ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ದಿನ(ಕರ)ಚರಿ

July 21, 2008 - 5:24pm — Jayalaxmi.Patil
Amg0006.jpg

ಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ
ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ
ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ
ಸರಿದು ಒಳ ನೆಡೆದಳು.
ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ
ಕಾಲು ನಿಡಿದಾಗಿಸಿ ಲಟ ಲಟ ಎನಿಸಿ
ಎದ್ದು ಕುಳಿತು ಮೈ ಮುರಿದ ಸೂರ್ಯ
ಪಕ್ಕಕ್ಕೆ ತಿರುಗಿದ.
ನಿಶೆ ಇಲ್ಲ! "ಓ ನನಗಾಗಿ ತಿಂಡಿಯ
ಸಿದ್ಧತೆಯಲ್ಲಿದ್ದಾಳೆ.ಸಮಯ ಪ್ರಜ್ಞೆ
ನನಗಿಂತ ಅವಳಲ್ಲೆ ಜಾಸ್ತಿ" ಮಲ್ಲಿಗೆಯ
ಉಸಿರಾಗಿಸಿಕೊಂಡ ತಂಗಾಳಿ ಮುಖ
ತೀಡಿದಂತಾಗಿ ಮುದಗೊಂಡು ನಕ್ಕ ಸೂರ್ಯ
ಹೂ ಬಿಸಿಲು.

ಎಲ್ಲಿ ಅವಳು? ಹೊತ್ತುಗೊತ್ತಿನ
ಪರಿವೆಯೇ ಇಲ್ಲ. ಚುರುಗುಟ್ಟುತ್ತಿದೆ ಹೊಟ್ಟೆ.
ರಟ್ಟೆ ಮುರಿದು ದುಡಿವ ಗಂಡಸು ನಾನು
ಬೆಳಗಿನ ತಿಂಡಿ ಹೋಗಲಿ ಎಂದರೆ
ಮದ್ಯ್ಹಾನದ ಊಟವೂ ತಯಾರಾಗಿಲ್ಲ
ಹೇಗೆ ತಾಳಲಿ ಹಸಿವೆ? ಸಿಡಿಮಿಡಿಗೊಂಡು
ಉರಿಯತೊಡಗಿದ ಸೂರ್ಯ
ಸುಡುಬಿಸಿಲು.

ಸೂರ್ಯನ ಅಚ್ಚುಮೆಚ್ಚಿನ ತಾಮ್ರ ಬಣ್ಣದ
ಒಡಲಿಗೆ ಕಾಡಿಗೆ ಬಣ್ಣದ ಸೆರಗಿರುವ
ಸೀರೆಯುಟ್ಟು, ಇನ್ನೇನು ಸ್ವಲ್ಪ ಹೊತ್ತಿಗೆ
ಅರಳುತ್ತವೆ ಎನ್ನುವಂತಹ ಮೊಲ್ಲೆ
ಮೊಗ್ಗಿನ ಮಾಲೆ ಮುಡಿದು ಒನಪು
ವಯ್ಯಾರದೊಂದಿಗೆ ನಸುನಗುತ್ತಾ ಬರುತ್ತಿರುವ
ನಿಶೆಯ ಕಂಡ ಸೂರ್ಯ ಸಿಟ್ಟು ಮರೆತು ಮೆತ್ತಗಾದ.
ಹುರುಪಿನಿಂದ ತಾನೂ ಎರಡು ಹೆಜ್ಜೆ
ನಡೆದ ಅವಳೆಡೆ ನಗುಮುಖ ಹೊತ್ತು
ಹೊಂಬಿಸಿಲು.

ಹತ್ತಿರ ಬಂದ ನಿಶೆ
ನಾಚಿ ನೀರಾದುದನು ಕಂಡ ಸೂರ್ಯ
ತಾನೂ ಲಜ್ಜೆಯಿಂದ ಕೆಂಪು ಕೆಂಪಾದ
ನಿಶೆಯ ಬಾಹುಗಳಲ್ಲೀಗ ಸೂರ್ಯ ಬಂಧಿ
ಸೂರ್ಯನ ಮರೆಮಾಚಿಸಿತು ನಿಶೆಯ ಸೆರಗು
ನಕ್ಕಳು ನಿಶೆ. ಉದುರಿದ ಮುತ್ತುಗಳೆಲ್ಲ
ಆಗಸದ ಅಂಗಳದಲ್ಲಿ ಚೆಲ್ಲಾಪಿಲ್ಲಿ.
ನಗುವ ನಕ್ಷತ್ರಗಳು.

* * * * * * * * * * *

  • ಕಾವ್ಯ ಮತ್ತು ಕವನ
~.~
  • Login or register to post comments
  • 165 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮಗೆ ಕಾಣದವಳು
  • ಸೂರ್ಯ ಕಾಲು
  • ದಕ್ಷಿಣಾಯನ
  • ಚಿಂತೆಯ ಮರ್ಮ
  • ಸಂಜೆಯಲಿ ರಥವೇರಿ ಹೊರಟ ಸೂರ್ಯ
Syndicate content

ಲೇಖಕರು

Jayalaxmi.Patil's picture

ಪೂರ್ಣ ಹೆಸರು
ಜಯಲಕ್ಷ್ಮೀ.ಪಾಟೀಲ್.

ಪರಿಚಯ

ಓದುವ, ಸ್ವಲ್ಪ ಬರೆಯುವ ಹವ್ಯಾಸವಿದೆ. ಸಂಗೀತ ಇಷ್ಟ. ಅಭಿನಯ ನನ್ನ ವೃತ್ತಿ, ಪ್ರವೃತ್ತಿ ಮತ್ತು ಅಭಿಮಾನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳದ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 109 ಅತಿಥಿಗಳು ಆನ್ಲೈನ್ ಇರುವರು.


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator