ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

July 17, 2008 - 10:58pm — narendra
ಜಯಂತ್ ಕಾಯ್ಕಿಣಿ

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಜಯಂತರ ಕತೆಗಳಲ್ಲಿ ಕಂಡು ಬರುವ ಆಶಯ, ಅವರು ನಮಗೆ ಕಟ್ಟಿಕೊಡುವ ನೋಟ ಮತ್ತು ಅದಕ್ಕೆ ಅವರು ಬಳಸುವ ಆಕೃತಿ ಮೂರನ್ನೂ ಒಟ್ಟಾಗಿ ಗಮನಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಜಯಂತ್ ಮೂಲತಃ ಕವಿ. ಅವರೊಳಗಿನ ಕವಿ ಅನೇಕ ಬಿಂಬಗಳನ್ನು, ಪ್ರತಿಮೆಗಳನ್ನು, ಕೆಲವೊಮ್ಮೆ ಶಬ್ದಗಳಿಂದಲೂ ತಮಗೆ ಬೇಕಾದ ಸಂವೇದನೆಯನ್ನು ಮರುಸೃಷ್ಟಿಸಿಕೊಳ್ಳಬಲ್ಲ. ಇದನ್ನು ಅವರು ಕತೆಯ ಪರಿಸರದ, ಪಾತ್ರಗಳ ಒಳಗಿನಿಂದಲೇ ಮಾಡುವುದರಿಂದ ಅನೇಕ ಬಾರಿ ಅವು ಓದುಗನ ಮೇಲೆ ಉದ್ದೇಶಿತ ಪರಿಣಾಮವನ್ನು ಉಂಟುಮಾಡಿಯೂ ಅದಕ್ಕೆ ಯಾವೆಲ್ಲ ಅಂಶಗಳು ಕಾರಣವಾದವು ಎಂಬುದು ನಮಗೆ ನಿಲುಕುವುದಿಲ್ಲ.

  • ಪುಸ್ತಕ ವಿಮರ್ಶೆ
~.~
  • Login or register to post comments
  • 300 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 18, 2008 - 10:04am — muralihr

ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

muralihr's picture

ತು೦ಬಾ ಥ್ಯಾ೦ಕ್ಸ ! ನಿಮ್ಮ ಬರಹದಿ೦ದಾ ಅವರ ಪುಸ್ತಕಗಳನ್ನು ಓದ ಬೇಕು ಅನ್ನಿಸ್ತಿದೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 10:52am — shashikannada

ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

shashikannada's picture

ಪ್ರಿಯ ನರೇಂದ್ರರೇ,

ನಮಸ್ಕಾರ. ನಿಮ್ಮ ಲೇಖನ ಓದಿ ಖುಶಿಯಾಯಿತು. ಜಯಂತರನ್ನು ಓದಬೇಕೆಂಬ ತುಡಿತದಿಂದ ನಾನು ಬಹಳ ಹಿಂದೆಯೇ ಈ "ತೂಫಾನ್ ಮೇಲ್" ಹೊತ್ತಗೆಯನ್ನ ಕೊಂಡುಕೊಂಡೆ. ಅದು ನಾನು ಓದಿದ ಜಯಂತರ ಮೊದಲನೇ ಹೊತ್ತಗೆ. ನಾನು ಕೆಲ ತಿಂಗಳ ಹಿಂದೆಯೇ ಜಯಂತರ ಕುರಿತು ಒಂದು ಸಾಮಾನ್ಯ ಲೇಖನ ಬರೆದಿದ್ದೆ. ನೀವು ಹೆಚ್ಚು ಸೂಕ್ಷ್ಮವಾಗಿ, ಸಾಹಿತ್ಯಿಕವಾಗಿ ಬರೆದು ಒಳ್ಳೆಯ ಕೆಲಸ ಮಾಡಿದ್ದೀರಿ. "ತೂಫಾನ್ ಮೇಲ್"ಅನ್ನ ನಾನು ಬಿಡಿಬಿಡಿಯಾಗಿ ಓದಿದ್ದರಿಂದಾಗಿ ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ. ನಿಮ್ಮ ಲೇಖನ ನೋಡಿದ ಮೇಲೆ ಮತ್ತೊಮ್ಮೆ ಓದಿ ಆ ಕುರಿತು ಬರೆಯುವಾ ಅನ್ನಿಸ್ತಿದೆ.

ತಾವು ಮಾಡುವ ಯಾವುದೇ ಕೆಲಸದಲ್ಲಾಗಿರಲಿ ತಮ್ಮದೇ ಛಾಪು ಮೂಡಿಸುವ ಜಯಂತರದು ಅಪ್ರತಿಮ ಪ್ರತಿಭೆ- ಅದು ಚಿತ್ರ ಸಾಹಿತ್ಯವಾಗಿರಬಹುದು, ಕತೆಗಳಾಗಿರಬಹುದು, ಸಂದರ್ಶನಗಳಾಗಿರಬಹುದು, ಭಾವನಾದಂತಹ ಪತ್ರಿಕೆಯ ಸಂಪಾದನೆಯಾಗಿರಬಹುದು. ಅವರು ಒಂದು ವೇಳೆ ಚಿತ್ರ ನಿರ್ದೇಶನಕ್ಕೂ ಇಳಿದುಬಿಟ್ಟಲ್ಲಿ ಅದು ಕನ್ನಡ ಚಿತ್ರರಸಿಕರ ಸೌಭಾಗ್ಯವೇ ಸರಿ!

