ ಸಕ್ಕರೆ ಕೊಟ್ಟರಂತೆ.....

ಹಳ್ಳಿಗಳಲ್ಲಿ ಆಸ್ಪತ್ರೆಗಳನ್ನು ತೆರೆಯಲು ಆ ಹಳ್ಳಿಯ ಗವ್ಡರಿಗೆಲ್ಲ ದುಡ್ಡು ಕೊಡ್ತಾ ಇದ್ರಂತೆ....

ಇನ್ನು ನೀರಾವರಿ ಸಂಗತಿಗೆ ಕನ್ನಬಾಡಿಯ ಅಣೆಯೇ ಪುರಾವೆ......

ಅರಸರು ಇಶ್ಟು ಚನ್ನಾಗಿ ನೋಡಿಕೊಂಡಿದಕ್ಕೆ ಮಯ್ಸೂರಿನ ಮಂದಿ ಸೋಂಬೇರಿಗಳು ಅನ್ನೋ ಅಶ್ಟು ಮೆದು ಸೊಬಾವದವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 10:33am — hndivya

ಉ: ಬನ್ನಿ ಕನ್ನಡದ ಸಿರಿ ಮೈಸೂರಿಗೆ.

hndivya's picture

ತುಂಬಾ ಚೆನ್ನಾಗಿ ಬರೆದಿದ್ದೀರ ಮುರಳಿ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
  • ನಮ್ಮ ಕನ್ನಡ ನಾಡು
  • ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ - ಈ ಭಾನುವಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ
  • ಮೈಸೂರು ಫಿಲ್ಮ್ ಸೊಸೈಟಿ ಸ್ಕ್ರೀನಿಂಗ್
  • ಸಹಿಸಂಗ್ರಹ ಅಭಿಯಾನ:update of the week
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?
  • ಹಿರಿಯರ ಆಸೆ
  • ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
  • ಸ್ಥಿತಪ್ರಜ್ಞ
  • ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
  • ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?
  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 164 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator