ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

July 22, 2008 - 2:57pm — hpn

ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.

“ಒಲೆಗೆ ಉರುವಲು ಇಲ್ಲ ಎಂದು ಕಲ್ಪವೃಕ್ಷವನ್ನು ಕಡಿವರುಂಟೆ...?”
ಇಂಥದೊಂದು ಉದಾಹರಣೆ ಆ ಆಧುನಿಕ ಸಂದರ್ಭ ಕಾಣಬೇಕು ಎಂದರೆ ಕರ್ನಾಟಕಕ್ಕೆ ಬನ್ನಿ. ಬಜೆಟ್ ನೋಡಿ.
ರೈತರ ಅಧಿನಾಯಕನೆಂದೇ ಕರೆಸಿಕೊಳ್ಳಲು ಖುಷಿ ಪಡುವ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಬಹುದೊಡ್ಡ ಬಳುವಳಿ ನೀಡಿದ ನೆಮ್ಮದಿಯಲ್ಲಿದ್ದಾರೆ. ಆದರೆ, ಅವರ ಈ ಆಶಯ ದೂರದೃಷ್ಟಿಯುಳ್ಳದ್ದೇ ಎಂಬುದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ.

ನಿಜ, ರೈತರು ಕಷ್ಟದಲ್ಲಿದ್ದಾರೆ. ರೈತರಿಗೆ ನೆರವು ನೀಡಲೇಬೇಕು. ಮುಖ್ಯಮಂತ್ರಿಗಳ ಈ ಯೋಜನೆ ರೈತರ ಪರ ನಿಲುವೇನೋ ಸರಿ. ಆದರೆ, ಇದರ ದೂರಗಾಮಿ ಪರಿಣಾಮ ಜೀವ ವಿರೋಧಿಯೂ ಆಗಿರುವುದು ದುರಂತ. ಇಂದಿನ ಬವಣೆಗೆ ನೀಗಿಸಿಕೊಳ್ಳುವ ಭರದಲ್ಲಿ ಭವಿಷ್ಯದ ಬೊಕ್ಕಸಕ್ಕೆ ಬೊಕ್ಕೆ ಹಾಕುವುದು ಸರಿಯೇ? ಮುಖ್ಯಮಂತ್ರಿಗಳ ಈ ಕ್ರಮ ಭವಿಷ್ಯದ ರೈತಾಪಿ ಕುಲಕ್ಕೆ ಕಂಟಕವಾಗುವುದರಲ್ಲಿ ಸಂದೇಹವಿಲ್ಲ.

ಇಷ್ಟೆಲ್ಲಾ ಹೇಳಬೇಕಾಗಿ ಬಂದಿದ್ದು ರೈತರಿಗೆ ಉಚಿತ ವಿದ್ಯುತ್ತು ನೀಡಲು ಸರ್ಕಾರ ಮುಂದೆ ಬಂದಿದ್ದರಿಂದ.

ಈ ಯೋಜನೆ ಕಾರ್ಯಸಾಧುವಲ್ಲ, ಎಂಬುದು ಈಗಾಗಲೇ ಹಲವಾರು ಬಾರಿ, ಹಲವಾರು ರಾಜ್ಯಗಳಲ್ಲಿ –ನಮ್ಮ ರಾಜ್ಯವೂ ಸೇರಿದಂತೆ, ಸಾಬೀತಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಿರುವವರೂ, ವಿದ್ಯುತ್ ಸಮಸ್ಯೆ, ಬೊಕ್ಕಸಕ್ಕೆ ಭಾರ ಎಂದೆಲ್ಲಾ ಕಾರಣ ಕೊಡುತ್ತಿದ್ದಾರೆ. ಅದು ನಿಜವೂ ಇರಬಹುದು. ಆದರೆ, ಬಹುಮುಖ್ಯ ಮೂಲ ಕಾರಣವೊಂದು ಹಿನ್ನೆಲೆಯಲ್ಲೇ ಉಳಿದು ಬಿಟ್ಟಿದೆ. ಅದು ಅಂತರ್ಜಲ.

ಲೇಖನದ ಉಳಿದ ಭಾಗ ವಾಟರ್ ಪೋರ್ಟಲ್ಲಿನಲ್ಲಿದೆ. ಓದಲು ಕ್ಲಿಕ್ ಮಾಡಿ ».

("ಕನ್ನಡದಲ್ಲಿ ವಾಟರ್ ಪೋರ್ಟಲ್" ಯೋಜನೆ ಸಂಪದ ಫೌಂಡೇಶನ್ನಿನ ಸಹಯೋಗದಿಂದ ಮೂಡಿ ಬರುತ್ತಿದೆ.)

  • ಪ್ರಚಲಿತ
~.~
  • Login or register to post comments
  • 283 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2008 - 7:08pm — Aravinda

ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

Aravinda's picture

ಉಚಿತ ಎಂದು ಹೇಳಿಕೆ ಅಷ್ಟೆ Sad
ನಮ್ಮ ಊರಿನ ಕಥೆ ಹೇಳ್ತೀನಿ ಕೇಳಿ.

ವಿದ್ಯುತ್ ಉಚಿತವಿಲ್ಲದಿದ್ದಾಗಲೂ ದಿನಕ್ಕೆ 7 ಕ್ಕೂ ಹೆಚ್ಚು ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್, ಅಮೇಲೆ ಕೆಲವು ಸಮಯ ಸಿಂಗಲ್ ಫೇಸ್. ತೋಟಗಳಿಗೆ ನೀರುಣಿಸಲು ರಾತ್ರಿ ೧೦ ರ ನಂತರ 3 ಫೇಸ್ ವಿದ್ಯುತ್. ಪಂಪ್ ಏನಾದರೂ ಮನೆಯಿಂದ ದೂರ ಇದ್ದರೆ ಮುಗೀತು ಕಥೆ, ರಾತ್ರಿ ಅಲ್ಲಿಗೆ ಹೋಗಿ ಮೋಟರ್ ಆನ್ ಮಾಡಿ ಬರಬೇಕು. ಅಷ್ಟೇ ಅಲ್ಲ ಬೇರೆಯವರೆಲ್ಲಾ ಬೇಗ ಪಂಪ್ ಸ್ಟಾರ್ಟ್ ಮಾಡಿದ್ರೆ ನಮ್ಮನೆ ಪಂಪ್ ವೋಲ್ಟೇಜ್ ಲೋ ಅಂತ ಕುಳಿತು ಬಿಡಿತ್ತೆ.

ಇನ್ನು ಉಚಿತ ಅಂತ ಹೇಳಿದರೆ ಎಷ್ಟು ಗಂಟೆ ಲೋಡ್ ಶೆಡ್ಡಿಂಗೋ(24 ಗಂಟೆ ಮಾಡದಿದ್ರೆ ಸಾಕು Smiling )

ಇನ್ನು ಮಳೆಗಾಲದಲ್ಲಿ ಯಾರೂ ತೋಟಕ್ಕೆ ನೀರು ಬಿಡೋಲ್ಲ ಅಂತ ಗೊತ್ತಿರೋದ್ರಿಂದ ಲೋಡ್ ಶೆಡ್ಡಿಂಗ್ ಕಡಿಮೆ ಇರುತ್ತೆ, ಆದರೆ ನಮ್ಮ ಗ್ರಹಚಾರಕ್ಕೆ ಕಾಡುಗಳ ಮಧ್ಯೆ ಪವರ್ ಲೈನ್ ಇರೋದ್ರಿಂದ ಮರಗಳು ಬಿದ್ದೋ ಅಥವ ಸಿಡಿಲು ಬಡಿದೊ ಕೈಕೊಡುತ್ತೆ. ಅಮೇಲೆ ಒಂದು ವಾರಕ್ಕೂ ಹೆಚ್ಚು ದಿನ ಅಲೀಬೇಕು ಸರಿಮಾಡಿಸಲು.

ಆದರೆ ಒಂದು ಮಾತು ಹೇಳಬೇಕೆನಿಸುತ್ತೆ, ಮಲೆನಾಡಿನ ಜರಿಗಳಲ್ಲಿ ಸಣ್ಣ ಸಣ್ಣ ವಿದ್ಯುತ್ ತಯಾರಿಕಾ ಕೇಂದ್ರ ಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಅಂತ.