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 8:43pm — narendra

ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

narendra's picture

ಪ್ರೀತಿಯ ಮುರಳಿ ಮತ್ತು ಶಶಿ,
ನಿಮ್ಮ ಪ್ರತಿಕ್ರಿಯೆಯಿಂದ ಹೀಗೆ ಗಂಭೀರವಾಗಿಯೂ ಸುದೀರ್ಘವಾಗಿಯೂ ಬರೆದ ಬರಹಗಳು ಕೂಡ ಆಸಕ್ತರ ಓದಿಗೆ ಭಾರವಾಗಲಿಕ್ಕಿಲ್ಲ ಎನ್ನುವ ವಿಶ್ವಾಸ ಮೂಡಿದೆ. ಧನ್ಯವಾದಗಳು. ಜಯಂತರ ಕತೆಗಳನ್ನು ಸಾಧಾರಣವಾಗಿ ಎಲ್ಲರೂ ಓದಿಯೇ ಇದ್ದಾರೆ. ಅವುಗಳ ಮರುಓದು, ಆಳ ಗ್ರಹಿಕೆ ಅಗತ್ಯ ಎನಿಸಿ, ಹೇಗೆ ಒಬ್ಬ ಬರಹಗಾರನನ್ನು ಕೂಡ ಈ ಕತೆಗಳು ಬೆಳೆಸಬಲ್ಲ ಕಸು ಹೊಂದಿವೆ ಎನ್ನುವ ನಿಟ್ಟಿನಲ್ಲಿ ಬರೆದೆ. ಇಂಥ ಅನಿಸಿಕೆಗಳು, ಅನುಮಾನಗಳು ಎಲ್ಲ ಓದುಗರಲ್ಲಿ ಇರುತ್ತವೆ. ಅವುಗಳನ್ನು ಹಂಚಿಕೊಳ್ಳುವುದು ಕೂಡ ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯ. ಶಶಿ, ನಿಮ್ಮ ಬರಹವನ್ನು ಎದುರು ನೋಡುತ್ತಿರುತ್ತೇನೆ, ಖಂಡಿತ ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 10:48am — yajamanfrancis

ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

yajamanfrancis's picture

ತುಂಬಾ ಸವಿಸ್ತಾರವಾದ ವಿಮರ್ಶೆ.
ಜಯಂತರ ಶಕ್ತಿ ನಮಗೆ ಅರಿವಾಗುವುದು, ನಮಗೆ ಕಾಣದ ಅತಿ ಸೂಕ್ಷ್ಮ ವಿವರಗಳು ಅವರಿಗೆ, ಅವರಿಗೆ ಮಾತ್ರ ಕಂಡಾಗ. ಇದಕ್ಕೆ ಒಂದು ಉತ್ತಮ ಉದಾಹರಣೆ ’ ಬೊಗಸೆಯಲ್ಲಿ ಮಳೆ’. ಅಲ್ಲಿ ಮಳೆಯ ಒಂದೊಂದು ಹನಿಗಳಷ್ಟೆ ಅಲ್ಲ, ಒಂದು ಹನಿಯ ಅಷ್ಟೂ ತವಕ ತಲ್ಲಣಗಳನ್ನು ಸೆರೆಹಿಡಿಯಬಲ್ಲಷ್ಟು ಹರಿತ ಅವರ ಲೇಖನಿ ಮತ್ತು ಮನಸ್ಸು.

ಒಲುಮೆಯಿಂದ,

ಯಜಮಾನ್ ಫ್ರಾನ್ಸಿಸ್

"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು
  • ಜಯಂತ್ ಕಾಯ್ಕಿಣಿ
  • ನನ್ನ ಇತ್ತೀಚಿನ ಓದು .
  • ಮಳೆ ನಿಂತು ಹೋದ ಮೇಲೆ..
  • ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .
Syndicate content

ಲೇಖಕರು

narendra's picture

ಪೂರ್ಣ ಹೆಸರು
narendra

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ನೀನು ನಾನು ಜೋಡಿ
    September 8, 2008 - 12:14pm
  • ಸಂಗನಗೌಡ
    ಉ: ನೀನು ನಾನು ಜೋಡಿ
    September 8, 2008 - 11:49am
  • Nagaraj.G
    ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
    September 8, 2008 - 11:35am
  • ಸಂಗನಗೌಡ
    ಉ: ಜೋಯೀಸರ ಮಗಳು
    September 8, 2008 - 11:22am
  • ಸಂಗನಗೌಡ
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 11:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 11:13am
  • ಸಂಗನಗೌಡ
    ಉ: ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
    September 8, 2008 - 11:10am
  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 342 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator