August 8, 2008 - 9:52am - Anantha Krishna K S
ಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್ ತಪಗೆಯ್ದರ್||
ಇದು ಪೊನ್ನಂಪೇಟೆಯ ಅರಣ್ಯಮಹಾವಿದ್ಯಾಲಯದ ನಂಜಲ್ಮರದಡಿಯ ಕನ್ನಡಕಂದರ ಪೀಠದೆಡೆಯೊಳ್ ದೊರಕಿದ ಎಸೞೆೞ್ತು. ಕನ್ನಡಕಂದರ್ ತಮ್ಮೋರಂತಪ್ಪ ಮಹೇಶರ್, ಸುನೀಲ ಜಯಪ್ರಕಾಶರ್, ಹಂಸಾನಂದಿ ಮಹಾಮುನಿಗಳ್, ಸಿ ಮರಿಜೋಸೆಫ್ ಮಾಸಯರ್, ಭರತರ್ ಇನ್ನು ಮುಂತಾದ ಸತ್ವಶಾಲಿಗಳ ಪೇೞ್ಕೇಳ್ಪೆಗಳ್ಗೆ ಗಣಕದಿನುತ್ತರಿಸುತುಂ ಶಬ್ದಮಣಿದರ್ಪಣಮನುಂ ಕಿಟ್ಟೆಲ್ ಕೋಶಮನುಂ ತುದಿಮೊದಲೆನ್ನದೋದುತುಂ ಕನ್ನಡದೇವಿಯ ಸೊಬಗಂ ಮನದೊಳ್ ಧ್ಯಾನಿಸುತುಂ ಕನ್ನಡದೇವಿ ತಮಗಿನೊಲ್ದಿಲ್ಲಮೆನುತುಂ ಮೇಲ್ಕಂಡ ಮಾಸಯರಂ ಬೀೞ್ಕೊಂಡು ಕನ್ನಡದೇವಿಯೊಲ್ಮೆಗಾಗಿ ಪೊನ್ನಂಪೇಟೆಯ ಕಾಡೊಳ್ ತಪಂ ಗೆಯ್ವ ಮುನ್ನ ಬರೆದ ಶಾಸನಂ.
0

- Login or register to post comments
- 649 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
Anantha Krishna K S
ಪರಿಚಯ
I am an assistant professor in Computer Science. Very much interested in Old Kannada language.
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 0 ಸದಸ್ಯರು ಮತ್ತು 128 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ಕನ್ನಡಕಂದರ್ ತಪಂಗೆಯ್ದರ್
ಬೀಳ್ಕೊಡೂಗೆ ಏಕೆ ಕನ್ನಡ ಕಂದರೆ! ನೀವು ಇಲ್ಲಿ ಹೇಳಬೇಕಾದ್ದು, ನಮಗೆಲ್ಲ ತಿಳಿಸಬೇಕಾದ್ದು ಬಹಳ ಇದೆ
ಪೊನ್ನಂಪೇಟೆಯ ಕಾಡಿನೊಳಗೆ ಹೀಗೆ ಹೊಕ್ಕು,ಹಾಗೆ ಹೊರಬಂದುಬಿಡಿ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡಕಂದರ್ ತಪಂಗೆಯ್ದರ್
ತಪ್ಪೋಲೆ
ಕನ್ನಡದೇವಿಯ ದಯಮೇ-
ನಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್ ತಪಗೆಯ್ದರ್||
ಈ ಪೊೞಲ ಜಂಗುೞಿಯೊಳೇಕಚಿತ್ತಕ್ಕೆ ಭಂಗಂ ಬರ್ಪುದೆಂದು ಕನ್ನಡದೇವಿಯನೊಂದೇ ಮನದಿಂ ಧ್ಯಾನಿಪೆನೆಂದು ಕನ್ನಡಕಂದರ್ ಕಿಱಿದು ಬೇಗಂ ಬನಕ್ಕೆ ತೆರಳಿದರ್.
ಉ: ಕನ್ನಡಕಂದರ್ ತಪಂಗೆಯ್ದರ್
ತಪ್ಪೋಲೆ
ಕನ್ನಡದೇವಿಯ ದಯಮೇ-
ನಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್ ತಪಗೆಯ್ದರ್||
ಈ ಪೊೞಲ ಜಂಗುೞಿಯೊಳೇಕಚಿತ್ತಕ್ಕೆ ಭಂಗಂ ಬರ್ಪುದೆಂದು ಕನ್ನಡದೇವಿಯನೊಂದೇ ಮನದಿಂ ಧ್ಯಾನಿಪೆನೆಂದು ಕನ್ನಡಕಂದರ್ ಕಿಱಿದು ಬೇಗಂ ಬನಕ್ಕೆ ತೆರಳಿದರ್.
ಉ: ಕನ್ನಡಕಂದರ್ ತಪಂಗೆಯ್ದರ್
ಇನ್ನೊಂದು ತಪ್ಪೋಲೆ
ಕನ್ನಡದೇವಿಯ ದಯಮೇ-
ನಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್ ತಪಗೆಯ್ದರ್||
ಈ ಪೊೞಲ ಜಂಗುೞಿಯೊಳೇಕಚಿತ್ತಕ್ಕೆ ಭಂಗಂ ಬರ್ಪುದೆಂದು ಕನ್ನಡದೇವಿಯನೊಂದೇ ಮನದಿಂ ಧ್ಯಾನಿಪೆನೆಂದು ಕನ್ನಡಕಂದರ್ ಕಿಱಿದು ಬೇಗಂ ಬನಕ್ಕೆ ತೆರಳ್ದರ್.
ಉ: ಕನ್ನಡಕಂದರ್ ತಪಂಗೆಯ್ದರ್
ಅಕಟಕಟಾ!!
ಉ: ಕನ್ನಡಕಂದರ್ ತಪಂಗೆಯ್ದರ್
ಕನ್ನಡಕಂದರ ಕನ್ನಡದೊಲ್ಮೆ ಅಕ್ಕರೆಯಿಂತಿರಲ್ ಆನ್ ಅನುದಿನವೂ ಕನ್ನಡರಸಪಾಕವಂ ಸವಿಯುವ ಸೊಬಗನ್ ಪಡಕೊಂಡೆನ್
ಉ: ಕನ್ನಡಕಂದರ್ ತಪಂಗೆಯ್ದರ್
ಉ: ಕನ್ನಡಕಂದರ್ ತಪಂಗೆಯ್ದರ್
ತಪಾನಂತರಂ ಕನ್ನಡಕಂದಂ:
"ಆರಂಕುಸವಿಟ್ಟೊಡೆಂ ನೆನೆವುದೆನ್ನ ಮನಂ ಪೊನ್ನಂಪೇಟೆ ಅರಣ್ಯಮುಂ"
ಉ: ಕನ್ನಡಕಂದರ್ ತಪಂಗೆಯ್ದರ್
ಶಬ್ದಮಣಿದರ್ಪಣ ಕೆಲವು ಬೞಕೆಯನ್ನು ನಿಷೇಢಿಸುವುದಱಿಂದ ಪದ್ಯಕ್ಕೆ ಕೆಲವು ಪಾಠಾಂತರ:
ಕನ್ನಡದೇವಿಯ ದಯೆಯೇ-
ಕಿನ್ನುಂ ತಮಗೆ ದೊರೆಯದೆನುತುಂ ತೆಂಗಡೆಯಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್ ತಪಗೆಯ್ದರ್||