ನಮ್ಮ ಹಳ್ಳಿಯಲ್ಲಿ ಸಿಗುವ ಮೊಬೈಲ್ ನೆಟ್ ವರ್ಕ್ ಸದ್ಯಕ್ಕೆ bsnl ಒಂದೇ ! .. (ಇನ್ನು ಅಂತರ್ಜಾಲ ಕನಸು)

ನಮ್ಮೂರಲ್ಲೂ ಮಳೆಕೊಯ್ಲು ಆರಂಬಿಸಿದಾರೆ ಕೆಲವರು, ನಮ್ಮ ಮನೆಯ ಕೆರೆಯಲ್ಲೂ ಮಳೆಕೊಯ್ಲಿಗೆ ಪ್ಲಾನ್ ಮಾಡಿದೀವಿ Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 10:18pm — hpn

ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

hpn's picture

ಅರವಿಂದ, interesting ಮಾಹಿತಿ ಮಾರಾಯ.

ಸೋಲಾರ್ ಬಳಸಿಕೊಳ್ಳುವ ಪ್ರಯೋಗಗಳೇನಾದ್ರೂ ಆಗಿವೆಯ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 11:44pm — prameela

ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

prameela's picture

ನಮ್ಮಲ್ಲಿ ಉಚಿತ ಅನ್ದರೆ ಸದರ ಜಾಸ್ತಿ.ಮೌಲ್ಯ ಗೊತ್ತಿಲ್ಲ.ಸಿನ್ಗಲ್ ಫೇಸ್ ಇದ್ರೂ ಅದನ್ನು ಥ್ರೀ ಫೇಸ್ಗೆ ಬದಲಾಯಿಸಿ ವಿದ್ಯುತ್ ಬಳಸೋ ಜಾಣರಿರುವಾಗ ನೀರಿನ ಕೊರತೆ ಅಲ್ಲೂ ಕಾಡಬಹುದಲ್ಲವೆ?ಹಳ್ಳಿ ಅನ್ದ್ರೆ ಸ್ವಲ್ಪ ಅಲಕ್ಶ್ಯ.ಆದಾಯ ಕಮ್ಮಿ ಅನ್ತ ವಿದ್ಯುತ್ ಕಡಿತ ಮಾಡ್ತಾರೆ.ಅದೇ ರಾಜಧಾನಿಯಲ್ಲಿ ಅಳೆದೂ ಸುರಿದೂ ವಿದ್ಯುತ್ ಕಡಿತ ಶುರುವಾಯ್ತು(ದಿನಕ್ಕೆ ೫೦ ಲಕ್ಶ ಆದಾಯ ಕಡಿಮೆ ಆಗುತ್ತಲ್ಲ).ನಗರದವರಿಗೆ ತೊನ್ದರೆ ಆಗಬಾರದು ;ಹಳ್ಳಿ ಆದ್ರೆ ಪರವಾಗಿಲ್ಲ ಅನ್ನೋದು ಯಾವ ನ್ಯಾಯ?ಮೊದಲು ಕೇರಿಗೊನ್ದು ಬಾವಿ ಇತ್ತು;ಈಗ ಮನೆಗೊನ್ದು ಬಾವಿ ಇದೆ.ಹೀಗಾದರೆ ಅನ್ತರ್ಜೆಲದ ಕಥೆ ಏನು?ವಿದ್ಯುತ್ ನೀರು ಉಳಿಸಿ ಅನ್ದ್ರೆ ಜಿಪುಣಿ ಅನ್ತಾರೆ.ಬಿಲ್ ಕಟ್ತೀವಿ ಅನ್ತ ಬೇಕಾಬಿಟ್ಟಿ ಬಳಸಬಾರದುಅಲ್ವ?ಹಗಲೂ ಉರಿಯುವ ಬೀದಿ ದೀಪಗಳನ್ನು ಹಾಗೂ ಸರಕಾರಿ ಕಚೇರಿಗಲ್ಲಿ ವಿದ್ಯುತ್ ಪೋಲು ಆಗುವುದನ್ನು ತಡೆದರೆ ಬೇಕಾದಶ್ಟಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 5:23am — Chamaraj

ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

Chamaraj's picture

ನಿಜ ಹರಿಪ್ರಸಾದ್‌, ಇದೊಂದು ಬೋಗಸ್‌ ಯೋಜನೆ. ಏಕೆಂದರೆ, ಹಿಂದೆ ಕೂಡ ಇಂಥವೇ ’ಜನಪ್ರಿಯ’ ಯೋಜನೆಗಳನ್ನು ಘೋಷಿಸಲಾಗಿತ್ತು. ಆದರೆ, ಅವು ಸರಿಯಾಗಿ ಕೆಲಸ ಮಾಡದ ಉದಾಹರಣೆಗಳು ಕಣ್ಣ ಮುಂದೆಯೇ ಇವೆ.

ಇದೊಂದು ಮೂರ್ಖ ಯೋಜನೆಯೂ ಹೌದು. ಯಾವುದೇ ಸೌಲಭ್ಯ ಉಚಿತವಾಗಿ ಬಂದರೆ, ಅದರ ಮಹತ್ವ ಗೊತ್ತಾಗದಿರುವ ಸಂದರ್ಭಗಳೇ ಬಹಳ. ದುರ್ಬಳಕೆ ಹೆಚ್ಚು. ಅದನ್ನು ತಡೆಯುವುದು ಸುಲಭವಲ್ಲ. ಇಂತಹ ಯೋಜನೆಗಳಿಂದಾಗಿ ರೈತರು ಈಗಾಗಲೇ ಸರ್ಕಾರದ ಮೇಲೆ ಅವಶ್ಯಕತೆಗಿಂತ ಹೆಚ್ಚೇ ಅವಲಂಬಿತರಾಗಿದ್ದಾರೆ. ಅದರ ಪರಿಣಾಮವಾಗಿ, ಒಂದಿಷ್ಟು ಏರುಪೇರಾದರೂ ಸಹಿಸಿಕೊಳ್ಳಲಾಗದೇ ಆತ್ಮಹತ್ಯೆಯತ್ತ ಮುಖ ಮಾಡುತ್ತಾರೆ.

ಉಚಿತ ಅಥವಾ ಸಹಾಯಧನದಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಇತ್ಯಾದಿ ಕಾರ್ಯಕ್ರಮಗಳು ರೈತನನ್ನು ಪರಾವಲಂಬಿ ಮಾಡಿಯಾಗಿದೆ. ಅದರ ಸಾಲಿಗೆ ಉಚಿತ ವಿದ್ಯುತ್ತೂ ಸೇರಿಕೊಳ್ಳುತ್ತದೆ. ಇದು ವಿಫಲವಾಗುತ್ತದೆ. ಅಷ್ಟೇ ಅಲ್ಲ, ಅತ್ಯಂತ ದುಬಾರಿಯಾಗಿ ವಿಫಲವಾಗಲಿದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರುಪೂರಣ - ಹೀಗೊಂದು Case Study
  • ಕೈಗಾರಿಕಾ ಅಭಿವೃದ್ಧಿ.... ಎಂಬ ಭ್ರಾಮಕ ಜಗತ್ತಿನಲ್ಲೊಂದು ಸುತ್ತು....!
  • ಲೇಖನಗಳ ಆಹ್ವಾನ
  • About Sampada
  • ಕನಸ್ಸು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)
  • ’ಸೇಂಟ್ ಲೂಯಿ, ಗೇಟ್ವೆ ಆರ್ಚ್’ !
  • ಒಮ್ಮೆ ಮನೆಗೆ ಬಂದುಬಿಡು.
  • ‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’
  • ಲ೦ಡನ್ ಪ್ರವಾಸಕಥನ ಭಾಗ ೧೪: ಒ೦ದಿಷ್ಟು ಚೂರು ಪಾರು--ಅಡುಗೆ
  • ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು
  • ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ಇತ್ತೀಚಿನ ಪ್ರತಿಕ್ರಿಯೆಗಳು

  • keerthi2kiran
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 2:27pm
  • ಸಂಗನಗೌಡ
    ಉ: Typical ನಲ್ಲನ ಒಲುಮೆಯಳಲು
    August 20, 2008 - 2:06pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 73 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator